Search
  • Follow NativePlanet
Share
» »ವಜ್ರೇಶ್ವರಿ ದೇವಿಯ ಸನ್ನಿಧಾನದ ನೀರಿನಲ್ಲಿ ಸ್ನಾನ ಮಾಡಿದ್ರೆ ಚರ್ಮರೋಗ ಗುಣವಾಗುತ್ತಂತೆ

ವಜ್ರೇಶ್ವರಿ ದೇವಿಯ ಸನ್ನಿಧಾನದ ನೀರಿನಲ್ಲಿ ಸ್ನಾನ ಮಾಡಿದ್ರೆ ಚರ್ಮರೋಗ ಗುಣವಾಗುತ್ತಂತೆ

ಪ್ರತಿಯೊಂದು ದೇವಸ್ಥಾನಕ್ಕೂ ಅದರದ್ದೇ ಆದ ಐತಿಹ್ಯವಿದೆ. ವಿಶೇಷತೆ ಇದೆ. ಅಂತಹದ್ದೇ ಒಂದು ವಿಶೇಷತೆಯನ್ನು ಹೊಂದಿರುವ ದೇವಾಲಯದ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಅದುವೇ ಮಹಾರಾಷ್ಟ್ರದಲ್ಲಿರುವ ವಜ್ರೇಶ್ವರಿ ದೇವಿ ಮಂದಿರ. ಈ ದೇವಾಲಯದಲ್ಲಿರುವ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಯಾವುದೇ ರೀತಿ ಚರ್ಮ ಸಂಬಂಧಿ ಕಾಯಿಲೆಗಳು ಗುಣವಾಗುತ್ತಂತೆ.

 ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC: youtube

ಪಾರ್ವತಿ ದೇವಿ ಸ್ವರೂಪವಾಗಿರುವ ವಜ್ರೇಶ್ವರಿ ದೇವಿ ಆಲಯವು ಮಹಾರಾಷ್ಟ್ರದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಮುಂಬೈ ಪಶ್ಚಿಮ ರೈಲು ನಿಲ್ದಾಣದಿಂದ ಕೇವಲ ೨೯ ಕಿ.ಮೀ ದೂರದಲ್ಲಿ ಸಣ್ಣ ಗುಡ್ಡದ ಮೇಲೆ ಈ ವಜ್ರೇಶ್ವರಿ ಮಾತ ದೇವಾಲಯ ಇದೆ.

ಮಹಿಮೆ ಅಪಾರ

ಮಹಿಮೆ ಅಪಾರ

PC: youtube
ಮರಾಠಿಗರಿಗೆ ಮಾತ್ರವಲ್ಲದೆ ಕನ್ನಡಿಗರು, ತಮಿಳರಿಗೂ ಈ ದೇವಿಯು ಆರಾಧ್ಯ ದೈವ. ಈ ದೇವಿಯ ಮಹಿಮೆ ಅಪಾರ ಎನ್ನುವುದು ಭಕ್ತರ ನಂಬಿಕೆ. ಹಾಗಾಗಿ ಪ್ರತಿದಿನ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾ ಇರುತ್ತಾರೆ.

ಪುರಾಣಗಳು

ಪುರಾಣಗಳು

PC: youtube
ಪುರಾಣಗಳು ವಿಷ್ಣು ದೇವರ ಅವತಾರವಾದ ರಾಮ ಮತ್ತು ಪರಶುರಾಮನಿಂದ ಭೇಟಿ ನೀಡಿದ ಸ್ಥಳವಾಗಿ ವೇದವಲ್ಲಿ ಪ್ರದೇಶವನ್ನು ಉಲ್ಲೇಖಿಸುತ್ತವೆ. ದಂತಕಥೆಯು ಪರಶುರಾಮನು ವಡವಲ್ಲಿಯಲ್ಲಿ ಒಂದು ಯಜ್ಞವನ್ನು ನಡೆಸಿದನು.

 ವಜ್ರೇಶ್ವರಿ

ವಜ್ರೇಶ್ವರಿ

PC: youtube
ದೇವಾಲಯದ ಪ್ರಾಥಮಿಕ ದೇವತೆಯಾದ ವಜ್ರೇಶ್ವರಿ. ವಜ್ರೇಶ್ವರಿಯನ್ನೂ ವಜ್ರಬಾಯಿ ಮತ್ತು ವಜ್ರಯೋಗಿನಿ ಎಂದೂ ಕರೆಯುತ್ತಾರೆ. ಇದನ್ನು ದೇವಿಯ ಪಾರ್ವತಿ ಅಥವಾ ಆದಿ-ಮಾಯಾ ಅವತಾರವೆಂದು ಪರಿಗಣಿಸಲಾಗಿದೆ. ಅವರ ಹೆಸರು ಅಕ್ಷರಶಃ "ವಜ್ರದ ಮಹಿಳೆ" ಎಂದರ್ಥ. ವಜ್ರದೊಂದಿಗೆ ಸಂಬಂಧಿಸಿರುವ ದೇವತೆ 'ಮೂಲಗಳ ಬಗ್ಗೆ ಎರಡು ದಂತಕಥೆಗಳು ಇವೆ.

