Search
  • Follow NativePlanet
Share
» »ಚಾಮುಂಡಿ ಬೆಟ್ಟದ ಮೇಲಿದೆ ತಾಯಿ ಚಾಮುಂಡೇಶ್ವರಿಯ ಸನ್ನಿಧಾನ.

ಚಾಮುಂಡಿ ಬೆಟ್ಟದ ಮೇಲಿದೆ ತಾಯಿ ಚಾಮುಂಡೇಶ್ವರಿಯ ಸನ್ನಿಧಾನ.

ಬೆಟ್ಟದ ಮೇಲಿರುವ ದೇವಿ ಚಾಮುಂಡೇಶ್ವರಿ ದೇವಾಲಯ - ಚಾಮುಂಡಿ ಬೆಟ್ಟ

ಚಾಮುಂಡಿ ಅಥವಾ ಚಾಮುಂಡೇಶ್ವರಿ ದೇವಾಲಯವು ಕರ್ನಾಟಕದ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯಕ್ಕೆ 1000ಕ್ಕೂ ಹೆಚ್ಚಿನ ಇತಿಹಾಸವಿದ್ದು, ಈ ದೇವಾಲಯವು ಪಾರ್ವತಿ ದೇವಿಯ ಅವತಾರವಾದ ಚಾಮುಂಡೇಶ್ವರಿ ದೇವಿಗೆ ಅರ್ಪಿತವಾದುದಾಗಿದೆ. ಈ ದೇವಾಲಯವು ಚಾಮುಂಡಿ ಬೆಟ್ಟದ ಮೇಲೆ 3000 ಅಡಿ ಎತ್ತರದಲ್ಲಿ ನೆಲೆಸಿದ್ದು, ಮೈಸೂರಿನ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲೊಂದೆನಿಸಿದೆ. ಈ ದೇವಾಲಯವು 12ನೇ ಶತಮಾನಕ್ಕೆ ಸೇರಿದ್ದು ಹೊಯ್ಸಳ ರಾಜ ವಿಷ್ಣುವರ್ಧನನಿಂದ ನಿರ್ಮಿತವಾದುದೆಂದು ಹೇಳಲಾಗುತ್ತದೆ ಆದರೆ ಕೆಲವು ಮೂಲಗಳ ಹೇಳಿಕೆಯ ಪ್ರಕಾರ ಈ ದೇವಾಲಯವು ಅದಕ್ಕಿಂತಲೂ ಹಳೆಯದಾದುದು ಎನ್ನಲಾಗುತ್ತದೆ. ಈ ದೇವಾಲಯವು ವಿಜಯನಗರ ಸಾಮ್ರಾಜ್ಯ, ಒಡೆಯರ್ ಸಾಮ್ರಾಜ್ಯದಂತಹ ಹಲವಾರು ಸಾಮ್ರಾಜ್ಯಗಳ ಏಳು ಬೀಳುಗಳನ್ನು ನೋಡಿದೆ.

ದೇವಿ ಚಾಮುಂಡೇಶ್ವರಿಯು ಮೈಸೂರು ಮಹಾರಾಜರ ಕುಲದೇವತೆ ಎಂದು ಪರಿಗಣಿಸಲಾಗಿದ್ದು, ಇವರು ದೇಗುಲದ ವಿಸ್ತರಣೆಗೆ ಮತ್ತು ಅಭಿವೃದ್ದಿಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ

chamunditemple

ದೇವಿ ಚಾಮುಂಡೇಶ್ವರಿಗೆ ಸಂಬಂಧಿಸಿದ ಪುರಾಣ

ಪುರಾಣದ ಪ್ರಕಾರ, ಶುಂಭ ಮತ್ತು ನಿಶುಂಭ ಎಂಬ ಎರಡು ಅಸುರ ಸಹೋದರರಿದ್ದರು ಕಠೋರ ತಪಸ್ಸಿನ ಮೂಲಕ ದೇವತೆಗಳಿಂದ ಹಲವಾರು ವರಗಳನ್ನು ಪಡೆದು ಭೂಮಿಯ ಮೇಲಿನ ದೇವತೆಗಳಿಗೆ ಮತ್ತು ಜನರಿಗೆ ತೊಂದರೆ ಕೊಡಲು ಪ್ರಾರಂಭಿಸಿದರು. ಈ ಅಸುರರ ಪೀಡೆಯಿಂದ ಬೇಸತ್ತ ದೇವತೆಗಳು ಪಾರ್ವತಿ ದೇವಿಯ ಬಳಿಗೆ ಪರಿಹಾರಕ್ಕಾಗಿ ಹೋಗುತ್ತಾರೆ. ಇದರಂತೆ ದೇವಿಯು ಭೂಲೋಕದಲ್ಲಿ ಸುಂದರ ಕನ್ಯೆಯ ರೂಪದಲ್ಲಿ ಅವತಾರ ಪಡೆಯುತ್ತಾಳೆ.

