Search
  • Follow NativePlanet
Share
» »ಇಲ್ಲಿ ನೀವು ಸ್ನಾನವನ್ನು ಮಾಡುವುದಕ್ಕೆ ಆಗುವುದಿಲ್ಲ...ಒಂದು ವೇಳೆ ಮಾಡಿದರೆ ನಿತ್ಯವು ಯವ್ವನ...

ಇಲ್ಲಿ ನೀವು ಸ್ನಾನವನ್ನು ಮಾಡುವುದಕ್ಕೆ ಆಗುವುದಿಲ್ಲ...ಒಂದು ವೇಳೆ ಮಾಡಿದರೆ ನಿತ್ಯವು ಯವ್ವನ...

ಪುಷ್ಪಗಿರಿ.. ಶಿವಕೇಶರ ಮಧ್ಯೆ ಅಭೇದಕ್ಕೆ ಪ್ರತೀಕ. ಈ ಕ್ಷೇತ್ರದಲ್ಲಿ ಶಿವನು ಕ್ಷೇತ್ರಾಧಿಪತಿಯಾಗಿದ್ದರೆ, ವಿಷ್ಣುವು ಕ್ಷೇತ್ರ ಪಾಲಕನಾಗಿದ್ದಾನೆ. ಇನ್ನು ಪುಷ್ಪಗಿರಿಯ ಸಮೀಪದಲ್ಲಿನ ಕೊಳದಲ್ಲಿ ಅಕ್ಷಯ ತೃತಿಯ ದಿನದಂದು ಸೂರ್ಯ ಗ್ರಹಣದ ಸಮಯದಲ್ಲಿ

ಪುಷ್ಪಗಿರಿ.. ಶಿವಕೇಶರ ಮಧ್ಯೆ ಅಭೇದಕ್ಕೆ ಪ್ರತೀಕ. ಈ ಕ್ಷೇತ್ರದಲ್ಲಿ ಶಿವನು ಕ್ಷೇತ್ರಾಧಿಪತಿಯಾಗಿದ್ದರೆ, ವಿಷ್ಣುವು ಕ್ಷೇತ್ರ ಪಾಲಕನಾಗಿದ್ದಾನೆ. ಇನ್ನು ಪುಷ್ಪಗಿರಿಯ ಸಮೀಪದಲ್ಲಿನ ಕೊಳದಲ್ಲಿ ಅಕ್ಷಯ ತೃತಿಯ ದಿನದಂದು ಸೂರ್ಯ ಗ್ರಹಣದ ಸಮಯದಲ್ಲಿ ಸ್ನಾನವನ್ನು ಆಚರಿ ಈ ಶಿವಕೇಶವರನ್ನು ದರ್ಶನ ಮಾಡಿದರೆ ನೂರು ಅಶ್ವಮೇಧಯಾಗವನ್ನು ಮಾಡಿದ ಫಲ ಲಭಿಸುತ್ತದೆ ಎಂದು ಪುರಾಣಗಳು ಹೇಳುತ್ತವೆ. ಜಗದ್ಗುರು ಆದಿ ಶಂಕರಾಚಾರ್ಯರ ಕೈಯಲ್ಲಿ ದಕ್ಷಿಣಾದಿಯಲ್ಲಿ ಸ್ಥಾಪನೆಯಾದ ಏಕೈಕ ಅದ್ವೈತ ಪೀಠವೇ ಈ ಪುಷ್ಪಗಿರಿ. ಇದು ವೈಎಸ್‍ಆರ್ ಕಡಪ ಜಿಲ್ಲಾ ಕೇಂದ್ರವಾದ ಕಡಪ ಪಟ್ಟಣದಿಂದ ಕೇವಲ 18 ಕಿ.ಮೀ ದೂರದಲ್ಲಿ ಪುಷ್ಪಗಿರಿ ಇದೆ. ಈ ಪುಷ್ಪಗಿರಿಯಲ್ಲಿನ ನದಿಗಳಿಗೆ ಹಾಗು ಸ್ನಾನ ಮಾಡಿದರೆ ಯವ್ವನ ಬರುತ್ತದೆ ಎಂಬ ವಿಷಯದ ಬಗ್ಗೆ ಪೂರ್ತಿಯಾದ ವಿವರವನ್ನು ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

1.ದಕ್ಷಿಣ ಕಾಶಿ

1.ದಕ್ಷಿಣ ಕಾಶಿ

PC:YOUTUBE

ಪುಷ್ಪಗಿರಿ ಗ್ರಾಮದ ಬೆಟ್ಟಗಳ ಮಧ್ಯೆ ಪ್ರವಹಿಸುತ್ತಿರುವ ಪೆನ್ನಾನದಿ ಕಾಶಿಯಲ್ಲಿನ ಗಂಗಾನದಿಯ ಹಾಗೆ ದಕ್ಷಿಣ ದಿಕ್ಕಿಗೆ ಪ್ರವಹಿಸುತ್ತಾ ಪೂರ್ವ ದಿಕ್ಕಿಗೆ ಅರ್ಧಚಂದ್ರಾಕಾರದಲ್ಲಿ ಸಾಗಿ ಹೋಗುತ್ತದೆ. ಇದರಿಂದಾಗಿಯೇ ಈ ಕ್ಷೇತ್ರಕ್ಕೆ ದಕ್ಷಿಣ ಕಾಶಿ ಎಂದು ಹೆಸರು. ಕಾಶಿಯಲ್ಲಿ ಅದ್ವೈತ ಅವಲಂಬನೆಕಾರರು, ಗಯದಲ್ಲಿನ ವಿಶಿಷ್ಟಾದ್ವೈತ ಅವಲಂಬನೆಕಾರರು ಪಿಂಡ ಪ್ರಧಾನ ಮಾಡುವುದು ಸಾಮಾನ್ಯವಾದುದು. ಆದರೆ ಆ ಎರಡು ಧರ್ಮಗಳನ್ನು ಅವಲಂಬಿಸುವವರು ಪುಷ್ಪಗಿರಿಯಲ್ಲಿ ಪಿಂಡ ಪ್ರಧಾನ ಮಾಡುವುದು ವಿಶೇಷ.

2.ಪುರಾಣ

2.ಪುರಾಣ

PC:YOUTUBE

ಕಶ್ಯಪ ಪ್ರಜಾಪತಿಗೆ ಕದ್ರುವ, ವಿನತ ಎಂಬ ಪತ್ನಿಯರಿದ್ದರು. ನೋವಿನ ಕಾರಣವಾಗಿ ಬಳಲುತ್ತಿದ್ದ ಕದ್ರುಳಿಗೆ ವಿನತ ದಾಸ್ಯ ಮಾಡಬೇಕಾಗುತ್ತದೆ. ತಾಯಿ ಪಡುತ್ತಿರುವ ಬಾಧೆಯನ್ನು ಕಂಡ ಗುರುತ್ಮಾತ್ಮನು, ಆಕೆಯ ದಾಸ್ಯವನ್ನು ಹೇಗಾದರು ಮಾಡಿ ವಿಮುಕ್ತಿಗೊಳಿಸಬೇಕು ಎಂದು ಅಮೃತವನ್ನು ತೆಗೆದುಕೊಂಡು ಬರುತ್ತಿರುತ್ತಾನೆ. ಆ ಸಮಯದಲ್ಲಿ ಒಂದು ಚುಕ್ಕೆ ಅಮೃತ ಬಿಂದುವು ಭೂಲೋಕದಲ್ಲಿನ ಒಂದು ನದಿಯಲ್ಲಿ ಬೀಳುತ್ತದೆ.

