Search
  • Follow NativePlanet
Share
» »ಗಾಳಿಯಲ್ಲಿ ತೇಲುವ ಬಂಡೆಕಲ್ಲು, ಅಲ್ಲಿನ ಚರಿತ್ರೆ ತಿಳಿದರೆ ಷಾಕ್ ಆಗುವುದು ಖಚಿತ!

ಗಾಳಿಯಲ್ಲಿ ತೇಲುವ ಬಂಡೆಕಲ್ಲು, ಅಲ್ಲಿನ ಚರಿತ್ರೆ ತಿಳಿದರೆ ಷಾಕ್ ಆಗುವುದು ಖಚಿತ!

ನಮ್ಮ ಸುತ್ತ-ಮುತ್ತ ನಡೆಯುವ ಪ್ರತಿ ವಿಷಯಕ್ಕೆ ಯಾವುದಾದರೂ ಒಂದು ಕಾರಣವಿರುತ್ತದೆ. ಕೆಲವೊಮ್ಮೆ ಅದ್ಭುತಗಳು ನಡೆಯುತ್ತವೆ. ಇವೆಲ್ಲಾ ನಿಜವೆ? ಇದೆಲ್ಲಾ ನಿಜವಾಗಲೂ ನಡೆಯುತ್ತಿದೆಯೇ? ಎಂಬ ಹಲವಾರು ಪ್ರೆಶ್ನೆಗಳು ನಮ್ಮ ತಲೆಯಲ್ಲಿ ಮೂಡುವುದು ಸಹಜ.

ನಮ್ಮ ಸುತ್ತ-ಮುತ್ತ ನಡೆಯುವ ಪ್ರತಿ ವಿಷಯಕ್ಕೆ ಯಾವುದಾದರೂ ಒಂದು ಕಾರಣವಿರುತ್ತದೆ. ಕೆಲವೊಮ್ಮೆ ಅದ್ಭುತಗಳು ನಡೆಯುತ್ತವೆ. ಇವೆಲ್ಲಾ ನಿಜವೆ? ಇದೆಲ್ಲಾ ನಿಜವಾಗಲೂ ನಡೆಯುತ್ತಿದೆಯೇ? ಎಂಬ ಹಲವಾರು ಪ್ರೆಶ್ನೆಗಳು ನಮ್ಮ ತಲೆಯಲ್ಲಿ ಮೂಡುವುದು ಸಹಜ.

