ವಧು ಮತ್ತು ತುಲಾಪುರ್ ಎಂಬ ಹಳ್ಳಿಗಳು ಮಹಾರಾಷ್ಟ್ರದ ಪುಣೆ ಜಿಲ್ಲೆಗೆ ಸೇರಿದ ಎರಡು ಸ್ಥಳಗಳು. ಈ ಎರಡೂ ಪ್ರದೇಶಗಳು ಇತಿಹಾಸದ ಆಳದಲ್ಲಿ ಉಳಿದುಕೊಂದಡಿರುವುದೇಕೆಂದರೆ ಶಿವಾಜಿ ಮಹಾರಾಜನ ಮಗನಾದ ಸಾಂಬಾಝೀಯು ತನ್ನ ಕೊನೆ ಕ್ಷಣಗಳನ್ನು ಈ ನೆಲದಲ್ಲಿ ಕಳೆದಿದ್ದರಿಂದ.
ತುಲಾಪುರವು ಪುಣೆಗೆ ಉತ್ತರ ಪೂರ್ವ ದಿಕ್ಕಿನಲ್ಲಿ 40 ಕಿ.ಮೀ. ದೂರದಲ್ಲಿದೆ. ಇದು ಮೂರು ನದಿಗಳಾದ ಭಾಮಾ, ಬ್ರಹ್ಮ ಮತ್ತು ಇಂದ್ರಯಾನಿ ನದಿ ತೀರದಲ್ಲಿದೆ. ಈ ಮೊದಲು ತುಲಾಪುರವನ್ನು ನಾಗರಗೋಯನ್ ಎಂದು ಕರೆಯುತ್ತಿದ್ದರು.
ಮತ್ತೊಂದು ಕಡೆ, ವಧು ಎಂಬುದು ಸ್ಥಳವಾಗಿದ್ದು ಸಂಭಾಜೀ ಮತ್ತು ಆತನ ಸ್ನೇಹಿತನಾದ ಕವಿ ಕಾಲಾಷ್ ನ ಸಮಾಧಿ ಇಲ್ಲಿದೆ.
ಅದರ ಪ್ರಮುಖ ಇತಿಹಾಸ
ಈ ಎರಡೂ ಹಳ್ಳಿಗಳು ಚಿಕ್ಕ ಪ್ರದೇಶಗಳಾದರೂ ಮಾರಾಠಾ ಸಾಮ್ರಾಜ್ಯದ ಇತಿಹಾಸವನ್ನು ಮಹತ್ತರವಾಗಿ ಎತ್ತಿ ಹಿಡಿದಿವೆ.
ಸಮಾಧಿಯನ್ನು ಹೊರೆತುಪಡಿಸಿ,1820 ರ ಯುದ್ಧದ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಇದನ್ನು ರಣಸ್ತಂಭ ಎನ್ನುವರು, ಮರಾಠರು ಮತ್ತು ಬ್ರಿಟೀಷರ ನಡುವೆ ನಡೆದ ಕೊನೆಯ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಮಾರಾಠರ ನೆನಪಿಗಾಗಿ ನಿರ್ಮಿಸಲಾಗಿದೆ.
ಈ ಅವಳಿ ಹಳ್ಳಿಗಳಲ್ಲಿ ಏನೇನು ನೋಡಬಹುದು
ತುಲಾಪುರದಲ್ಲಿ ಶಿವನ ಪುರಾತನ ದೇವಸ್ಥಾನವಾದ ಸಂಗಮೇಶ್ವರ ದೇವಸ್ಥಾನವಿದೆ. ಸಂಭಾಜೀಯನ್ನು ಮುಘಲರ ದೊರೆಯಾದ ಔರಂಗಾಜೇಬನು ಇದೇ ಸ್ಥಳದಲ್ಲಿ ಕೊಂದನು ಎಂಬ ಪ್ರತೀತಿ ಇದೆ. ಕೆಲವು ವಿಶೇಷ ದಿನಗಳಂದು, ಈ ದೇವಸ್ಥಾನವನ್ನು ನೋಡಲು ಪ್ರವಾಸಿಗರು ಮತ್ತು ಜನರು ಆಗಮಿಸುತ್ತಾರೆ.
ಈ ಎರಡೂ ಹಳ್ಳಿಗಳಾದ ವಧು ಮತ್ತು ತುಲಾಪುರ ನೋಡಲು ಮರೆಯಲಾಗದಂತಹ ಸ್ಥಳಗಳು. ಇತಿಹಾಸದ ನಂಬಲಾಗದ ವಿಷಯಗಳನ್ನು ತಿಳಿಯಲು ಈ ಸ್ಥಳಕ್ಕೆ ಭೇಟಿ ನೀಡಿ.