ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ, ಇಗತ್ಪುರಿ ಒಂದು ಸುಂದರವಾದ ಗಿರಿಧಾಮವಾಗಿದ್ದು ಮುಂಬೈ ಮತ್ತು ಪುಣೆಗೆ ಹತ್ತಿರವಿರುವ ಪರಿಪೂರ್ಣವಾದ ವಾರಾಂತ್ಯದ ಸ್ಥಳವಾಗಿದೆ. ಕೆಲವು ವಾಸ್ತವಿಕವಾದ ಟ್ರೆಕ್ ಗಳು ಮತ್ತು ಭವ್ಯವಾದ ವಿಸ್ಟಾಗಳ ಮುಖಪುಟ, ಇಲ್ಲಿರುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಧ್ಯಾನ ಕೇಂದ್ರವು ಪ್ರಸಿದ್ಧವಾಗಿದೆ. ಹೇರಳವಾಗಿ ನೈಸರ್ಗಿಕ ಸೌಂದರ್ಯ ಮತ್ತು ಶಾಂತಿಯನ್ನು ಬಯಸುವಿರಾದಲ್ಲಿ ಈ ಸ್ಥಳಕ್ಕೆ ಭೇಟಿ ಕೊಡಿ.
ಮುಂಬೈಯಿಂದ ಇಗಟ್ ಪುರಿ-ಸ್ವಯಂ ಭೇಟಿ!
PC: Jsdevgan
ಪ್ರಕೃತಿ ತಾಯಿಯ ಬಗ್ಗೆ ಬಹಿರಂಗ ಪಡಿಸುವ ವಿಷಯಗಳು ಬಹಳಷ್ಟಿವೆ. ಇದನ್ನು ನೀವು ಇಟಗಾಪುರಿಯ ಪ್ರದೇಶಕ್ಕೆ ಕಾಲಿಟ್ಟರೆ ಅನುಭವವಾಗುತ್ತದೆ. ಈ ನಯನ ಮನೋಹರವಾದ ತಾಣವು ಮುಂಬೈಯಿಂದ ಸುಮಾರು 120 ಕಿ.ಮೀ ದೂರದಲ್ಲಿದೆ.
ಈ ಪ್ರದೇಶವು ಸಹ್ಯಾದ್ರಿಯ ಎತ್ತರವಾದ ಪರ್ವತ ಶ್ರೇಣಿಗಳಿಂದ ಸುತ್ತುವರಿಯಲ್ಪಟ್ಟಿದೆ. ಅಂದರೆ ಪಶ್ಚಿಮ ಘಟ್ಟದಲ್ಲಿರುವ ಈ ಗಿರಿಧಾಮವು ಪಾದಯಾತ್ರಿಗಳಿಗೆ ಅನುಕೂಲವಾಗುವ ಸ್ಥಳವಾಗಿದೆ. ಒಂಟಿತನದ ಅನುಭವವನ್ನು ಪಡೆಯಲು ಬಯಸುವವರು ಕೂಡ ಇಗತ್ಪುರಿಯನ್ನು ಭೇಟಿ ಮಾಡಬಹುದು ಮತ್ತು ಧ್ಯಾನಕ್ಕೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಬಹುದು.
ಧ್ಯಾನ ಕೇಂದ್ರ
PC:Debbie Lai
ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ಪಡೆದ ಧ್ಯಾನ ಕೇಂದ್ರವಾದ ಧಮ್ಮಗಿರಿ ಇಲ್ಲಿದೆ ಇದು ವಿಶ್ವದ ಅತಿ ದೊಡ್ಡ ವಿಪಾಸನಾ ಕೇಂದ್ರಗಳಲ್ಲಿ ಒಂದಾಗಿದೆ. ಈ ಪ್ರಾಚೀನ ಧ್ಯಾನ ವ್ಯಾಯಾಮ, ವಿಪಾಸನಾ ಮಂದಿರವು ನಿಮ್ಮಲ್ಲಿ ನಿಮ್ಮನ್ನು ಆಂತರಿಕವಾಗಿ ಹುಡುಕಲು ಕಲಿಸುವುದಲ್ಲದೆ ನಿಮ್ಮ ಜೀವನದ ದೃಷ್ಟಿ ಕೋನವನ್ನು ಬದಲಾಯಿಸುತ್ತದೆ.
ಇಟಗಾಪುರಿಗೆ ರಸ್ತೆಸಾರಿಗೆ ಮತ್ತು ರೈಲ್ವೆಯ ಉತ್ತಮ ಸಂಪರ್ಕವಿದೆ. ಕೆಲವು ಕೋಟೆಗಳ ಐತಿಹಾಸಿಕ ಅವಶೇಷಗಳು ಶಾತಾವಾಹನ ರಾಜವಂಶದ ಮಹತ್ವವನ್ನು ಗುರುತಿಸುತ್ತವೆ.ಇಲ್ಲಿ ಟ್ರಕ್ಕಿಂಗ್ ಮಾತ್ರವಲ್ಲದೆ ಇತರ ಚಟುವಟಿಕೆಗಳಾದ ರಾಪ್ಲಿಂಗ್ ಮತ್ತು ರಾಕ್ ಕ್ಲೈಂಬಿಂಗ್ ಗಳನ್ನು ಸಹ ಇಲ್ಲಿ ನಡೆಸಲಾಗುತ್ತದೆ. ಇಲ್ಲಿ ಬಾಲಿವುಡ್ ನ ಅನೇಕ ನಿರ್ದೇಶಕರು ಮತ್ತು ನಿರ್ಮಾಪಕರು ವಿವಿಧ ಹಾಡುಗಳನ್ನು ಇಗತ್ಪುರಿಯಲ್ಲಿ ಚಿತ್ರೀಕರಿಸಿದ್ದಾರೆ.
ಮಹಾರಾಷ್ಟ್ರದ ಸುತ್ತಮುತ್ತಲಿನ ಪ್ರದೇಶಕ್ಕೆ ಪ್ರಯಾಣ ಮಾಡಲು ಮಳೆಗಾಲವನ್ನು ಆಯ್ಕೆ ಮಾಡಿದಲ್ಲಿ ಈ ಜಾಗವು ಸೂಕ್ತವಾದುದಾಗಿದೆ. ಈ ಸಮಯದಲ್ಲಿ ಹುಲ್ಲುಗಳು ಹಸಿರಾಗುತ್ತವೆ, ಕಾಡುಗಳು ದಟ್ಟವಾಗಿರುತ್ತದೆ ಮತ್ತು ಜಲಪಾತಗಳು ಹರಿಯತೊಡಗುತ್ತವೆ ಏಕೆಂದರೆ ಇಲ್ಲಿ ಮಳೆಯು ಜೋರಾಗಿ ಬರುತ್ತದೆ. ಇವೆಲ್ಲಾ ಸೇರಿ ಈ ಪ್ರದೇಶವು ಸ್ವರ್ಗವೇ ಭೂಮಿಗಿಳಿದಿದೆಯೊ ಎಂಬ ಅನುಭವ ನೀಡುತ್ತದೆ!
ಮಾರ್ಗದರ್ಶಿ ಪ್ರಾರಂಭಿಕ ಹಂತ: ಗಮ್ಯಸ್ಥಾನ ಮುಂಬೈ : ಇಗತ್ಪುರಿ
ಇಗತ್ಪುರಿ ಗೆ ಭೇಟಿ ನೀಡಲು ಸೂಕ್ತ ಸಮಯ ಮಳೆಗಾಲ ಟ್ರಕ್ಕರ್ಸ್ ಮತ್ತು ಪ್ರಕೃತಿ ಪ್ರೇಮಿಗಳಿಗೆ ಮಳೆಗಾಲ ಇಗತ್ಪುರಿಯನ್ನು ಭೇಟಿ ಮಾಡಲು ಸೂಕ್ತವಾಗಿದೆ.ಜೂನ್ ನಿಂದ ಸೆಪ್ಟೆಂಬರ್ ತಿಂಗಳುಗಳಲ್ಲಿ ಇಗತ್ಪುರಿಯಲ್ಲಿ ಮಳೆಯು ಜೋರಾಗಿ ಬೀಳುವುದರಿಂದ ಈ ಪ್ರದೇಶವನ್ನು ಆಹ್ಲಾದಮಯವಾಗಿಸುತ್ತದೆ. ಸೆಕೆ ಕಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸುವುದು ಉತ್ತಮ. ಚಳಿಗಾಲ (ನವೆಂಬರ್ ನಿಂದ ಮಾರ್ಚ್) ಇಗತ್ಪುರಿಗೆ ಭೇಟಿ ನೀಡಲು ಅತೀ ಉತ್ತಮ ವಾದ ಸಮಯವಾಗಿದೆ.