3.ವೃದ್ಧ ದಂಪತಿಗಳು

3.ವೃದ್ಧ ದಂಪತಿಗಳು

PC:YOUTUBE

ಒಂದು ದಿನ ವೃದ್ಧ ದಂಪತಿಗಳು ಆ ನದಿಯಲ್ಲಿನ ನೀರನ್ನು ಕುಡಿಯಲು ಹೋಗುತ್ತಾರಂತೆ. ಆ ನೀರನ್ನು ಮುಟ್ಟಿದ ತಕ್ಷಣವೇ ಅವರಿಗೆ ಯವ್ವನ ದಂಪತಿಗಳಾಗಿ ಮಾರ್ಪಾಟಾಗುತ್ತಾರೆ. ಈ ವಿಷಯ ತಿಳಿದುಕೊಂಡ ಅನೇಕ ಮಂದಿ ಅಲ್ಲಿಗೆ ಬಂದು ಆ ನದಿಯ ನೀರನ್ನು ಕುಡಿದು ಯವ್ವನವನ್ನು ಪಡೆದರಂತೆ. ಅಷ್ಟೇ ಅಲ್ಲದೇ, ಅವರಿಗೆ ಮರಣ ಕೂಡ ಇರುವುದಿಲ್ಲವಂತೆ. ಇದರಿಂದಾಗಿ ಸೃಷ್ಟಿ ಧರ್ಮದ ಗತಿ ತಪ್ಪುತ್ತದೆ ಎಂದು ಭಾವಿಸಿದ ಯಮಧರ್ಮ ರಾಜನು ನಾರದನ ಮೂಲಕ ತ್ರಿಮೂರ್ತಿಗಳಿಗೆ ಈ ಕುರಿತು ವಿಷಯವನ್ನು ತಿಳಿಸುತ್ತಾರೆ.

4.ಹನುಮಂತ

4.ಹನುಮಂತ

PC:YOUTUBE

ವಿಷಯವನ್ನು ತಿಳಿದುಕೊಂಡ ತ್ರಿಮೂರ್ತಿಗಳ ಆಜ್ಞೆಯ ಮೇರೆಗೆ ಹನುಮಂತನು ಒಂದು ದೊಡ್ಡ ಬೆಟ್ಟವನ್ನು ತಂದು ನದಿಯಲ್ಲಿ ಹಾಕುತ್ತಾನೆ. ಆದರೆ ಆ ಬೆಟ್ಟವು ನೀರಿನಲ್ಲಿ ಪುಷ್ಪದ ರೀತಿ ತೇಲುತ್ತಿತ್ತು. ಇದರಿಂದಾಗಿ ತ್ರಿಮೂರ್ತಿಗಳು ತಮ್ಮ ಪಾದಗಳಿಂದ ಆ ಬೆಟ್ಟವನ್ನು ಒತ್ತುತ್ತಾರೆ. ಅದರ ಗುರುತಿಗಾಗಿ ಇಂದಿಗೂ ಬೆಟ್ಟದ ಮೇಲೆ ಪಶ್ಚಿಮ ಭಾಗದಲ್ಲಿ ರುದ್ರ ಪಾದವೆಂದೂ, ಪೂರ್ವಕ್ಕೆ ವಿಷ್ಣುವು ಪಾದವೆಂದೂ, ಉತ್ತರ ದಿಕ್ಕಿಗೆ ಬ್ರಹ್ಮಪಾದ ಎಂದು ಕರೆಯುತ್ತಾರೆ. ಅದ್ದರಿಂದಲೇ ಈ ಪವಿತ್ರವಾದ ಸ್ಥಳವು ಪುಷ್ಪಗಿರಿಯಾಗಿ ಹೆಸರುವಾಸಿ ಪಡೆಯಿತು.

5.ಅಮರತ್ವ ಪಡೆಯುತ್ತಾರೆ

5.ಅಮರತ್ವ ಪಡೆಯುತ್ತಾರೆ

PC:YOUTUBE

ಇಂದಿಗೂ ಆ ನದಿಯಿಂದಾಗಿ ಅಮರತ್ವವನ್ನು ಪಡೆಯುವ ಅಂದರೆ ಸಾವನ್ನು ಗೆದ್ದವರು ಆ ಬೆಟ್ಟದ ಕೆಳಗೆ ಇರುವ ನದಿ ತೀರದಲ್ಲಿ ವಾಸವಿದ್ದಾರೆ ಎಂದು ಹೇಳುತ್ತಾರೆ. ಪ್ರಸ್ತುತ ಆ ಬೆಟ್ಟದ ಕೆಳಗೆ ಇರುವ ನದಿಯಲ್ಲಿ ಸ್ನಾನವನ್ನು ಆಚರಿಲು ಅಸಾಧ್ಯವಾದ ಕೆಲಸ. ಒಂದು ವೇಳೆ ಆಚರಿಸಿದರೆ ಮಾತ್ರ ಅವರು ಅಮರತ್ವದ ಜೊತೆಗೆ ಯವ್ವನವನ್ನು ಕೂಡ ಪಡೆಯಬಹುದಂತೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+