ಭೇಟಿ ಕೊಡುವವರನ್ನು ಬೆರಗುಗೊಳಿಸುವಂತಹ ಜೋಧಪುರದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ
ಹೊಳೆಯುವ ಥಾರ್ ಮರುಭೂಮಿಯ ಸುಂದರ ವಿಸ್ತಾರದಲ್ಲಿ ಅದ್ಭುತವಾಗಿ ನೆಲೆಸಿರುವ ಜೋಧ್ಪುರವು ರಾಜಸ್ಥಾನದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ತನ್ನಲ್ಲಿರುವ ಐತಿಹಾಸಿಕ ಸ್ಮಾರಕಗಳು, ಪ್ರಾಚೀನ ದೇವಾಲಯಗಳು ಮತ್ತು ನೈಸರ್ಗಿಕ ತಾಣಗಳಿಂದಾಗಿ ವಿಶ್ವದಾದ್ಯಂತದ ಪ್ರವಾಸಿಗರಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಇಂದು ಇದು ನಿಮ್ಮ ರಾಜಸ್ಥಾನದ ಪ್ರವಾಸದಲ್ಲಿ ಭೇಟಿ ಕೊಡಲೇಬೇಕು ಎನ್ನುವಂತಹ ತಾಣವಾಗಿದ್ದು ಇದನ್ನು ಭೇಟಿ ಕೊಡದಿದ್ದಲ್ಲಿ ನಿಮ್ಮ ಪ್ರವಾಸವೇ ಅಪೂರ್ಣವೆನ್ನಬಹುದು! ರಾಜಸ್ಥಾನ ರಾಜ್ಯದ ಎರಡನೇ ಅತ್ಯಂತ ದೊಡ್ಡ ನಗರವಾಗಿರುವ ಜೋಧಪುರ ಪ್ರತೀಯೊಬ್ಬ ಪ್ರವಾಸಿಗನಿಗೂ ಏನನ್ನಾದರೂ ಕೊಡುತ್ತದೆ. ಪ್ರಕೃತಿ ಪ್ರೇಮಿಗಳಿಂದ ಹಿಡಿದು ಸಾಹಸಿಗಳು ಮತ್ತು ಇತಿಹಾಸ ಉತ್ಸಾಹಿಗಳು ಹಾಗು ಶಿಬಿರಾರ್ಥಿಗಳವರೆಗೆ ಎಲ್ಲರಿಗೂ ಎಲ್ಲವನ್ನೂ ಒದಗಿಸುವ ತಾಣವೆಂದರೆ ತಪ್ಪಾಗಲಾರದು.
ಆದುದರಿಂದ ಇದು ವರ್ಷಪೂರ್ತಿ ಮಿಲಿಯನ್ ಗಟ್ಟಲೆ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ಇದು ಭಾರತದ ಅತ್ಯಂತ ಜನಪ್ರಿಯ ಮತ್ತು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ ಎಂಬ ವಾಸ್ತವದ ಹೊರತಾಗಿಯೂ, ಜೋಧ್ಪುರದ ಬಗ್ಗೆ ಇನ್ನೂ ಹಲವಾರು ವಿಷಯಗಳಿವೆ ಎಂಬುದು ಅನೇಕ ಪ್ರವಾಸಿಗರಿಗೆ ತಿಳಿದಿಲ್ಲ. ಆದ್ದರಿಂದ, ಜೋಧ್ಪುರಕ್ಕೆ ಸಂಬಂಧಿಸಿದ ಈ ಆಸಕ್ತಿದಾಯಕ ಸಂಗತಿಗಳ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.
