ಜುನಾಮಹಲ್ ಸುಂದರವಾದ ಅರಮನೆಯಾಗಿದ್ದು 13 ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಈ ಕಟ್ಟಡವು ಏಳು ಮಹಡಿಯನ್ನು ಹೊಂದಿದೆ. ಈ ಕಟ್ಟಡದ ವಿನ್ಯಾಸ ಶೈಲಿಯು ಕೋಟೆಯನ್ನು ನೆನಪಿಸುತ್ತದೆ. ಈ ಕಟ್ಟಡದ ಗೋಡೆಗಳು ಗಾಜು ಮತ್ತು ಗ್ಲಾಸ್ ಕೆತ್ತನೆಗಳನ್ನು ಹೊಂದಿದೆ. ಪ್ರವಾಸಿಗರು ಈ ಅರಮನೆಯ ಒಳಗಿನ ಸುಂದರವಾದ ಕೆತ್ತನೆ ಮತ್ತು...
ಉದಯ ವಿಲಾಸ ಅರಮನೆಯು ರಾಜ ಎರಡನೇ ಮಹರವಾಲ್ ಉದಯ ಸಿಂಗ್ರ ಅರಮನೆಯಾಗಿತ್ತು. ಇದು ಅತ್ಯುತ್ತಮ ವಾಸ್ತುಶಿಲ್ಪ ಮತ್ತು ಕಲೆಗೆ ಸಾಕ್ಷಿಯಾಗಿದೆ. ಈ ಅರಮನೆಯು ರಜಪೂತ ವಾಸ್ತುಶಿಲ್ಪ ಶೈಲಿಗೆ ಉತ್ತಮ ಉದಾಹರಣೆ. ಸುಂದರವಾಗಿ ನಿರ್ಮಿಸಿದ ಬಾಲ್ಕನಿ, ಕಿಟಕಿಗಳು, ಕಮಾನುಗಳು, ಕಂಬಗಳು ಮತ್ತು ಪ್ಯಾನೆಲ್ಗಳು ಪ್ರವಾಸಿಗರನ್ನು...
ಎಕ್ ಥಂಬಿಯಾ ಮಹಲ್ ಅಥವಾ ಕೃಷ್ಣ ಪ್ರಕಾಶವು ಆಯತಾಕಾರದ ಕೊಳದ ಮಧ್ಯೆ ಇದೆ. ಈ ಸುಂದರ ಕೋರ್ಟ್ಯಾರ್ಡ್ನ್ನು ಬಿಳಿಯ ಮತ್ತು ಗುಲಾಬಿ ಬಣ್ಣದ ಕಲ್ಲಿನಿಂದ ಮಾಡಲಾಗಿದ್ದು ಅಂತ್ಯಂತ ನಯನ ಮನೋಹರವಾಗಿ ಕಾಣುತ್ತದೆ.
ಬಾದಲ್ ಮಹಲ್ ಸುಂದರವಾದ ವಾಸ್ತುಶಿಲ್ಪದಿಂದ ಹೆಸರಾಗಿದೆ. ಗೈಬ್ ಸಾಗರ ಕೆರೆಯ ದಡದಲ್ಲಿ ಈ ಮಹಲ್ ಇದೆ. ಈ ಅರಮನೆಯು ಮುಘಲ್ ಮತ್ತು ರಜಪೂತ ಶೈಲಿಯ ವಾಸ್ತುಶಿಲ್ಪ ಸಂಯೋಗವಾಗಿದೆ. ದಾವ್ರಾ ಕಲ್ಲುಗಳನ್ನು ಈ ಕಟ್ಟಡಕ್ಕೆ ಉಪಯೋಗಿಸಲಾಗಿದೆ. ಎರಡು ಹಂತದ ಈ ಕಟ್ಟಡವು ಮೂರು ಗೋಪುರವನ್ನು ಮತ್ತು ಒಂದು...
ಬಾಣೇಶ್ವರ ದೇವಸ್ಥಾನವು ಡೆಲ್ಟಾ ನದಿಯ ಸಮೀಪವಿದ್ದು, ಸೋಮ ಮತ್ತು ಮಾಹಿ ಸೇರುವ ಪ್ರದೇಶದಲ್ಲಿದೆ. ಈ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾದ್ದು ಮತ್ತು ಶಿವಲಿಂಗ ಇಲ್ಲಿದೆ. ಪ್ರತಿವರ್ಷ ಒಂದು ಸಾಂಪ್ರದಾಯಿಕ ಹಬ್ಬವು ಇಲ್ಲಿ ಮಾಘ ಶುಕ್ಲ ಏಕಾದಶಿಯಿಂದ ಮಾಘ ಶುಕ್ಲ ಪೂರ್ಣಿಮೆಯವರೆಗೆ ನಡೆಯುತ್ತದೆ. ಈ ಹಬ್ಬವು...
ಈ ರಾಜಮಾತಾ ದೇವೇಂದ್ರ ಕುಂವರ ಸರ್ಕಾರಿ ಮ್ಯೂಸಿಯಂ, ಡುಂಗರಪುರದ ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಈ ಮ್ಯೂಸಿಯಂ ಮೂರು ಗ್ಯಾಲರಿಯನ್ನು ಹೊಂದಿದ್ದು, ಲೋಹದ ಮೂರ್ತಿಗಳು, ವಿವಿಧ ದೇವತೆಗಳ ಮೂರ್ತಿತಗಳು, ಪೇಂಟಿಂಗ್ಗಳು, ಶಿಲಾಶಾಸನಗಳು ಮತ್ತು ನಾಣ್ಯಗಳ ಸಂಗ್ರಹವನ್ನು ಹೊಂದಿದೆ. ಮೊದಲ ಗ್ಯಾಲರಿಯಲ್ಲಿ ಗುಪ್ತರ ಕಾಲದ...
ವಿಜಯ ರಾಜರಾಜೇಶ್ವರ ದೇವಸ್ಥಾನವು ಗೈಬ್ ಸಾಗರ ಕೆರೆಯ ದಡದಲ್ಲಿದೆ. ಈ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾಗಿದೆ ಮತ್ತು ಇದರ ವಾಸ್ತುಶಿಲ್ಪ ಶೈಲಿಯು ಅತ್ಯಂತ ಜನಪ್ರಿಯವಾಗಿದೆ. ಮಹಾರಾವಲ್ ವಿಜಯ ಸಿಂಗ್ ಇದರ ನಿರ್ಮಾಣವನ್ನು ಆರಂಭಿಸಿದರು ಮತ್ತು ನಂತರದಲ್ಲಿ ಈ ದೇವಸ್ಥಾನವು 1923 ರಲ್ಲಿ...
ಗೈಬ್ ಸಾಗರ ಕೆರೆಯು ಮಹಾರಾಜ ಗೋಪಿನಾಥ (ಗೈಪ ರಾವಲ್ ಎಂದೂ ಹೆಸರು)ರಿಂದ 1428 ರಲ್ಲಿ ನಿರ್ಮಾಣಗೊಂಡ ಕೃತಕ ಕೆರೆ. ಈ ಕೆರೆಯು ಹಲವು ಐತಿಹ್ಯಗಳು ಮತ್ತು ಕಥೆಗಳನ್ನು ಹೊಂದಿದೆ. ಈ ಕೆರೆಯು ಅನೇಕ ಐತಿಹಾಸಿಕ ದಾಖಲೆಗಳಲ್ಲಿ ಮತ್ತು ಸಾಹಿತ್ಯಿಕ ಕೃತಿಗಳಲ್ಲಿ ನಮೂದಿಸಲ್ಪಟ್ಟಿದೆ. ಗೈಬ್ ಸಾಗರ ಕೆರೆಯು ಸ್ಥಳೀಯರಿಗೆ...
ಡಿಯೋ ಸೋಮನಾಥ ದೇವಸ್ಥಾನವು ಡಿಯೋ ಹಳ್ಳಿಯಲ್ಲಿದ್ದು, ಡುಂಗರಪುರದಿಂದ ಸುಮಾರು 24 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾಗಿದೆ ಮತ್ತು ಇದು ಸೋಮ ನದಿಯ ದಡದಲ್ಲಿದೆ. ಸ್ಥಳೀಯರ ಪ್ರಕಾರ ಈ ಪುರಾತನ ದೇವಸ್ಥಾನವು 12 ನೇ ಶತಮಾನದಲ್ಲಿ ವಿಕ್ರಮ ಸಂವತ್ರ ಆಡಳಿತದಲ್ಲಿ ನಿರ್ಮಾಣಗೊಂಡಿತು. ಈ...
ದೇವಸ್ಥಾನಗಳ ಹಳ್ಳಿ ಬರೋಡಾವು ಡುಂಗರಪುರದಿಂದ 41 ಕಿ.ಮೀ ದೂರದಲ್ಲಿದೆ. ಈ ಹಿಂದೆ, ಈ ಪ್ರದೇಶವು ವಾಗಡ್ನ ರಾಜಧಾನಿಯಾಗಿತ್ತು. ಶೈವ ಮತ್ತು ಜೈನ ಪಂಥವು ಈ ಪ್ರದೇಶದಲ್ಲಿ ಪ್ರಮುಖವಾದ ಪಂಥ. ಪ್ರವಾಸಿಗರು ಪುರಾತನವಾದ ಶಿವ ದೇವಸ್ಥಾನವನ್ನು ಇಲ್ಲಿ ನೋಡಬಹುದಾಗಿದ್ದು, ಪ್ರಮುಖ ಕೆರೆಯ ಸಮೀಪವಿದೆ. ಈ ದೇವಸ್ಥಾನವು ಬಿಳಿ...
ನಾಗಫಂಜಿಯು ಡುಂಗರಪುರದ ಪ್ರಮುಖ ಜನಪ್ರಿಯ ಪ್ರವಾಸಿ ತಾಣ ಮತ್ತು ಇದು ಜೈನ ದೇವಸ್ಥಾನವಾಗಿ ಅತ್ಯಂತ ಜನಪ್ರಿಯ. ಇಲ್ಲಿ ಪ್ರವಾಸಿಗರು ದೇವಿ ಪದ್ಮಾವತಿ, ನಾಗಫಂಜಿ ಪಾರ್ಶ್ವನಾಥ ಮತ್ತು ಧರಣೇಂದ್ರ ಮೂರ್ತಿಗಳನ್ನು ನೋಡಬಹುದು. ಈ ದೇವಸ್ಥಾನದ ಸಮೀಪವೇ ಇರುವ ನಾಗಫಂಜಿ ಶಿವಾಲಯ ದೇವಸ್ಥಾನವನ್ನೂ ಕೂಡಾ ನೋಡಬಹುದು.
ಸುರಪುರ ದೇವಸ್ಥಾನವು ಪುರಾತನ ದೇವಸ್ಥಾನವಾಗಿದ್ದು ಗಂಗಾ ನದಿಯ ದಡದಲ್ಲಿದೆ. ಡುಂಗರಪುರದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಒಂದು ದೊಡ್ಡ ಘಾಟ್ ಈ ದೇವಸ್ಥಾನದ ಸಮೀಪವೇ ಇದೆ. ಈ ದೇವಸ್ಥಾನಕ್ಕೆ ಭೇಟಿ ಮಾಡುವ ವೇಳೆ ಪ್ರವಾಸಿಗರು, ಭೂಲ್ಬುಲಯ್ಯಾ, ಮಾಧವರಾಯ್ ದೇವಸ್ಥಾನ ಹಾಗೂ ಇತರ ಶಿಲಾಶಾಸನಗಳು ಮತ್ತು...
ಭುವನೇಶ್ವರದಲ್ಲಿನ ಶಿವ ದೇವಸ್ಥಾನವು ಡುಂಗರಪುರದಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಗುಡ್ಡದ ಮೇಲಿದೆ. ಇಲ್ಲಿ ಪ್ರವಾಸಿಗರು, ನೈಸರ್ಗಿಕವಾಗಿ ಉದ್ಭವಗೊಂಡ ಶಿವಲಿಂಗವನ್ನು ನೋಡಬಹುದು ಮತ್ತು ಪುರಾತನವಾದ ಮಠವನ್ನೂ ಕೂಡಾ ನೋಡಬಹುದು. ರಂಗಪಂಚಮಿಯ ದಿನದಂದು ಇಲ್ಲಿ ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ. ಗೇರ್ ನೃತ್ಯವು...
ಗಾಲಿಯಾಕೋಟ್ ಹಳ್ಳಿಯು ಮಾಹಿ ನದಿಯ ದಡದಲ್ಲಿದೆ. ಡುಂಗರಪುರದಿಂದ ಸುಮಾರು 58 ಕಿ.ಮೀ ದೂರದಲ್ಲಿದೆ. ಐತಿಹ್ಯಗಳ ಪ್ರಕಾರ, ಈ ಪ್ರಾಂತವನ್ನು ಆಳುತ್ತಿದ್ದ ಭಿಲ್ಲ ದಳವಾಯಿಯಿಂದಾಗಿ ಈ ಹಳ್ಳಿಗೆ ಹೆಸರು ಬಂದಿದೆ. ಈ ಹಳ್ಳಿಯು ಪಾರ್ಮರ್ಸ್ ಮತ್ತು ಡುಂಗರಪುರ ರಾಜ್ಯದ ರಾಜಧಾನಿಯಾಗಿತ್ತು. ಸೈಯದ್...
ಶ್ರೀನಾಥ್ಜಿ ದೇವಸ್ಥಾನವನ್ನು ಮಾಹಾರಾವಲ್ ಪುಂಜ್ರಾಜ್ರಿಂದ 1623 ರಲ್ಲಿ ನಿರ್ಮಾಣ ಮಾಡಲ್ಪಟ್ಟಿತು. ಶ್ರೀ ರಾಧಿಕಾಜಿ ಮತ್ತು ಗೋವರ್ಧನ ನಾಥಜಿ ಮೂರ್ತಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಪ್ರವಾಸಿಗರು ಇಲ್ಲಿನ ಪ್ರಮುಖ ದೇವಸ್ಥಾನದಲ್ಲಿರುವ ಗ್ಯಾಲರಿಯನ್ನು ಕೂಡಾ ನೋಡಬಹುದು. ಮುಖ್ಯ ದೇವಸ್ಥಾನದ...