ವೈಕುಂಠ ಏಕಾದಶಿಯು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ವಿಷ್ಣುವಿನ ದೇವಾಲಯಗಳಲ್ಲಿ ಆಚರಿಸಲಾಗುವ ಒಂದು ಹಬ್ಬ ಎಂದೇ ಹೇಳಬಹುದು. ಸಾಮಾನ್ಯವಾಗಿ ಈ ವೈಕುಂಠ ಏಕಾದಶಿ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಬರುತ್ತದೆ. ಈ ಬಾರಿ ಡಿಸೆಂಬರ್ 18ಕ್ಕೆ ಬಂದಿದೆ. ಎಲ್ಲಾ ವಿಷ್ಣುವಿನ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲೂ ವೈಕುಂಠ ಏಕಾದಶಿಯನ್ನು ಅದ್ದೂರಿಯಾಗಿಯೇ ಆಚರಿಸಲಾಗುತ್ತಿದೆ.
ಎಲ್ಲಿದೆ ಇಸ್ಕಾನ್ ಮಂದಿರ
ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ ಉತ್ತರ ಬೆಂಗಳೂರಿನಲ್ಲಿದೆ. ವಿವಿಧ ಸಾರಿಗೆ ಮಾರ್ಗಗಳ ಮೂಲಕ ನಗರದ ಉಳಿದ ಭಾಗಗಳಿಗೆ ಇದು ಉತ್ತಮ ಸಂಪರ್ಕವನ್ನು ಹೊಂದಿದೆ.
ಮುನ್ನಾರ್ನಲ್ಲಿ ಇದನ್ನೆಲ್ಲಾ ಮಿಸ್ ಮಾಡಲೇ ಬಾರದು
ವೆಂಕಟೇಶ್ವರ ಸುಪ್ರಭಾತ
ಬೆಳಗ್ಗಿನ ಜಾವ ಮೂರು ಗಂಟೆಗೆ ಭಕ್ತರು ವೆಂಕಟೇಶ್ವರ ಸುಪ್ರಭಾತವನ್ನು ಪಠಿಸುತ್ತಾರೆ. ಈ ಮೂಲಕ ವೆಂಕಟೇಶ್ವರನ್ನು ಎಬ್ಬಿಸುತ್ತಾರೆ. ಆ ನಂತರ ದೂಪ, ದೀಪ, ವಸ್ತ್ರ, ಪುಷ್ಪ, ವ್ಯಂಜನದ ಮೂಲಕ ದೇವರ ಪೂಜೆ ಮಾಡುತ್ತಾರೆ.
ವೈಕುಂಠ ದ್ವಾರ ಸೇವೆ
ವೈಕುಂಠ ದ್ವಾರದಲ್ಲಿ ಲಕ್ಷ್ಮಿ ನಾರಾಯಣ ಅಲಂಕಾರದಲ್ಲಿ ಶ್ರೀ ರಾಧಾ ಕೃಷ್ಣಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ಸೇವೆಯ ಶುಲ್ಕವು 500 ರೂ.
ಭೂತೋಚ್ಛಾಟನೆಗೆ ಹೆಸರುವಾಸಿಯಾಗಿರುವ ಕೇರಳದ ಚೊಟ್ಟನಿಕೆರ ದೇವಸ್ಥಾನದ ಬಗ್ಗೆ ತಿಳಿಯಿರಿ
ತುಳಸಿ ಹಾರ ಸೇವೆ
PC: Iskconradhakrishnatemple
ವೈಕುಂಠ ಏಕಾದಶಿ ಮಂಗಳಕರ ದಿನದಂದು ಶ್ರೀ ಶ್ರೀನಿವಾಸ ಗೋವಿಂದರಿಗೆ ತುಳಸಿ ಹೂವುಗಳನ್ನು ಅರ್ಪಿಸಲಾಗುತ್ತದೆ. ಈ ಸೇವೆಯ ಶುಲ್ಕವು 1000 ರೂ.
ವಿಶೇಷ ನೈವೇದ್ಯ ಸೇವೆ
PC: Iskconradhakrishnatemple
ಶ್ರೀ ಶ್ರೀನಿವಾಸ ಗೋವಿಂದ ಅವರಿಗೆ ವಿಶೇಷವಾಗಿ ತಯಾರಾದ ರುಚಿಕರವಾದ ಆಹಾರ ಪದಾರ್ಥಗಳ ನೈವೇದ್ಯವನ್ನು ಅಪರ್ಪಿಸಲಾಗುತ್ತದೆ. ಈ ಸೇವೆಯ ಶುಲ್ಕವು 2500 ರೂ.
