ಪರಮೇಶ್ವರನು ಭಕ್ತರಲ್ಲಿ ಆರಾಧನೆಗೆ ಒಳಪಡುವ ದೇವರಲ್ಲಿ ಪ್ರಪಥಮನು. ಸಾಧಾರಣ ಮಾನವರು ಕೂಡ ಹಾಲಿನ ಅಭೀಷಕಗಳು, ರಕ್ತ ತಿಲಕದಿಂದ ಪೂಜಿಸುವ ಮೂರ್ತಿ ಅವನು. ಪ್ರಸ್ತುತದ ಆಧುನಿಕ ಸಮಾಜದಲ್ಲಿಯೂ ವಿಗ್ರಹ ಆರಾಧನೆಯನ್ನು ಮಾಡುತ್ತಿರುವುದನ್ನು ಗಮನಿಸಿದರೂ ಕೂಡ ಆ ಮಹದೇವನಿಗೆ ಮಾತ್ರ ಸುಮಾರು 600 ವರ್ಷಗಳಿಂದ ವಿಗ್ರಹಾರಧನೆ ಇಲ್ಲದೇ ಪೂಜಿಸುತ್ತಿರುವ ಒಂದು ದಿವ್ಯವಾದ ಕ್ಷೇತ್ರವಿದೆ. ಆ ಮಹಿಮಾನ್ವಿತವಾದ ದೇವಾಲಯದಲ್ಲಿ ಮಹದೇವನು ಆದಿ ಭೀಕ್ಷುವಿನ ರೂಪದಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ.
ಸುಮಾರು 600 ವರ್ಷಗಳಷ್ಟು ಹಳೆಯದು ಎಂದರೆ ಅತ್ಯಂತ ಪುರಾತನವಾದ ದೇವಾಲಯವೆ ಅಲ್ಲವೇ? ಅಷ್ಟು ವರ್ಷಗಳಿಂದ ಆರಾಧನೆಗೆ ಒಳಪ್ಪಟ್ಟ ದೇವಾಲಯಕ್ಕೆ ಒಂದು ರೋಚಕವಾದ ಮಹತ್ವವಿರಬಹುದು ಅಲ್ಲವೇ? ಹಾಗಾದರೆ ಆ ಎಲ್ಲಾ ಸಂಪೂರ್ಣ ವಿವರವನ್ನು ಲೇಖನದ ಮೂಲಕ ಸಂಕ್ಷೀಪ್ತವಾದ ತಿಳಿದುಕೊಂಡು ಒಮ್ಮೆ ಭೇಟಿ ನೀಡಿ ಬನ್ನಿ.
1.ಮಹಾಭಾರತ
PC:YOUTUBE
ಈ ದೇವಾಲಯವು ಮಹಾಭಾರತ ಕಾಲದಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದ್ದ ಈ ಕ್ಷೇತ್ರಕ್ಕೆ "ದ್ರೋಣ ಕ್ಷೇತ್ರ" ವೆಂಬ ಹೆಸರಿನಿಂದ ಕರೆಯುತ್ತಾರೆ. ಇದಕ್ಕೆ ಒಂದು ಕಥನವು ಕೂಡ ಇದೆ. ಅದೆನೆಂದರೆ ದ್ರೋಣ ಚಾರ್ಯರು ತಪಸ್ಸು ಮಾಡುವ ಸಮಯದಲ್ಲಿ ತನ್ನ ಕುಮಾರ ಅಶ್ವಥಮಾನಿಗಾಗಿ ಅತ್ಯಂತ ಶ್ರದ್ಧೆ-ಭಕ್ತಿಯಿಂದ ಪೂಜೆಗಳನ್ನು ನಿರ್ವಹಿಸಿದನು. ತನ್ನ ಪತ್ನಿ ಕೃಪಿ ಸ್ತಾನ ಪಾನವನ್ನು ಮಾಡದೇ ಇದ್ದುದ್ದರಿಂದ ಅಶ್ವಥಾಮನಿಗೆ ಉತ್ತಮವಾದ ಆರೋಗ್ಯ ಹಾಗು ದೇಹವನ್ನು ನೀಡು ಎಂದು ದ್ರೋಣಚಾರ್ಯರು ಆ ಪರಮೇಶ್ವರನಲ್ಲಿ ಕುರಿತು ತಪಸ್ಸನ್ನು ಆಚರಿಸುತ್ತಾರೆ.
2.ಕ್ಷೀರ
PC:YOUTUBE
ಪರಮೇಶ್ವರನು ಗುಹೆಯ ಒಳಭಾಗದಲ್ಲಿ ಸ್ವಲ್ಪ-ಸ್ವಲ್ಪವೇ ಕ್ಷೀರ ಬರುವುದು ಪ್ರಾರಂಭವಾಯಿತು. ಸಾಕ್ಷಾತ್ ಆ ಪರಮೇಶ್ವರನು ನೀಡಿದ ಹಾಲು ಕುಡಿದ ಆಶ್ವಥಾಮನು ಯುದ್ಧದಲ್ಲಿ ಅತ್ಯಂತ ಶೌರ್ಯದಿಂದ ಪಾಲ್ಗೊಂಡಿದ್ದನು ಕಂಡ ಪ್ರಜೆಗಳು ಆಶ್ಚರ್ಯ ಪಟ್ಟರಂತೆ. ಇನ್ನು ಅಂದಿನಿಂದ ಪ್ರಾರಂಭವಾದ ಶೈವಾರಾಧನೆ ಇಂದಿಗೂ ಕೂಡ ಸಾಗುತ್ತಲೇ ಇದೆ. ಇದೊಂದು ಆಧ್ಯಾತ್ಮಿಕವಾದ ತಾಣವಾದ್ದರಿಂದ ದೇಶದ ಮೂಲೆ-ಮೂಲೆಗಳಿಂದ ಭಕ್ತರ ದಂಡೇ ಇಲ್ಲಿಗೆ ಭೇಟಿ ನೀಡುತ್ತದೆ.
3.ಗುಹಾಲಯ
PC:YOUTUBE
ಇದೊಂದು ಗುಹಾಲಯವಾದ್ದರಿಂದ ಪ್ರಜೆಗಳು ಅನೇಕ ಕಥನಗಳಲ್ಲಿ ಯಾವುದು ನಿಜವಾದುದು ಎಂಬ ಗೊಂದಲವನ್ನು ಪರಿಹಾರ ಮಾಡಲು ಆರ್ಕಿಯಾಲಜಿ ಇಂಡಿಯಾ ಸರ್ವೆಯವರು ಪ್ರತ್ಯೇಕವಾದ ಶ್ರದ್ಧೆಯನ್ನು ವಹಿಸಿ ಉತ್ತರಖಂಡದವರು ಅನೇಕ ಆಶ್ಚರ್ಯಕರವಾದ ವಿಷಯಗಳನ್ನು ಬೆಳಕಿಗೆ ತಂದರು.
4.ಎರಡು ಶಿವಲಿಂಗಗಳು
PC:YOUTUBE
ಈ ಗುಹಾದೇವಾಲಯದಲ್ಲಿ ಎರಡು ಶಿವಲಿಂಗಗಳಿಗೆ. ಆ ಶಿವಲಿಂಗಗಳು ಪ್ರಕೃತಿಸಿದ್ಧವಾಗಿ ಏರ್ಪಟ್ಟ ಶಿವಲಿಂಗಗಳೇ ಆಗಿವೆಯೇ ಹೊರತು ಮಾನವ ನಿರ್ಮಿತವಲ್ಲ ಎಂದು ಸರ್ವೆಯ ಮೂಖಾಂತರ ತಿಳಿದು ಬಂದಿತು. ಹಾಗಾಗಿಯೇ ಈ ತಾಣಕ್ಕೆ ತಂಡೋಪ ತಂಡವಾಗಿ ಭೇಟಿ ನೀಡಿ ಶಿವನಾಮ ಸ್ಮರಣೆಯಿಂದ ಆಧ್ಯಾತ್ಮಿಕವಾದ ಭಾವವನ್ನು ಉಂಟು ಮಾಡುತ್ತಾರೆ.
5.ಹನುಮಂತನ ವಿಗ್ರಹ
PC:YOUTUBE
ಇಲ್ಲಿನ ಪ್ರಧಾನವಾದ ಆಕರ್ಷಣೆಯಾಗಿ ಕಾಣಿಸುವ ಆಂಜನೇಯ ಸ್ವಾಮಿಯ ವಿಗ್ರಹವು ಉತ್ತಮ ಸೆಲ್ಪಿ ಸ್ಪಾಟ್ ಆಗಿ ಹೆಸರುವಾಸಿಯಾಗಿದೆ. ಹಾಗಾಗಿಯೇ ಯುವಕ-ಯುವತಿಯರ ಫೆವರೆಟ್ ಸ್ಥಳ ಇದಾಗಿದೆ. ಈ ತಪಕೇಶ್ವರ ಗುಹಾಲಯವು ಗೋವಿನ ಸ್ತನದ ಆಕಾರದಲ್ಲಿರುವುದರಿಂದ "ಮಾ ಕ್ಷೇತ್ರ" ಎಂಬ ಹೆಸರಿನಿಂದಲೂ ಕೂಡ ಕರೆಯುತ್ತಾರೆ.
6.ಪುರಾಣಗಳು ಪ್ರಕಾರ
PC:YOUTUBE
ಪುರಾಣಗಳ ಪ್ರಕಾರ ಅಶ್ವಥಾಮ ಜನನ, ಸ್ತನಪಾನ ವೃತ್ತಾಂತವೆಲ್ಲಾ ಈ ದೇವಾಲಯವು ಕಣ್ಣಿಗೆ ಕಟ್ಟಿ ಆಧ್ಯಾತ್ಮಿಕವಾದ ಭಾವನೆಯನ್ನು ಉಂಟು ಮಾಡುತ್ತದೆ. ರುದ್ರಾಕ್ಷರ ಮಹಾದೇವ, ದೂದೇಶ್ವರ ಮಹಾ ದೇವ ಎಂಬ ಹಲವಾರು ಹೆಸರುಗಳಿಂದ ಕರೆಸಿಕೊಂಡು ಪೂಜಿಸಲ್ಪಡುತ್ತಿರುವ ಈ ಸ್ವಾಮಿಯನ್ನು ದೇವತೆಗಳು ಕೂಡ ಆರಾಧಿಸಿದ್ದರು ಎಂಬ ವಿಶ್ವಾಸದಿಂದ ಅನೇಕ ಭಕ್ತರು ತಪ್ಪದೇ ಈ ಸ್ವಾಮಿಯ ದರ್ಶನಕ್ಕೆ ಭೇಟಿ ನೀಡುತ್ತಾರೆ.
7.ತಪಕೇಶ್ವರ ದೇವಾಲಯ
PC:YOUTUBE
ಆ ದೇವಾಲಯವೇ ತಪಕೇಶ್ವರ ದೇವಾಲಯ. ಈ ದೇವಾಲಯಕ್ಕೆ ಈ ಹೆಸರು ಬರಲು ಕಾರಣವೇನೆಂದರೆ, ತಪಕ್ ಎಂದರೆ ಹಿಂದಿಯಲ್ಲಿ ತುಟ್ಟು-ತುಟ್ಟು. ಅಂದರೆ ಇಲ್ಲಿನ ಶಿವಲಿಂಗದ ಮೇಲೆ ಜಲವು ತುಟ್ಟು-ತುಟ್ಟಾಗಿ ಬೀಳುವ ಪ್ರಕ್ರಿಯೆ ನಡೆಯುವುದರಿಂದ ಈ ಕ್ಷೇತ್ರಕ್ಕೆ ತಪಕೇಶ್ವರ ದೇವಾಲಯ ಎಂಬ ಹೆಸರು ಬಂದಿತು. ಸುಮಾರು 600 ವರ್ಷಗಳಿಂದ ಪೂಜೆಗಳನ್ನು ಮಾಡಿಕೊಳ್ಳುತ್ತಿರುವ ಮಹೇಶ್ವರನು ಬೇಡಿದ ವರವನ್ನು ಕರಣಿಸುತ್ತಾನೆ ಎಂಬ ನಂಬಿಕೆ ಪ್ರವಾಸಿಗರದ್ದು.
8.ತಲುಪುವ ಬಗೆ ಹೇಗೆ?
ಈ ಮಹಿಮಾನ್ವಿತವಾದ ತಪಕೇಶ್ವರ ದೇವಾಲಯವು ಡೆಹ್ರಾಡೂನ್ನಿಂದ ಕೇವಲ 6.5 ಕಿ.ಮೀ ದೂರದಲ್ಲಿದೆ. ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಡೆಹ್ರಾಡೂನ್ ರೈಲ್ವೆ ನಿಲ್ದಾಣ ಇಲ್ಲಿಂದ ಕೇವಲ 7 ಕಿ.ಮೀ ದೂರದಲ್ಲಿ ತಪಕೇಶ್ವರ ದೇವಾಲಯವಿದೆ. ಇನ್ನು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಜಾಲಿ ಗ್ರಾಂಟ್ ಏರ್ರ್ಪೋರ್ಟ್ ಸುಮಾರು 32 ಕಿ.ಮೀ ದೂರದಲ್ಲಿದೆ.