ಪ್ರತಿಯೊಬ್ಬರು ತಮ್ಮ ಆಯ್ಕೆಯ ಪ್ರಕಾರವೇ ಪ್ರವಾಸವನ್ನು ಹಮ್ಮಿಕೊಳ್ಳುತ್ತಾರೆ. ಅನೇಕರು ನೈಸರ್ಗಿಕ ಸ್ಥಳಗಳನ್ನು ಅಂದರೆ ಪರ್ವತ ಪ್ರದೇಶಗಳನ್ನು ಇಷ್ಟಪಡುತ್ತಾರೆ. ಮತ್ತೆ ಕೆಲವರು ಸಮುದ್ರ ತೀರಗಳು ಅಥವಾ ದ್ವೀಪಗಳನ್ನು ಇಷ್ಟಪಡುತ್ತಾರೆ. ಇವರ ಮಧ್ಯೆ ದೇಶದಲ್ಲಿ ಧಾರ್ಮಿಕ ಪ್ರವಾಸ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಅಂಥವರ ಟ್ರಾವೆಲ್ ಡೈರಿಯಲ್ಲಿ ಕಾಶಿ ಅಂದರೆ ಉತ್ತರ ಪ್ರದೇಶದ ವಾರಣಾಸಿ ಪ್ರವಾಸ ಖಂಡಿತ ಸೇರಿರುತ್ತದೆ. ಆದರೆ ಉತ್ತರ ಭಾರತದಲ್ಲಿ ಕಾಶಿಯಂತಹ ಪವಿತ್ರ ಯಾತ್ರಾ ಸ್ಥಳ ಇರುವಂತೆಯೇ ದಕ್ಷಿಣ ಭಾರತದಲ್ಲಿಯೂ ಹಲವು ಪ್ರಮುಖ ಯಾತ್ರಾ ಸ್ಥಳಗಳಿವೆ. ನಾವು ಇಂದು ಹೇಳಲು ಹೊರಟಿರುವ ಸ್ಥಳವನ್ನು ದಕ್ಷಿಣ ಭಾರತದ ಕಾಶಿ ಎಂದು ಕರೆಯಲಾಗುತ್ತದೆ. ಬನ್ನಿ, ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ...
ಭಾರತದ ಎರಡನೇ ಕಾಶಿ
ನಾವಿಂದು ಅರಬ್ಬೀ ಸಮುದ್ರದ ತಟದಲ್ಲಿರುವ ಕರ್ನಾಟಕದ ವಿಶೇಷ ನಗರವಾದ ಗೋಕರ್ಣದ ಬಗ್ಗೆ ಮಾತನಾಡುತ್ತಿದ್ದೇವೆ. ಜನರು ಇದನ್ನು ಭಾರತದ ಎರಡನೇ ಕಾಶಿ ಎಂದು ಕರೆಯುತ್ತಾರೆ. ಗೋಕರ್ಣವು ಹಿಂದೂ ಯಾತ್ರಾ ಸ್ಥಳವಾಗಿದ್ದು, ಮಹಾಬಲೇಶ್ವರ ದೇವಾಲಯ ಮತ್ತು ಕೋಟಿ ತೀರ್ಥ ಸೇರಿದಂತೆ ಹಲವಾರು ಪವಿತ್ರ ಸ್ಥಳಗಳಿಗೆ ನೆಲೆಯಾಗಿದೆ. ಕಡಿಮೆ ಜನಸಂದಣಿ ಇರುವ ಗೋಕರ್ಣವನ್ನು ಗೋವಾ ಎಂದೂ ಕರೆಯುತ್ತಾರೆ. ಕಾರಣ ಇಲ್ಲಿ ಅನೇಕ ಆಕರ್ಷಕ ಬೀಚ್ ಗಳಿದ್ದು, ಅಲ್ಲಿ ನೀವು ಸ್ವಲ್ಪ ಸಮಯವನ್ನು ಶಾಂತಿಯುತವಾಗಿ ಕಳೆಯಬಹುದು. ಇಲ್ಲಿನ ಕಡಲತೀರಗಳು ವಿಶ್ರಾಂತಿಗಾಗಿ ಆಕರ್ಷಣೆಯ ಕೇಂದ್ರವಾಗಿದೆ.