ಚೆನ್ನೈ ಸುತ್ತಮುತ್ತ ನೋಡಲೇಬೇಕಾದ 10 ಪ್ರಮುಖ ತಾಣಗಳು
ವಿಶೇಷ ಅಲಂಕಾರ ಸೇವೆ
ಹೊಳೆಯುವ ಆಭರಣಗಳು, ಸೌಂದರ್ಯ ಉಡುಗೆ ಮತ್ತು ವರ್ಣಮಯ ಹೂವಿನ ಹೂಮಾಲೆಗಳೊಂದಿಗೆ ಶ್ರೀ ಶ್ರೀನಿವಾಸ ಗೋವಿಂದನ ಅಲಂಕಾರದ ಸೇವೆ ಮಾಡಲಾಗುತ್ತದೆ. ಈ ಸೇವೆಯ ಶುಲ್ಕವು 5000 ರೂ.
ಪ್ರಸಾದ ಸೇವೆ
ವೈಕುಂಠ ಏಕಾದಶಿ ಮೇಲೆ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಉಚಿತ ಧಾನ್ಯದ ಪ್ರಸಾದವನ್ನು ವಿತರಿಸಲಾಗುತ್ತದೆ. ಈ ಸೇವೆಯ ಸೇವಾಶುಲ್ಕ ಈ ರೀತಿ ಇದೆ. 1008, 2508, 5008, 10008ರೂ.
ಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳು
ವೈಕುಂಠ ದ್ವಾರ
ದೇವಾಲಯದ ಉತ್ತರ ಭಾಗದಲ್ಲಿ ವೈಕುಂಠ ದ್ವಾರ ಎನ್ನುವ ವಿಶೇಷ ಪ್ರವೇಶದ್ವಾರವನ್ನು ವರ್ಷದಲ್ಲಿ ಒಮ್ಮೆ ಈ ನಿರ್ದಿಷ್ಟ ದಿನದಂದು ತೆರೆಯಲ್ಪಡುತ್ತದೆ. ಈ ದಿನದಂದು ವೈಕುಂಠ ದ್ವಾರಕ್ಕೆ ಪ್ರವೇಶಿಸುವ ಯಾರಾದರೂ ಆಧ್ಯಾತ್ಮಿಕ ವಾಸಸ್ಥಾನವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ಭಕ್ತರಿಗೆ ದರ್ಶನ
ಬೆಳಗ್ಗೆ 8ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಭಕ್ತರಿಗೆ ದೇವರ ದರ್ಶನಕ್ಕಾಗಿ ದೇವಸ್ಥಾನ ತೆರೆದಿರುತ್ತದೆ. ಈ ದಿನದಂದು ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವೆಂಕಟೇಶ್ವರನ ದರ್ಶನ ಪಡೆಯುತ್ತಾರೆ. ಜೊತೆಗೆ ವೈಕುಂಠ ದ್ವಾರದ ಮೂಲಕ ಸಾಗುತ್ತಾರೆ.
13 ದ್ವೀಪಗಳನ್ನು ಹೊಂದಿರುವ ಈ ಸುಂದರ ಸರೋವರವನ್ನು ನೋಡಿದ್ದೀರಾ?
ತಲುಪುವುದು ಹೇಗೆ?
ವಿಮಾನ ನಿಲ್ದಾಣ: ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಇದು 33 ಕಿಮೀ ದೂರದಲ್ಲಿದೆ.
ರೈಲು ನಿಲ್ದಾಣಗಳು: ಬೆಂಗಳೂರು ನಗರ ರೈಲು ನಿಲ್ದಾಣ ಸುಮಾರು 6.9 ಕಿ.ಮೀ ದೂರದಲ್ಲಿದೆ. ಹಾಗು ಯಶವಂತಪುರ ರೈಲು ನಿಲ್ದಾಣ 2.2 ಕಿ.ಮೀ ದೂರದಲ್ಲಿದೆ.
ಮೆಟ್ರೋ: ನೀವು ಮೆಟ್ರೋ ಮೂಲಕ ಚಲಿಸುವುದಾದರೆ ಮಹಾಲಕ್ಷ್ಮೀ ಲೇ ಔಟ್ ಇಲ್ಲವಾದಲ್ಲಿ ಸ್ಯಾಂಡಲ್ವುಡ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದು.