ರಾಮ, ಲಕ್ಷಣ, ಸೀತೆ ತಮ್ಮ ಹದಿನಾಲ್ಕು ವರ್ಷಗಳ ವನವಾಸದ ಸಮಯದಲ್ಲಿ ಪಂಚವಟಿ ಎನ್ನುವ ಸ್ಥಳದಲ್ಲಿ ನೆಲೆಸಿದ್ದರು. ಈ ಇಡೀ ಪಂಚವಟಿಯ ಕ್ಷೇತ್ರವು 5 ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ, ಪಂಚವಟಿ ಎಂದರೆ 5 ವಿಶಾಲವಾದ ಆಲಯ ಮರವಾಗಿದೆ. ಈ ವಿಶಾಲವಾದ ಐದು ಆಲದ ಮರಗಳು ಇಂದಿಗೂ ಸೀತಾ ಗುಹೆಯ ಸಮೀಪದಲ್ಲೇ ಇದೆ. ಒಂದು ಆಲದ ಮರವು ಸೀತಾ ಗುಹೆಯ ಎದುರಲ್ಲೇ ಇದೆ.
ಸೀತಾ ಗುಹೆ ಅಥವಾ ಸೀತಾ ಮಂದಿರವು ಬಹಳ ಸಣ್ಣದಾಗಿದೆ
PC:youtube
ನೀವು ಬಹಳ ಸುಲಭವಾಗಿ ಈ ಮಂದಿರವನ್ನು ಕಂಡುಹಿಡಿಯಬಹುದು. ಇದು ದೊಡ್ಡದಾಗಿ ಇಲ್ಲ ಆದರೂ ಆಧ್ಯಾತ್ಮಕವಾಗಿ ಪರಿಪೂರ್ಣವಾಗಿದೆ. ಸೀತೆಯು ಇಲ್ಲಿ ವನವಾಸದ ಸಂದರ್ಭದಲ್ಲಿ ತಪಸ್ಸು, ಆರಾಧನೆಯನ್ನು ಮಾಡಿದ್ದಳು ಎನ್ನಲಾಗುತ್ತದೆ. ಹಾಗಾಗಿ ಈ ಸ್ಥಳವು ನಿಮಗೆ ಆಧ್ಯಾತ್ಮಿಕ ಭಾವನೆಯನ್ನು ಮೂಡಿಸುತ್ತದೆ. ಜೊತೆಗೆ ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ಭಕ್ತಿ , ಪ್ರೀತಿಯನ್ನು ತುಂಬುತ್ತದೆ.
ಒಳಗೆ ಹೋಗಲು ಒಂದು ಗಂಟೆ ಬೇಕು
PC:Akshatha Inamdar
ಈ ಸೀತಾ ಗುಹೆಯು ನಾಸಿಕ್ನಲ್ಲಿ ಪಂಚವಟಿ ಕ್ಷೇತ್ರದ ಒಳಗೇ ಬರುತ್ತದೆ. ಈ ಗುಹೆಯೊಳಗೆ ಹೋಗಲು ಸುಮಾರು 20 ನಿಮಿಷದಿಂದ ಒಂದು ಗಂಟೆಗಳೇ ಬೇಕಾಗುತ್ತದೆ. ನೀವು ಈ ಗುಹೆಯೊಳಗೆ ಹೋಗಬೇಕಾದರೆ ಕೆಳಗೆ ಬಗ್ಗಿಕೊಂಡೇ ಹೋಗಬೇಕು, ನಿಮಗೆ ಸರಿಯಾದ ಮೇಲ್ಛಾವಣಿ ಸಿಗುವುದಿಲ್ಲ. ಒಂದು ಮೇಲೆ ಒಂದು ಕೆಳಗೆ ಸಿಗುತ್ತದೆ. ಎಲ್ಲೂ ಸಮತಟ್ಟಾದ ಸ್ಥಳಗಳು ಸಿಗುವುದಿಲ್ಲ.
