Search
  • Follow NativePlanet
Share
» »156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ದಕ್ಷಿಣ ಭಾರತದಲ್ಲಿನ ತಮಿಳುನಾಡು ರಾಜ್ಯದಲ್ಲಿ ತಿರುಚನಾಪಲ್ಲಿ (ತ್ರಿಚಿ ಎಂದು ಕರೆಯುವ) ಯಲ್ಲಿನ ಸುಂದರವಾದ ದ್ವೀಪ ನಗರವೇ ಶ್ರೀರಂಗಂ. ಪ್ರಾಚೀನಕಾಲದಲ್ಲಿ ಶ್ರೀರಂಗಂನನ್ನು "ವೆಲ್ಲಿತಿರುಮುತ ಗ್ರಾಮ" ಎಂದು ಕರೆಯುತ್ತಿದ್ದರು. ತಮಿಳು ಭಾಷೆಯಲ್ಲಿ

ದಕ್ಷಿಣ ಭಾರತದಲ್ಲಿನ ತಮಿಳುನಾಡು ರಾಜ್ಯದಲ್ಲಿ ತಿರುಚನಾಪಲ್ಲಿ (ತ್ರಿಚಿ ಎಂದು ಕರೆಯುವ) ಯಲ್ಲಿನ ಸುಂದರವಾದ ದ್ವೀಪ ನಗರವೇ ಶ್ರೀರಂಗಂ. ಪ್ರಾಚೀನಕಾಲದಲ್ಲಿ ಶ್ರೀರಂಗಂನನ್ನು "ವೆಲ್ಲಿತಿರುಮುತ ಗ್ರಾಮ" ಎಂದು ಕರೆಯುತ್ತಿದ್ದರು. ತಮಿಳು ಭಾಷೆಯಲ್ಲಿ ಈ ನಗರವನ್ನು ತಿರುವರಂಗಂ ಎಂದು ಹೇಳುತ್ತಿದ್ದರು. ಈ ಸುಂದರರವಾದ ಪಟ್ಟಣವು ಕಾವೇರಿ ನದಿಯ ಉಪನದಿಗಳ ಮಧ್ಯೆ ಇದೆ. ಇಲ್ಲಿ ಪ್ರಸಿದ್ಧವಾದ ಶಿವ, ವಿಷ್ಣು ದೇವಾಲಯಗಳು ಇರುವುದರಿಂದ ಇದು ಹಿಂದೂಗಳಿಗೆ ಪ್ರಧಾನವಾದ ಪ್ರವಾಸಿ ಸ್ಥಳವಾಗಿದೆ.

ವಾಸ್ತವವೆನೆಂದರೆ ಶ್ರೀರಂಗಂನಲ್ಲಿ ವಿಷ್ಣು ಆರಾಧಕರಾದ ವೈಷ್ಣವರೇ ಅಧಿಕ ಜನಸಂಖ್ಯೆ ಇದ್ದಾರೆ. ಇಲ್ಲಿನ ಪ್ರಸಿದ್ಧವಾದ ದೇವಾಲಯಗಳಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಾಲಯವು ಒಂದು. ಪ್ರತಿ ವರ್ಷ ವಿಷ್ಣುವಿನ ಅನುಗ್ರಹವನ್ನು ಪಡೆಯುವ ಸಲುವಾಗಿ ಅನೇಕ ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಪ್ರಪಂಚದಲ್ಲಿನ ಎಲ್ಲಾ ದೊಡ್ಡ ಹಾಗು ಹಿಂದೂ ದೇವಾಲಯವಾಗಿ ಇದು ಪ್ರಸಿದ್ಧಿಯನ್ನು ಹೊಂದಿದೆ. ಇದನ್ನು 631000 ಚದರ ಮೀಟರ್ ವಿಸ್ತೀರ್ಣದಲ್ಲಿ, 4 ಕಿ.ಮೀ ಅಥವಾ 10.710 ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಿದ್ದಾರೆ. ದೇವತೆಗಳ ನಿವಾಸ ವಿಷ್ಣು ಭಗವಾನನ 7 ದೇವಾಲಯಗಳಲ್ಲಿ ಮೊದಲನೇ ದೇವಾಲಯವನ್ನು ಹೊಂದಿರುವುದು ಈ ನಗರದ ವಿಶಿಷ್ಟತೆ.

