ಖಗೋಳ ಶಾಸ್ತ್ರದಲ್ಲಿ ಸೂರ್ಯನ ಸುತ್ತ 8 ಗೋಳಗಳು ಇರುತ್ತವೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾನವ ಜೀವನದ ಮೇಲೆ ನವಗ್ರಹಗಳು ಪ್ರಭಾವವನ್ನು ಬೀಡುತ್ತದೆ. ಖಗೋಳದಲ್ಲಿರುವ ಗ್ರಹಗಳಿಗೂ, ನವಗ್ರಹಗಳಿಗೆ ಕೆಲವು ವ್ಯತ್ಯಾಸಗಳಿವೆ. ದಿವ್ಯವಾದ ನವಗ್ರಹಗಳಲ್ಲಿ ಶನಿಯು ಒಬ್ಬ. ಛಾಯಾದೇವಿ ಮತ್ತು ಸೂರ್ಯ ದೇವರ ಪುತ್ರನೇ ಶನಿಮಹಾ ದೇವ. ಮನುಷ್ಯನ ಜೀವಿತಾವಧಿಯಲ್ಲಿ ಮೂರು ಬಾರಿ ಪ್ರವೇಶ ಮಾಡುತ್ತಾನೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಪುಂಗುಶನಿ. ಮಂಕುಶನಿ ಮತ್ತು ಮರಣಶನಿ ಎಂಬ ರೂಪದಲ್ಲಿ ಶನೀಶ್ವರನು ಪ್ರವೇಶ ಮಾಡುತ್ತಾನೆ. ಪುಂಗುಶನಿ ಒಳ್ಳೆಯದನ್ನು ಹಾಗು ಮಂಕುಶನಿ ಹಾಗು ಮರಣಶನಿ ಕೆಟ್ಟದನ್ನು ಮಾಡುತ್ತಾನಂತೆ. ಇವೆಲ್ಲಾ ಮನುಸ್ಯನ ಜನ್ಮಕುಂಡಲಿ ಮತ್ತು ಹಿಂದಿನ ಜನ್ಮದ ಪಾಪದ ಫಲಕ್ಕೆ ಅನುಗುಣವಾಗಿ ಶನಿ ಒಳ್ಳೆಯದು ಅಥವಾ ಕೆಟ್ಟದನ್ನು ಮಾಡುತ್ತಾನೆ. ಶನಿಯು ಮಾನವನ ಜೀವನದಲ್ಲಿ ಪ್ರವೇಶಿಸಿದಾಗ 7 ವರೆ ವರ್ಷಗಳ ಕಾಲ ಇರುತ್ತಾನೆ ಎಂದು ನಂಬಲಾಗಿದೆ. ಅದೇ ಸಾಡೆಸಾತಿ.... ಹಾಗಾದರೆ ಆ ಸಾಡೆಸಾತಿಯಲ್ಲಿ ಆಗುವ ನಷ್ಟ, ದುಷ್ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಲೇಬೇಕು. ಆ ಮಹಿಮಾನ್ವಿತವಾದ ದೇವಾಲಯ ಎಲ್ಲಿದೆ? ಆ ದೇವಾಲಯಕ್ಕೆ ತೆರಳುವ ಬಗೆ ಹೇಗೆ ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಶ್ರೀ ಆದಿಕೇಶ್ವರ ಪೆರುಮಾಳ್ ದೇವಾಲಯ, ಪೆರುಂಪೂದೂರ್
ಈ ದೇವಾಲಯವು ಸುಮಾರು 500 ರಿಂದ 1000 ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲ್ಪಟ್ಟಿದೆ ಎಂದು ಭಾವಿಸಲಾಗಿದೆ. ಇದು ತಮಿಳುನಾಡಿನ ತಿರುಪ್ಪರಂಭೂರಿನ ಪಕ್ಕದಲ್ಲಿದೆ. ಈ ದೇವಾಲಯಕ್ಕೆ ಅನೇಕ ಭಕ್ತರು ಭೇಟಿ ನೀಡುತ್ತಿರುತ್ತಾರೆ. ವಿಶೇಷವೆನೆಂದರೆ ಮೈಸೂರಿನ ಮಹಾರಾಜರು ಈ ದೇವಾಲಯಕ್ಕೆ ಚಿನ್ನದ ಮಂಟಪವನ್ನು ನಿರ್ಮಾಣ ಮಾಡಿಸಿಕೊಟ್ಟಿದ್ದಾರಂತೆ.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಹೇಗೆ ಸಾಗಬೇಕು?
