ಕೋಟೆಗಳಿಗಾಗಿ ಪ್ರಸಿದ್ಧವಾಗಿರುವ ನಗರ ಕರ್ನಾಲಾ ಮಹಾರಾಷ್ಟ್ರದ ರಾಯ್ ಗಡ್ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 475 ಮೀ ಎತ್ತರದಲ್ಲಿದ್ದು ಸುತ್ತಲೂ ದಟ್ಟ ಹಸಿರಿನಿಂದ ಹಾಗೂ ಎತ್ತರದ ಬೆಟ್ಟಗಳಿಂದ ಕೂಡಿದೆ.
ಐತಿಹಾಸಿಕ ಹಿನ್ನೆಲೆ
ತುಘಲಕರ ಆಳ್ವಿಕೆಯ ವೇಳೆ ಕೊಂಕಣ ಜಿಲ್ಲೆಗೆ ಕರ್ನಾಲಾ ರಾಜಧಾನಿಯಾಗಿತ್ತು, ನಂತರ ಇದನ್ನು ಅಹ್ಮದ್ ನಗರದ ಸ್ಥಾಪನೆ ಮಾಡಿದ ನಿಜಾಮ್ ಶಾ ತನ್ನ ವಶಕ್ಕೆ ತೆಗೆದುಕೊಂಡನು. ನಿಜಾಮನು ಪೋರ್ಚುಗೀಸರೊಂದಿಗೆ ಉತ್ತಮ ಸಂಬಂಧ ಹೊಂದಿದ ಕಾರಣ ಅವರು ಕರ್ನಾಲಾ ಕೋಟೆಯನ್ನು ಕೊಡುಗೆಯಾಗಿ ನೀಡಿದ್ದರು.
ಭಾರತದಲ್ಲಿ ತನ್ನ ಆಳ್ವಿಕೆ ಸ್ಥಾಪಿಸಿದ ನಂತರ ಈಸ್ಟ್ ಇಂಡಿಯಾ ಕಂಪನಿ ಈ ಕೋಟೆಯ ಪ್ರಾಮುಖ್ಯತೆಯನ್ನು ಅರಿತುಕೊಂಡಿತು. ಈ ಕೋಟೆಗಿರುವ ಭೌಗೋಳಿಕ ಲಕ್ಷಣಗಳು ಯುದ್ಧತಂತ್ರದ ಅನುಕೂಲತೆಗನುಗುಣವಾಗಿರುವುದನ್ನು ಅರಿಯಲು ಬಹಳ ಸಮಯ ಬೇಕಾಗಲಿಲ್ಲ.
ಕರ್ನಾಲಾ – ಪ್ರಕೃತಿಯ ಮಡಿಲಿನ ತಾಣ
ಇಲ್ಲಿರುವ ಪಕ್ಷಿಧಾಮ ಪ್ರಕೃತಿ ಪ್ರೇಮಿಗಳು ಮತ್ತು ಪಕ್ಷಿ ಪ್ರೇಮಿಗಳಿಗೆ ಇದನ್ನು ಒಂದು ಮಹತ್ವದ ಸ್ಥಳವನ್ನಾಗಿಸಿದೆ. ಈ ಪಕ್ಷಿಧಾಮ 150 ಭಾರತೀಯ ಪ್ರಭೇದಗಳಿಗೆ ಹಾಗೂ 37 ವಲಸೆ ಬರುವ ಪ್ರಭೇದಗಳಿಗೆ ನೆಲೆಯಾಗಿದೆ. ಇಲ್ಲಿ ಹಲವಾರು ಚಾರಣ ಅವಕಾಶಗಳೂ ಚಾರಣ ಪ್ರಿಯರಿಗೆ ಲಭ್ಯವಿವೆ.
ಪ್ರವಾಸಿಗರು ಗಿರಿಧಾಮದಲ್ಲಿರುವ ಹವಾಮಾನವನ್ನು ಬಯಸುತ್ತಾರೆ. ಇಲ್ಲಿ ಅಂತಹ ಹವಾಮಾನ ವರ್ಷಪೂರ್ತಿ ಇರುವ ಕಾರಣ ಪ್ರವಾಸಿಗರಿಗೆ ಇದು ಅತ್ಯಂತ ಮಹತ್ವವಾದ ಸ್ಥಳವಾಗಿದೆ. ಹೀಗಾಗಿ ಯಾವುದೇ ಋತುಮಾನದಲ್ಲಿ ಬನ್ನಿ.. ಮಳೆಯಿರಲಿ, ಬೇಸಗೆಯಿರಲಿ ಇಲ್ಲಿ ಆಹ್ಲಾದಕರ ಹವಾಮಾನ ಇರುತ್ತದೆ. ಮಳೆಗಾಲ ನೈಸರ್ಗಿಕ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ತುಂಬುತ್ತದೆ. ಚಳಿಗಾಲ ವಲಸೆ ಬರುವ ಹಕ್ಕಿಗಳನ್ನು ನೋಡಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ.
ಕರ್ನಾಲಾ ರಜಾ ದಿನಗಳನ್ನು ಕಳೆಯಲು ಇರಬಹುದು ಅಥವಾ ವಾರಾಂತ್ಯ ಕಳೆಯಲು ಇರಬಹುದು ಅತ್ಯಂತ ಸರಿಯಾದ ಸ್ಥಳವಾಗಿದೆ. ಇಲ್ಲಿಗೆ ರಸ್ತೆ ಸಾರಿಗೆ ರೈಲು ಮಾರ್ಗ ಮತ್ತು ವಿಮಾನ ಮಾರ್ಗವಾಗಿ ಸುಲಭವಾಗಿ ತಲುಪಬಹುದಾಗಿದೆ, ಇದು ಮುಂಬಯಿಯಿಂದ ಕೇವಲ 60 ಕಿ.ಮೀ ದೂರದಲ್ಲಿದೆ ಹಾಗೂ ಪನ್ವೇಲ್ ನಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಇಲ್ಲಿಂದ ನೀವು ಸುಲಭವಾಗಿ ಬಸ್ಸನ್ನು ಹತ್ತಿ, ಇಲ್ಲವೆ ರೈಲು ಮಾರ್ಗವಾಗಿ ಅಥವಾ ಸ್ವಂತ ವಾಹನದಲ್ಲಿ ತಲುಪಬಹುದು.