ಭಾರತದ ನೀಲಿ ನಗರ( ಬ್ಲೂ ಸಿಟಿ ಆಫ್ ಇಂಡಿಯಾ)
ನೀವೇನಾದರೂ ಭಾರತದ ಇತಿಹಾಸದ ಬಗ್ಗೆ ತಿಳಿದಿದ್ದಲ್ಲಿ, ಜೋಧಪುರವನ್ನು ಭಾರತದ ನೀಲಿ ನಗರವೆಂದು ಕರೆಯುವುದು ಗೊತ್ತಿರಬೇಕು ಅಲ್ಲವೆ? ಇದನ್ನು ಹೀಗೇಕೆ ಕರೆಯುತ್ತಾರೆ ಎಂಬುದು ನಿಮಗೆ ಗೊತ್ತೆ? ಇಲ್ಲ ಎಂದಾದಲ್ಲಿ ನಾವು ನಿಮಗೆ ಇದರ ಬಗ್ಗೆ ತಿಳಿಸುತ್ತಿದ್ದೇವೆ. ಜೋಧಪುರದಲ್ಲಿ ಹೆಚ್ಚಿನ ಮನೆಗಳನ್ನು ನೀಲಿ ಬಣ್ಣದಲ್ಲಿ ಪೈಂಟ್ ಮಾಡಲಾಗುತ್ತದೆ. ಬ್ರಾಹ್ಮಣರು ಮತ್ತು ಇತರ ಜಾತಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಹೀಗೆ ಬಣ್ಣಿಸಲಾಗಿದೆ ಮತ್ತು ಈ ನೀಲಿ ಮನೆಗಳು ಬ್ರಾಹ್ಮಣರ ಮನೆಗಳನ್ನು ಉಲ್ಲೇಖಿಸುತ್ತವೆ. ಇಂದು, ಜೋಧಪುರವು ತನ್ನ ಹೊಳೆಯುವ ನೀಲಿ ವಿಸ್ತಾರಕ್ಕಾಗಿ ಪ್ರವಾಸಿಗರಲ್ಲಿ ಹೆಚ್ಚಾಗಿ ಗುರುತಿಸಲ್ಪಟ್ಟಿದೆ.
ರಾಮಾಯಣಕ್ಕಿಂತಲೂ ಹಳೆಯದಾದ ಇತಿಹಾಸವನ್ನು ಹೊಂದಿದೆ
ಸಾಮಾನ್ಯವಾಗಿ, ಜೋಧ್ಪುರವನ್ನು 15 ನೇ ಶತಮಾನದ ಉತ್ತರಾರ್ಧದಲ್ಲಿ ಮಾರ್ವಾರ್ ಪ್ರದೇಶದ ಸ್ಥಾಪಕರೂ ಆಗಿದ್ದ ರಜಪೂತ ಮುಖ್ಯಸ್ಥ ರಾವ್ ಜೋಧಾ ಸ್ಥಾಪಿಸಿದರು ಎಂದು ನಮಗೆ ಕಲಿಸಲಾಗಿದೆ. ಇದು ಖಂಡಿತವಾಗಿಯೂ ನಿಜವಲ್ಲ. ಪ್ರಾಚೀನ ಹಿಂದೂ ಗ್ರಂಥಗಳ ಪ್ರಕಾರ, ಜೋಧ್ಪುರದ ವಸಾಹತು ಸಾವಿರಾರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಅಹಿರ್ಗಳು ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದ್ದರಿಂದ, ಜೋಧಪುರವು ರಾಜಸ್ಥಾನದ ಅತ್ಯಂತ ಹಳೆಯ ವಾಸಸ್ಥಳಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ರಾಜಸ್ಥಾನದ ಹಲವಾರು ಪ್ರಸಿದ್ದ ಆಹಾರ ಭಕ್ಷ್ಯಗಳ ಮೂಲ