ಪ್ರಮುಖ ಆಕರ್ಷಣ ಕೇಂದ್ರಗಳು
ಇಲ್ಲಿನ ಪ್ರಮುಖ ಆಕರ್ಷಣೆಗಳ ಬಗ್ಗೆ ಹೇಳುವುದಾದರೆ, ಮಹಾಬಲೇಶ್ವರ ದೇವಸ್ಥಾನ ಮತ್ತು ಕೋಟಿ ತೀರ್ಥವನ್ನು ಹೊರತುಪಡಿಸಿ, ಮಹಾಗಣಪತಿ ದೇವಸ್ಥಾನ, ಭದ್ರಕಾಳಿ ದೇವಸ್ಥಾನ, ವರದರಾಜ ದೇವಸ್ಥಾನ ಮತ್ತು ವೆಂಕಟ್ರಮಣ ದೇವಸ್ಥಾನ, ಓಂ ಬೀಚ್, ಕುಡ್ಲೆ ಬೀಚ್, ಗೋಕರ್ಣ ಬೀಚ್, ಯಾಣ, ಹಾಫ್ ಮೂನ್ ಬೀಚ್ ಮತ್ತು ಪ್ಯಾರಡೈಸ್ ಬೀಚ್ ಮುಂತಾದ ಸ್ಥಳಗಳಿವೆ.
ಕುತೂಹಲಕಾರಿ ಕಥೆ
ಇಲ್ಲಿ ನಿರ್ಮಿಸಲಾದ ಅತ್ಯಂತ ಹಳೆಯ ದೇವಾಲಯವಾದ ಮಹಾಬಲೇಶ್ವರದಲ್ಲಿರುವ ಶಿವಲಿಂಗವನ್ನು ರಾವಣನು ತಂದನು ಎಂದು ಹೇಳಲಾಗುತ್ತದೆ. ರಾವಣನು ಶಂಕರನನ್ನು ಮೆಚ್ಚಿಸಲು ಮತ್ತು ಅಜೇಯ ಶಕ್ತಿಯನ್ನು ಗಳಿಸಲು ಮತ್ತು ಆ ಶಿವಲಿಂಗವನ್ನು ತನ್ನೊಂದಿಗೆ ಲಂಕೆಗೆ ಕೊಂಡೊಯ್ಯಲು ಬಯಸಿದನು ಎಂಬ ಕುತೂಹಲಕಾರಿ ಕಥೆಯಿದೆ. ಆದರೆ ರಾವಣನ ಈ ತಂತ್ರಕ್ಕೆ ಹೆದರಿ, ದೇವತೆಗಳು ಪ್ರಾರ್ಥಿಸಿದರು. ರಾವಣ ಈ ಶಿವಲಿಂಗವನ್ನು ಇಲ್ಲಿಯೇ ಇಡಬೇಕೆಂದು ಬಯಸಿದರು. ಅಂದಿನಿಂದ ಈ ಶಿವಲಿಂಗವನ್ನು ಇಲ್ಲಿ ಸ್ಥಾಪಿಸಲಾಗಿದೆ.

ಮಹಾಭಾರತ ಮತ್ತು ರಾಮಾಯಣದಲ್ಲಿ ಉಲ್ಲೇಖ
ಮಹಾಬಲೇಶ್ವರ ದೇವಾಲಯವು ಆತ್ಮಲಿಂಗ ಎಂದು ಕರೆಯಲ್ಪಡುವ 6 ಅಡಿ ಎತ್ತರದ ಶಿವಲಿಂಗವನ್ನು ಹೊಂದಿದೆ. ಈ ದೇವಾಲಯದಲ್ಲಿ ಬಿಳಿ ಗ್ರಾನೈಟ್ ಅನ್ನು ಬಳಸಲಾಗಿದ್ದು, ನೀವು ದ್ರಾವಿಡ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯನ್ನು ನೋಡಬಹುದು. ಅದರಲ್ಲಿ 1500 ವರ್ಷಗಳಷ್ಟು ಹಳೆಯದಾದ ಶಿವನ ವಿಗ್ರಹವನ್ನೂ ಸ್ಥಾಪಿಸಲಾಗಿದೆ. ಈ ದೇವಾಲಯವನ್ನು ಮಹಾಭಾರತ ಮತ್ತು ರಾಮಾಯಣದ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಮತ್ತು ಕಾಶಿಯಷ್ಟೇ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ, ಆದ್ದರಿಂದ ಇದು ದಕ್ಷಿಣ ಕಾಶಿ ಎಂಬ ಬಿರುದನ್ನು ಹೊಂದಿದೆ.
ದೇವಸ್ಥಾನದ ಸಂಪ್ರದಾಯ
ಮಹಾಬಲೇಶ್ವರ ದೇವಾಲಯದಲ್ಲಿ ಆತ್ಮಲಿಂಗದ ಮೇಲ್ಭಾಗವು ಭಕ್ತರಿಗೆ ಗೋಚರಿಸುವ ಲಿಂಗದ ಏಕೈಕ ಭಾಗವಾಗಿದೆ. ಆದರೆ 40 ವರ್ಷಗಳಿಗೊಮ್ಮೆ ನಡೆಯುವ ಅಷ್ಟಬಂಧನ ಕುಂಭಾಭಿಷೇಕ ಸಮಯದಲ್ಲಿ ಸಂಪೂರ್ಣ ಆತ್ಮಲಿಂಗವನ್ನು ಭಕ್ತರಿಗೆ ತೋರಿಸಲಾಗುತ್ತದೆ. ದೇವಸ್ಥಾನಕ್ಕೆ ಬರುವ ಮೊದಲು ಕಾರವಾರದ ಕಡಲತೀರದಲ್ಲಿ ಸ್ನಾನ ಮಾಡಿ, ದೇವಸ್ಥಾನದ ಮುಂಭಾಗದಲ್ಲಿರುವ ಮಹಾ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರವೇ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂಬುದು ದೇವಸ್ಥಾನದ ಸಂಪ್ರದಾಯ. ದೇವಾಲಯದ ತೆರೆಯುವ ಸಮಯ ಬೆಳಗ್ಗೆ 6 ರಿಂದ 12 ರವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 8 ರವರೆಗೆ.

ಅತ್ಯಂತ ದೊಡ್ಡ ಬೀಚ್
ಗೋಕರ್ಣದಲ್ಲಿ ಇನ್ನೂ ಅನೇಕ ಸುಂದರವಾದ ನೈಸರ್ಗಿಕ ದೃಶ್ಯಗಳನ್ನು ನೋಡಬಹುದು. ಇಲ್ಲಿನ ಕುಡ್ಲೆ ಬೀಚ್ ಅದ್ಭುತವಾಗಿದೆ. ಇಲ್ಲಿರುವ ಎಲ್ಲಾ ಬೀಚ್ಗಳಲ್ಲಿ ಇದು ಅತ್ಯಂತ ದೊಡ್ಡ ಬೀಚ್ ಆಗಿದೆ. ಇದರೊಂದಿಗೆ ಓಂ ಬೀಚ್ ಕೂಡ ಇದೆ, ಇದು ಹಿಂದೂ ಧರ್ಮದ ಸಂಕೇತವಾದ ಓಂನ ಆಕಾರವನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ.