ಈ ಅಸುರ ಸಹೋದರರು ಸುಂದರ ಕನ್ಯೆಯ ರೂಪದಲ್ಲಿರುವ ದೇವಿಯ ರೂಪದಿಂದ ಆಕರ್ಷಿತರಾಗುತ್ತಾರೆ. ಕನ್ಯೆಯನ್ನು ತಮ್ಮ ಬಳಿಗೆ ಕರೆತರಲು ಸಂದನ್ ಮತ್ತು ಮುಂಡನ್ ಎಂಬ ಅವರ ಇಬ್ಬರು ಸೇನಾಪತಿಗಳನ್ನು ಕಳುಹಿಸಿದರು, ಅವರು ವಿಫಲರಾದರು ಮತ್ತು ಸೇನಾಧಿಪತಿಗಳು ಬಲವಂತವಾಗಿ ಅವಳನ್ನು ಪಡೆಯಲು ಪ್ರಯತ್ನಿಸಿದರು ಆದರೆ ದೇವಿಯಿಂದ ಕೊಲ್ಲಲ್ಪಟ್ಟರು. ಅವಳು ಸಂದನ್ ಮತ್ತು ಮುಂಡನನ್ನು ಕೊಂದಿದ್ದರಿಂದ, ಅವಳನ್ನು ಸಾಮುಂಡಿ ಅಥವಾ ಸಾಮುಂಡೀಶ್ವರಿ ಎಂದು ಕರೆಯಲಾಯಿತು, ಕಾಲಕ್ರಮೇಣ ಈ ಹೆಸರು ಚಾಮುಂಡಿಯಾಗಿ ಬದಲಾಯಿತು.

ಅಸುರ ಮಹಿಷಾಸುರನನ್ನು ಕೊಂದುದಕ್ಕಾಗಿ ಈ ದೇವಿಯನ್ನು ಮಹಿಷಾಸುರ ಮರ್ಧಿನಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಒಂದು ಕುತೂಹಲಕಾರಿ ಅಂಶವೆಂದರೆ, ದೇಗುಲಕ್ಕೆ ಹೋಗುವ ಮೊದಲು ಸಂದರ್ಶಕರನ್ನು ಸ್ವಾಗತಿಸುವ ರಾಕ್ಷಸನ ವರ್ಣರಂಜಿತ ಪ್ರತಿಮೆಯನ್ನು ಕಾಣಬಹುದು.

nandi1

ನಂದಿಯ ಏಕಶಿಲಾ ಪ್ರತಿಮೆ

ನಂದಿಯು ಶಿವ ದೇವರ ವಾಹನವಾಗಿದೆ. ನೀವು ಇಲ್ಲಿ 15 ಅಡಿ ಎತ್ತರ ಹಾಗೂ 24 ಅಡಿ ಉದ್ದವಿರುವ ನಂದಿಯ ಪ್ರತಿಮೆಯನ್ನು ಕಾಣಬಹುದಾಗಿದೆ. ಈ ಪ್ರತಿಮೆಯನ್ನು ಸ್ಥಾಪಿಸಿದ ಕೀರ್ತಿ ಮೈಸೂರಿನ ಸುಪ್ರಸಿದ್ಧ ರಾಜರಲ್ಲಿ ಒಬ್ಬರಾದ ದೊಡ್ಡ ದೇವರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಮಹಾರಾಜರು ಬೆಟ್ಟದ ತುದಿಗೆ ಮೆಟ್ಟಿಲುಗಳ ನಿರ್ಮಾಣವನ್ನು ಸಹ ಮಾಡಿದರು.