ಮೂರು ಫೀಟ್ ಎತ್ತರದ ಗುಹೆ
PC:Akshatha Inamdar
ಒಳಕ್ಕೆ ಹೋಗುತ್ತಿದ್ದಂತೆ ಗುಹೆ ಇನ್ನಷ್ಟು ಸಣ್ಣದಾಗುತ್ತಾ ಹೋಗುತ್ತದೆ. ಒಳಕ್ಕೆ ಹೋಗುತ್ತಿದ್ದಂತೆ ಉಸಿರಾಡಲು ಸ್ವಲ್ಪ ಕಷ್ಟವಾಗುತ್ತದೆ. ದಪ್ಪಗಿರುವವರು ಈ ಗುಹೆಯೊಳಗೆ ಹೋಗಲು ಸಾಧ್ಯವಾಗೋದಿಲ್ಲ. ಹೆಚ್ಚಾಗಿ ಜನರು ಈ ಗುಹೆಯೊಳಗೆ ಕುಳಿತುಕೊಂಡು ಹೋಗುತ್ತಾರೆ. 2.5 ರಿಂದ ಮೂರು ಫೀಟ್ ಎತ್ತರದಲ್ಲಿದೆ ಈ ಗುಹೆ. ರಾವಣನು ಸೀತೆಯನ್ನು ಅಪಹರಿಸಿದ್ದು ಇಲ್ಲಿಂದಲೇ ಎನ್ನಲಾಗುತ್ತದೆ.
ರಾಮ, ಲಕ್ಷಣ, ಸೀತೆಯ ವಿಗ್ರಹವಿದೆ
PC: Akshatha Inamdar
ಈ ಗುಹೆಯೊಳಗೆ ನೋಡಲು ಬರೀ ಒಂದೆರಡು ನಿಮಿಷಗಳೇ ಸಾಕು. ಗುಹೆಯೊಳಗೆ ಎರಡು ಸಣ್ಣ ಸ್ಥಳಗಳಿವೆ, ಒಂದು ಕೋಣೆಯಲ್ಲಿ ರಾಮ, ಲಕ್ಷಣ ಹಾಗೂ ಸೀತಾ ದೇವಿಯ ಮೂರ್ತಿಗಳಿವೆ, ಇನ್ನೊಂದು ಕೋಣೆಯಲ್ಲಿ ಶಿವಲಿಂಗವಿದೆ. ಅವುಗಳನ್ನು ನೋಡಿದ ನಂತರ ನೀವು ಗುಹೆಯೊಳಗಿನಿಂದ ಹೊರಗೆ ಬರಬೇಕು. ಈ ಪರಿಸರದಲ್ಲಿ ಫೋಟೋಗ್ರಾಫಿಯನ್ನು ನಿಷೇಧಿಸಲಾಗಿದೆ. ಹಾಗಾಗಿ ನೀವು ಕ್ಯಾಮೆರಾವನ್ನೂ ಮುಟ್ಟುವಂತಿಲ್ಲ.
ಅರವತ್ತು ರೂ.ಗೆ ಊಟದ ವ್ಯವಸ್ಥೆ
PC: Akshatha Inamdar
ಈ ಸ್ಥಳಕ್ಕೆ ಇನ್ನಷ್ಟು ಸುರಕ್ಷತೆಯ ಅವಶ್ಯಕತೆ ಇದೆ. ಇಲ್ಲಿ ಗುಹೆಯೊಳಗೆ ಹೋಗುವಾಗ ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಟ್ಟು ಹೋಗಲು ಯಾವುದೇ ವ್ಯವಸ್ಥಿತ ಸ್ಥಳಗಳಿಲ್ಲ. ಹಾಗಾಗಿ ನೀವು ಚಪ್ಪಲಿಯನ್ನು ಹೊರಗೆ ಬಿಟ್ಟು ಹೋಗಬೇಕು. ಇನ್ನು ಈ ಗುಹೆಯ ಹಿಂಬದಿಯಲ್ಲಿ 60ರೂ.ಗೆ ಊಟದ ವ್ಯವಸ್ಥೆ ಇದೆ.
ಪಂಚವಟಿ ಗುಹೆ
PC: Akshatha Inamdar
ಲಕ್ಷಣನು ಶೂರ್ಪನಕಳ ಮೂಗನ್ನು ಮುರಿದಾಗ ಹತ್ತು ಸಾವಿರ ರಾಕ್ಷಸರು ರಾಮ ಹಾಗೂ ಲಕ್ಷಣರಲ್ಲಿ ಯುದ್ಧಕ್ಕೆ ಬಂದರು. ಆ ಸಮಯದಲ್ಲಿ ಪಂಚವಟಿ ಒಂದು ಕಾಡಾಗಿತ್ತು. ಅದಕ್ಕಾಗಿ ಸೀತೆ, ರಾಮ, ಲಕ್ಷಣರು ತಾವು ಅಡಗಿಕೊಳ್ಳಲು ಈ ಗುಹೆಯನ್ನು ಮಾಡಿದರು. ಈ ಸ್ಥಳವನ್ನು ಕಂಡು ಹಿಡಿಯುವ ಸಲುವಾಗಿ ಸುತ್ತಲೂ ಐದು ಆಲದ ಮರವನ್ನು ನೆಟ್ಟರು.