ಇಗತ್ ಪುರಿಗೆ ಹೋಗುವುದು ಹೇಗೆ
ರಸ್ತೆ ಮೂಲಕ : ಮುಂಬೈನಿಂದ ಇಗತ್ಪುರಕ್ಕೆ ಒಟ್ಟು ದೂರ ಮಾರ್ಗ 1 ಮೂಲಕ 121 ಕಿ.ಮೀ ಮತ್ತು ಮಾರ್ಗ 2 ಮೂಲಕ 144 ಕಿ.ಮೀ. ಮಾರ್ಗಗಳ ವಿವರಣೆ ಈ ಕೆಳಗಿನಂತಿವೆ.
ಮಾರ್ಗ್ 1: ಮುಂಬೈ-ಚೆಡ್ಡಾನಗರ್-ಹಳೇ ಮುಂಬೈ ಆಗ್ರಾ ರಸ್ತೆ ರಾ.ಹೆ 160 ರ ಮೂಲಕ- ತಾಳೆಗಾನ್-ಬಜ್ರಂಗ್ ವಾಡಾ-ಇಗತ್ಪುರಿ
ಮಾರ್ಗ2: ಮುಂಬೈ - ಚೆಡ್ಡ ನಾಗರ್ - ಈಸ್ಟರ್ನ್ ಎಕ್ಸ್ ಪ್ರೆಸ್ ಹೆದ್ದಾರಿ - ಭಿವಂಡಿ ರಸ್ತೆ - ವಾಡಾ ರಸ್ತೆ - ವಾಡಾ ಶಹಪುರ್ ರಸ್ತೆ ರಾ.ಹೆ 848 ಮೂಲಕ - ಕಲಂಗಾಂವ್ - ಕಾಸರಾ ಬೈಪಾಸ್ ರಾ.ಹೆ 160 - ಬಜರಂಗ ವಾಡಾ - ಇಗತ್ಪುರಿ
ಮಾರ್ಗ 1 ಸೂಚಿಸಲಾಗುತ್ತದೆ. ಮಾರ್ಗ 1 ಆಯ್ಕೆ ಮಾಡುವುದರಿಂದ, ಸುಮಾರು 3 ಗಂಟೆಗಳಲ್ಲಿ ನೀವು ಇಗತ್ಪುರಿಯನ್ನು ತಲುಪುತ್ತೀರಿ. ಮಾರ್ಗ 2ನ್ನು ಆಯ್ಕೆ ಮಾಡಿಕೊಂಡರೆ ಇಲ್ಲಿಗೆ ತಲುಪಲು ಸುಮಾರು 4 ಗಂಟೆಗಳು ಬೇಕಾಗುವುದು.
ಇಗತ್ಪುರಿ ಯನ್ನು ತಲುಪುವುದು ಹೇಗೆ?
PC: Kashif Pathan
ರೈಲು ಮೂಲಕ:ಮುಂಬೈ ಮತ್ತು ಇಗತ್ಪುರಿ ನಡುವಿನ ರೈಲುಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನಿರಂತರವಾಗಿ ಚಲಿಸುತ್ತವೆ. ಇಲ್ಲಿಗೆ ರೈಲು ಮೂಲಕ ತಲುಪಲು 2-3 ಗಂಟೆಗಳು ಬೇಕಾಗುವುದು. ರೈಲು ವೇಳಾಪಟ್ಟಿಗಳು, ಸಮಯಗಳು, ಮುಂತಾದವುಗಳನ್ನು ತಿಳಿದುಕೊಳ್ಳಲು ಮತ್ತು ಮುಂಬೈ ಮೂಲಕ ಹಾದುಹೋಗುವ ರೈಲುಗಳ ಮಾಹಿತಿ ತಿಳಿದುಕೊಳ್ಳಲು ವೇಳಾಪಟ್ಟಿಯನ್ನು ಓದಿರಿ.
ಬಸ್ಸುಗಳ ಮೂಲಕ:
ಅನೇಕ ಜನರು ಬಸ್ ಮೂಲಕ ಇಗತ್ಪುರಿಗೆ ಪ್ರಯಾಣಿಸಲು ಬಯಸುತ್ತಾರೆ, ಏಕೆಂದರೆ ಅವರು ಡ್ರೈವಿಂಗ್ ಮಾಡುವುದನ್ನು ತಪ್ಪಿಸಲು ಹಾಗೂ ಜೊತೆಗೆ ಯಾವುದೇ ಅಡೆತಡೆಗಳಿಲ್ಲದೆ ದೃಶ್ಯ ವೀಕ್ಷಣೆಗಳನ್ನು ಆನಂದಿಸಲು ಅವರು ಬಯಸುತ್ತಾರೆ.ಪ್ರತಿ ಬಸ್ ಟಿಕೆಟ್ 450 ರೂ.ಯಿಂದ 480 ರೂ ವರೆಗೆ ಇರುತ್ತದೆ. ಮುಂಬೈನಿಂದ ಇಗತ್ಪುರಿಗೆ ದಿನಕ್ಕೆ ಕನಿಷ್ಠ 1 ಬಸ್ ಸಾಗುತ್ತದೆ.
ಮುಂಬೈಯಿಂದ ಇಗತ್ಪುರಿಗೆ ಥಾಣೆಯ ಮೂಲಕವಾಗಿ
PC: Dheerajk88
ನಿಮ್ಮ ಬ್ಯಾಗುಗಳನ್ನು ಪ್ಯಾಕ್ ಮಾಡಿಕೊಳ್ಳಿ ಮತ್ತು ಹೊಟ್ಟೆಯನ್ನು ಕಾಲಿ ಇರಿಸಿಕೊಂಡು ಬೆಳಗ್ಗೆ ಬೇಗ ಹೊರಡಿ. ಮುಂಬೈಯಿಂದ ಸುಮಾರು 25 ಕಿಮೀ ದೂರದಲ್ಲಿರುವ ಥಾಣೆನಲ್ಲಿರುವ ಮಾಮ್ಲೆದರ್ ಮಿಸಾಲ್ನಲ್ಲಿ ಮಸಾಲೆ ಪಾವ್ ಎಂಬ ಪ್ರಸಿದ್ಧ ಮಸಾಲೆ ಪಾವನ್ನು ಒಮ್ಮೆ ತಿಂದು ನೋಡಿ.ಈ ವಿಶಿಷ್ಟ ವಾದ ಮಹಾರಾಷ್ಟ್ರ ಪಾಕಪದ್ಧತಿಯು ನಿಮಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ.
ಥಾಣೆ ಸರೋವರಗಳ ನಗರವೆಂದು ಪ್ರಸಿದ್ಧವಾಗಿದೆ ಇಲ್ಲಿರುವ ಜನಸಂಖ್ಯೆಯ ಹೊರತಾಗಿಯು ನಗರದ ಒಳಗೆ ಸುಮಾರು 33 ಸರೋವರಗಳನ್ನು ಹೊಂದಿದೆ. ಪ್ರಕೃತಿಯ ವಿಸ್ಮಯದಲ್ಲೊಂದಾದ ಉಪವನ ಸರೋವರವನ್ನು ನೋಡಲು ಮರೆಯದಿರಿ.
ಮುಂಬೈಯಿಂದ ಇಗತ್ಪುರಿ ಶಹಪುರ್ ಮೂಲಕ
PC: Rahul0n1ine
ಶಹಪುರವು ಥಾಣೆಯಿಂದ ಸುಮಾರು 53 ಕಿ. ಮೀ ದೂರದಲ್ಲಿದೆ. ಇಲ್ಲಿರುವ ಅದ್ಭುತವಾದ ಮಾನಸ ಮಂದಿರ ಎಂಬ ಜೈನ ದೇಗುಲವು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಈ ದೇಗುಲವು ಈ ಪ್ರದೇಶದ ಅತ್ಯಂತ ಹೆಚ್ಚು ಭೇಟಿ ಮಾಡುವ ಸ್ಥಳವಾಗಿದೆ. ಶಹಪುರದಲ್ಲಿ ಹೆಚ್ಚಿನ ಸಂಖ್ಯೆಯ ಪಿಕ್ನಿಕ್ ತಾಣಗಳಿವೆ ಮತ್ತು ಹೊಮ್ ಸ್ಟೇ ಗಳಿವೆ.
ಶಹಪುರದಿಂದ ಸುಮಾರು 49 ಕಿ.ಮೀ ದೂರದಲ್ಲಿ ಇಗತ್ಪುರಿ ಬರುತ್ತದೆ. ಇಲ್ಲಿಗೆ ಪ್ರಯಾಣಿಸುವಾಗ ನಿಮ್ಮ ಪಂಚೇಂದ್ರಿಯಗಳನ್ನು ಸಕ್ರಿಯಗೊಳಿಸಿ ಏಕೆಂದರೆ ಇಲ್ಲಿಯ ಸುತ್ತಮುತ್ತಲಿನ ಸೌಂದರ್ಯತೆಯನ್ನು ಸವಿಯಲು ಮತ್ತು ಅನುಭವಿಸಲು!
ಇಗತ್ಪುರದ ಒಳಗೆ ಮತ್ತು ಸುತ್ತಮುತ್ತಲಲ್ಲಿ ಕಾಣಬಹುದಾದಂತಹ ಪ್ರಮುಖವಾದ ಮತ್ತು ದೊಡ್ಡ ಆಕರ್ಷಣೆಗಳ ಪಟ್ಟಿಯು ಇಲ್ಲಿದೆ.
ಭಟ್ಸಾ ನದಿ ಕಣಿವೆ
PC: Kashif Pathan
ಈ ಕಣಿವೆಯು ಭಟ್ಸಾ ನದಿಯ ತಟದಲ್ಲಿದೆ. ಇಗತಪುರಿಯ ಮುಖ್ಯ ಪಟ್ಟಣಕ್ಕೆ ಪ್ರವೇಶಿಸುವ ಮೊದಲು ಈ ಕಣಿವೆಯು ಕಾಣಸಿಗುತ್ತದೆ. ದಟ್ಟವಾದ ಕಾಡುಗಳು, ತುಂಬಿ ಹರಿಯುವ ನದಿ ತೀರಗಳು, ಮರಗಳ ನಡುವೆ ಹೊಗೆ ಭರಿತ ಮಂಜಿನಿಂದ ಕೂಡಿದ ವಾತಾವರಣದಿಂದ ಸುತ್ತುವರಿಯಲ್ಪಟ್ಟಿದೆ. ಭಟ್ಸಾ ಕಣಿವೆಯು ಇಗತ್ಪುರಿಯ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ.