ಈ ದೇವಾಲಯವು ಪೆರುಂಗಾಳತ್ತೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ತಂಬರಂಪುಂಚೂರಿನ ಮೂಲಕವೂ ಕೂಡ ತಲಪಬಹುದು. ಈ ದೇವಾಲಯಕ್ಕೆ ಮಣಿಮಾಂಗಲಂ ಮೂಲಕ ಸುಮಾರು 45 ನಿಮಿಷಗಳ ಪ್ರಯಾಣದ ಮೂಲಕವು ಸೇರಿಕೊಳ್ಳಬಹುದು.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಅಪಾಟ್ಸಾಯಯೇಶ್ವರರ್ ದೇವಾಲಯ, ಆಲಂಗುಡಿ
ಇದು ಭಾರತದ ತಮಿಳೂನಾಡಿನ ತಿರುವರೂರು ಜಿಲ್ಲೆಯ ವಲಾಂಗೈಮಾನ್ ಎಂಬ ತಾಲೂಕಿನ ಆಲಂಗುಡಿ ಗ್ರಾಮದಲ್ಲಿ ಈ ದೇವಾಲಯವಿದೆ. ಈ ದೇವಾಲಯವು ಶಿವನಿಗೆ ಅರ್ಪಿತವಾದ ಒಂದು ಹಿಂದೂ ದೇವಾಲಯವಾಗಿದೆ. ಇಲ್ಲಿ ಶಿವನನನ್ನು ಅಪಥಸಹಿಶ್ವರರ್ ಎಂದು ಪೂಜಿಸಲಾಗುತ್ತದೆ. ದೇವಾಲಯವು ಸುಮಾರು 2 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. 16 ನೇ ಶತಮಾನದಲ್ಲಿ ಇದು ಚೋಳರಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಹೇಗೆ ತಲುಪಬೇಕು?
ಆಲಂಗುಡಿಗೆ ಕುಂಭಕೋಣಂನಿಂದ ಸುಮಾರು 18 ಕಿ.ಮೀ ದೂರದಲ್ಲಿದೆ. ತಮಿಳುನಾಡು ರಾಜ್ಯ ಹೆದ್ದಾರಿ 66 ರಿಂದ ಸುಮಾರು ಅರ್ಧ ಗಂಟೆಯಲ್ಲಿ ತಲುಪಬಹುದಾಗಿದೆ.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಶ್ರೀಪೆರುಮಾಳ್ ದೇವಾಲಯ
ಈ ಮಹಿಮಾನ್ವಿತವಾದ ದೇವಾಲಯವು ಕೊಯಂಬತ್ತೂರ್ ಜಿಲ್ಲೆಯಲ್ಲಿದೆ. ಈ ದೇವಾಲಯವು ಶನಿಗ್ರಹಕ್ಕೆ ಮೀಸಲಾಗಿರುವ ದೇವಾಲಯವೇ ಆಗಿದೆ. ತುಳಸಿ ಮಾಲೆಯನ್ನು ಹಾಕಿ ಇಲ್ಲಿನ ಶನಿ ಭಗವಾನನ್ನು ಆರಾಧಿಸಲಾಗುತ್ತದೆ. ಈ ದೇವಾಲಯದಲ್ಲಿ ನೂರಾರು ಭಕ್ತರು ದಿನನಿತ್ಯ ಸ್ವಾಮಿಯ ದರ್ಶನಕ್ಕೆ ಭೇಟಿ ನೀಡುತ್ತಿರುತ್ತಾರೆ. ವಿಶೇಷವೆನಪ್ಪ ಎಂದರೆ ಈ ದೇವಾಲಯಕ್ಕೆ ಬರುವ ಭಕ್ತರು ತುಳಸಿ ಮಾಲೆಯನ್ನು ಸ್ವಾಮಿಗೆ ಅರ್ಪಿಸಿ ಭಕ್ತಿ, ಶ್ರದ್ಧೆಯಿಂದ ಆರಾಧಿಸಿದರೆ ಜೀವನದಲ್ಲಿ ಒದಗುವ ಸಾಡೆಸಾತಿಯಿಂದ ಹೊರಬರಬಹುದು ಎಂದು ನಂಬಲಾಗಿದೆ. ಅಂದರೆ ಜೀವನದಲ್ಲಿ ಉತ್ತಮವಾದ ಅಭಿವೃದ್ಧಿಯನ್ನು ಶನಿ ದೇವನು ಕರುಣಿಸುತ್ತಾನೆ.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಹೇಗೆ ಸಾಗಬೇಕು?
ಕಾರೈಮಡುವಿನಿಂದ ಸಮೀಪದಲ್ಲಿರುವ ಕಂಡಿಯೂರ್ ಪೆರುಮಾಳ್ ದೇವಾಲಯಕ್ಕೆ ಕೊಯಂಬತ್ತೂರಿನಿಂದ ಸುಮಾರು 1 ಗಂಟೆಯ ಕಾಲ ಪ್ರಯಾಣಿಸಬೇಕಾಗುತ್ತದೆ.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಪುಂಗು ಶನೀಶ್ವರ ದೇವಾಲಯ
ತಿರುವರೂರು ಜಿಲ್ಲೆಯ ತಿರುಪ್ಚಿಕಡದಲ್ಲಿರುವ ಪಂಗುನಿ ಶನೀಶ್ವರ ದೇವಾಲಯವು ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಶನಿವಾರದಂದು ಅಪಾರ ಜನಸಾಗರ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯಕ್ಕೆ ತೆರಳಿ ಭಕ್ತಿಯಿಂದ ಶನಿದೇವನನ್ನು ಆರಾಧಿಸಿದರೆ ಜೀವನದಲ್ಲಿ ಸಂಭವಿಸುವ ಅನಾಹೂತ, ನಷ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಹೇಗೆ ಸಾಗಬೇಕು?
ಮನ್ನಾರಿಗೆ ಕೇವಲ 40 ನಿಮಿಷಗಳ ಕಾಲದಲ್ಲಿ ತಲುಪಬಹುದು. ಅಲ್ಲಿಂದ ಕತ್ತಲೈ ಎಂಬ ಗ್ರಾಮದಿಂದ ಕೇವಲ 20 ಕಿ.ಮೀ ದೂರದಲ್ಲಿದೆ.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಶ್ರೀ ಯೋಗ ನರಸಿಂಹಸ್ವಾಮಿ ದೇವಾಲಯ
ಈ ಯೋಗ ನರಸಿಂಹಸ್ವಾಮಿ ದೇವಾಲಯವು ತಿರುವಣ್ಣಾಮಲೈ ಜಿಲ್ಲೆಯಲ್ಲಿದೆ. ಇಲ್ಲಿ ಏಕಾದಶಿ ತಿಥಿಯಂದು ವಿಜೃಂಬಣೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ಮುಖ್ಯವಾಗಿ ಶಿವ, ನರಸಿಂಹ ಮೂರ್ತಿಗಳಿವೆ.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಈ ದೇವಾಲಯವು ಮೆಲ್ಮರ್ವಾತೂರಿಗೆ ಹೋಗುವ ದಾರಿಯಲ್ಲಿದ್ದು, ಕೇವಲ 1 ಗಂಟೆಯ ಕಾಲದಲ್ಲಿ ತೆರಳಬಹುದಾಗಿದೆ.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ನಾಗೇಶ್ವರರ್ ದೇವಾಲಯ
ಈ ನಾಗೇಶ್ವರರ್ ದೇವಾಲಯವು ನಾಮಕ್ಕಲ್ ಜಿಲ್ಲೆಯ ಪೆರಿಮಾಣಿಯಲ್ಲಿದೆ. ತಿರುವಾಡಿಯರ್ ಎಂಬ ಹಬ್ಬದ ದಿನದಂದು ವಿಜೃಂಬಣೆಯಾಗಿ ಹಬ್ಬವನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.
ಶನಿಯ ಸಡೆಸಾತಿ ಮರಣವನ್ನು ಸೂಚಿಸುತ್ತದೆಯೇ? ಹಾಗಾದರೆ ಇಲ್ಲಿಗೆ ತೆರಳಿ...
ಹೇಗೆ ತೆರಳಬೇಕು?
ನಾಮಕ್ಕಲಿನಿಂದ ಕೇವಲ 25 ಕಿ.ಮೀ ದೂರದಲ್ಲಿದೆ. ಈ ದೇವಾಲಯದ ಸಮೀಪದಲ್ಲಿ ಅನೇಕ ದೇವಾಲಯಗಳಿದ್ದು, ಅವುಗಳನ್ನು ಮಾರಿಯಮ್ಮನ್, ಸೆನಾಟ್ಟಾ, ರಾಮಸ್ವಾಮಿ ದೇವಾಲಯಗಳು ಇವೆ.