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಹಿಂದೂ ಪುರಾಣಗಳ ಪ್ರಕಾರ ಇವೆಲ್ಲಾ ಸ್ವಯಂ ಭೂ ಕ್ಷೇತ್ರಗಳು ಎಂದೂ ಹೇಳುತ್ತಾರೆ. ಭಗವಾನನ 108 ದಿವ್ಯಕ್ಷೇತ್ರಗಳಲ್ಲಿ ಇದೇ ಮೊದಲನೇಯದು ಎಂದು ಭಾವಿಸಲಾಗಿದೆ. ಈ ವಿಷ್ಣು ದೇವಾಲಯವು ಅತಿ ದೊಡ್ಡದು. ಈ ಶ್ರೀರಂಗಂನ ದೇವಾಲಯವು 156 ಎಕರೆಗಳಷ್ಟು ವ್ತಾಪಿ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ನಿರ್ಮಾಣವಿರುವ ಪ್ರದೇಶವು ಕೂಡ ಕಾವೇರಿ ಉಪನದಿಗಳ ಮಧ್ಯೆ ಇರುವ ದ್ವೀಪ ಪ್ರದೇಶವೇ ಆಗಿದೆ.

PC: Soldierhustle


156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಈ ದೇವಾಲಯಕ್ಕೆ ಒಟ್ಟು 7 ಪ್ರಾಂಗಣಗಳಿವೆ. ಭಕ್ತರು ಇದರ ಮೂಲಕವೇ ನಡೆದುಕೊಂಡು ದೇವಾಲಯದ ಒಳಗೆ ಹೋಗಬೇಕಾಗುತ್ತದೆ. ಈ ಪ್ರಾಕಾರಗಳು ಕೂಡ ಪ್ರಧಾನ ದೇವಾಲಯಗಳ ಸುತ್ತ ವೃತ್ತಾಕಾರದಲ್ಲಿ ನಿರ್ಮಾಣ ಮಾಡಿರುವ ಗೋಡೆಗಳನ್ನು ಕೂಡ ಇಲ್ಲಿ ಕಾಣಬಹುದು. ಈ ಪ್ರಾಕಾರದಲ್ಲಿ ಒಟ್ಟು 21 ದೊಡ್ಡ ಶಿಖರಗಳು ಕೂಡ ಇವೆ. ಈ ಪ್ರಾಕಾರದಿಂದ ಇರುವ ಈ ದೇವಾಲಯ ನಿರ್ಮಾಣವು ಒಂದು ಅದ್ಭುತವೆಂದೇ ಹೇಳಬಹುದು.


PC:Melanie-m


156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಶ್ರೀರಂಗನಾಥ ಸ್ವಾಮಿ ದೇವಾಲಯವು ತಮಿಳುನಾಡು ರಾಜ್ಯದಲ್ಲಿನ ತಿರುಚುನಾಪಲ್ಲಿಯಲ್ಲಿರುವ ಶ್ರೀರಂಗದಲ್ಲಿದೆ. ಈ ದೇವಾಲಯವನ್ನು ತಿರುವರಂಗಂ ಎಂದು ಸಹ ಕರೆಯುತ್ತಾರೆ. ಈ ದೇವಾಲಯದ ಪ್ರಧಾನವಾದ ದೈವವೆಂದರೆ ಅದು ವಿಷ್ಣು. ಈ ದೇವಾಲಯದ ಬಗ್ಗೆ ಪ್ರಾಚೀನ ತಮಿಳು ಗ್ರಂಥವಾದ ದಿವ್ಯ ಪ್ರಬಂಧದಲ್ಲಿಯೂ ಕೂಡ ವಿವರಿಸಿದ್ದಾರೆ. ಈ ಗ್ರಂಥದಲ್ಲಿ 6 ರಿಂದ 9 ನೇ ಶತಮಾನದವರೆಗೆ ಇರುವ ಆಳ್ವಾರ್‍ರ ಬಗ್ಗೆ ಬರೆದಿದ್ದಾರೆ.

