ಭಾರತದ 12 ಜ್ಯೋತಿರ್ಲಿಂಗಗಳಿಗೆ ನೆಲೆಯಾಗಿರುವ ಈ ಶಿವ ದೇವಾಲಯಗಳ ದರ್ಶನ ಮಾಡಿ ಪುಣ್ಯ ಗಳಿಸಿ!
ಭಗವಾನ್ ಶಿವನು ಹಿಂದೂ ಆರಾಧ್ಯ ದೇವರುಗಳಲ್ಲಿ ಅತ್ಯಂತ ಪೂಜ್ಯನೀಯ ದೇವರಲ್ಲಿ ಒಬ್ಬನಾಗಿದ್ದಾನೆ. ಸರ್ವೋಚ್ಚ ದೈವತ್ವದ ತ್ರಿಮೂರ್ತಿಗಳಲ್ಲಿ ಲೋಕೋದ್ದಾರಕ ಎಂದು ಪರಿಗಣಿಸಲ್ಪಟ್ಟ ಅವರನ್ನು ಆದಿಯೋಗಿ ಶಿವ ಎಂದೂ ಕರೆಯಲಾಗುತ್ತದೆ - ಯೋಗ, ಧ್ಯಾನ ಮತ್ತು ಕಲೆಗಳ ಪೋಷಕ ದೇವರೂ ಆಗಿರುವ ಶಿವನು ಹಿಂದೂ ದೇವರಾಗಿದ್ದು, ಅನೇಕ ದಯಾಪರ ಮತ್ತು ಭಯಾನಕ ರೂಪವನ್ನು ಹೊಂದಿದ್ದಾನೆ.
ಜ್ಯೋತಿರ್ಲಿಂಗಗಳ ದಂತಕಥೆಗಳು
ಶಿವ ಮಹಾಪುರಾಣದ ಪ್ರಕಾರ ಒಮ್ಮೆ ತ್ರಿಮೂರ್ತಿಗಳಲ್ಲಿ ಸೃಷ್ಟಿಯಲ್ಲಿ ಯಾರು ಶ್ರೇಷ್ಟ ಎನ್ನುವುದರ ಬಗ್ಗೆ ವಾದ ನಡೆಯುತ್ತದೆ! ಈ ಚರ್ಚೆಯನ್ನು ಬಗೆಹರಿಸಲು, ಪರಮಾತ್ಮನಾದ ಶಿವನು ಮೂರು ಲೋಕಗಳನ್ನು ಭೇದಿಸಿದ ಸಮಯದಲ್ಲಿ ಒಂದು ಬೃಹತ್ ಅನಂತವಾದ ಬೆಳಕಿನ ಸ್ತಂಭವು ಕಾಣಿಸಿಕೊಂಡಿತು.ಈ ಬೆಳಕು ಕ್ರಮೇಣ ಶಿವ ಲಿಂಗದ ರೂಪದಲ್ಲಿ ಪರಿವರ್ತನೆಯಾಯಿತು ಹೀಗೆ ಲಿಂಗದ ಆರಾಧನೆಯನ್ನು ಶಿವನ ಪ್ರಧಾನ ಆರಾಧನೆ ಎಂದು ಪರಿಗಣಿಸಲಾಗುತ್ತದೆ ಇದರ ಮುಂದೆ ಇತರ ಎಲ್ಲಾ ರೂಪಗಳ ಆರಾಧನೆಯನ್ನು ದ್ವಿತೀಯಕವೆಂದು ಪರಿಗಣಿಸಲಾಗುತ್ತದೆ.
ಭಾರತದ 12 ಜ್ಯೋತಿರ್ಲಿಂಗಗಳ ದೇವಾಲಯಗಳ ಬಗ್ಗೆ ಒಮ್ಮೆ ನೋಟ ಹರಿಸೋಣ

ಸೋಮನಾಥ ದೇವಾಲಯ
ಗುಜರಾತಿನ ಸೌರಾಷ್ಟ್ರ ಪ್ರದೇಶದಲ್ಲಿ ನೆಲೆಗೊಂಡಿರುವ ಜ್ಯೋತಿರ್ಲಿಂಗ ಯಾತ್ರೆಯು ಸೋಮನಾಥ ದೇವಾಲಯದಿಂದ ಪ್ರಾರಂಭವಾಗುತ್ತದೆ. ಹದಿನಾರು ಬಾರಿ ನಾಶವಾದ ಮತ್ತು ಪುನರ್ನಿರ್ಮಿಸಲ್ಪಟ್ಟ ಈ ದೇವಾಲಯವು ಭಾರತದಾದ್ಯಂತ ಹೆಚ್ಚಿನ ಗೌರವವನ್ನು ಹೊಂದಿದೆ ಮತ್ತು ದಂತಕಥೆ, ಸಂಪ್ರದಾಯ ಮತ್ತು ಇತಿಹಾಸದಲ್ಲಿ ಶ್ರೀಮಂತವಾಗಿದೆ.

ಮಹಾಕಾಲೇಶ್ವರ ಜ್ಯೋತಿರ್ಲಿಂಗ - ಮಧ್ಯಪ್ರದೇಶ
ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಉಜ್ಜಯಿನಿಯಲ್ಲಿರುವ ಶಿವನ ಅತ್ಯಂತ ಪ್ರಸಿದ್ಧ ಮತ್ತು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಮಹಾಕಾಲನಲ್ಲಿರುವ ಲಿಂಗವು ಸ್ವಯಂಭೂ (ಸ್ವಯಂ-ಅಭಿವ್ಯಕ್ತಿ) ಎಂದು ನಂಬಲಾಗಿದೆ!

ಓಂಕಾರೇಶ್ವರ ದೇವಾಲಯ - ಮಧ್ಯಪ್ರದೇಶ
ಓಂಕಾರೇಶ್ವರ ದೇವಾಲಯವು ಮಧ್ಯಪ್ರದೇಶದ ಮಂದಾತದಲ್ಲಿದ್ದು ಇದು ಶಿವನಿಗರ್ಪಿತವಾದ ದೇವಾಲಯವಾಗಿದೆ. ಈ ದ್ವೀಪವು ಓಂ ಆಕಾರದಲ್ಲಿದೆಯಿಂದು ಹೇಳಲಾಗುತ್ತದೆ.

ಕೇದಾರನಾಥ ದೇವಾಲಯ - ಉತ್ತರಾಖಂಡ್
ಉತ್ತರಾಖಂಡದ ಕೇದಾರನಾಥವು ಕೈಲಾಸ ಪರ್ವತದ ಶಿವನ ಶಾಶ್ವತ ನಿವಾಸಕ್ಕೆ ಸಮೀಪವಿರುವ ಜ್ಯೋತಿರ್ಲಿಂಗವೆಂದು ಪೂಜಿಸಲ್ಪಟ್ಟಿದೆ! ಹಿಮದಿಂದ ಆವೃತವಾದ ಹಿಮಾಲಯದಲ್ಲಿ ನೆಲೆಸಿರುವ ಈ ಪುರಾತನ ದೇವಾಲಯವು ದಂತಕಥೆ ಮತ್ತು ಸಂಪ್ರದಾಯಗಳಿಂದ ಸಮೃದ್ಧವಾಗಿದೆ ಮತ್ತು ವರ್ಷಕ್ಕೆ ಆರು ತಿಂಗಳು ಮಾತ್ರ ಇಲ್ಲಿಗೆ ಪ್ರವೇಶಿಸಬಹುದಾಗಿದೆ.

ಕಾಶೀ ವಿಶ್ವನಾಥ ದೇವಾಲಯ- ಉತ್ತರ ಪ್ರದೇಶ
ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯವು ವಿಶ್ವನಾಥ ಜ್ಯೋತಿರ್ಲಿಂಗ ದೇವಾಲಯದ ನೆಲೆಯಾಗಿದೆ, ಇದು ಹಿಂದೂ ದೇವಾಲಯಗಳಲ್ಲಿ ಅತ್ಯಂತ ಪವಿತ್ರವಾಗಿದೆ! ಇದು ಎಲ್ಲಾ ಶಿವ ದೇವಾಲಯಗಳಲ್ಲಿ ಅತ್ಯಂತ ಪವಿತ್ರವಾದ ದೇವಾಲಯವೆನಿಸಿದೆ.

ತ್ರಿಯಂಬಕೇಶ್ವರ ಶಿವ ದೇವಾಲಯ- ಮಹಾರಾಷ್ಟ್ರ
ಮಹಾರಾಷ್ಟ್ರದ ನಾಸಿಕ್ ಬಳಿಯಿರುವ ತ್ರಯಂಬಕೇಶ್ವರ ಶಿವ ದೇವಾಲಯವು ಗೋದಾವರಿ ನದಿಯ ಉಗಮಕ್ಕೆ ಸಂಬಂಧಿಸಿದ ಜ್ಯೋತಿರ್ಲಿಂಗ ದೇವಾಲಯವಾಗಿದೆ.

ರಾಮನಾಥಸ್ವಾಮಿ ದೇವಾಲಯ - ತಮಿಳುನಾಡು
ತಮಿಳುನಾಡಿನ ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಾಲಯವು ಭಾರತದ ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ದಕ್ಷಿಣದ ಭಾಗವಾಗಿದೆ. ಈ ದೇವಾಲಯವು ಭಾರತದ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಅತಿ ಉದ್ದದ ಕಾರಿಡಾರ್ ಅನ್ನು ಹೊಂದಿದೆ!


Click it and Unblock the Notifications




















