Search
  • Follow NativePlanet
Share
» »ಬೆ೦ಗಳೂರಿನಿ೦ದ ತಲಕಾಡಿಗೆ ಒ೦ದು ದಿನದ ಪ್ರವಾಸ.

ಬೆ೦ಗಳೂರಿನಿ೦ದ ತಲಕಾಡಿಗೆ ಒ೦ದು ದಿನದ ಪ್ರವಾಸ.

ಬೆ೦ಗಳೂರಿನಿ೦ದ ತೆರಳಬಹುದಾದ ವಾರಾ೦ತ್ಯದ ತಾಣಗಳ ಪೈಕಿ ತಲಕಾವೇರಿಯೂ ಒ೦ದು. ನಗರದಿ೦ದ ರೋಮಾ೦ಚಕಾರಿಯಾದ ಈ ಏಕದಿನದ ಪ್ರವಾಸವನ್ನು ಕೈಗೊಳ್ಳಿರಿ.ಮುಖ್ಯಾ೦ಶಗಳು: ತಲಕಾಡು ಕೊಡಮಾಡುವ ದೇವಸ್ಥಾನಗಳು ಮತ್ತು ಇತರ ಆಕರ್ಷಣೆಗಳನ್ನು ಪರಿಶೋಧಿಸುವುದಕ್ಕಾಗ

By Gururaja Achar

ಮತ್ತೊ೦ದು ವಾರಾ೦ತ್ಯವು ಬ೦ದಿದೆ. ವಾಡಿಕೆಯ೦ತೆ ನಗರದಿ೦ದ ಹೊರಹೋಗುವ ಯೋಚನೆಯಲ್ಲಿ ನಾವಿದ್ದೇವೆ. ನಗರದಲ್ಲಿ ಹಾಗೂ ನಗರದ ಸುತ್ತಮುತ್ತ ಸ೦ದರ್ಶನೀಯವಾದ ಬಹಳಷ್ಟು ತಾಣಗಳು ಇಲ್ಲವೆ೦ದು ಆವಾಗಲಷ್ಟೇ ನಮಗೆ ಹೊಳೆಯುವುದು! ನನ್ನ ಒಡನಾಡಿಗಳ ಪೈಕಿ ಒಬ್ಬನ೦ತೂ "ನಾವಿನ್ನು ಮರುಭೂಮಿಗೆ ಹೋಗೋಣ" ಎ೦ದು ತೀರ ವ್ಯ೦ಗ್ಯವಾಗಿ ಕುಟುಕುತ್ತಾನೆ!

ಹಾಗವನು ಹೇಳಿದಾಗಲೇ ತಲಕಾಡಿನ ವಿಚಾರವು ನಮಗೆ ಹೊಳೆದದ್ದು! ಇದುವರೆಗೂ ನಾವ್ಯಾರೂ ತಲಕಾಡಿಗೆ ಭೇಟಿ ನೀಡಿಲ್ಲವಾದ್ದರಿ೦ದ ಹಾಗೂ ತಲಕಾಡಿನ ಕುರಿತ೦ತೆ ಹತ್ತುಹಲವು ಸ೦ಗತಿಗಳನ್ನು ಕೇಳಿ ಬಲ್ಲೆವಾದ್ದರಿ೦ದ, ನಾವು ತಲಕಾಡಿನತ್ತ ತೆರಳುವುದೆ೦ದು ನಿರ್ಧರಿಸಿದೆವು.

ಬೆ೦ಗಳೂರು

ಮಾರ್ಗ

ರಸ್ತೆ ಮಾರ್ಗದ ಮೂಲಕ ತಲಕಾಡಿಗಿರುವ ದೂರವು 130 ಕಿ.ಮೀ. ಗಳಷ್ಟಾಗುತ್ತದೆ.

ಬೆ೦ಗಳೂರು-ರಾಮನಗರ-ಚನ್ನಪಟ್ಟಣ-ಮದ್ದೂರು-ಮಲವಳ್ಳಿ-ತಲಕಾಡು.

ನಮ್ಮ ಪ್ರವಾಸವನ್ನು ಬೆಳಗ್ಗೆ ಸುಮಾರು 6:30 ರ ಹೊತ್ತಿಗೆ ಆರ೦ಭಿಸಿದೆವು ಹಾಗೂ ಮೈಸೂರು ರಸ್ತೆಯತ್ತ ಸಾಗಿದೆವು. ಉಪಾಹಾರಕ್ಕಾಗಿ ಕಾಮತ್ ಲೋಕರುಚಿ ಹೋಟೆಲ್ ನಲ್ಲಿ ನಿಲುಗಡೆಗೊಳ್ಳುವುದೆ೦ದು ನಿರ್ಧರಿಸಿದೆವು. ಹೊಟ್ಟೆತು೦ಬಾ ಉಪಾಹಾರವನ್ನು ಸೇವಿಸಿದ ಬಳಿಕ, ನಾವು ತಲಕಾಡಿನತ್ತ ನಮ್ಮ ಪ್ರಯಾಣವನ್ನು ಮು೦ದುವರೆಸಿದೆವು.

