ಹರಿದ್ವಾರ, ರಿಷಿಕೇಶ, ಕೋಟದ್ವಾರ ಮತ್ತಿತರ ಭಾಗದಿಂದ ಕೇದಾರನಾಥಕ್ಕೆ ಉತ್ತಮ ಬಸ್ ಸಂಪರ್ಕ ಇದೆ. ಯಾತ್ರೆ ಸಂದರ್ಭದಲ್ಲಿ ಈ ಸೌಲಭ್ಯ ಇರುತ್ತದೆ. ಪ್ರವಾಸಿಗರು ಗೌರಿಕುಂಡದವರೆಗೆ ಬಸ್ ಮೂಲಕ ಅಥವಾ ಯಾವುದೇ ವಾಹನ ಮೂಲಕ ಆಗಮಿಸಬಹುದು. ಇದಲ್ಲದೇ ಖಾಸಗಿ ಟ್ಯಾಕ್ಸಿ, ಕ್ಯಾಬ್ಗಳ ಸೇವೆಯೂ ಉತ್ತಮವಾಗಿದೆ. ಗೌರಿಕುಂಡ ತಲುಪಿದ ನಂತರ ಪ್ರವಾಸಿಗರು ನಡೆದೇ ಕೇದಾರನಾಥ ತಲುಪಬೇಕು.