ವಸಾಹತುಶಾಹಿ ಬ್ರಿಟಿಷ್ ಸಾಮ್ರಾಜ್ಯವು ಕೊಹಿ-ಇ-ನೂರ್ ವಜ್ರವನ್ನು ಭಾರತದಿಂದ ಕಸಿದುಕೊಂಡ ನಂತರ ಕೊಹಿ-ಇ-ನೂರ್ ವಜ್ರವು ಇಂಗ್ಲೆಂಡ್ನ ರಾಣಿಯ ಕಿರೀಟದ ಭಾಗವಾಗಿದೆ. ಇನ್ನೂ ಈ ಸಾಂಪ್ರದಾಯಿಕ ವಜ್ರದ ಆರಂಭಿಕ ಇತಿಹಾಸ ಸಾಕಷ್ಟು ಮಂದಿಗೆ ತಿಳಿದಿಲ್ಲ .

ತೆಲಂಗಾಣದ ಕಾಕತೀಯರು
PC: Nikhilb239
ಅಲ್ಲಾವುದ್ದೀನ್ ಖಿಲ್ಜಿ ತೆಲಂಗಾಣದ ಕಾಕತೀಯರ ಆಡಳಿತಗಾರರನ್ನು ಸೋಲಿಸಿ ವಜ್ರವನ್ನು ಅದರ ಅನುಗ್ರಹದ ಭಾಗವಾಗಿ ತೆಗೆದುಕೊಂಡಿದೆ. ಆದರೆ ಕಾಕತೀಯರು ಇದನ್ನು ಎಲ್ಲಿಂದ ಪಡೆದರು ? ಕೊಲ್ಲೂರು ಗಣಿಯಿಂದ ಪಡೆದರು. ಆಗ ಇದು ವಿಶ್ವದ ಕೆಲವೇ ಗಣೆಗಾರಿಕೆಗಳಲ್ಲಿ ಒಂದಾಗಿತ್ತು ಎನ್ನಲಾಗುತ್ತದೆ.

ಭದ್ರಾಕಳಿ ದೇವಸ್ಥಾನ
ಆದರೆ ಇನ್ನೊಂದು ಕಥೆಯ ಪ್ರಕಾರ, ಈ ವಜ್ರವು ವಾಸ್ತವವಾಗಿ ವಾರಂಗಲ್ ನಗರದಲ್ಲಿರುವ ಭದ್ರಾಕಳಿ ದೇವಸ್ಥಾನದ ದೇವಿಯ ಎಡ ಕಣ್ಣು ಎನ್ನಲಾಗುತ್ತದೆ. ವಾರಂಗಲ್ನ ಈ ದೇವಸ್ಥಾನವು 7 ನೇ ಶತಮಾನದಲ್ಲಿ ಚಾಲುಕ್ಯ ರಾಜರಿಂದ ನಿರ್ಮಿಸಲ್ಪಟ್ಟಿತು.

ಕೊಹಿ-ಇ-ನೂರ್ನ ಸಣ್ಣ ಇತಿಹಾಸ
PC: Chris 73
ದುರದೃಷ್ಟವಶಾತ್ ದೆಹಲಿ ಸುಲ್ತಾನರು ಈ ಪ್ರದೇಶವನ್ನು ವಶಪಡಿಸಿಕೊಂಡಾಗ, ಭದ್ರಾಕಳಿ ದೇವಸ್ಥಾನವೂ ಸಹ ಇತರ ಎಲ್ಲಾ ದೇವಸ್ಥಾನಗಳೊಂದಿಗೆ ನಾಶವಾಯಿತು. ದೇವತೆಯಾದ ಕೊಹಿ-ಇ-ನೂರ್, ದಿಲ್ಲಿಗೆ ವಿಜಯಶಾಲಿಗಳೊಂದಿಗೆ ಪ್ರಯಾಣಿಸಿ, ಖಂಡಗಳ ಉದ್ದಗಲಕ್ಕೂ ವಜ್ರದ ಪ್ರಯಾಣ ಪ್ರಾರಂಭವಾಯಿತು. ಖಿಲ್ಜಿಯಿಂದ ಮುಘಲರಿಗೆ, ನಂತರ ಪರ್ಷಿಯಾದ ಷಾಸ್ಗೆ, ನಂತರ ಆಫ್ಘನ್ನರು, ಸಿಖ್ಖರು ಮತ್ತು ಅಂತಿಮವಾಗಿ ಬ್ರಿಟೀಷರ ಪಾಲಾಯಿತು.

ರಾಣಿಯ ಕಿರೀಟ
ಕೊನೆಯ ಕಾನೂನುಬದ್ಧ ಮಾಲೀಕ ರಂಜಿತ್ ಸಿಂಗ್ ಇದನ್ನು ಪುರಿ ಜಗನ್ನಾಥ ದೇವಸ್ಥಾನಕ್ಕೆ ಒಪ್ಪಿಸಿದರು. ಅವರ ಮರಣದ ನಂತರ ಬ್ರಿಟಿಷರು ಅದನ್ನು ತೆಗೆದುಕೊಂಡು ತಮ್ಮ ರಾಣಿಯ ಕಿರೀಟದ ಭಾಗವಾಗಿ ಮಾಡಿದರು.

ಪುನರುಜ್ಜೀವನಗೊಳಿಸಲಾಯಿತು
ಈಗಿನ ದೇವಾಲಯವನ್ನು 1950 ರ ದಶಕದಲ್ಲಿ ಪುನರುಜ್ಜೀವನಗೊಳಿಸಲಾಯಿತು. ಶ್ರೀಮಂತ ವ್ಯಾಪಾರಿಗಳ ಗುಂಪು ಈ ದೇವಾಲಯವನ್ನು ಮತ್ತೆ ಜೀವಂತವಾಗಿ ತರಲು ಒಗ್ಗೂಡಿತು. ಇಂದು ಇದು ಅಭಿವೃದ್ಧಿ ಹೊಂದುತ್ತಿರುವ ದೇವಸ್ಥಾನವಾಗಿದೆ ಮತ್ತು ಪ್ರತಿ ವರ್ಷವೂ ಸಾವಿರಾರು ಜನರು ಭೇಟಿ ನೀಡುತ್ತಾರೆ.

ಗೋಲ್ಡನ್ ಟೆಂಪಲ್
PC: Adbh266
ದಕ್ಷಿಣ ಭಾರತದ ಗೋಲ್ಡನ್ ಟೆಂಪಲ್ ಎಂದು ಕೂಡ ಈ ದೇವಾಲಯವನ್ನು ಕರೆಯುತ್ತಾರೆ. ಇದನ್ನು ಸಾಂಪ್ರದಾಯಿಕ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ ಇಲ್ಲಿನ ವಾಸ್ತುಶಿಲ್ಪದ ಸೌಂದರ್ಯ ಅದ್ಭುತವಾಗಿದೆ ಇದು ಇಲ್ಲಿಗೆ ಭೇಟಿ ನೀಡುವ ಕಾರಣಗಳಲ್ಲಿ ಒಂದಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಇಲ್ಲಿಂದ ನೋಡುವುದೇ ಒಂದು ಖುಷಿ.


Click it and Unblock the Notifications

















