ಬೆಂಗಳೂರಿನಲ್ಲಿರುವ ಈ ವಿಶೇಷ ಶಿವ ದೇವಾಲಯನ್ನು ಬೆಂಗಳೂರಿಗರು ಹೆಚ್ಚಿನವರು ನೋಡಿರಬಹುದು. ಈ ಶಿವಹಾಮ್ ಶಿವ ದೇವಾಲಯವು ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿದೆ. ಶಿವನಿಗೆ ಮೀಸಲಾಗಿರುವ ಇದೊಂದು ಜನಪ್ರಿಯ ಆಧ್ಯಾತ್ಮಿಕ ತಾಣವಾಗಿದೆ. 1995ರಲ್ಲಿ ನಿರ್ಮಿಸಲಾದ ದೇವಸ್ಥಾನ ಇದಾಗಿದೆ.
ಶಿವನ ದೇವಾಲಯ
ಈ ದೇವಸ್ಥಾನವು ದೇಶದಾದ್ಯಂತ ಅತ್ಯಂತ ಸುಂದರವಾದ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಶಿವ ಮತ್ತು ಗಣಪತಿಯ ಸುಂದರವಾದ ಮೂರ್ತಿಗಳು ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರಿಗೆ ಪ್ರಮುಖ ಆಕರ್ಷಣೆಯಾಗಿದೆ.
ಶಿವನ ಆರಾಧನೆಯಲ್ಲಿ ಪಾಲ್ಗೊಳ್ಳಲು ಸೂಕ್ತವಾದ ಈ ದೇವಸ್ಥಾನವು ಉತ್ತಮ ನಿರ್ವಹಣೆ ಮತ್ತು ನಿಯಮಿತ ಉತ್ಸವಗಳಿಗೆ ಹೆಸರುವಾಸಿಯಾಗಿದೆ. ದಕ್ಷಿಣ ಭಾರತದ ಪ್ರಮುಖ ದೇವರುಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ.
ಆಚರಣೆಗಳು
PC: Facebook
ಶಿವನ 65 ಅಡಿ ಎತ್ತರದ ವಿಗ್ರಹವನ್ನು ಬಿಳಿ ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ನೈಸರ್ಗಿಕ ಆವಾಸಸ್ಥಾನವನ್ನು ಸಂಕೇತಿಸುವ ನೀರಿನ ಕೃತಕ ಕೊಳದಲ್ಲಿ ಶಿವನನ್ನು ಇರಿಸಲಾಗಿದೆ. ಈ ಸ್ಥಳವು ಶಿವನ ಭಕ್ತರಿಗೆ ಒಂದು ಸುಂದರ ಯಾತ್ರಾ ಕೇಂದ್ರವಾಗಿದೆ. ದೇವಸ್ಥಾನದ ಆವರಣದಲ್ಲಿ ಗಣಪತಿಯನ್ನೂ ಪೂಜಿಸಲಾಗುತ್ತದೆ. ನಿಯಮಿತವಾಗಿ ಆರತಿ ಮತ್ತು ಮಂತ್ರಗಳ ಪಠಣವನ್ನು ಪುರೋಹಿತರು ಮಾಡುತ್ತಾರೆ.
ವಿವಿಧ ಆಚರಣೆಗಳು
PC: Facebook
ದೇವಾಲಯದಲ್ಲಿ ವಿವಿಧ ಚಟುವಟಿಕೆಗಳು ಮತ್ತು ಆಚರಣೆಗಳು ನಡೆಯುತ್ತವೆ. ವಿಶೇಷ ಭಜನೆ, ಆರತಿ, ಹಾಲು ಮತ್ತು ಹೂವುಗಳೊಂದಿಗೆ ಶಿವಲಿಂಗಕ್ಕೆ ಅಭಿಷೇಕ ಮತ್ತು ಹವನಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ. ಈ ದೇವಾಲಯಕ್ಕೆ ಸೋಮವಾರ ಹೋಗಿ ಆರತಿಯಲ್ಲಿ ಪಾಲ್ಗೊಳ್ಳಬೇಕು. ಶಿವನಿಗೆ ಸಮರ್ಪಿತವಾದ ದಿನವೆಂದೇ ಹೇಳಲಾಗುವ ಸೋಮವಾರದಂದು ಭಗವಾನ್ ಶಿವನನ್ನು ಆರಾಧಿಸಲು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.
ಮಹಾ ಶಿವರಾತ್ರಿ ಆಚರಣೆ
PC: Facebook
ಮಹಾ ಶಿವರಾತ್ರಿ ಸಂದರ್ಭದಲ್ಲಿ ಈ ದೇವಾಲಯದಲ್ಲಿ ದೊಡ್ಡ ಆಚರಣೆ ನಡೆಯುತ್ತದೆ. ಪ್ರಾರ್ಥನೆ, ಆರಾಧನೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಅನುಯಾಯಿಗಳು ದೀಪವನ್ನು ಹಚ್ಚುವುದು ಅಥವಾ ದಾರವನ್ನು ಕಟ್ಟುವ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸಲು ದೇವರನ್ನು ಪ್ರಾರ್ಥಿಸುವಂತಹ ಹಲವಾರು ಇತರ ಆಚರಣೆಗಳನ್ನು ಭಕ್ತರು ಮಾಡುತ್ತಾರೆ.
