ಕಾರ್ತಿಕ ಮಾಸ ಬಂದರೆ ಅಯ್ಯಪ್ಪ ಸ್ವಾಮಿಯೇ ಕಾಣಿಸುತ್ತಾನೆ. ಮಂಡಲ ದೀಕ್ಷೆಯನ್ನು ತೆಗೆದುಕೊಂಡು ಸಂಕ್ರಾತಿಯಂದು ಮಕರ ಜ್ಯೋತಿ ದರ್ಶನ ಮಾಡುವುದು ಅತ್ಯಂತ ಪೂಣ್ಯಪ್ರದವಾದುದು ಎಂದು ಭಾವಿಸಲಾಗುತ್ತದೆ. ಈ ಪುಣ್ಯಕ್ಷೇತ್ರವು ಕೇರಳದ ಪ್ರಸಿದ್ಧವಾದ ಪುಣ್ಯಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ವರ್ಷದಲ್ಲಿ ಕೆಲವು ದಿನಗಳ ಮಾತ್ರ ತೆರೆದಿರುವ ಈ ದೇವಾಲಯಕ್ಕೆ 41 ದಿನಗಳ ಕಾಲ ದೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಕಠಿಣವಾದ ನಿಯಮವನ್ನು ಪಾಲಿಸಿ ಇಡಿಮುಡಿಯನ್ನು ಕಟ್ಟಿಕೊಂಡು ಸ್ವಾಮಿಯ ದೇವಾಲಯಕ್ಕೆ ತೆರಳುತ್ತಾರೆ.
ಕೇರಳದಲ್ಲಿನ ದಿವ್ಯಕ್ಷೇತ್ರಕ್ಕೆ ಭೇಟಿ ನೀಡಲು ಸುತ್ತಲೂ ದಟ್ಟವಾದ ಅರಣ್ಯದಿಂದ ಕೂಡಿರುವ ಹಾಗು ಸಹಜಸಿದ್ಧವಾದ ಪ್ರಕೃತಿ ರಮಣೀಯತೆಯಿಂದ ಕೂಡಿರುವ ದೃಶ್ಯ ಇಲ್ಲಿ ಸವಿಯಬಹುದು, ಪಂಬಾ ನದಿ ತೀರದ ಪಶ್ಚಿಮ ಪರ್ವತ ಶ್ರೇಣಿಗಳಲ್ಲಿ ಈ ಪುಣ್ಯಕ್ಷೇತ್ರವಿದೆ. ಕೇವಲ ಈ ದೇವಾಲಯಕ್ಕೆ ಭಾರತದಿಂದಲೇ ಅಲ್ಲದೇ ವಿದೇಶದಿಂದಲೂ ಭಕ್ತ ಜನಸಾಗರವು ಇಲ್ಲಿಗೆ ಭೇಟಿ ನೀಡುತ್ತದೆ. ಶಬರಿಮಲೈನಲ್ಲಿ ಸ್ವಾಮಿ ಅಯ್ಯಪ್ಪನು ಬಾಲಕನ ರೂಪದಲ್ಲಿ ನೆಲೆಸಿದ್ದಾನೆ. ಮುಖ್ಯವಾಗಿ ಶಬರಿಮಲೈನಲ್ಲಿನ ಸ್ವರ್ಣ ಮಂದಿರದ ಬಗ್ಗೆ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಹಿಂದೂಗಳು ಆತನನ್ನು ಹರಿಹರ ಸುತ ಎಂದು ಕರೆದು ಬಣ್ಣಿಸುತ್ತಾರೆ. ಕೇರಳದ ಪಂತಿನಂತಿಟ್ಟ ಜಿಲ್ಲೆಯಲ್ಲಿದೆ. ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿದೆ. ಎತ್ತರವಾದ ಪ್ರದೇಶದಲ್ಲಿ 18 ಬೆಟ್ಟಗಳ ಮಧ್ಯೆ ಮಣಿಕಂಠ ನೆಲೆಸಿದ್ದಾನೆ.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಇಲ್ಲಿಗೆ ಯಾತ್ರೆಗಳು ನವೆಂಬರ್ನಿಂದ ಪ್ರಾರಂಭವಾಗಿ ಜನವರಿ ತಿಂಗಳಿನಲ್ಲಿ ಮುಗಿಯುತ್ತದೆ. ಮಂಡಲ ಪೂಜೆಯು ನವೆಂಬರ್ 18 ರಂದು, ಮಕರ ವಿಳಕ್ಕೂ ಜನವರಿ 14 ರಂದು ಈ ಯಾತ್ರೆಯಲ್ಲಿ ಪ್ರಧಾನವಾದ ಘಟ್ಟಗಳಾಗಿವೆ. ಜನವರಿ 14 ರಂದು ಶಬರಿಮಲೈನಲ್ಲಿ ವಿಜೃಂಬಣೆಯ ಘಟ್ಟವಾಗಿದೆ. ಈ ಸಮಯದಲ್ಲಿ ಮಕರ ಜ್ಯೋತಿಯು ಭಕ್ತರಿಗೆ ದರ್ಶನವನ್ನು ನೀಡುತ್ತದೆ. ಆ ಮಕರಜ್ಯೋತಿಯನ್ನು ಸಾಕ್ಷಾತ್ ಆ ಹರಿಹರಸುತನೆಂದು ಭಕ್ತರು ಪುನೀತರಾಗುತ್ತಾರೆ.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಈ ಪವಿತ್ರವಾದ ದೇವಾಲಯವನ್ನು ಕೆಲವು ದಿನಗಳು ಮಾತ್ರ ತೆರೆದಿರುತ್ತಾರೆ. ಇನ್ನು ಉಳಿದ ದಿನಗಳಲ್ಲಿ ದೇವಾಲಯದ ದ್ವಾರವನ್ನು ಸಂಪೂರ್ಣವಾಗಿ ಮುಚ್ಚಿರುತ್ತಾರೆ. ಪ್ರತಿ ಮಳಯಾಳಿ ತಿಂಗಳಿನಲ್ಲಿ 5 ದಿನಗಳ ಕಾಲ ದೇವಾಲಯವನ್ನು ತೆರೆದಿರುತ್ತಾರೆ. ಒಂದು ಕಾಲದಲ್ಲಿ ಶಬರಿಮಲೈನ ಯಾತ್ರೆ ಎಂದರೆ ಎಲ್ಲರೂ ಭಯದಿಂದ ತೆರಳುತ್ತಿದ್ದರು. ಏಕೆಂದರೆ ಕಾಡಿನ ಮಧ್ಯೆ ಅನೇಕ ಕ್ರೂರ ಮೃಗಗಳು ಇದ್ದ ಕಾರಣದಿಂದ ಜನರು ಅತ್ಯಂತ ಭಯಗೊಳ್ಳುತ್ತಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಒಂದು ಕಾಲದಲ್ಲಿ ಶಬರಿಮಲೈಗೆ ತೆರಳಲು ಒಂದೇ ದಾರಿಯಲ್ಲಿ ತೆರಳಬೇಕಾಗಿತ್ತು. ಆದರೆ ಇಂದು ಅದು ಸುಲಭವಾಗಿದೆ. ಆ ದಾರಿಯನ್ನೇ ಎರಿಮೇಲಿ ಗ್ರಾಮ. ಈ ದಾರಿಯಲ್ಲಿಯೇ ಪೂಜಾರಿಗಳು, ದೇವಾಲಯದ ಸಿಬ್ಬಂದಿಗಳು ಈ ದಾರಿಯಲ್ಲಿಯೇ ತೆರಳುತ್ತಿದ್ದರಂತೆ. ಇವೆರೆಲ್ಲಾ ತೆರಳುವ ಸಮಯದಲ್ಲಿ ಗುಂಪು-ಗುಂಪುಗಳಾಗಿ ತೆರಳುತ್ತಿದ್ದರು.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
1908 ರಲ್ಲಿ ಶಬರಿಮಲೈನಲ್ಲಿ ಗರ್ಭಗುಡಿಯ ಶಿಖರವು ಎಲೆಗಳಿಂದ ಮುಚ್ಚಿ ಹೋಗಿದ್ದವಂತೆ. ಆ ಸಮಯದಲ್ಲಿ ಗರ್ಭಗುಡಿಯಲ್ಲಿ ಏಕಶಿಲ ವಿಗ್ರಹಕ್ಕೆ ಪೂಜೆಗಳನ್ನು ಮಾಡುತ್ತಿದ್ದರಂತೆ.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಅಗ್ನಿ ಅವಘಡ