ಈ ಘಾಟ್ ನ ದೇವತೆಯ ದೇವಾಲಯಕ್ಕೆ ಭೇಟಿ ನೀಡಲೇಬೇಕು ಅಂದರೆ ಇಲ್ಲಿರುವ ಘಟನಾದೇವಿ ಮಂದಿರ. ರಾತ್ರಿ ಕೂಟ, ಕಾರ್ಪೋರೆಟ್ ಸಭೆಗಳಿಗೆ, ಕುಟುಂಬದ ಒಟ್ಟಿಗೆ ಮತ್ತು ಸ್ನೇಹಿತರ ಜೊತೆಗೆ ಕಳೆಯಲು ಈ ಪ್ರದೇಶವು ಸೂಕ್ತವಾಗಿದೆ.ಸಂಗೀತದ ಜೊತೆಗೆ ಕಾಂಪ್ ಫೈಯರಿಂಗ್, ಪಕ್ಷಿ ವೀಕ್ಷಣೆ, ನಕ್ಷತ್ರವೀಕ್ಷಣೆ, ಬೋರ್ಡ್ ಆಟಗಳು, ಇತ್ಯಾದಿ ನಿಮ್ಮನ್ನು ಆಕರ್ಷಿಸುವ ಚಟುವಟಿಕೆಗಳನ್ನು ನೀವು ಇಲ್ಲಿ ತಂಗಿರುವ ಸಮಯದಲ್ಲಿ ಮಾಡಬಹುದಾಗಿದೆ.
ಕ್ಯಾಮೆಲ್ ಕಣಿವೆ
PC: Kashif Pathan
ಎಲ್ಲಾ ಫೋಟೋ ತೆಗೆಯುವ ಹವ್ಯಾಸಿಗಳು ಕ್ಯಾಮೆಲ್ ಕಣಿವೆಯೊಳಗೆ ಪ್ರವೇಶಿಸುವುದನ್ನು ತಪ್ಪಿಸಿಕೊಳ್ಳಬಾರದು.ಇಲ್ಲಿ ಸಿಡಿಲಿನಂತೆ ಭೋರ್ಗರೆಯುವ ಜಲಪಾತವನ್ನು ನೋಡಬಹುದು. ಇಲ್ಲಿ ನೀರು ಸುಮಾರು 1000 ಫೀಟ್ ಎತ್ತರದಿಂದ ಕೆಳಕ್ಕೆ ಧುಮುಕುತ್ತದೆ. ಕ್ಯಾಮೆಲ್ ವ್ಯಾಲಿಯನ್ನು ಮಳೆಗಾಲದಲ್ಲಿಯೇ ಭೇಟಿಕೊಡಬೇಕು.
ಟ್ರಿಂಗಲ್ವಾಡಿ ಕೋಟೆ
PC: Ccmarathe
ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿ, ಟ್ರೆಂಗಲ್ವಾಡಿ ಕೋಟೆಯಿದೆ. ಈ ಕೋಟೆಯು ಅದರ ಸುಂದರವಾದ ದೃಶ್ಯಗಳಿಂದಾಗಿ ಟ್ರಕ್ಕರ್ಸ್ ಗಳನ್ನು ಆಕರ್ಷಿಸುತ್ತದೆ. ಈ ವಿಸ್ಮಯಕಾರಿ ಭೂಮಿಗೆ ಪ್ರವೇಶ ಮಾಡಿ ಹಾಗೂ ಮುಖದ್ವಾರದಲ್ಲಿ ಹನುಮಾನ್ ದೇವರ ದರ್ಶನ ಪಡೆಯಿರಿ.ಇತಿಹಾಸ ಭಕ್ತರು ಖಚಿತವಾಗಿ ಇಲ್ಲಿ ಪ್ರಾಚೀನ ವಾಸ್ತುಶಿಲ್ಪದ ಅವಶೇಷಗಳನ್ನು ವೀಕ್ಷಿಸುವ ದೊಡ್ಡ ವಿನೋದವನ್ನು ಹೊಂದುತ್ತಾರೆ.
ಕಲ್ಸುಬಾಯ್ ಟ್ರೆಕ್
PC: Hitmoments
ನೀವು 1-2 ದಿನಗಳಿಗಿಂತ ಹೆಚ್ಚಿನ ಸಮಯವನ್ನು ಹೊಂದಿದ್ದಲ್ಲಿ, ಕಲ್ಸುಬಾಯ್ ಪೀಕ್ (ಸಮುದ್ರ ಮಟ್ಟಕ್ಕಿಂತ 1646 ಮೀಟರ್, 5400 ಅಡಿ) ಅದ್ಭುತವಾದ ಟ್ರೆಕ್ಕಿಂಗ್ ಜಾಗವು ಟ್ರಕ್ಕಿಂಗ್ ಉತ್ಸಾಹಿಗಳ ಕನಸು ನನಸಾಗುವಂತೆ ಮಾಡುತ್ತದೆ. ಇದು ಮಹಾರಾಷ್ಟ್ರದ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿದೆ.
