ದೇವರಿಗೆ ಭಕ್ತರು ಏನೆಲ್ಲಾ ಅರ್ಪಿಸುತ್ತಾರೆ ಅಲ್ವಾ? ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ. ಹಾಗೆಯೇ ಪ್ರತಿಯೊಂದಕ್ಕೂ ವಿಶಿಷ್ಟತೆ ಇದೆ. ಈ ಹಿಂದೆ ನೀವು ವಿಸ್ಕಿ ಕುಡಿಯೋ ದೇವರ ಬಗ್ಗೆ ಕೇಳಿರುವಿರಿ. ಆದರೆ ಇದೀಗ ನಾವು ಹೇಳ ಹೊರಟಿರುವುದು ಪಾನಕ ಕುಡಿಯುವ ದೇವರ ಬಗ್ಗೆ. ಈ ನರಸಿಂಹ ದೇವಾಲಯದಲ್ಲಿ ನರಸಿಂಹ ಪಾನಕ ಕುಡಿಯುತ್ತಾನಂತೆ.
ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !
ಬೆಲ್ಲದ ಪಾನಕ ಅರ್ಪಣೆ
PC: youtube
ಇಲ್ಲಿ ದೇವರಿಗೆ ಬೆಲ್ಲದ ಪಾನಕವನ್ನು ನೀಡಲಾಗುತ್ತದೆ. ಈ ದೇವಸ್ಥಾನದ ವಿಶೇಷತೆಯೆಂದರೆ ಪಾನಕವನ್ನು ದೇವರ ತೆರೆದಿರುವ ಬಾಯಿಯೊಳಗೆ ಹಾಕಲಾಗುತ್ತದೆ. ಭಕ್ತರು ಅಷ್ಟೊಂದು ಬೆಲ್ಲದ ಪಾನಕವನ್ನು ದೇವರಿಗೆ ಅರ್ಪಿಸಿದರೂ ಒಂದೇ ಒಂದು ಇರುವೆ ಕೂಡಾ ದೇವರ ಮೂರ್ತಿ ಹತ್ತಿರ ಸುಳಿಯುವುದಿಲ್ಲ.
ಬೆಲ್ಲದ ಪಾನಕ ಕುಡಿಯುವ ನರಸಿಂಹ
ದೇವರು ಪಾನಕ ಕುಡಿಯುವ ಸದ್ದು ಕೇಳಿಸುತ್ತದೆ. ಸ್ವಲ್ಪಹೊತ್ತಿನ ನಂತರ ಆ ಸದ್ದು ನಿಲ್ಲುತ್ತದೆ. ದೇವರು ಕುಡಿದು ಉಳಿದ ಪಾನಕ ಹೊರಚೆಲ್ಲಲ್ಪಡುತ್ತದೆ. ಅದನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ಈ ವಿಸ್ಮಯ ಕೇವಲ ದಿನದಲ್ಲಿ ಒಮ್ಮೆ ಮಾತ್ರ ನಡೆಯುವುದಲ್ಲ. ಭಕ್ತರು ಯಾವಾಗ ಯಾವಾಗ ಪಾನಕವನ್ನು ದೇವರಿಗೆ ಅರ್ಪಿಸುತ್ತಾರೋ ಪ್ರತೀ ಬಾರಿಯೂ ಇದೇ ರೀತಿ ಆಗುತ್ತದಂತೆ.
ಪಾನಕದ ಹಿಂದಿನ ಕಥೆ
ದೇವರಿಗೆ ಪಾನಕವನ್ನು ಅರ್ಪಿಸುವ ಹಿಂದೆಯೂ ಒಂದು ಕಥೆ ಇದೆ. ಈ ಬೆಟ್ಟವು ಹಿಂದೆ ಜ್ವಾಲಾಮುಖಿಯಾಗಿತ್ತು ಎನ್ನಲಾಗುತ್ತದೆ. ಬೆಲ್ಲದ ನೀರು ಜ್ವಾಲಾಮುಖಿಯಲ್ಲಿ ಕಂಡುಬರುವ ಸಲ್ಫರ್ ಸಂಯಕ್ತಗಳನ್ನು ತಟಸ್ಥಗೊಳಿಸುತ್ತದೆ ಮತ್ತು ಜ್ವಾಲಾಮುಖಿ ಸ್ಫೋಟವನ್ನು ತಡೆಯುತ್ತದೆ ಎನ್ನಲಾಗುತ್ತದೆ. ಹಾಗಾಗಿ ಈ ಮೂರ್ತಿಗೆ ಬೆಲ್ಲದ ನೀರನ್ನು ಅರ್ಪಿಸಲಾಗುತ್ತದೆ.
ಲಕ್ಷ್ಮೀ ದೇವಿಯ ದೇವಾಲಯ
ಈ ದೇವಸ್ಥಾನದ ಹಿಂಬದಿಯಲ್ಲಿ ಲಕ್ಷ್ಮೀ ದೇವಿಯ ದೇವಾಲಯವಿದೆ. ಅದರ ಪಶ್ಚಿಮಕ್ಕೆ ಒಂದು ಗುಹೆ ಇದೆ. ಇದು ಕೃಷ್ಣ ನದಿ ತೀರದಲ್ಲಿರುವ ಉಂಡವಲ್ಲಿ ಗುಹೆಗೆ ಸೇರಲ್ಪಡುತ್ತದೆ. ಆ ನದಿಯಲ್ಲಿ ಋಷಿಮುನಿಗಳು ಸ್ನಾನ ಮಾಡುತ್ತಿದ್ದರು ಎನ್ನಲಾಗುತ್ತದೆ. ಈಗ ಈ ಗುಹೆಯು ಕತ್ತಲೆಯಾವರಿಸಿದ್ದು, ದಾರಿಯೂ ಸರಿಯಾಗಿ ಕಾಣಿಸುತ್ತಿಲ್ಲ.
ಸ್ಥಾಪಿಸಿದ್ದು ಯಾರು?
ಈ ದೇವಾಲಯವನ್ನು 1890ರಲ್ಲಿ ಚೆನ್ನಪ್ರಗಾದ ಬಲರಾಮ ದಾಸ ಎನ್ನುವವರು ನಿರ್ಮಿಸಿದ್ದರು. ಈ ದೇವಾಲಯಕ್ಕೆ ಹೋಗಲು ಭಕ್ತರಿಗೆ ಅನುಕೂಲವಾಗುವಂತೆ 2004ರಲ್ಲಿ ಘಾಟ್ ರಸ್ತೆ ನಿರ್ಮಿಲಾಗಿದೆ.
ಮಧ್ಯಾನದವರೆಗೆ ಮಾತ್ರ ದೇವಾಲಯ ತೆರೆದಿರುತ್ತದೆ
ಈ ದೇವಾಲಯವು ಕೇವಲ ಮಧ್ಯಾನದವರೆಗೆ ಮಾತ್ರ ತೆರೆದಿರುತ್ತದೆ. ಯಾಕೆಂದರೆ ರಾತ್ರಿ ಹೊತ್ತಿನಲ್ಲಿ ದೇವತೆಗಳು ಪೂಜಾ ಕಾರ್ಯ ಮಾಡುತ್ತಾರೆ ಎನ್ನುವುದು ಇಲ್ಲಿನ ನಂಬಿಕೆ.