Search
  • Follow NativePlanet
Share
» »ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿ

ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿ

ನಮ್ಮ ದೇಶದಲ್ಲಿರುವ ಕೋಟೆಗಳು ಹಿಂದಿನ ಕಾಲದ ಸಾಮ್ರಾಟರ ಆಳ್ವಿಕೆಯ ಗುರುತುಗಳಾಗಿವೆ. ಪ್ರತಿ ಕೋಟೆಯೂ ಅದರೊಂದಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈಗ ದಟ್ಟ ಕಾಡಿನ ಮಧ್ಯೆ ಮತ್ತು ಸುಂದರವಾದ ಪಶ್ಚಿಮ ಘಟ್ಟದ ಬೆಟ್ಟದ ಮೇಲೆ ಕೋಟೆಯು ಅಸ್ತಿತ್ವದಲ್ಲಿದ್ದರೆ, ಇದು ಇತಿಹಾಸ ಮತ್ತು ನಿಗೂಢತೆಯ ಸಂಪೂರ್ಣ ಸ್ಥಳವಾಗಿದೆ. ಚಿಕ್ಕಮಗಳೂರಿನಲ್ಲಿರುವ ಬಲ್ಲಾಳರಾಯನ ದುರ್ಗಾ ಕೋಟೆ ಅಂತಹ ಅದ್ಭುತ ಕೋಟೆಯಲ್ಲಿ ಒಂದಾಗಿದೆ.

ಬೆಟ್ಟದ ಅರಣ್ಯ ಪ್ರದೇಶದ ಮೂಲಕ ಈ ಪ್ರತ್ಯೇಕ ಕೋಟೆಯನ್ನು ಮಾತ್ರ ತಲುಪಬಹುದು. ಇದು ಚಿಕ್ಕಮಗಳೂರು ಕೋಟೆಗೆ ಹರಾ ಗ್ರಾಮ ಮತ್ತು ಕಲಾಸ ದೇವಸ್ಥಾನ-ಪಟ್ಟಣದ ಮಧ್ಯೆ ಇರುವ ಬೆಟ್ಟಬಲಿಗ್‌ನಲ್ಲಿದೆ. ಇದು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಕೆಲವು ಕೋಟೆಗಳಲ್ಲಿ ಒಂದಾಗಿದೆ.

ಕೋಟೆಯ ಇತಿಹಾಸ

ಕೋಟೆಯ ಇತಿಹಾಸ

ಬಲ್ಲಾಳರಾಯನ ದುರ್ಗಾವನ್ನು 12ನೇ ಶತಮಾನದ ಹೊಯ್ಸಳ ಸಾಮ್ರಾಜ್ಯದ 1ನೇ ವೀರ ಬಲ್ಲಾಳ ನ ಪತ್ನಿ ನಿರ್ಮಿಸಿದರು. ಹೊಯ್ಸಳರು ಶಿಲ್ಪ ಕಲೆಗೆ ಹೆಸರಾದವರು . ಅವರ ಕಾಲದಲ್ಲಿ ಅನೇಕ ದೇವಾಲಯಗಳು ಹಾಗೂ ಕೆಲವು ಕೋಟೆಗಳನ್ನು ನಿರ್ಮಿಸಲಾಗಿದೆ. ಬಲ್ಲಾಳರಾಯನ ದುರ್ಗಾ ಕೋಟೆಯನ್ನು ಕರ್ನಾಟ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಶೈಲಿಯು ಹೊಯ್ಸಳರ ಕಾಲದಲ್ಲಿ ಬಹಳ ಪ್ರಸಿದ್ಧಿ ಹೊಂದಿದೆ.

ಕಾಲಬೈರವೇಶ್ವರ ದೇವಸ್ಥಾನ

ಕಾಲಬೈರವೇಶ್ವರ ದೇವಸ್ಥಾನ

ಬಲ್ಲಾಳರಾಯನ ದುರ್ಗಾವು1509ಮೀಟರ್ ಎತ್ತರದಲ್ಲಿದೆ. ಅಲ್ಲೊಂದು ಪುರಾತನ ಕಾಲಬೈರವೇಶ್ವರ ದೇವಸ್ಥಾನವಿದೆ. ಇದು ಬಲ್ಲಾಳರಾಯನ ದುರ್ಗಾ ಕೋಟೆಯ ಕೆಳಗೆ ಇದೆ. ದಂತಕಥೆಯ ಪ್ರಕಾರ ಬಲ್ಲಾಳ೧ ಹಾಗೂ ಆತನ ಪತ್ನಿ ಪ್ರತಿದಿನ ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಎನ್ನಲಾಗುತ್ತಿದೆ.