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಈ ಕ್ಷೇತ್ರವನ್ನು ವಿಷ್ಣುವಿನ ಪ್ರೀತಿಕರವಾದ 108 ದಿವ್ಯ ದೇಶಗಳಲ್ಲಿ ಒಂದು ಎಂದು ಪರಿಗಣಿಸಿದ್ದಾರೆ ವೈಷ್ಣವರು. ಈ ದೇವಾಲಯದಲ್ಲಿ ಸಂಪ್ರದಾಯಕರವಾಗಿ ಪೂಜೆಗಳನ್ನು ಮಾಡಲಾಗುತ್ತದೆ. ಇದು ಶ್ರೀರಂಗಂ ಪಟ್ಟಣದ ಅತ್ಯದ್ಭುತವಾದ ದೇವಾಲಯವೇ ಆಗಿದೆ.

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಶ್ರೀರಂಗಂನಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯವು ಪ್ರಸಿದ್ಧವಾದ ಪುಣ್ಯಕ್ಷೇತ್ರ. ದಕ್ಷಿಣಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ, ಪ್ರಮುಖವಾದ ವೈಷ್ಣವ ದೇವಾಲಯದಲ್ಲಿ ಇದು ಕೂಡ ಒಂದು. ಈ ದೇವಾಲಯ ಚರಿತ್ರೆ ಸುಪ್ರಸಿದ್ಧವಾದುದು. ಈ ಪ್ರದೇಶವು ಎಷ್ಟೊ ದಾಳಿಗಳಿಗೂ ಕೂಡ ಗುರಿಯಾಗಿದೆ.

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಪ್ರಸ್ತುತ ಪ್ರಪಂಚದಲ್ಲಿಯೇ ಪೂಜೆಗಳು ನಡೆಯುತಿರುವ ಅತಿ ದೊಡ್ಡ ಹಿಂದೂ ದೇವಾಲಯವೆಂದರೆ ಅದು ಇದೆ. ಪ್ರಪಂಚದಲ್ಲಿ ಅತಿ ದೊಡ್ಡದಾದ ಕಂಬೋಡಿಯಾದಲ್ಲಿ ಅಂಕೋರ್ ವಾಟ್ ದೇವಾಲಯವು ಅನೇಕ ಭೂಕಂಪಗಳಿಗೆ ಒಳಗಾಗಿ ಶಿಥಿಲಾವಸ್ಥೆಯಾಗಿದೆ. ಪ್ರಸ್ತುತ ಇದು ಬೌದ್ಧ ದೇವಾಲಯವಾಗಿ ಮಾರ್ಪಾಟಾದ್ದರಿಂದ ನಮ್ಮ ದೇಶದಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಾಲಯವು ಪ್ರಪಂಚದಲ್ಲಿರುವ ಅತಿ ದೊಡ್ಡ ಹಿಂದೂ ದೇವಾಲಯವಾಗಿ ಭಾವಿಸುತ್ತಾರೆ.

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಅಷ್ಟೇ ಅಲ್ಲಿ ಭಾರತ ದೇಶದಲ್ಲಿ ಅತಿ ದೊಡ್ಡ ದೇವಾಲಯಗಳ ಸಂಕೀರ್ಣದಲ್ಲಿ ಇದು ಕೂಡ ಒಂದು. ಈ ದೇವಾಲಯ ಪ್ರದೇಶದ ವಿಶಾಲವು 6 ಲಕ್ಷ 31 ಸಾವಿರ ಚದರ ಮೀಟರ್. ಎಂದರೆ ಸುಮಾರು 156 ಎಕರೆಗಳಷ್ಟು. ಈ ದೇವಾಲಯದ ರಾಜಗೋಪುರವು ಏಶಿಯಾದಲ್ಲಿಯೇ ಅತಿ ದೊಡ್ಡದಾದ ಗೋಪುರವೇ ಆಗಿದೆ. ಇದರ ಎತ್ತರ ಸುಮಾರು 236 ಅಡಿ.

