ಗೈಬ್ ಸಾಗರ ಕೆರೆಯು ಮಹಾರಾಜ ಗೋಪಿನಾಥ (ಗೈಪ ರಾವಲ್ ಎಂದೂ ಹೆಸರು)ರಿಂದ 1428 ರಲ್ಲಿ ನಿರ್ಮಾಣಗೊಂಡ ಕೃತಕ ಕೆರೆ. ಈ ಕೆರೆಯು ಹಲವು ಐತಿಹ್ಯಗಳು ಮತ್ತು ಕಥೆಗಳನ್ನು ಹೊಂದಿದೆ. ಈ ಕೆರೆಯು ಅನೇಕ ಐತಿಹಾಸಿಕ ದಾಖಲೆಗಳಲ್ಲಿ ಮತ್ತು ಸಾಹಿತ್ಯಿಕ ಕೃತಿಗಳಲ್ಲಿ ನಮೂದಿಸಲ್ಪಟ್ಟಿದೆ. ಗೈಬ್ ಸಾಗರ ಕೆರೆಯು ಸ್ಥಳೀಯರಿಗೆ ಪವಿತ್ರವಾದದ್ದು ಮತ್ತು ಇಲ್ಲಿ ಅನೇಕ ಸಂಪ್ರದಾಯಗಳನ್ನೂ ನಡೆಸುತ್ತಾರೆ. ಅನೇಕ ಆಡಳಿತಗಾರರ ಕಾಲದಲ್ಲಿ ಹಲವು ಪುನರುತ್ಥಾನ ಕಾರ್ಯಗಳನ್ನು ಈ ಕೆರೆ ಕಂಡಿದೆ. ಕೆರೆಯ ದಡದಲ್ಲಿ ಹಲವು ಅರಮನೆಗಳು ಮತ್ತು ದೇವಾಲಯಗಳಿವೆ.ಈ ದೇವಸ್ಥಾನವು ದೇವ ಶ್ರೀನಾಥಜಿಯವರಿಗೆ ಅರ್ಪಿಸಲ್ಪಟ್ಟಿದೆ. ಮುಖ್ಯ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಅನೇಕ ಸಣ್ಣ ಸಣ್ಣ ದೇವಸ್ಥಾನಗಳಿವೆ. ಈ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. ವಿಜಯ ರಾಜರಾಜೇಶ್ವರ ದೇವಸ್ಥಾನವು ಡುಂಗರಪುರದ ಸುಂದರ ವಾಶ್ತುಶಿಲ್ಪಕ್ಕೆ ಹೆಸರಾಗಿದೆ.