ರಾಜಸ್ಥಾನದ ಬಾಯಿ ನೀರೂರಿಸುವ ಸ್ಥಳೀಯ ಭಕ್ಷ್ಯಗಳ ರುಚಿ ನೋಡದೇ ಇದ್ದಲ್ಲಿ ನಿಮ್ಮ ರಾಜಸ್ಥಾನ ಪ್ರವಾಸವು ಅಪೂರ್ಣವೇ ಸರಿ! ಜೋಧಪುರವು ರಾಜ್ಯದ ಹಲವಾರು ಪಾಕಪದ್ದತಿಯ ಮೂಲವಾಗಿದೆ. ಇಲ್ಲಿಯ ಆಹಾರಗಳಲ್ಲಿ ಮಿರ್ಚಿ ವಡಾ, ಮೇವಾ ಕಿ ಕಚೋರಿ, ದಾಲ್ ಬಾಟಿ ಚೂರ್ಮ, ಬಜ್ರೇ ಕ ಸಗ್ರಾ, ಆಟ್ಟೇಕ ಹಲ್ವಾ ಮತ್ತು ಗಟ್ಟೆ ಕಿ ಸಬ್ಜಿ ಇತ್ಯಾದಿಗಳು ಇಲ್ಲಿಯ ಪ್ರಮುಖ ತಿಂಡಿಗಳಾಗಿವೆ. ಇದು ಮಲ್ಪುವಾ, ಬೆಸನ್ ಕಿ ಬರ್ಫಿ ಮತ್ತು ಘೇವರ್ನಂತಹ ಹಲವಾರು ರುಚಿಕರವಾದ ಸಿಹಿತಿಂಡಿಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ. ಆದ್ದರಿಂದ, ಪ್ರತಿಯೊಬ್ಬ ಆಹಾರಪ್ರೇಮಿಯೂ, ಇದೀಗ ಜೋಧ್ಪುರವನ್ನು ನಿಮ್ಮ ಬಕೆಟ್ ಪಟ್ಟಿಗೆ ಸೇರಿಸಿ. ಇದು ನಿಮಗೆ ಸ್ವರ್ಗಕ್ಕಿಂತ ಕಡಿಮೆ ಇರದು.
ಅಜೇಯ ಮೆಹ್ರಾನ್ಗಡ್ ಕೋಟೆಗೆ ನೆಲೆಯಾಗಿದೆ
ಜೋಧ್ಪುರದ ಸಂಸ್ಥಾಪಕರಾದ ರಾವ್ ಜೋಧಾ ಅವರಿಂದ 15 ನೇ ಶತಮಾನದ ಕೊನೆಯಲ್ಲಿ ನಿರ್ಮಿಸಲಾಗಿದೆ, ಮೆಹ್ರಾನ್ಗಡ್ ಕೋಟೆಯು ಸುಮಾರು 410 ಅಡಿ ಎತ್ತರದಲ್ಲಿ ಕಲ್ಲಿನ ಬೆಟ್ಟದ ಮೇಲೆ ನೆಲೆಗೊಂಡಿದೆ ಇದನ್ನು ಭಾರತದಲ್ಲಿ ಅಜೇಯ ಕೋಟೆಗಳಲ್ಲಿ ಒಂದೆಂದು ಕರೆಯಲಾಗುತ್ತದೆ.
ಅದರ ಬಲವಾದ ಬುರುಜುಗಳು, ದಪ್ಪ ಗೋಡೆಗಳು ಮತ್ತು ಬೃಹತ್ ಬಾಗಿಲುಗಳ ಕಾರಣದಿಂದಾಗಿ, ಮೆಹ್ರಾನ್ ಘಡ್ ಕೋಟೆಯು ದೇಶದ ಪ್ರಬಲ ಕೋಟೆಗಳಲ್ಲಿ ಒಂದಾಗಿದೆ ಎಂದು ಹೇಳುವುದು ಸಂಪೂರ್ಣವಾಗಿ ಉತ್ತಮವಾಗಿದೆ. ಇಂದು, ಇದು ರಾಜಸ್ಥಾನದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಸ್ಮಾರಕಗಳಲ್ಲಿ ಒಂದಾಗಿದೆ. ನೀವು ಇತಿಹಾಸದ ಉತ್ಕಟ ಪ್ರೇಮಿಯಾಗಿದ್ದರೆ, ಅದರ ಇತಿಹಾಸ ಮತ್ತು ಭವ್ಯತೆಯನ್ನು ಅನ್ವೇಷಿಸಲು ನೀವು ತಪ್ಪಿಸಿಕೊಳ್ಳಬಾರದು.