1990 ರಲ್ಲಿ ದೇವಾಲಯವು ಅಗ್ನಿ ಪ್ರಮಾದಕ್ಕೆ ಗುರಿಯಾಯಿತು. 1950 ರವರೆಗೂ ಇದ್ದ ಪರಶುರಾಮನಿಂದ ನಿರ್ಮಿತವಾದ ಶಬರಿಮಲೈ ದೇವಾಲಯವು ಅಗ್ನಿಗೆ ಆಹುತಿಯಾಯಿತಂತೆ.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ವರ್ಷದ ಆದಾಯ
ಸಾಮಾನ್ಯವಾಗಿ ಪುಣ್ಯಕ್ಷೇತ್ರಗಳ ಆದಾಯವು ಹೆಚ್ಚಾಗಿರುತ್ತದೆ. ಆದರೆ ಈ ಶಬರಿಮಲೈ ಕ್ಷೇತ್ರದ ಆದಾಯವು 200 ವರ್ಷಗಳ ಹಿಂದೆ ಕೇವಲ 50 ಮಂದಿ ಯಾತ್ರಿಕರು ಭೇಟಿ ನೀಡಿದ್ದರು ಎಂದೂ, ವರ್ಷದ ಆದಾಯ 7 ರೂಪಾಯಿಗಳು ಎಂದು ಹೇಳಲಾಗುತ್ತಿದೆ.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಪುನರ್ ನಿರ್ಮಾಣ
ಆ ಸುಂದರವಾದ ದೇವಾಲಯವನ್ನು 1900 ರಿಂದ 1910 ವರ್ಷಗಳ ಕಾಲ ಪುನರ್ ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಪಂಚಲೋಹ ವಿಗ್ರಹಕ್ಕೆ ಪೂಜೆಗಳು
1910 ರಲ್ಲಿ ಶಿಲಾ ವಿಗ್ರಹಕ್ಕೆ ಬದಲಿಗೆ ಪಂಚ ಲೋಹದಿಂದ ತಯಾರು ಮಾಡಿದ ಅಯ್ಯಪ್ಪ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಿ ಪೂಜೆಗಳನ್ನು ಮಾಡಿದರು. ಅಂದಿನಿಂದ ಇಂದಿನವರೆಗೆ ಪಂಚಲೋಹ ವಿಗ್ರಹಕ್ಕೆ ಪೂಜೆಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಮಕರ ಜ್ಯೋತಿ
ಮಕರ ಜ್ಯೋತಿ ಎಂಬ ದಿವ್ಯವಾದ ದರ್ಶನವನ್ನು ಕಾಣಲು ಅನೇಕ ಮಂದಿ ಭಕ್ತಾಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಹೋಯಿತು. ಇಂದು ಲಕ್ಷಾಂತರ ಮಂದಿ ಭಕ್ತರು ಮಕರ ಜ್ಯೋತಿಯನ್ನು ನೋಡುವ ಸಲುವಾಗಿ ದೇಶ-ವಿದೇಶದಿಂದ ಭಕ್ತರು ಭೇಟಿ ನೀಡುತ್ತಿರುತ್ತಾರೆ.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಚಾಳಕ್ಯಾರ ಮಾರ್ಗ
ಓಡಿಪೇರಿಯಾರ್ ಮಾರ್ಗ ಅಥವಾ ಚಾಲಕ್ಯಾರ ಮಾರ್ಗ ಏರ್ಪಟ್ಟದ್ದರಿಂದ ಶಬರಿಮಲೈಗೆ ಭೇಟಿ ನೀಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಹೋಯಿತು.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ದೇವಾಲಯದ ಬೋರ್ಡ್
ಹಬ್ಬ ಹರಿದಿನಗಳ ಸಮಯದಲ್ಲಿ ದೇವಾಲಯದ ಬೋರ್ಡ್ ಕೇವಲ ಮಕರ ಜ್ಯೋತಿ ಸಮಯದಲ್ಲಿ ಮಾತ್ರವೇ ಅಲ್ಲದೇ ವಿಷು, ಪಂಕುನಿ ಎಂಬ ಮಳಿಯಾಳಿಗಳ ಹಬ್ಬಗಳ ದಿನದಂದು ಕೂಡ ದೇವಾಲಯ ದ್ವಾರವನ್ನು ತೆರೆಯುವ ಹಾಗೆ ದೇವಾಲಯದ ಬೋರ್ಡ್ ತೀರ್ಮಾನಿಸಿದರು.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಪಂಚಲೋಹ ವಿಗ್ರಹ
1951 ರಲ್ಲಿ ಪಂಚಲೋಹದ ಮೂರ್ತಿಯನ್ನು ಚೆಂಗನೂರಿನಿಂದ ತರಿಸಿ, ವೇದ ಪಂಡಿತರ ಮಂತ್ರ ಉಚ್ಛಾರಣೆಯ ಮಧ್ಯೆ ಪ್ರತಿಷ್ಟಾಪಿಸಿದರು. ಅಂದಿನಿಂದ ಪಂಚಕೇಳಿ ವಿಗ್ರಹವಾಗಿ ಕರೆಯುವ ಮೂಲಕ ಗುರುತಿಸಿದರು. ಭಾರತ ಕೇಳಿ ವಿಗ್ರಹವಾಗಿ ಇಂದು ಭೂತಾಳಿಕೇಳಿ ವಿಗ್ರಹವಾಗಿ ಕೀರ್ತಿ ಹೊಂದಿದೆ.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಕಲ್ಲಿನ ಮೆಟ್ಟಿಲು
ಶಬರಿಮಲೈಗೆ ತೆರಳುವವರು ಕಲ್ಲಿನ ಮೆಟ್ಟಿಲುಗಳನ್ನೇ ಬಳಸುತ್ತಿದ್ದರು. ಪೂರ್ವದಲ್ಲಿ ಪರಶುರಾಮ ನಿರ್ಮಾಣ ಮಾಡಿದ 18 ಮೆಟ್ಟಿಲುಗಳನ್ನು ಹೊಂದಿದ್ದು ಕಲ್ಲಿನ ಮೆಟ್ಟಿಲುಗಳನ್ನೇ ಬಳಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಪ್ರತಿ ಮೆಟ್ಟಿಲುಗಳು ಏರುವಾಗಲೂ ಕುಬ್ಬರಿಕಾಯಿಯನ್ನು ಹೊಡೆಯುತ್ತಿದ್ದರಂತೆ. ಇದರಿಂದ ಭಕ್ತರಿಗೆ ಮೆಟ್ಟಿಲುಗಳನ್ನು ಏರುವುದಕ್ಕೆ ಕಷ್ಟವಾಗುತ್ತಿತ್ತಂತೆ. ಇದನ್ನು ಗುರುತಿಸಿದ ದೇವಾಲಯದ ಬೋರ್ಡ್ನವರು 18 ಮೆಟ್ಟಲುಗಳನ್ನು ಪಂಚಲೋಹದಿಂದ ತಯಾರು ಮಾಡಿಸಿದರು.
ಶಬರಿಮಲೈನ ಸ್ವರ್ಣ ಮಂದಿರದ ಬಗ್ಗೆ ನಿಮಗೆ ಎಷ್ಟು ಗೊತ್ತ?
ಬಂಗಾರದ ಮಂದಿರ
ಗರ್ಭಗುಡಿಯ ಸುತ್ತ ಬಂಗಾರದ ರೇಕ್ನಿಂದ ಶಿಖರವನ್ನು ಶೃಂಗಾರ ಮಾಡಿದ್ದಾರೆ. ಆ ಬಂಗಾರದ ರೇಕ್ ಅನ್ನು ಬೆಂಗಳೂರಿನ ಭಕ್ತರೊಬ್ಬರು ಹಾಕಿಸಿದರು. ಇದರಿಂದಾಗಿ ಶಬರಿಮಲೈ ದೇವಾಲಯವು ಬಂಗಾರ ಮಂದಿರವಾಗಿ ಕಂಗೊಳಿಸುತ್ತಿದೆ.
ಶಬರಿಮಲೈಗೆ ತೆರಳುವ ಬಗೆ ಹೇಗೆ?
ರಸ್ತೆ ಮಾರ್ಗದ ಮೂಲಕ ಕೇರಳದಲ್ಲಿರುವ ಎಲ್ಲಾ ಪ್ರಧಾನ ನಗರಗಳಿಂದ ಪಂಬ ಪಟ್ಟಣಕ್ಕೆ ಅನೇಕ ಬಸ್ಸುಗಳ ವ್ಯವಸ್ಥೆಗಳಿವೆ. ಕೇರಳ ಸ್ಟೇಟ್ ರೋಡ್ ಟ್ರಾನ್ಸ್ ಫೋರ್ಟ್ ಕಾರ್ಪೋರೇಷನ್ ಮೂಖಾಂತರ ಕೇರಳ ಪ್ರಭುತ್ವವು ಸಾರಿಗೆ ಶಾಖೆ ಕೊಟ್ಟಾಂಯಂ, ಚೆಂಗನ್ನೂರು ಮತ್ತು ತಿರುಮಲ ರೈಲ್ವೆ ಸ್ಟೇಷನ್ಗಳಿಗೆ ಬಸ್ಸುಗಳು ಇರುತ್ತವೆ. ಖಾಸಗಿ ಟ್ಯಾಕ್ಸಿಗಳು ಮತ್ತು ಟೂರಿಸ್ಟ್ ಪ್ಯಾಕೆಜ್ಗಳ ಮುಖಾಂತರ ಕೂಡ ಶಬರಿಮಲೈಗೆ ತೆರಳಬಹುದು.
ಶಬರಿಮಲೈಗೆ ತೆರಳುವ ಬಗೆ ಹೇಗೆ?
ರೈಲ್ವೆಗಳ ಮೂಲಕ
ಪಂಬಾ ಪಟ್ಟಣಕ್ಕೆ ಸುಮಾರು 90 ಕಿ.ಮೀ ದೂರದಲ್ಲಿರುವ ಚೆಂಗನ್ನೂರ್ ರೈಲ್ವೆ ನಿಲ್ದಾಣವು, ಶಬಲಿಮಲೈಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ತಿರುವನಂತಪುರಕ್ಕೆ ಮತ್ತು ಕೊಟ್ಟಾಯಂನ ಮಾರ್ಗ ಮಧ್ಯದಲ್ಲಿ ಈ ಚೆಂಗನ್ನೂರ್ ಪ್ರಾಂತ್ಯ ಇರುವುದರಿಂದ ಭಾರತ ದೇಶದಲ್ಲಿನ ಎಲ್ಲಾ ಮುಖ್ಯವಾದ ರೈಲುಗಳು ಈ ನಿಲ್ದಾಣಕ್ಕೆ ಸಂಪರ್ಕ ಸಾಧಿಸುತ್ತದೆ.
ಶಬರಿಮಲೈಗೆ ತೆರಳುವ ಬಗೆ ಹೇಗೆ?
ವಾಯು ಮಾರ್ಗದ ಮೂಲಕ
ಕೊಚ್ಚಿ ಅಂತರ್ಜಾತಿಯ ವಿಮಾನ ನಿಲ್ದಾಣ ಮತ್ತು ತಿರುವನಂತಪುರಂ ಅಂತರ್ಜಾತಿಯ ವಿಮಾನ ನಿಲ್ದಾಣವು ಶಬರಿಮಲೈಗೆ ಸಮೀಪದಲ್ಲಿದೆ. ಶಬರಿಮಲೈನಿಂದ ತಿರುವನಂತಪುರಕ್ಕೆ 130 ಕಿ.ಮೀ ದೂರದಲ್ಲಿ, ಕೊಚ್ಚಿ ವಿಮಾನ ನಿಲ್ದಾಣದಿಂದ ಸುಮಾರು 190 ಕಿ.ಮೀ ದೂರದಲ್ಲಿದೆ. ಈ 2 ವಿಮಾನ ನಿಲ್ದಾಣಗಳಿಂದ ಪಂಬಾ ಪಟ್ಟಣಕ್ಕೆ ಟ್ಯಾಕ್ಸಿಗಳು ಲಭ್ಯವಿವೆ. ಪಂಬಾ ಪಟ್ಟಣದಿಂದ ಸುಲಭವಾಗಿ ಶಬರಿಮಲೈಗೆ ಸೇರಿಕೊಳ್ಳಬಹುದು.