ಆ ವಿಷಯವನ್ನು ನಾವು ಕಣ್ಣಾರೆ ಕಂಡರೆ ಮಾತ್ರ ನಾವು ನಂಬುತ್ತೇವೆ. ಈ ಪ್ರಪಂಚದಲ್ಲಿ ನಡೆಯುತ್ತಿರುವ ಹಲವಾರು ವಿಷಯಗಳ ಬಗ್ಗೆ ಶಾಸ್ತ್ರಜ್ಞರು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಅದರೆ ಅದು ಸಾಧ್ಯವಾಗುತ್ತಿಲ್ಲ. ಅದರಲ್ಲಿ ಒಂದು ಉದಾಹರಣೆಯೆಂದರೆ, ದೊಡ್ಡದಾದ ಕಲ್ಲು ಬಂಡೆ. ಆ ಬಂಡೆಯು ಗಾಳಿಯಲ್ಲಿ ತೇಲಾಡುತ್ತಿದೆ ಎಂದರೆ ನೀವು ನಂಬುತ್ತೀರಾ? ಹೌದು ನೀವು ಕೇಳುತ್ತಿರುವುದು ನಿಜ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ರಾಜಸ್ಥಾನದ ರಾಜ್ಯದ ರಾಜಧಾನಿಯಾದ ಜೈಪೂರ್‍ದಿಂದ ಸುಮಾರು 135 ಕಿ.ಮೀ ದೂರದಲ್ಲಿದೆ ಅಜ್ಮೀರ್. ಇದನ್ನು ಪೂರ್ವದಲ್ಲಿ ಅಜ್ಮಿರಿ ಎಂದು ಕರೆಯುತ್ತಿದ್ದರು. ಈ ಗ್ರಾಮಕ್ಕೆ 2 ಭಾಗಗಳಲ್ಲಿಯೂ ಕರಾವಳಿ ಪರ್ವತಗಳು ಇವೆ. ದೇಶದಲ್ಲಿಯೇ ಅತಿ ಪುರಾತನ ಕೋಟೆಯಲ್ಲಿ ಒಂದಾದ ತರಾಘರ್ ಕೋಟೆ ಅಜ್ಮೀರ್ ನಗರದ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಈ ನಗರವನ್ನು ಕ್ರಿ.ಶ 7 ನೇ ಶತಮಾನದಲ್ಲಿ ಅಜಯ್‍ರಾಜ್ ಸಿಂಗ್ ಚೌಹಾನ್ ಸ್ಥಾಪಿಸಿದನು. ಇದನ್ನು ಆನೇಕ ಕಾಲದವರೆಗೆ ಚೌಹಾನ್ ವಂಶಿಕರು ಆಳ್ವಿಕೆ ನಡೆಸಿದರು. ಅವರಲ್ಲಿ ಪೃಥ್ವಿ ರಾಜ ಚೌಹಾನ್ ಸುಪ್ರಸಿದ್ಧನಾಗಿದ್ದನು. ಚರಿತ್ರೆಯ ಪುಟದಲ್ಲಿ ಅಜ್ಮೀರ್ ಕ್ರಿ. ಶ 1193 ರಲ್ಲಿ ಮೊಹಮ್ಮದ್ ಘೋರಿಯು ವಶಪಡಿಸಿಕೊಂಡನು.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಆದರೆ ತನಗೆ ದೊಡ್ಡ ಮೊತ್ತದಲ್ಲಿ ಕಪ್ಪಕಾಣಿಕೆ ನೀಡಿದ್ದರಿಂದ ಚೌಹಾನ್ ವಂಶಿಕರಿಗೆ ಅಜ್ಮೀರ್ ರಾಜ್ಯದ ಮೇಲೆ ಸ್ವಯಂ ಪ್ರಾಧಿನಿಧ್ಯವನ್ನು ನೀಡಿದರು. ಅಜ್ಮೀರ್‍ನ್ನು ನಂತರ ಮೇವಾರ್ ರಾಜ 1365ರಲ್ಲಿ ಹಾಗು ಮಾರ್ವಾರ್ ರಾಜ 1532ರಲ್ಲಿ ವಶಪಡಿಸಿಕೊಂಡರು. 1553 ರಲ್ಲಿ ಹೇಮು ಎಂದು ಕರೆಯಲ್ಪಡುವ ಹೇಮು ಚಂದ್ರ ವಿಕ್ರಮಾಧಿತ್ಯನು ಅಜ್ಮೀರ್ ಅನ್ನು ಜಯಿಸಿದನು. ಆತನು 1556 ರಲ್ಲಿ ನಡೆದ ಯುದ್ಧದಲ್ಲಿ ಮರಣ ಹೊಂದಿದನು.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

1559 ರಲ್ಲಿ ಅಜ್ಮೀರ್ ಮೊಘಲ್ ಚಕ್ರವರ್ತಿಯಾದ ಅಕ್ಭರ್ ಅಧೀನಕ್ಕೆ ಬಂದಿತು. ತದನಂತರ 18 ನೇ ಶತಮಾನದಲ್ಲಿ ಮರಾಠರ ಕೈಗೆ ಹೋಯಿತು. 1818 ರಲ್ಲಿ ಬ್ರಿಟಿಷ್‍ರು 50,000 ರೂಪಾಯಿಗಳನ್ನು ನೀಡಿ ಮಾರಾಠರಿಂದ ಅಜ್ಮೀರ್ ಅನ್ನು ವಶಪಡಿಸಿಕೊಂಡರು. ಇದರಿಂದ ಅಜ್ಮೀರ್ ಮೇವಾರ ರಾಜ್ಯದಲ್ಲಿನ ಒಂದು ಭಾಗವಾಯಿತು.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