ಕೋಟೆಯ ಗತವೈಭವವನ್ನು ನೆನಪಿಸುವ ಗೋಡೆಗಳು

ಕೋಟೆಯ ಗತವೈಭವವನ್ನು ನೆನಪಿಸುವ ಗೋಡೆಗಳು

ಈಗ ಕೋಟೆಯು ತನ್ನ ವೈಭವವನ್ನು ಕಳೆದುಕೊಂಡಿದ್ದರೂ ಅಲ್ಲಿನ ಕೆಲವು ರಚನೆಗಳು ಆ ಕೋಟೆಯ ಹಿಂದಿನ ವೈಭವವನ್ನು ಜ್ಞಾಪಿಸುತ್ತದೆ. ಪ್ರವಾಸಿಗರು ಕೋಟೆಯ ಕೆಲವೊಂದು ಛಿದ್ರವಾದ ಗೋಡೆಗಳನ್ನು ಕಾಣಬಹುದು. ಇದು ಒಮ್ಮೆ ಅಹಂಕಾರದಲ್ಲಿ ನಿಂತಿದ್ದ ದೊಡ್ಡ ರಚನೆಯ ಪುರಾವೆಯಾಗಿ ಇನ್ನೂ ಅಸ್ತಿತ್ವದಲ್ಲಿದೆ. ಸಂಪೂರ್ಣವಾಗಿ ನಾಶವಾದ ಮತ್ತು ಶಿಥಿಲಗೊಂಡ ಸ್ಥಿತಿಯಲ್ಲಿ ಕೋಟೆಯು ಪ್ರಾಚೀನ ಸಂರಕ್ಷಣೆಯ ಕೊರತೆಯಿಂದಾಗಿ ನಾಶಗೊಂಡ ಪ್ರಾಚೀನ ರಚನೆಯ ಉದಾಹರಣೆಯಾಗಿದೆ. ಬಲ್ಲಾಳರಾಯನ ದುರ್ಗಾದಲ್ಲಿ ಸೂರ್ಯಾಸ್ತವನ್ನು ನೋಡಲು ರಮಣೀಯವಾಗಿರುತ್ತದೆ.

ಬಲ್ಲಾಳರಾಯಣ ದುರ್ಗಾಕ್ಕೆ ಟ್ರಕ್ಕಿಂಗ್

ಬಲ್ಲಾಳರಾಯಣ ದುರ್ಗಾಕ್ಕೆ ಟ್ರಕ್ಕಿಂಗ್

ಬಲ್ಲಾಳರಾಯಣ ದುರ್ಗಾದ ಐತಿಹಾಸಿಕ ಮಹತ್ವವನ್ನು ಹೊರತುಪಡಿಸಿಈ ಕೋಟೆಯು ಚಾರಣ ತಾಣವಾಗಿ ಪ್ರಸಿದ್ಧವಾಗಿದೆ. ಮುಂಡಾಜೆನಲ್ಲಿ ಆರಂಭಗೊಂಡು ಬಂಡಾಜೆ ಅರ್ಬಿ ಮೂಲಕ ಆ ಕೋಟೆಗೆ ತಲುಪಬೇಕು. ಈ ಕೋಟೆಗೆ ಚಾರಣ ಸ್ವಲ್ಪ ಕಷ್ಟವಾಗುವುದು ಮತ್ತು ಚಾರಣೀಗರಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಯಾರಾದರೂ ಮಾರ್ಗದರ್ಶಕರಿದ್ದಲ್ಲಿ ಈ ಟ್ರಕ್ಕಿಂಗ್ ಸುಲಭವಾಗುತ್ತದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಬಲ್ಲಾಳರಾಯಣ ದುರ್ಗಾ ಕೋಟೆಗೆ ಹೋಗಬೇಕಾದರೆ ನಂವಂಬರ್‌ನಿಂದ ಮೇ ತಿಂಗಳ ನಡುವೆ ಹೋಗುವುದು ಸೂಕ್ತ. ಜೂನ್‌ನಿಂದ ಅಕ್ಟೋಬರ್‌ ತಿಂಗಳಲ್ಲಿ ಮಳೆಗಾಲವಿರುವುದರಿಂದ ಆಗ ಹೋಗುವುದು ಸೂಕ್ತವಲ್ಲ. ಆಗ ರಕ್ತ ಹೀರುವ ಲೀಚಿ ಹುಳುಗಳು ತುಂಬಿರುತ್ತವೆ. ಹಾಗೆಯೇ ಬಂಡೆಗಳು ಪಾಚಿ ಹಿಡಿದು ಜಾರುವಂತಿರುತ್ತವೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಬಲ್ಲಾಳರಾಯನ ದುರ್ಗಾಕ್ಕೆ ಬೆಂಗಳೂರಿನಿಂದ ಹೋಗವುದಾದರೆ ರಸ್ತೆ ಮಾರ್ಗವು ಬೆಸ್ಟ್. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಸಾಕಷ್ಟು ಬಸ್‌ಗಳಿವೆ.
ಇನ್ನು ರೈಲು ಮುಖಾಂತರ ಹೋಗುವುದಾದರೆ ಚಿಕ್ಕಮಗಳೂರಿನಲ್ಲಿ ರೈಲು ನಿಲ್ದಾಣವಿದೆ. ಆದರೆ ಚಿಕ್ಕಮಗಳೂರಿನಲ್ಲಿ ಏರ್‌ಪೋರ್ಟ್ ಇಲ್ಲ. ಅಲ್ಲಿಗೆ ಸಮೀಪದ ಏರ್‌ಪೋರ್ಟ್ ಎಂದರೆ ಮಂಗಳೂರು ವಿಮಾನ ನಿಲ್ದಾಣ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+