ಪಾರ್ವತಿಯ ಸ್ಮರಿಸಿದ ದೇವತೆಗಳು

ಪಾರ್ವತಿಯ ಸ್ಮರಿಸಿದ ದೇವತೆಗಳು

PC: youtube
ಇಂದ್ರ ಮತ್ತು ಇತರ ದೇವತೆಗಳು ಪಾರ್ವತಿಯ ದೇವತೆ ಬಳಿ ಹೋಗಿ ರಾಕ್ಷಸ ಕಲಿಕಲಾನನ್ನು ಕೊಲ್ಲಲು ಸಹಾಯ ಮಾಡಲು ವಿನಂತಿಸುತ್ತಾರೆ. ಆಗ ಪಾರ್ವತಿಯು ಸರಿಯಾದ ಸಮಯಕ್ಕೆ ಅವರ ನೆರವಿಗೆ ಬರುವುದಾಗಿ ಭರವಸೆ ನೀಡುತ್ತಾಳೆ. ಅಲ್ಲಿಯವರೆಗೆ ರಾಕ್ಷಸನ ಜೊತೆ ಹೋರಾಡುವಂತೆ ಆದೇಶಿಸುತ್ತಾಳೆ.

ರಾಕ್ಷಸನ ಸಂಹರಿಸಿದ ದೇವಿ

ರಾಕ್ಷಸನ ಸಂಹರಿಸಿದ ದೇವಿ

PC: youtube
ಯುದ್ಧದಲ್ಲಿ, ಕಾಳಿಕಾಲಾ ತನಗೆ ಎಸೆದ ಎಲ್ಲಾ ಶಸ್ತ್ರಾಸ್ತ್ರಗಳನ್ನು ಮುರಿದುಬಿಟ್ಟನು. ಅಂತಿಮವಾಗಿ, ಇಂದ್ರ ರಾಕ್ಷಸನಿಗೆ ವಜ್ರಾಯುಧವನ್ನು ಎಸೆದನು. ಅದನ್ನೂ ಕಾಳಿಕಾಲಾ ತುಂಡುಗಳಾಗಿ ಮುರಿದನು. ಆ ವಜ್ರಾಯುಧದಿಂದ ದೇವಿ ಪ್ರತ್ಯಕ್ಷಳಾಗಿ ರಾಕ್ಷಸನನ್ನು ಸಂಹರಿಸುತ್ತಾಳೆ. ಹಾಗಾಗಿ ಆಕೆಗೆ ಹೆಸರು ವಜ್ರೇಶ್ವರಿ ಎಂದು ಬಂದಿತು.

ದೇವಾಲಯದ ಪುನಃ ನಿರ್ಮಾಣ

ದೇವಾಲಯದ ಪುನಃ ನಿರ್ಮಾಣ

PC: youtube
ಭಾರತಕ್ಕೆ ಬಂದ ಪೋರ್ಚುಗೀಸರು ಈ ದೇವಾಲಯವನ್ನು ಧ್ವಂಸ ಮಾಡಿದರು. ನಂತರ ದೇವಾಲಯವನ್ನು ೧೭೩೯ರಲ್ಲಿ ಪುನಃ ನಿರ್ಮಾಣ ಮಾಡಲಾಯಿತು. ಈ ದೇವಸ್ಥಾನದ ನಿರ್ಮಾಣದ ಹಿಂದೆ ಒಂದು ಕಥೆ ಇದೆ. ಪೋರ್ಚುಗೀಸರು ನಮ್ಮ ದೇಶಕ್ಕೆ ಬಂದ ನಂತರ ವಜ್ರೇಶ್ವರಿ ಮಾತ ದೇವಾಲಯದ ಸ್ಥಳದ ಪಕ್ಕದಲ್ಲಿದ್ದ ಕೋಟೆಯನ್ನು ಆಕ್ರಮಿಸುತ್ತಾರೆ.

ದೇವಿಗೆ ದೇವಸ್ಥಾನ

ದೇವಿಗೆ ದೇವಸ್ಥಾನ

PC: youtube
ಆ ಸಂದರ್ಭದಲ್ಲಿ ಸ್ಥಳೀಯ ರಾಜನಾಗಿದ್ದ ಬಾಜೀರಾವ್ ಪೇಶ್ವೆಯ ಸಹೋದರ ಅಪ್ಪ ಪೇಶ್ವೆ ಮರಳಿ ಆ ಕೋಟೆಯನ್ನು ತನ್ನ ವ ಶಕ್ಕೆ ಪಡೆಯಲು ಸಹಕರಿಸುವಂತೆ ವಜ್ರೇಶ್ವರಿ ಮಾತೆಯನ್ನು ಕೋರುತ್ತಾನೆ. ಒಂದು ವೇಳೆ ಕೋಟೆ ಮತ್ತೆ ತಮ್ಮ ವಶಕ್ಕೆ ಸೇರಿದರೆ ದೇವಿಗೆ ದೇವಸ್ಥಾನವನ್ನು ನಿರ್ಮಿಸುವುದಾಗಿ ಕೋರುತ್ತಾನೆ.

ಕೋಟೆಯನ್ನು ಮರಳಿ ಪಡೆದ ರಾಜ

ಕೋಟೆಯನ್ನು ಮರಳಿ ಪಡೆದ ರಾಜ

PC: youtube
ಅದೇ ದಿನ ರಾತ್ರಿ ದೇವಿಯು ಆತನ ಕನಸಿನಲ್ಲಿ ಬಂದು ಆ ಕೋಟೆಯನ್ನು ಮರಳಿ ಪಡೆಯುವ ತಂತ್ರಗಳನ್ನು ವಿವರಿಸುತ್ತಾಳೆ. ಮರುದಿನ ರಾಜನು ಅದೇ ತಂತ್ರವನ್ನು ಬಳಿಸಿ ಕೋಟೆಯನ್ನುಮರಳಿ ಪಡೆಯುತ್ತಾನೆ.

 ಪೂಜೆಗಳು

ಪೂಜೆಗಳು

PC: youtube
ಈ ದೇವಾಲಯದಲ್ಲಿ ಸಾಧಾರಣ ಪೂಜೆಗಳ ಜೊತೆಗೆ ಪ್ರತ್ಯೇಕ ಪೂಜೆಗಳೂ ಇದೆ. ಸಾಮಾನ್ಯವಾಗಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಪ್ರತ್ಯೇಕ ಪೂಜೆಗಳಿರುತ್ತವೆ. ನವರಾತ್ರಿ, ಶ್ರೀರಾಮನವಮಿ ಉತ್ಸವ ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಚರ್ಮ ಕಾಯಿಲೆ ನಿವಾರಣೆ

ಚರ್ಮ ಕಾಯಿಲೆ ನಿವಾರಣೆ

PC: youtube
ಭಕ್ತರು ಇಲ್ಲಿನ ದೇವಿಗೆ ಹಳದಿ, ಕುಂಕುಮ, ಸೀರೆ, ಹೂವುಗಳು, ಅಕ್ಕಿ ಮತ್ತು ಬೆಳ್ಳಿಯ ಉಡುಗೊರೆಗಳನ್ನು ನೀಡುತ್ತಾರೆ. ವಜ್ರೇಶ್ವರಿ ದೇವಿ ದೇವಾಲಯದ ಮುಂದೆ ಬಿಸಿನೀರಿನ ಬುಗ್ಗೆ ಇದೆ. ಈ ನೀರಿನಲ್ಲಿ ಸ್ನಾನ ಮಾಡಿದ್ರೆ ಚರ್ಮದ ಕಾಯಿಲೆಗಳು ದೂರವಾಗುತ್ತವೆ ಎನ್ನುತ್ತಾರೆ. ಅದಕ್ಕಾಗಿ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ.

ಉತ್ಸವಗಳು

ಉತ್ಸವಗಳು

PC: youtube
ಚೈತ್ರ ತಿಂಗಳಿನಲ್ಲಿ ಅಮಾವಾಸ್ಯೆಯಂದು ವಜ್ರೇಶ್ವರಿ ದೇವಿಯ ಗೌರವಾರ್ಥವಾಗಿ ಒಂದು ದೊಡ್ಡ ಜಾತ್ರೆ ನಡೆಯುತ್ತದೆ. ಉಳಿದಂತೆ ಶ್ರಾವಣ, ದತ್ತ ಜಯಂತಿ, ಹೋಳಿ, ದೀಪಾವಳಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+