ಕೊಲ್ಲಂ ಜಿಲ್ಲೆಯ ಒಂದು ಚಿಕ್ಕ ಪಟ್ಟಣ ಕೊಟ್ಟಾರಕ್ಕರ. ಇದು ಪ್ರಾಥಮಿಕವಾಗಿ ತನ್ನ ಸುಂದರ ತಾಣಗಳು ಹಾಗೂ ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಈ ಪಟ್ಟಣಕ್ಕೆ ಹೆಸರು ಬಂದಿರುವುದು ಕೂಡ ಮಲಯಾಳಂನ ಎರಡು ಶಬ್ದಗಳಿಂದಾಗಿ. "ಕೊಟ್ಟಾರಂ' (ಸ್ಥಳ) ಹಾಗೂ "ಕರ' (ಭೂಮಿ). ಇವೆರಡೂ ಸರಿ ಆದ ಶಬ್ದ 'ಕೊಟ್ಟಾರಕ್ಕರ'. ಹೀಗಾಗಿ ಇದರ ಅರ್ಥ ತಾಣಗಳ ಭೂಮಿ. ಇದರ ಐತಿಹಾಸಿಕ ಹಿನ್ನೆಲೆ ಇದನ್ನು ಪುಷ್ಟಿಕರಿಸುತ್ತದೆ. ಹಿಂದಿನ ದಿನಗಳಲ್ಲಿ ಕೊಟ್ಟಾರಕ್ಕರವು 'ಎಲೆಯಂದತ್ತು ಸ್ವರೂಪಂ' ಎಂಬ ಹೆಸರಿನಿಂದ ಗುರುತಾಗಿತ್ತು. ತಿರುವನಂತಪುರದ ರಾಯಲ್ ಕುಟುಂಬದ ಅಡಿ ಇದರ ಕಾರ್ಯ ಚಟುವಟಿಕೆ ನಡೆಯುತ್ತಿತ್ತು. ಲಭ್ಯ ಐತಿಹಾಸಿಕ ಮಾಹಿತಿಯ ಪ್ರಕಾರ ಈ ಭಾಗದಲ್ಲಿ ಏಳು ಐಶಾರಾಮಿ ಪ್ಯಾಲೇಸ್ಗಳು ನಿರ್ಮಾಣಗೊಂಡಿದ್ದು, ಇದರಲ್ಲಿ ಮೊದಲ ಪ್ಯಾಲೇಸ್ ನಿರ್ಮಾಣಗೊಂಡಿದ್ದು 14ನೇ ಶತಮಾನದಲ್ಲಿ.
ಕಥಕ್ಕಳಿಯ ಜನ್ಮಸ್ಥಳ
ಕೇರಳದ ಕೊಟ್ಟಾರಕ್ಕರ ಸಮಕಾಲೀನ ಅತ್ಯುತ್ತಮ ಆಧುನಿಕ ಸಂಸ್ಕೃತಿಯ ಇತಿಹಾಸದಲ್ಲಿ ಹೋಲಿಕೆ ಮಾಡಲಾಗದ ಅತ್ಯುತ್ತಮ ಕಲೆಯೊಂದನ್ನು ತನ್ನದಾಗಿಸಿಕೊಂಡಿದೆ. ಕೊಟ್ಟಾರಕ್ಕರ ಇಲ್ಲಿಯ ವಿಶ್ವಪ್ರಸಿದ್ಧ ಕಲೆಯಾದ ಕಥಕ್ಕಳಿಯ ಜನ್ಮಸ್ಥಳ. ಈ ನೃತ್ಯ ಪ್ರಕಾರದ ಆವಿಷ್ಕಾರದ ಹಿನ್ನೆಲೆ ಅವಲೋಕಿಸಿದಾಗ ಅರಿವಿಗೆ ಬರುವ ಅಂಶವೆಂದರೆ ಒಂದು ವೈರತ್ವದ ವಿಷಯ ಗಮನಕ್ಕೆ ಬರುತ್ತದೆ. ಈ ವೈರತ್ವವು ಕೊಟ್ಟಾರಕ್ಕರ ರಾಜಾ ಹಾಗೂ ಕೋಳಿಕೋಡ್ನ ರಾಜನ ನಡುವೆ ಇತ್ತು ಎಂದು ತಿಳಿದು ಬರುತ್ತದೆ.
ಇದು "ರಾಮನಾತ್ತಮ್' ಹೆಸರಿನಲ್ಲಿ ಆರಂಭಿಕ ರೂಪ ಪಡೆಯಿತು. ಕೊಟ್ಟಾರಕ್ಕರ ತಂಪೂರನ್ ಎಂಬುವರು ಈ ಹೆಸರಿಟ್ಟರು. ಇದು ಮುಂದೆ ಆಧುನಿಕರಣಗೊಂಡು ಈಗಿನ ರೂಪ ಪಡೆದಿದೆ. ಈ ವ್ಯಕ್ತಿಯೇ ಕಥಕ್ಕಳಿಯನ್ನು ಸಾಮಾನ್ಯ ನಾಗರಿಕ ವರ್ಗದಲ್ಲಿ ಜನಪ್ರಿಯಗೊಳಿಸಲು ಕೂಡ ಶ್ರಮಿಸಿದ್ದಾರೆ. ಕೊಟ್ಟಾರಕ್ಕರ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹೊಂದಿದ್ದು, ಇಲ್ಲಿನ ಸಂಸ್ಕೃತಿ ಹಾಗೂ ಜನರ ಮೇಲೆ ಗಾಢವಾದ ಪ್ರಭಾವ ಬೀರಿದೆ.
ಅತ್ಯಾಕರ್ಷಕ ಆಕರ್ಷಣೆಗಳ ಮಿಶ್ರಣ
ಕೊಟ್ಟಾರಕ್ಕರದ ಪ್ರವಾಸಿ ತಾಣಗಳು ಭಾವೈಕ್ಯತೆಯ ಮಿಶ್ರಣವಾಗಿದೆ. ಇಲ್ಲಿ ದೇವಾಲಯ, ಚರ್ಚ್, ತಾಣಗಳು, ಮಾರಾಟ ಕೇಂದ್ರಗಳು ಹೇರಳ ಸಂಖ್ಯೆಯಲ್ಲಿವೆ. ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ದೇವಾಲಯ ಹಾಗೂ ಶ್ರೀ ಮಣಿಕಂಠೇಶ್ವರ ಮಹಾದೇವ ದೇವಸ್ಥಾನ ಅಪಾರ ಸಂಖ್ಯೆಯ ಭಕ್ತರನ್ನು ಇತ್ತ ಸೆಳೆಯುತ್ತವೆ. ಭಕ್ತರು ಮಾತ್ರವಲ್ಲ, ಸಾಕಷ್ಟು ಸಂಖ್ಯೆಯ ಪ್ರವಾಸಿಗರೂ ಇಲ್ಲಿಗೆ ಆಗಮಿಸುತ್ತಾರೆ. ಈ ಭಾಗದ ಇತರೆ ಗಮನಾರ್ಹ ಆಕರ್ಷಣೆಗಳೆಂದರೆ ಪಥಾನಪುರಂ, ಕೊಟ್ಟಾರಕ್ಕರ ಪ್ಯಾಲೇಸ್, ಕಿಳಾಹಕ್ಕೆತ್ತೆರುವು ಆರ್ಥೋಡಕ್ಸ್ ವಲಿಯಪಳ್ಳಿ.
ಕೊಟ್ಟಾರಕ್ಕರವು ಕೊಲ್ಲಂನಿಂದ 27 ಕಿ.ಮೀ. ದೂರದಲ್ಲಿದೆ. ಅದೇ ರೀತಿ ಕೇರಳದ ರಾಜಧಾನಿಯಿಂದ 60 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ತಲುಪಲು ರೈಲು ಹಾಗೂ ರಸ್ತೆ ಮಾರ್ಗ ಅತ್ಯುತ್ತಮವಾಗಿದೆ. ವರ್ಷದ ಎಲ್ಲಾ ಸಮಯದಲ್ಲೂ ಸಹನೀಯ ವಾತಾವರಣ ಇಲ್ಲಿರುತ್ತದೆ. ಎಲ್ಲಾ ಋತುಮಾನದಲ್ಲಿಯೂ ಈ ತಾಣಕ್ಕೆ ಜನ ಭೇಟಿ ನೀಡಬಹುದು. ಕೊಲ್ಲಂ ಜಿಲ್ಲೆಯ ಇತರೆ ಪ್ರವಾಸಿ ತಾಣಗಳ ವೀಕ್ಷಣೆಯ ಜತೆಗೆ ಕೊಟ್ಟಾರಕ್ಕರಕ್ಕೂ ಭೇಟಿ ನೀಡುವುದು ಉತ್ತಮ.