1950 ರಲ್ಲಿ ಅದು ಅಜ್ಮೀರ್ ಒಂದು ರಾಜ್ಯವಾಗಿ ಏರ್ಪಾಟಾಗಿ, ತದನಂತರ 1 ನವೆಂಬರ್ 1956 ರಲ್ಲಿ ರಾಜಸ್ಥಾನ ರಾಜ್ಯದಲ್ಲಿ ಲೀನವಾಯಿತು. ರಾಜಧಾನಿ ಜೈಪೂರ್‍ನಿಂದ 135 ಕಿ.ಮೀ ದೂರದಲ್ಲಿ ಅಜ್ಮೀರವಿದೆ. ಅಜ್ಮೀರ್‍ನಲ್ಲಿ ತರಾಘರ್ ಕೋಟೆ ಸುಪ್ರಸಿದ್ಧವಾಗಿದೆ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ತರಾಘರ್ ಕೋಟೆಯ ಮೇಲೆ ಇರುವ ದರ್ಗಾವನ್ನು ಎಲ್ಲಾ ಧರ್ಮಗಳು, ಪ್ರದೇಶದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ನಗರಕ್ಕೆ ಉತ್ತರದಲ್ಲಿ ಸುಂದರವಾದ ಅನಾ ಸಾಗರ್ ಎಂಬ ಕೃತಕ ಜಲಪಾತವಿದೆ. ಷಾಹಾಜಾಹಾನ್ ನಿರ್ಮಾಣ ಮಾಡಿದ ಬರ್ಡರಿ ಎಂಬ ಮಂಟಪವು ಅಲ್ಲಿನ ಸರೋವರಕ್ಕೆ ಮತ್ತಷ್ಟು ಸೊಬಗನ್ನು ನೀಡಿದೆ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಇಲ್ಲಿಂದ ಕೇವಲ 11 ಕಿ.ಮೀ ದೂರದಲ್ಲಿರುವ ಪವಿತ್ರವಾದ ಪುಷ್ಕರ್ ನಗರಕ್ಕೆ ತೆರಳಲು ಅಜ್ಮೀರ್ ಮುಖದ್ವಾರದಲ್ಲಿರುತ್ತದೆ. ಪ್ರಸಿದ್ಧಿ ಹೊಂದಿರುವ ಇಲ್ಲಿನ ಬ್ರಹ್ಮ ದೇವಾಲಯ, ಪುಷ್ಕರ ಸರೋವರ ನೋಡಲು ಯಾತ್ರಿಕರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅಜ್ಮೀರಕ್ಕೆ ಸೇರಿಕೊಳ್ಳಲು ವಾಯು, ರೈಲು ಹಾಗು ರಸ್ತೆ ಮಾರ್ಗಗಳು ಇವೆ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಅಜ್ಮೀರದಲ್ಲಿ ಒಂದು ದರ್ಗಾವಿದೆ. ಆದೇ ದರ್ಗಾ ಷರಿಫ್. ಇದನ್ನು ಅಮೃತಶಿಲೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಮುಖ್ಯವಾಗಿ ಯೋಗಿಯ ಸಮಾಧಿ ಕೂಡ ಇದೆ. ಆ ದೊಡ್ಡ ಸೂಫಿ ಸಂತ ಯೋಗಿಯ ಸ್ಮಾರಣಾರ್ಥಕವಾಗಿ ಪ್ರತಿ ವರ್ಷ 6 ದಿನಗಳ ಕಾಲ ಇಲ್ಲಿ ಹಬ್ಬವನ್ನು ಆಚರಿಸುತ್ತಾರೆ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಆತನು ತನ್ನ 114 ವರ್ಷ ವಯಸ್ಸಿನಲ್ಲಿ ಒಂದು ಕೊಠಡಿಯಲ್ಲಿ ಒಂಟಿಯಾಗಿ 6 ದಿನಗಳ ಪ್ರಾರ್ಥನೆ ಮಾಡಿ ತನ್ನ ಶರೀರವನ್ನು ಬಿಟ್ಟನು ಎಂದು ಅಲ್ಲಿನ ಪ್ರಜೆಗಳು ಗಾಢವಾಗಿ ನಂಬುತ್ತಾರೆ. ಹಾಗಾಗಿಯೇ ಆ 6 ದಿನಗಳು ವಿಶೇಷವಾಗಿ ಪೂಜೆಗಳನ್ನು ಆಚರಿಸುತ್ತಾರೆ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಅಜ್ಮೀರ್ ದರ್ಗಾದಲ್ಲಿ ಭೂಮಿಯಿಂದ 2 ಅಡಿ ಎತ್ತರದಲ್ಲಿ ಕಲ್ಲಿನ ಒಂದು ಬಂಡೆಯು ತೇಲುತ್ತಿರುತ್ತದೆ. ಈ ವಿಷಯದಿಂದಲೇ ಅಜ್ಮೀರ್ ದರ್ಗಾವನ್ನು ಗುರುತಿಸಲಾಯಿತು. ಈ ತೇಲಾಡುತ್ತಿರುವ ಕಲ್ಲಿನ ಬಂಡೆಯೇ ಅಲ್ಲದೇ ಅಜಮೀರ್ ದರ್ಗಾದಲ್ಲಿರುವ ಅದ್ಭುತವಾದ ವಿಷಯದ ಬಗ್ಗೆ ನಾವು ಪ್ರಸ್ತುತ ತಿಳಿದುಕೊಳ್ಳೋಣ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲಾಡುತ್ತಿರುವ ಕಲ್ಲು. ಇದೊಂದು ಅದ್ಭುತವಾದ ಹಾಗು ಆಶ್ಚರ್ಯಕರವಾದ ಘಟನೆಯೇ ಆಗಿದೆ. ಯಾರೂ ಕೂಡ ಅಷ್ಟು ಸುಲಭವಾಗಿ ನಂಬದೇ ಇರುವ ವಿಷಯ ಇದಾಗಿದೆ. ಇದರ ಹಿಂದೆ ಇರುವ ಕಾರಣದ ಕುರಿತು ಶಾಸ್ತ್ರಜ್ಞರು ಕೂಡ ತಿಳಿದುಕೊಳ್ಳಲಾಗಲಿಲ್ಲ. ಭೂಮಿಯಿಂದ ಸುಮಾರು 2 ಅಡಿ ಎತ್ತರದಲ್ಲಿ ಒಂದು ಕಲ್ಲಿನ ಬಂಡೆ ತೇಲುತ್ತಿದೆ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಈ ಕಲ್ಲಿನ ಬಂಡೆ ಗಾಳಿಯಲ್ಲಿ ಹೀಗೆ ಏಕೆ ತೇಲಾಡುತ್ತಿದೆ? ಎಂಬ ವಿಷಯ ಯಾರಿಗೂ ಅರ್ಥವಾಗದೇ ಇದೆ. ಆದರೆ ಅವೆಲ್ಲಾ ಅದರ ಹಿಂದೆ ಇರುವ ರಹಸ್ಯವನ್ನು ಭೇದಿಸಲಾಗುತ್ತಿಲ್ಲ. ಸರಿಯಾದ ಕಾರಣವನ್ನು ಆ ಸಿದ್ಧಾಂತಿಗಳು ನಿರೂಪಿಸಲಾಗಲಿಲ್ಲ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಅಜ್ಮೀರ್ ಷರಿಫ್ ದರ್ಗಾ ಕುಜ್ವಾ ಮೊಹಮ್ಮುದ್ದಿನ್ ಸೃಷ್ಟಿ ಪ್ರಪಂಚ ವ್ಯಾಪಕವಾಗಿ ಪ್ರಸಿದ್ಧಿ ಹೊಂದಿದೆ. ಪ್ರಪಂಚದ ಮೂಲೆ ಮೂಲೆಗಳಿಂದ ಸೂಫಿ ಸನ್ಯಾಸಿಗರ ಆಶೀರ್ವಾದವನ್ನು ಪಡೆಯಲು ಪ್ರತಿ ವರ್ಷ ಲಕ್ಷಾಧಿ ಮಂದಿ ಭಕ್ತರು ಇಲ್ಲಿ ಭೇಟಿ ನೀಡುತ್ತಿರುತ್ತಾರೆ.