ನೀವು 800 ನೇ ಹಂತವನ್ನು ತಲುಪುತ್ತಿದ್ದಂತೆ ನಂದಿಯ ಏಕಶಿಲೆಯ ಪ್ರತಿಮೆಯನ್ನೂ ಸಹ ಕಾಣಬಹುದು. ಮೂಲತಃ ಇದು ಬೃಹದಾಕಾರದ ಬಂಡೆಯಾಗಿದ್ದು ನಂತರ ಈ ಬಂಡೆಯಿಂದ ನಂದಿಯ ಚಿತ್ರವನ್ನು ಕೆತ್ತಲಾಗಿದೆ. ಸ್ಥಳದ ಸುತ್ತಲೂ ಒಂದೇ ಗಾತ್ರದ ಬಂಡೆಗಳನ್ನು ಕಾಣಬಹುದು. ಈ ಬಂಡೆಗಳಲ್ಲಿ ಒಂದರ ಕೆಳಗೆ ಭಗವಾನ್ ಶಿವನಿಗೆ ಸಮರ್ಪಿತವಾದ ಸಣ್ಣ ಗುಹೆ ದೇವಾಲಯವನ್ನು ಸಹ ಕಾಣಬಹುದು.

ಪ್ರತಿಮೆಯು ದೊಡ್ಡದಾಗಿದ್ದು, ಉತ್ತಮವಾದ ವಿವರಗಳೊಂದಿಗೆ, ಇದು ನೋಡಲು ತಪ್ಪಿಸಿಕೊಳ್ಳಬಾರದ ಒಂದು ದೃಶ್ಯವನ್ನು ನೀಡುತ್ತದೆ. ಗೂಳಿಯ ಮೇಲೆ ಕೆತ್ತಿದ ಗಂಟೆಗಳು ಮತ್ತು ಹೂಮಾಲೆಗಳ ಅನುಕ್ರಮವನ್ನು ಗಮನಿಸಬಹುದು, ಅದರ ಕಿವಿಗಳು ಗಮನದಲ್ಲಿವಂತೆ ಕಾಣಿಸುತ್ತದೆ ಮತ್ತು ಮುಖದ ಮೇಲಿನ ಅಭಿವ್ಯಕ್ತಿ ತಪ್ಪಿಸಿಕೊಳ್ಳಬಾರದು.

mahabaleshwar

ಮರೆತುಹೋದ ಮಹಾಬಲೇಶ್ವರನ ದೇವಾಲಯ!

ಮಹಾಬಲೇಶ್ವರ ದೇವಾಲಯವು ಚಾಮುಂಡೇಶ್ವರಿ ದೇವಾಲಯಕ್ಕೆ ಹತ್ತಿರದಲ್ಲಿದ್ದು, ಇದು ದೇವಿಯ ದೇವಾಲಯದಷ್ಟು ಇಲ್ಲಿಗೆ ಜನ ನಿಬಿಡವಾಗಿರುವುದಿಲ್ಲ. ನಿಜವಾಗಿ ಹೇಳುವುದಾದರೆ ಮಹಾಬಲೇಶ್ವರ ದೇವಾಲಯವು ದೇವಿಯ ದೇವಾಲಯಕ್ಕಿಂತಲೂ ಹಳೆಯದು. ಈ ದೇವಾಲಯವನ್ನು 8ನೇ ಶತಮಾನದಲ್ಲಿ ಗಂಗಾ ರಾಜರುಗಳಿಂದ ನಿರ್ಮಿಸಲ್ಪಟ್ಟಿತು ಮತ್ತು ಒಡೆಯರುಗಳಿಂದ ದೇವಿಯ ದೇವಾಲಯವು ಜನಪ್ರಿಯತೆಗೊಳಗಾಗುವುದಕ್ಕಿಂತ ಮುಂಚೆ ಇದು ಚಾಮುಂಡಿ ಬೆಟ್ಟದ ಮೂಲ ದೇವಾಲಯವಾಗಿತ್ತು. ಈ ದೇಗುಲವು ಶಿವನ ಮುಖ ಲಿಂಗವನ್ನು ಹೊಂದಿದೆ, ಭಗವಂತನ ಮುಖವು ಲಿಂಗದಲ್ಲಿ ಹುದುಗಿದೆ. ಅಪರೂಪದ ಶಿವನ ನಟರಾಜನ ರೂಪದಲ್ಲಿ ಇರುವ ದೇವಾಲಯವನ್ನು ಸಹ ಕಾಣಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+