ಹಾಫ್ ಮೂನ್ ಬೀಚ್ ನ ವೈಶಿಷ್ಟ್ಯಗಳು
ಹಾಫ್ ಮೂನ್ ಬೀಚ್ ಚಂದ್ರನ ಅರ್ಧದಷ್ಟು ಗಾತ್ರವನ್ನು ಹೋಲುತ್ತದೆ, ಈ ಕಾರಣದಿಂದಾಗಿ ಇದನ್ನು ಹಾಫ್ ಮೂನ್ ಎಂದು ಕರೆಯಲಾಗುತ್ತದೆ. ಈ ಕಡಲತೀರವನ್ನು ತಲುಪಲು ಬೆಟ್ಟದ ಮೂಲಕ ಹಾದು ಹೋಗಬೇಕು. ಗೋಕರ್ಣದ ಪ್ಯಾರಡೈಸ್ ಬೀಚ್ ಕಲ್ಲಿನ ಬೀಚ್ ಆಗಿದೆ ಆದರೆ ಇದು ತುಂಬಾ ಸುಂದರವಾಗಿದೆ ಮತ್ತು ಏಕಾಂತ ಸ್ಥಳದಲ್ಲಿದೆ. ಸಮುದ್ರದ ಅಲೆಗಳು ಯಾವಾಗಲೂ ಇಲ್ಲಿ ಅಪ್ಪಳಿಸುವುದರಿಂದ ಈ ಕಲ್ಲಿನ ಬೀಚ್ ಈಜಲು ಸುರಕ್ಷಿತವಲ್ಲ.

ಗೋಕರ್ಣ ತಲುಪುವುದು ಹೇಗೆ?
• ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಗೋವಾದ ದಾಬೋಲಿಮ್. ಇಲ್ಲಿಂದ ಟ್ಯಾಕ್ಸಿ ಅಥವಾ ರೈಲಿನ ಮೂಲಕ ಹೋಗಬಹುದು.
• ರೈಲಿನ ಮೂಲಕ: ಹತ್ತಿರದ ರೈಲು ನಿಲ್ದಾಣ ಗೋಕರ್ಣದಲ್ಲಿದೆ. ಮುಖ್ಯ ನಗರದಿಂದ 8 ಕಿ.ಮೀ ದೂರದಲ್ಲಿದೆ.
• ರಸ್ತೆಯ ಮೂಲಕ: ಗೋಕರ್ಣವು ಭಾರತದ ಪ್ರಮುಖ ನಗರಗಳಿಗೆ ರಸ್ತೆಯ ಮೂಲಕ ಸಂಪರ್ಕ ಹೊಂದಿದೆ.
ಭೇಟಿ ನೀಡಲು ಉತ್ತಮ ಸಮಯ
ಗೋಕರ್ಣಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ನಿಂದ ಮಾರ್ಚ್ವರೆಗೆ. ಈ ಸಮಯದಲ್ಲಿ ತೇವಾಂಶವು ಕಡಿಮೆ ಇರುತ್ತದೆ. ನವೆಂಬರ್ನಿಂದ ಫೆಬ್ರವರಿಯಲ್ಲಿ ವಿಶೇಷವಾಗಿ ವಿದೇಶಿಗರಿಂದ ತುಂಬಿರುತ್ತದೆ. ಆಫ್ಸೀಸನ್, ಅಂದರೆ ಮಳೆಗಾಲ. ಈ ಅವಧಿಯಲ್ಲಿ ಕಡಲತೀರಗಳಿಗೆ ಹೋಗಲು ಸೂಕ್ತ ಸಮಯವಲ್ಲ. ಇನ್ನು ಪಟ್ಟಣದಲ್ಲಿರುವ ದೇವಾಲಯಗಳನ್ನು ಶಿವರಾತ್ರಿ ಮತ್ತು ಗಣೇಶ ಚತುರ್ಥಿಯ ಹಬ್ಬದಂದು ನೋಡಲು ಎರಡು ಕಣ್ಣು ಸಾಲದು.


Click it and Unblock the Notifications
