PC:Nagarjun Kandukuru


156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಈ ದೇವಾಲಯದ ಮೇಲೆ ಇರುವ ಶಿಲಾಶಾಸನಗಳು ಚೋಳ, ಪಾಂಡ್ಯ, ಹೊಯ್ಸಳ ಮತ್ತು ವಿಜಯನಗರ ವಂಶಿಕರಿಗೆ ಸೇರಿದ್ದು. ಈ ಶಿಲಾಶಾಸನಗಳನ್ನು 9 ಅಥವಾ 16 ನೇ ಶತಮಾನಕ್ಕೆ ಸೇರಿದ್ದು ಎಂದು ಗುರುತಿಸಲಾಗಿದೆ. ಅನೇಕ ರಾಜಕೀಯ ವ್ಯವಹಾರಗಳ ಮಧ್ಯೆ ಚೋಳ, ಪಾಂಡ್ಯ, ಹೊಯ್ಸಳ ಮತ್ತು ವಿಜಯನಗರ ವಂಶಿಕರ ಕಾಲದಲ್ಲಿ ಹಂತಹಂತವಾಗಿ ನಿರ್ಮಾಣ ಮಾಡಿರಬಹುದು ಎಂದು ಭಾವಿಸಲಾಗಿದೆ.

PC:Haneeshkm

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಈ ದೇವಾಲಯದ ಶಿಲ್ಪಕಲೆ ಅದ್ಭುತವಾಗಿದೆ. ಶ್ರೀ ರಂಗ ದೇವಾಲಯವನ್ನು ದರ್ಶನ ಮಾಡಿಕೊಳ್ಳುವ ಸಲುವಾಗಿ ಭಾರತದೇಶದ ಮೂಲೆ-ಮೂಲೆಗಳಿಂದ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಗರ್ಭಾಲಯದಲ್ಲಿ ಶಯನಿಸುತ್ತಿರುವ ಮೂರ್ತಿಗೆ ಪೆರಿಯಪೆರುಮಾಳ್ ಎಂಬ ಹೆಸರಿದೆ.

PC:Thangamani

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಉತ್ಸವ ಮೂರ್ತಿಗೆ ನಂಬೆರುಮಾಳ್ ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ಉಪದ್ರವ ಏರ್ಪಟ್ಟಿತು. ಆಗ ಶ್ರೀರಂಗನಾಥನ ಉತ್ಸವ ಮೂರ್ತಿಯನ್ನು ಚಂದ್ರಗಿರಿ ಪ್ರದೇಶಕ್ಕೆ ಸೇರಿಸಿದರು. ಅದೇ ಸಮಯದಲ್ಲಿ ಮತ್ತೊಂದು ಮೂರ್ತಿಯನ್ನು ಪ್ರತಿಷ್ಟಾಪಿಸಿದರು.

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಇಲ್ಲಿ ಅನೇಕ ದೇವಾಲಯಗಳನ್ನು ಕಾಣಬಹುದು. ಅವುಗಳೆಂದರೆ ರಾಕ್ ಫೊರ್ಟ್ ದೇವಾಲಯ, ತಿರುವಾನೈ ದೇವಾಲಯ, ಉರೈಯೂರು ವೆಕ್ಕಲಿ ಅಮ್ಮನ್ ದೇವಾಲಯ, ಸಮಯಪುರಂ ಮರಿಯಂನ್ ದೇವಾಲಯ, ಕುಮಾರ ವೈಯಲೂರ್ ದೇವಾಲಯ, ಕಾಟಾಳಗಿಯಾ ಸಿಂಗರ್ ದೇವಾಲಯ. ಇವೆಲ್ಲಾ ಆ ದೇವಾಲಯದ ಪ್ರಸಿದ್ಧವಾದ ದೇವಾಲಯಗಳಾಗಿವೆ. ಅಪ್ಪಲ ರಂಗನಾಥರ್ ಪ್ರಧಾನವಾದ ದೈವವಾಗಿರುವ ಶ್ರೀ ವಡಿವಲಗಿಯ ನಂಬಿ ದೇವಾಲಯವು ಇಲ್ಲಿನ ಪ್ರಧಾನವಾದ ವೈಷ್ಣವ ದೇವಾಲಯ. ಇದನ್ನೆ ಅಪ್ಪುಕುಡತ್ತನೆ ದೇವಾಲಯ ಎಂದು ಕೂಡ ಕರೆಯುತ್ತಾರೆ.