ಅಷ್ಟೇ ಅಲ್ಲ, ಇಗತ್ಪುರಿಯಿಂದ ಕೇವಲ 30 ಕಿ.ಮೀ. ದೂರದಲ್ಲಿ ಚಾರಣ ಪ್ರಾರಂಭವಾಗುವ ಗ್ರಾಮ ಬಾರಿ. ಮೇಲಕ್ಕೆ ತಲುಪುವಂತೆಯೇ ಸ್ವರ್ಗವನ್ನು ತಲುಪಿದಂತೆ ಭಾಸವಾಗುತ್ತದೆ. ಕಲ್ಸುಬಾಯ್ ಶೃಂಗ ತಲುಪಿದ ನಂತರ ನಿಸ್ಸಂಶಯವಾಗಿ ನಿಮಗೆ ವಿಜಯದ ಭಾವನೆ ಇರುತ್ತದೆ!
ಧಮ್ಮ ಗಿರಿ ಧ್ಯಾನ ಕೇಂದ್ರ (ವಿಪಾಸಾನಾ ಕೇಂದ್ರ)
PC: Piyushshelare
ಧಮ್ಮ ಗಿರಿ ಮೆಡಿಟೇಶನ್ ಸೆಂಟರ್ ನಲ್ಲಿ ಹತ್ತು ದಿನ ವಿಪಾಸ್ಸನಾ ಕೋರ್ಸ್ಗಾಗಿ ನಿಮ್ಮನ್ನು ತೊಡಗಿಸಿಕೊಳ್ಳಿ .ಧರ್ಮ, ಜಾತಿ ಮತ್ತು ಮತಗಳು ಇತ್ಯಾದಿಗಳ ಕೋರ್ಸಗಳಲ್ಲಿ ಭಾಗವಾಗಿರಲು ಬಯಸುವವರಿಗೆ ಇದು ಪ್ರಶಸ್ತವಾದ ಜಾಗವಾಗಿದೆ.
ನೀವು ಮಾಡಬೇಕಾಗಿರುವುದು, ಇಷ್ಟೆ ನಿಮ್ಮ ಉಸಿರಾಟದ ಮಾದರಿಗಳ ಮೇಲೆ ಕೇಂದ್ರೀಕರಿಸಲು ಮತ್ತು ಬದಲಿಸಲು ಸ್ವೀಕಾರಾರ್ಹವಾಗಿದೆಯೇ ಎಂದು ತಿಳಿದುಕೊಳ್ಳಿ! ಇಲ್ಲಿ ಮುಖ್ಯವಾದುದೇನೆಂದರೆ ನಿಮ್ಮ ಕೋರ್ಸ್ ಅನ್ನು ಪೂರ್ಣಗೊಳಿಸುವ ತನಕ ನೀವು ಮೌನವಾಗಿ ಉಳಿಯಬೇಕು ಮತ್ತು ನಿಮ್ಮ ಜನರೊಂದಿಗೆ ಸಂವಹನ ಮಾಡಲು ನಿಮಗೆ ಅನುಮತಿಸಲಾಗುವುದಿಲ್ಲ.
ಆದ್ದರಿಂದ, ಯಾವುದೇ ತಂತ್ರಜ್ಞಾನವಿಲ್ಲ, ಕುಟುಂಬವಿಲ್ಲ, ಸ್ನೇಹಿತರು ಇಲ್ಲ, ಫೋನ್ ಇಲ್ಲ, ಸಾಮಾಜಿಕ ಮಾಧ್ಯಮ ಇಲ್ಲ ... ಇಲ್ಲಿ ಬರೀ ನೀವು ಮತ್ತು ಪ್ರಕೃತಿ ಮಾತ್ರ!