500,000 ಕ್ಕೂ ಹೆಚ್ಚು ಭಕ್ತರು ಮತ್ತು ಸಂದರ್ಶಕರು ಪ್ರತಿವರ್ಷ ಈ ದೇವಸ್ಥಾನಕ್ಕೆ ಬರುತ್ತಾರೆಂದು ಅಂದಾಜಿಸಲಾಗಿದೆ. ಮಹಾ ಶಿವರಾತ್ರಿ ಸಂದರ್ಭದಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಪವಿತ್ರ ಗಂಗೆ
PC: Abhi301292
ಭಗವಾನ್ ಶಿವನ ಮೂರ್ತಿಯ ತಲೆಯ ಮೇಲೆ ಪವಿತ್ರ ಗಂಗೆಯು ಹರಿಯುತ್ತಿರುವುದನ್ನು ನೀವಿಲ್ಲಿ ಕಾಣಬಹುದು. ಇಲ್ಲಿ ಶಿವನನ್ನು ಒಬ್ಬ ಯೋಗಿಯಂತೆ ಚಿತ್ರಿಸಲಾಗಿದೆ. ಅವನ ಡಮರುಗ ಮತ್ತು ತ್ರಿಶೂಲ, ಪರ್ವತಗಳಿಂದ ಸುತ್ತುವರೆದಿದೆ . ಮಾನಸ ಸರೋವರ ಕೊಳದೊಂದಿಗೆ ಧ್ಯಾನಸ್ಥ ಭಂಗಿನಲ್ಲಿ ಇದ್ದಾನೆ. ಸರ್ಪಗಳ ರಾಜನು ರುದ್ರಕ್ಷಾ ಹಾರವನ್ನು ತನ್ನ ಕುತ್ತಿಗೆಯಲ್ಲಿ ಅಲಂಕರಿಸಿದ್ದಾನೆ.
ವಿಘ್ನಹರಣ ಗಣಪತಿ
PC: Facebook
ಶಿವನ ಮೂರ್ತಿಯನ್ನು ಹೊರತುಪಡಿಸಿ, ದೇವಸ್ಥಾನದಲ್ಲಿ 32 ಅಡಿ ಎತ್ತರದ ಗಣೇಶನ ಪ್ರತಿಮೆ ಕೂಡ ಇದೆ. ಗಣೇಶನನ್ನು ಹಿಂದೂ ಧರ್ಮದಲ್ಲಿ "ವಿಘ್ನಹರಣ ಗಣಪತಿ" ಎಂದು ಉಲ್ಲೇಖಿಸಲಾಗಿದೆ. ದೇವಸ್ಥಾನದಲ್ಲಿ, ಭಕ್ತರು ಗಣೇಶನ ಮುಂದೆ ಕೇಸರಿ-ಬಣ್ಣದ ಪವಿತ್ರ ದಾರವನ್ನು ಕಟ್ಟಬಹುದು, ಈ ಮೂಲಕ ತಮ್ಮ ಎಲ್ಲ ಸಮಸ್ಯೆಗಳನ್ನು ಗಣೇಶ ಪರಿಹರಿಸುತ್ತಾನೆ ಎಂಬ ನಂಬಿಕೆ ಜನರದ್ದು.
ತಲುಪುವುದು ಹೇಗೆ?
PC: Facebook
ಕೆಂಪೋರ್ಟ್ ಶಿವ ದೇವಸ್ಥಾನಕ್ಕೆ ವಿಮಾನ ನಿಲ್ದಾಣಗಳು ಅಥವಾ ರೈಲು ಮಾರ್ಗಗಳು ಅಥವಾ ರಸ್ತೆ ಮಾರ್ಗಗಳ ಮೂಲಕ ಬೆಂಗಳೂರಿಗೆ ತಲುಪಬಹುದು. ಈ ದೇವಸ್ಥಾನವು ವಿಮಾನ ನಿಲ್ದಾಣದಲ್ಲಿದೆ. ಬೆಂಗಳೂರು ರೈಲ್ವೇ ನಿಲ್ದಾಣವು 12 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಸ್ಥಳೀಯ ಸಾರ್ವಜನಿಕ ಸಾರಿಗೆ ಅಥವಾ ಕ್ಯಾಬ್ ಅನ್ನು ತಲುಪಬಹುದು. ಭಾರತದ ಹಲವಾರು ನಗರಗಳಿಂದ ಅನುಕೂಲಕರವಾದ ಪ್ರಯಾಣವನ್ನು ಒದಗಿಸುವ ಹಲವಾರು ಬಸ್ಸುಗಳು ಇರುವುದರಿಂದ ಬೆಂಗಳೂರು ನಗರಕ್ಕೆ ಬಸ್ಸುಗಳನ್ನು ಕೂಡಾ ತೆಗೆದುಕೊಳ್ಳಬಹುದು