PC:Haneeshkm


156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಶ್ರೀರಂಗನಾಥ ಸ್ವಾಮಿ ದೇವಾಲಯ, ಸಮಯಪುರಂ ಮಾರಿಯಮನ್ ದೇವಾಲಯ, ಜಂಬು ಲಿಂಗೇಶ್ವರ ದೇವಾಲಯ, ಅಖಿಲಾಂಡೇಶ್ವರಿ ದೇವಾಲಯ ಶ್ರೀರಂಗದಲ್ಲಿನ ಇತರ ಪ್ರಧಾನವಾದ ದೇವಾಲಯಗಳಾಗಿವೆ. ವಾತಾವರಣ ಮತ್ತು ಸಾರಿಗೆ ಸಂಪರ್ಕ ಉತ್ತಮವಾಗಿಯೇ ಇದೆ. ಹಾಗಾಗಿ ಈ ಎಲ್ಲಾ ಪ್ರಸಿದ್ಧವಾದ ದೇವಾಲಯಗಳಿಗೆ ಒಮ್ಮೆ ಭೇಟಿ ನೀಡಬಹುದಾಗಿದೆ.


PC:NithinSantosh

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಸಮಯಪುರಂ ಮರಿಯಮ್ಮನ್ ದೇವಾಲಯ, ಶ್ರೀರಂಗಂ
ತಿರುಚುನಾಪಲ್ಲಿ ಜಿಲ್ಲೆಯ ಭಾಗವಾದ ಶ್ರೀರಂಗ ಪಟ್ಟಣದಲ್ಲಿ ಸಮಯಪುರಂ ಮರಿಯಮ್ಮನ್ ದೇವಾಲಯವಿದೆ. ಪ್ರತಿದಿನ ನೂರಾರು ಭಕ್ತರು ಈ ಶಕ್ತಿವಂತ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯವು ಭಾನುವಾರ, ಮಂಗಳವಾರ ಹಾಗು ಶುಕ್ರವಾರದಂದು ಪ್ರತ್ಯೇಕವಾದ ಪೂಜೆಗಳು ನಡೆಯುತ್ತವೆಯಾದ್ದರಿಂದ ಮತ್ತಷ್ಟು ಜನರಿಂದ ತುಂಬಿ ತುಳುಕುತ್ತಿರುತ್ತದೆ. ಭಕ್ತರು ಮಾತ್ರ ಅನೇಕ ರೀತಿಯ ನೈವೇದ್ಯಗಳನ್ನು ತಯಾರು ಮಾಡಿ ತರುತ್ತಾರೆ.

PC:NithinSantosh

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

156 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಹೇಗೆ ನೋಡಿದರು ಮಹಾ ಭಾಗ್ಯವೇ!

ಉತ್ತಮ ಕಾಲಾವಧಿ
ತಮಿಳುನಾಡಿನಲ್ಲಿರುವ ಈ ಅದ್ಭುತವಾದ ದೇವಾಲಯಕ್ಕೆ ತೆರಳಲು ಉತ್ತಮವಾದ ಕಾಲವಧಿ ಎಂದರೆ ಅದು ಅಕ್ಟೋಬರ್‍ನಿಂದ ಫೆಬ್ರವರಿ ತಿಂಗಳ ಮಧ್ಯ ಕಾಲದಲ್ಲಿ. ಆ ಸಮಯದಲ್ಲಿ ಉಷ್ಣತೆಯು ಕಡಿಮೆ ಇರುವುದರಿಂದ ಆಹ್ಲಾದಕರವಾದ ಅನುಭೂತಿಯನ್ನು ಪಡೆಯಬಹುದು. ಈ ದೇವಾಲಯಗಳಲ್ಲಿ ಅನೇಕ ಉತ್ಸವಗಳು ಆ ಸಮಯದಲ್ಲಿಯೇ ನಡೆಯುತ್ತವೆ. ಆ ಕಾಲದಲ್ಲಿ ಭಾರಿ ಜನಸಂಖ್ಯೆಯ ಪ್ರವಾಸಿಗರು, ಭಕ್ತರು ಇಲ್ಲಿಗೆ ಸೇರಿಕೊಳ್ಳುತ್ತಾರೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರಸ್ತೆ ಮಾರ್ಗದ ಮೂಲಕ
ಟ್ರಿಚಿಗೆ ತೆರಳುವ ಬಸ್ಸಿಗೆ ಹೋದರೆ ಸುಲಭವಾಗಿ ಶ್ರೀರಂಗಂ ಸೇರಿಕೊಳ್ಳಬಹುದು. ದಕ್ಷಿಣ ಭಾರತದಲ್ಲಿನ ಚೆನ್ನೈ, ಕನ್ಯಾಕುಮಾರಿ, ಹೈದ್ರಾಬಾದ್, ಬೆಂಗಳೂರು, ಕೊಯಂಬತ್ತೂರು, ಮೈಸೂರು, ಮಂಗಳೂರು, ಕೊಚ್ಚಿ, ರಾಮೇಶ್ವರಂ, ತಂಜಾವೂರು, ಮದುರೈ, ಚಿದಂಬರಂ, ತೂತುಕುಡಿ, ಕೊಲ್ಲಂ, ತಿರುಪತಿ ಇಂಥಹ ಪ್ರಧಾನ ನಗರಗಳಿಂದ ಇಲ್ಲಿಗೆ ಬಸ್ಸುಗಳು ಇವೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರೈಲ್ವೆ ಮಾರ್ಗದ ಮೂಲಕ
ಶ್ರೀರಂಗದಲ್ಲಿ ರೈಲ್ವೆ ಸ್ಟೇಷನ್ ಇದೆ. ಇಲ್ಲಿ ಚೆನ್ನೈ ಕನ್ಯಾಕುಮಾರಿ ರೈಲ್ವೆ ನಿಲ್ದಾಣವು ಚೆನ್ನೈನಿಂದ ರೈಲುಗಳು ಬರುತ್ತಿರುತ್ತವೆ. ಚೆನ್ನೈ, ಕನ್ಯಾಕುಮಾರಿ 2 ಪ್ರದೇಶಗಳಿಂದಲೂ ಇತರ ನಗರಗಳಿಂದ ಅನೇಕ ರೈಲುಗಳು ಸಂಪರ್ಕ ಸಾಧಿಸುತ್ತವೆ. ಚೆನ್ನೈನಿಂದ ಕನ್ಯಾಕುಮಾರಿಗೆ ತೆರಳುವ ರೈಲನ್ನು ಹತ್ತಿ ಶ್ರೀರಂಗಂ ಸೇರಿಕೊಳ್ಳಬಹುದು.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ವಿಮಾನ ಮಾರ್ಗದ ಮೂಲಕ
ಟ್ರಿಚಿಯಲ್ಲಿನ ತಿರುಚುನಾಪಲ್ಲಿ ಶ್ರೀರಂಗಕ್ಕೆ ಸಮೀಪದಲ್ಲಿ ಅಂತರ್‍ಜಾತಿಯ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಕೋಲ್ಕತ್ತ, ದೆಹಲಿಯಂತಹ ನಗರಗಳಿಂದ ಇಲ್ಲಿಗೆ ವಿಮಾನಗಳು ಇವೆ. ಸಿಂಗಪೂರ್, ಅಬೂ ಧಾಬಿ, ದುಬಾಯಿ, ಕುವೈತ್‍ನಿಂದ ಅಂತರ್‍ಜಾತಿಯ ವಿಮಾನಗಳು ಕೂಡ ಇಲ್ಲಿಗೆ ಸೇರುತ್ತಿರುತ್ತದೆ. ಇಲ್ಲಿಂದ ಶ್ರೀರಂಗಂಗೆ ಟ್ಯಾಕ್ಸಿಯ ಮುಖಾಂತರ ಸುಲಭವಾಗಿ ಸೇರಿಕೊಳ್ಳಬಹುದು.

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

<strong></strong>ದಿನಕ್ಕೆ ಒಮ್ಮೆ ಮಾತ್ರ ದರ್ಶನ ನೀಡಿ ಮಾಯವಾಗುವ ದೇವಾಲಯವಿದು....ದಿನಕ್ಕೆ ಒಮ್ಮೆ ಮಾತ್ರ ದರ್ಶನ ನೀಡಿ ಮಾಯವಾಗುವ ದೇವಾಲಯವಿದು....

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

<strong></strong>ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...ತಿರುಮಲ ವೆಂಕಟೇಶ್ವರನ ವೈಕುಂಠ ಗುಹಾ ರಹಸ್ಯ...


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X