ದೇವಸ್ಥಾನಗಳ ಹಳ್ಳಿ ಬರೋಡಾವು ಡುಂಗರಪುರದಿಂದ 41 ಕಿ.ಮೀ ದೂರದಲ್ಲಿದೆ. ಈ ಹಿಂದೆ, ಈ ಪ್ರದೇಶವು ವಾಗಡ್ನ ರಾಜಧಾನಿಯಾಗಿತ್ತು. ಶೈವ ಮತ್ತು ಜೈನ ಪಂಥವು ಈ ಪ್ರದೇಶದಲ್ಲಿ ಪ್ರಮುಖವಾದ ಪಂಥ. ಪ್ರವಾಸಿಗರು ಪುರಾತನವಾದ ಶಿವ ದೇವಸ್ಥಾನವನ್ನು ಇಲ್ಲಿ ನೋಡಬಹುದಾಗಿದ್ದು, ಪ್ರಮುಖ ಕೆರೆಯ ಸಮೀಪವಿದೆ. ಈ ದೇವಸ್ಥಾನವು ಬಿಳಿ ಕಲ್ಲಿನಿಂದ ಮಾಡಲ್ಪಟ್ಟಿದ್ದು, ವರ್ಷಂಪ್ರತಿ ತುಂಬಾ ಜನ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರು ಇಲ್ಲಿ ’ಕುಂಡ್ಲಿ’ಯನ್ನು ನೋಡಬಹುದಾಗಿದ್ದು, ಇದು 1394 ರಲ್ಲಿನ ಸಂವತ್ ಕಾಲದ್ದು.ಇಲ್ಲೊಂದು ಪುರಾತನ ಜೈನ ದೇವಸ್ಥಾನವಿದ್ದು, ಇದು ಜೈನ ತೀರ್ಥಂಕರ ಪಾರ್ಶ್ವನಾಥನಿಗೆ ಅರ್ಪಿತವಾದದ್ದು. ಈ ದೇವಸ್ಥಾನವು ಭಟ್ಟಾರಕ ದೇವೇಂದ್ರ ಸೂರಿಯಿಂದ 1904 ರಲ್ಲಿ ಗುರುತಿಸಲ್ಪಟ್ಟಿತು.