ಇದು ಪ್ರತಿ 4 ವರ್ಷಗಳಿಗೊಮ್ಮೆ ಬರವನ್ನು ಎದುರಿಸುತ್ತದೆ
ಜೋಧಪುರವು ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತದೆ. ಇದು ಏಕೆಂದು ನಿಮಗೆ ಗೊತ್ತೆ? ಸ್ಥಳೀಯ ದಂತಕಥೆಗಳ ಪ್ರಕಾರ ಕೋಟೆಯನ್ನು ನಿರ್ಮಿಸಿದ ರಾವ್ ಜೋಧನು ಬೆಟ್ಟದ ಮೇಲೆ ವಾಸಿಸುತ್ತಿದ್ದ ಚೀರಿಯಾ ನಾಥಜಿ ಎಂಬ ಸಂನ್ಯಾಸಿಯನ್ನು ಸ್ಥಳಾಂತರಿಸಲು ಒತ್ತಾಯಿಸಿದ ಇದರಿಂದ ಕೋಪಗೊಂಡ ಸನ್ಯಾಸಿಯು ಈ ಇಡೀ ರಾಜ್ಯವನ್ನು ನೀರಿನ ಕೊರತೆಯಿಂದ ಬಳಲಲಿ ಶಪಿಸಿದನೆಂದು ಹೇಳಲಾಗುತ್ತದೆ. ಅಂದಿನಿಂದ, ಪ್ರತಿ 3-4 ವರ್ಷಗಳಿಗೊಮ್ಮೆ, ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಬರವನ್ನು ಎದುರಿಸುತ್ತಿದೆ.
ಜಗತ್ತಿನ ಅತ್ಯಂತ ದುಬಾರಿ ಹೋಟೇಲುಗಳನ್ನು ಹೊಂದಿದೆ.
ಉಮೈದ್ ಭವನ್ ಪ್ಯಾಲೇಸ್ ಜೋಧಪುರದಲ್ಲಿ ನೆಲೆಸಿರುವ ಇದು ಜಗತ್ತಿನ ಅತ್ಯಂತ ದೊಡ್ಡ ಮತ್ತು ದುಬಾರಿಯಾದ ಪಾರಂಪರಿಕ ಹೋಟೇಲು ಎಂದು ಹೆಸರುವಾಸಿಯಾಗಿದೆ. ಇತ್ತೀಚೆಗೆ ಇದನ್ನು ಜಗತ್ತಿನ ಅತ್ಯಂತ ಉತ್ತಮ ಹೋಟೇಲು ಎಂದು ಪರಿಗಣಿಸಲ್ಪಟ್ಟಿದೆ. ಎಲ್ಲಾ ಆಧುನಿಕ ಸೌಕರ್ಯಗಳಿಂದ ಸ್ವರ್ಗದ ವಾತಾವರಣದವರೆಗೆ, ಈ ವಾಸ್ತುಶಿಲ್ಪದಿಂದ ನಿರ್ಮಿತವಾದ ಅರಮನೆಯು ತನ್ನ ಸಂದರ್ಶಕರಿಗೆ ಎಲ್ಲವನ್ನೂ ಒದಗಿಸುತ್ತದೆ.
ಇದನ್ನು 1943 ರಲ್ಲಿ ನಿರ್ಮಿಸಲಾಗಿರುವ ಈ ಅರಮನೆಯು ಇದು ಜೋಧಪುರದ ರಾಜಮನೆತನದ ಖಾಸಗಿ ನಿವಾಸವಾಗಿದೆ. ಹಾಗಾದರೆ, ಈ ಅದ್ಭುತ ಸೌಂದರ್ಯಕ್ಕೆ ಭೇಟಿ ನೀಡುವ ಬಗ್ಗೆ ಮತ್ತು ಅದರ ಗಡಿಯೊಳಗೆ ರಾಜ ವೈಭೋಗವನ್ನು ಅನುಭವಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು?