ಸುರಿದ ಭಾರೀ ಮಳೆಗೆ ಕೇದಾರನಾಥದಲ್ಲಿ ತಾಪಮಾನ 7 ಡಿಗ್ರಿಗೆ ಇಳಿದಿದ್ದು, ಹೀಗಾಗಿ ರುದ್ರಪ್ರಯಾಗ ಜಿಲ್ಲಾಡಳಿತ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಗೌರಿಕುಂಡ್ ಮತ್ತು ಕೇದಾರನಾಥದ ನಡುವಿನ ವಿವಿಧ ಸ್ಥಳಗಳಲ್ಲಿ ಅನೇಕ ಯಾತ್ರಾರ್ಥಿಗಳು ಸ್ಥಗಿತಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ ಕೇದಾರನಾಥದಲ್ಲಿರುವ ಶಿವನ ದೇವಾಲಯದಲ್ಲಿ ಪೂಜೆ ಮುಗಿಸಿದ ಜನರು ತಮ್ಮ ವಾಪಸಾತಿಗೆ ತೆರಳುವ ಮೊದಲು ನಿಲುಗಡೆ ಮಾಡಬೇಕಾಗುತ್ತದೆ ಎಂದು ರುದ್ರಪ್ರಯಾಗ ಜಿಲ್ಲಾಧಿಕಾರಿ ಹೇಳಿದರು. ಸಿಕ್ಕಿ ಹಾಕಿಕೊಂಡಿರುವ ಎಲ್ಲಾ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ಅವರವರ ರಾಜ್ಯಗಳಿಗೆ ಕರೆತರುವ ಭರವಸೆಯನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದರು. ಅನುಮತಿಸಲಾದ 75 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಭಕ್ತರು ಕೇದಾರನಾಥ ಕಣಿವೆಯನ್ನು ಕಾಲ್ನಡಿಗೆಯಲ್ಲಿ ಇಳಿಯಲು ಸಾಧ್ಯವಾಗುವುದಿಲ್ಲ ಎಂದು ಅವರು ಖಚಿತಪಡಿಸಿದರು.

ಅಂತೆಯೇ, ಗೌರಿಕುಂಡ್ನ ಮೂಲ ಶಿಬಿರದಿಂದ ಕೇದಾರನಾಥಕ್ಕೆ ತೆರಳುವ ಜನರನ್ನು ಶಿವನ ದೇವಸ್ಥಾನಕ್ಕೆ ಮುಂದಿನ ಪ್ರಯಾಣವನ್ನು ಕೈಗೊಳ್ಳುವುದನ್ನು ತಡೆಯಲಾಯಿತು. ಕೇದಾರನಾಥ ಬಳಿಯ ಹೋಟೆಲ್ಗಳಲ್ಲಿ ಈಗಾಗಲೇ ಕಾಯ್ದಿರಿಸಿದ ಮತ್ತು ಅಲ್ಲಿಗೆ ಹೋಗಬೇಕಿದ್ದ ಪ್ರವಾಸಿಗರಿಗೆ ಅವಕಾಶ ನೀಡಲಾಗಿಲ್ಲ. ಹವಾಮಾನ ಸುಧಾರಿಸಿದ ನಂತರ, ಅವರು ಹೊರಡಲು ಮತ್ತು ಹಿಂತಿರುಗಲು ಅನುಮತಿಸಲಾಗುವುದು ಎಂದು ಪ್ರಕಟನೆಗಳು ತಿಳಿಸಿವೆ.
2013 ರಲ್ಲಿ ಸಂಭವಿಸಿದ ಅನಾಹುತವಾದಂತೆ ಅದರಂತೆಯೇ ಪುನಃ ಅನಾಹುತ ನಡೆಯುವುದನ್ನು ತಪ್ಪಿಸಲು ಹವಾಮಾನ ಪರಿಸ್ಥಿತಿ ಸುಧಾರಿಸುವವರೆಗೆ ಎಲ್ಲಾ ಭಕ್ತರು ಒಂದೇ ಸ್ಥಳದಲ್ಲಿರಲು ಅಧಿಕಾರಿಗಳು ಮನವಿ ಮಾಡಿದ್ದಾರೆ, 2013ರಲ್ಲಿ ಕೇದಾರನಾಥ ದುರಂತವು ಭಾರತದ ಉತ್ತರಾಖಂಡದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹಕ್ಕೆ ಕಾರಣವಾಯಿತು,. ನದಿ ಕಣಿವೆ ಮತ್ತು ಕೇದಾರನಾಥ ಕಣಿವೆ ಮತ್ತು ಮಂದಾಕಿನಿಯ ಮೇಲ್ಭಾಗದಲ್ಲಿ ವಿನಾಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಅಧಿಕೃತ ವರದಿಗಳ ಪ್ರಕಾರ, 16 ಜೂನ್ 2013 ರಂದು ಉತ್ತರ ಭಾರತ ಮತ್ತು ನೇಪಾಳದಲ್ಲಿ ಉಂಟಾದ ಪ್ರವಾಹ, ಧಾರಾಕಾರ ಮಳೆ ಮತ್ತು ಭೂಕುಸಿತದಿಂದ ಸುಮಾರು 1,000-4,000 ಜನರು ಸಾವನ್ನಪ್ಪಿದ್ದರೆನ್ನಲಾಗಿದೆ.


Click it and Unblock the Notifications

















