21ನೇ ಶತಮಾನದಲ್ಲಿ ದೇವರನ್ನು ಈಗ ನಂಬುವವರು ಯಾರಿದ್ದಾರೆ ಎನ್ನುವ ಮಾತು ಕೇಳಿಬರುತ್ತದೆ. ಆದರೆ ದೇವರಿದ್ದಾನೋ ಇಲ್ಲವೋ ಎನ್ನುವ ಅನೇಕರ ಸವಾಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲಿದೆ ಈ ದೇವಾಲಯ. ಈ ದೇವಾಲಯದ ವಿಶೇಷವೆಂದರೆ ನಾರಾಯಣ ಎಂದೊಡನೆ ದೇವಿ ಅಂಡಾಳಮ್ಮ ತನ್ನ ತೆರೆಯುತ್ತಾಳೆ. ಬನ್ನಿ ಎಲ್ಲಿದೆ ಈ ದೇವಾಲಯ, ಈ ದೇವಾಲಯದ ವಿಶೇಷವೇನು, ಈ ದೇವಾಲಯದ ಮಹಿಮೆ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯೋಣ.
ಆಂಡಾಳು ದೇವಿ :
ನಂಜನಗೂಡು ತಾಲೂಕು ಹೆಡತಲೆ ಗ್ರಾಮದಲ್ಲಿರುವ ಲಕ್ಮೀಕಾಂತಸ್ವಾಮಿ ದೇವಸ್ಥಾನದಲ್ಲಿ ಈ ದೇವಿಯು ನೆಲೆಸಿದ್ದಾಳೆ. ಈ ದೇವಾಲಯವು ಹೊಯ್ಸಳರ ಕಾಲದ್ದಾಗಿದ್ದು, ಇದು ಹೊಯ್ಸಳರ ವಾಸ್ತುಶಿಲ್ಪಗಳನ್ನು ಹೊಂದಿದೆ. ಹೊಯ್ಸಳರ ಕಾಲದ ಈ ದೇವಾಲಯದಲ್ಲಿ 16 ಮುಖದ ಛಾವಣಿಗಳನ್ನು ಕಾಣಬಹುದು.
ಈ ದೇವಾಲಯದಲ್ಲಿ ಲಕ್ಮೀಕಾಂತ, ವೇಣುಗೋಪಾಲ ಸ್ವಾಮಿ ಮತ್ತು ಲಕ್ಮೀನರಸಿಂಹ ದೇವರುಗಳು ನೆಲೆಸಿದ್ದಾರೆ. ಇಲ್ಲಿಯೇ ಆಂಡಾಳು ದೇವಿಯೂ ನೆಲೆಸಿದ್ದು, ಭಕ್ತರಿಗೆ ತನ್ನ ಕಣ್ಣ ತೆರೆದು ದರ್ಶನ ನೀಡುವ ಮೂಲಕ ವಿಶೇಷ ಮಹಿಮೆಗೆ ಹೆಸರುವಾಸಿಯಾಗಿದ್ದಾಳೆ.
ಇಲ್ಲಿನ ಆಂಡಾಳು ದೇವಿಯ ಮಹಿಯೆ :
ಆಂಡಾಳು ದೇವಿಯ ವಿಗ್ರಹಕ್ಕೆ ಅರ್ಚಕರು ಪೂಜೆ ಯನ್ನು ಮಾಡುವಾಗ ಆರತಿ ಮಾಡುವ ಸಮಯದಲ್ಲಿ ಮಂತ್ರ ಹೇಳಿ ನಂತರ ನಾರಾಯಣ ಅಂದೊಡನೆ ತಾಯಿ ಆಂಡಾಳು ದೇವಿಯು ತನ್ನ ಎರಡು ಕಣ್ಣು ಗಳನ್ನು ಬಿಟ್ಟು ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ. ಈ ಪವಾಡವನ್ನು ಅದೆಷ್ಟೋ ಭಕ್ತಾದಿಗಳು ಕಣ್ತುಂಬಿಕೊಂಡಿದ್ದಾರೆ. ದೇವಿಯ ಮಹಿಮೆಯನ್ನು ಕಾಣಲು ಅದೆಷ್ಟೋ ಭಕ್ತಾದಿಗಳು ದೂರದೂರುಗಳಿಂದಲೂ ಆಗಮಿಸುತ್ತಾರೆ. ಇಲ್ಲಿ ಲಕ್ಮೀನರಸಿಂಹ ಸ್ವಾಮಿಗೆ ನಡೆಯುವ ಅಷ್ಟೋತ್ತರ ಪೂಜೆಯು ತುಂಬಾನೆ ವಿಭಿನ್ನವಾಗಿರುತ್ತದೆ ಎನ್ನುವುದು ಭಕ್ತಾದಿಗಳ ಅಭಿಪ್ರಾಯ.
ಎಲ್ಲಿದೆ ಈ ದೇವಾಲಯ ಮತ್ತು ಇಲ್ಲಿಗೆ ತಲುಪುವುದು ಹೇಗೆ ? :
ನಂಜನಗೂಡು ತಾಲೂಕು ಹೆಡತಲೆ ಗ್ರಾಮದಲ್ಲಿ ಈ ದೇವಾಲಯವಿದೆ. ಇಲ್ಲಿಗೆ ತಲುಪಲು ನೀವು ಮೈಸೂರು ಜಿಲ್ಲೆಗೆ ಆಗಮಿಸಬೇಕು. ನಂತರ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮಕ್ಕೆ ಭೇಟಿ ನೀಡಿದರೆ, ನೀವು ಈ ದೇವಾಲಯವನ್ನು ತಲುಪಬಹುದು.
* ಸ್ವಂತ ವಾಹನದಲ್ಲಿ ತೆರಳುವುದಾದರೆ ಮೈಸೂರು-ಊಟಿ ರಸ್ತೆಯಲ್ಲಿ ಮುಂದುವರಿಯಿರಿ, ನಂಜನಗೂಡು ಪಟ್ಟಣವನ್ನು ದಾಟಿದ ನಂತರ ಹೆಡತಲೆ ಕಡೆಗೆ ಎಡಕ್ಕೆ ತಿರುಗುವ ಮೊದಲು ಸುಮಾರು 5 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ.
* ಬೆಂಗಳೂರಿನಿಂದ ಮೈಸೂರಿಗೆ ಮತ್ತು ಮೈಸೂರಿನಿಂದ ನಂಜನಗೂಡಿಗೆ ಸಾಕಷ್ಟು ನೇರ ಬಸ್ಸುಗಳು ಸಂಚರಿಸುತ್ತವೆ. ನಂಜನಗೂಡಿನಿಂದ ಖಾಸಗಿ ಟ್ಯಾಕ್ಸಿ ಅಥವಾ ಆಟೋ ಬಾಡಿಗೆಗೆ ದೊರೆಯುತ್ತವೆ.
ಈ ದೇವಾಲಯಕ್ಕೆ ಭೇಟಿ ನೀಡುವ ಸಮಯ :
ಈ ದೇವಾಲಯಕ್ಕೆ ಬೆಳಿಗ್ಗೆ 7:30 ರಿಂದ 9:30ರೊಳಗೆ ಮತ್ತು ಸಂಜೆ 6:30 ರಿಂದ 8:30ರೊಳಗೆ ಭೇಟಿ ನೀಡಬಹುದು.