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಗಾಳಿಯಲ್ಲಿ ತೇಲುವ ಬಂಡೆಕಲ್ಲು

ಈ ಪೂಣ್ಯಕ್ಷೇತ್ರದ ಬಾಗಿಲನ್ನು ಪ್ರತಿ ವರ್ಷ ಕೇವಲ 4 ಬಾರಿ ಮಾತ್ರ ತೆರೆಯುತ್ತಾರೆ. ಆ ಬಾಗಿಲನ್ನು ಜನ್ನಟಿದರ್ವಾಜಾ ಎಂದು ಕೂಡ ಕರೆಯುತ್ತಾರೆ. ಬೆಳ್ಳಿ ಲೋಹದಿಂದ ಮಾಡಿದ ಆ ಬಾಗಿಲನ್ನು ನೋಡುವುದು ಅತ್ಯಂತ ಆಕರ್ಷಣೆಯುತವಾಗಿರುತ್ತದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರಸ್ತೆ ಮಾರ್ಗವಾಗಿ
ಅಜ್ಮೀರ್ ನಗರವು ದೆಹಲಿ, ಮುಂಬೈನ ಮಧ್ಯ 2ನೇ ನಂಬರ್ ಜಾತಿಯ ರಹದಾರಿಯ ಮೇಲೆ ಗೋಲ್ಡನ್ ಕ್ವಾಡ್ರಿಲೇಟರ್‍ನ ಮೇಲೆ ಇದೆ. ಅಷ್ಟೇ ಅಲ್ಲದೇ, ಅಜ್ಮೀರದಿಂದ ರಾಜಸ್ಥಾನದಲ್ಲಿನ ಜೈಪೂರ್, ಉದಯ್‍ಪುರ್, ಜೋಧಪುರ್ ದಿಂದ ಪ್ರಧಾನವಾದ ನಗರಗಳಿಂದ ಬಸ್ಸುಗಳು ಬರುತ್ತಿರುತ್ತವೆ.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

137 ಕಿ.ಮೀ ದೂರದಲ್ಲಿರುವ ಜೈಪೂರ್‍ನಲ್ಲಿನ ಸಂಗನೇರ್, ಅಜ್ಮೀರ್‍ಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದು. ಈ ವಿಮಾನ ನಿಲ್ದಾಣದಿಂದ ನವದೆಹಲಿಯಲ್ಲಿನ ಇಂದಿರಾಗಾಂಧಿ ಅಂತರ್‍ಜಾತಿಯ ವಿಮಾನ ನಿಲ್ದಾಣ, ಮುಂಬೈನಲ್ಲಿ ಛತ್ರಪತಿ ಶಿವಾಜಿ ಅಂತರ್‍ಜಾತಿಯ ವಿಮಾನ ನಿಲ್ದಾಣದಿಂದ ಹಲವಾರು ವಿಮಾನಗಳು ಸಂಪರ್ಕ ಸಾಧಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X