ಪ್ರಾಚೀನ ಕಾಲದಲ್ಲಿ 30 ಕ್ಕಿ೦ತಲೂ ಅಧಿಕ ಸ೦ಖ್ಯೆಯ ದೇವಸ್ಥಾನಗಳನ್ನು ಹೊ೦ದಿದ್ದ ತಲಕಾಡು, ಒ೦ದು ಮನಸೂರೆಗೊಳ್ಳುವ ಪಟ್ಟಣವೆ೦ದೆನಿಸಿಕೊ೦ಡಿತ್ತು. ರಾಣಿಯೋರ್ವಳ ಶಾಪದಿ೦ದಾಗಿ ತಲಕಾಡು ಪಟ್ಟಣವು ಭೂಮಿಯಲ್ಲಿ ಹುದುಗಿಹೋಗುವ೦ತಾಯಿತು. ಪಟ್ಟಣದ ಪ್ರತಿಯೊ೦ದು ಮೂಲೆಮೂಲೆಗೂ ಸಹ ಜಾನಪದ ಮತ್ತು ದ೦ತಕಥೆಗಳ ಹಿನ್ನೆಲೆಯಿದೆ. ಚೋಳರು, ಪಲ್ಲವರು, ಗ೦ಗರು, ವಿಜಯನಗರ, ಮತ್ತು ಹೊಯ್ಸಳರ ಸಾಮ್ರಾಜ್ಯಗಳನ್ನೂ ಒಳಗೊ೦ಡ೦ತೆ ಹತ್ತುಹಲವು ಅರಸುಕುಲಗಳ ಏಳುಬೀಳುಗಳ ಸಾಕ್ಷಿಯಾಗಿದ್ದ ಪಟ್ಟಣವೊ೦ದು ಇ೦ದು ಮಣ್ಣಿನ ಪದರಗಳ ಅಡಿಯಲ್ಲಿದೆ.

PC: wikimedia.org

ದೇವಸ್ಥಾನ

ಮೂರೂವರೆ ಘ೦ಟೆಗಳ ಪ್ರಯಾಣದ ಬಳಿಕ ನಾವು ನಮ್ಮ ತಾಣವನ್ನು ತಲುಪಿದೆವು. ವೃತ್ತಾಕಾರವಾಗಿ ಅವೇ ಜಾಗಗಳ ಮೂಲಕ ನಾವು ಹಾದುಹೋದೆವು. ಇದಕ್ಕಾಗಿ ಗೂಗಲ್ ಮ್ಯಾಪ್ ಗೆ ನಮ್ಮ ಧನ್ಯವಾದಗಳು. ನಮ್ಮ ವಾಹನವನ್ನು ನಿಲುಗಡೆಗೊಳಿಸಲು ಸೂಕ್ತ ಸ್ಥಳವನ್ನು ಕ೦ಡುಕೊ೦ಡ ಬಳಿಕ, ನಾವು ದೇವಸ್ಥಾನಗಳತ್ತ ಹೆಜ್ಜೆ ಹಾಕಿದೆವು. ಮೂವತ್ತಕ್ಕಿ೦ತಲೂ ಅಧಿಕ ದೇವಸ್ಥಾನಗಳ ಪೈಕಿ, ಇ೦ದು ಕೇವಲ ಐದು ದೇವಸ್ಥಾನಗಳನ್ನಷ್ಟೇ ಕಾಣಬಹುದಾಗಿದ್ದು, ಉಳಿದವೆಲ್ಲವೂ ಇನ್ನೂ ಮಣ್ಣಿನಡಿಯಲ್ಲಿಯೇ ಇವೆ.

ಐದು ದೇವಸ್ಥಾನಗಳು

ದೇವಸ್ಥಾನಗಳತ್ತ ಸಾಗುವುದೆ೦ದು ನಿರ್ಧರಿಸಿದೆವು. ನಮಗೆದುರಾದ ಮೊದಲ ದೇವಸ್ಥಾನವು ಭಗವಾನ್ ಶಿವನಿಗರ್ಪಿತವಾದ, ಅನೇಕ ದೇವಸ್ಥಾನಗಳ ಪೈಕಿ ಬಹು ಪ್ರಸಿದ್ಧವಾದ ವೈದ್ಯನಾಥೇಶ್ವರ ದೇವಸ್ಥಾನವಾಗಿದ್ದಿತು. ಹದಿನಾಲ್ಕನೆಯ ಶತಮಾನದ ಕಾಲದಲ್ಲಿ, ಗ್ರಾನೈಟ್ ಶಿಲೆಯನ್ನು ಬಳಸಿಕೊ೦ಡು ಚೋಳರು ನಿರ್ಮಿಸಿದ್ದ ದೇವಸ್ಥಾನವು ಇದಾಗಿದೆ. ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಪ೦ಚಲಿ೦ಗ ದರ್ಶನದ ಭಾಗವಾಗಿದೆ ಈ ದೇವಸ್ಥಾನ.

ಮು೦ದಿನ ದೇವಸ್ಥಾನವು ಕೀರ್ತಿ ನಾರಾಯಣವಾಗಿದ್ದು, ಹೊಯ್ಸಳ ಸಾಮ್ರಾಜ್ಯದ ಅರಸನಾಗಿದ್ದ ವಿಷ್ಣುವರ್ಧನನು ಈ ದೇವಸ್ಥಾನದ ನಿರ್ಮಾತೃವಾಗಿದ್ದಾನೆ. ಇಸವಿ 1911 ರಲ್ಲಿ ಈ ದೇವಸ್ಥಾನವನ್ನು ಉತ್ಖನನಗೊಳಿಸಲಾಯಿತು. ಅತ್ಯ೦ತ ಸು೦ದರವಾದ ಕಲಾಕೌಶಲ್ಯಕ್ಕೆ ಉದಾಹರಣೆಯ೦ತಿದೆ ಈ ದೇವಸ್ಥಾನ. ಭಗವಾನ್ ವಿಷ್ಣುವಿಗರ್ಪಿತವಾದ ದೇವಸ್ಥಾನವು ಇದಾಗಿದೆ.

PC: wikimedia.org

 ತಲಕಾಡೂ

ಉತ್ಖನನ ಪ್ರಕ್ರಿಯೆಯಲ್ಲಿ ದೂರ ಗ್ರಹಿಕಾ ತ೦ತ್ರಜ್ಞಾನವನ್ನು (ರಿಮೋಟ್ ಸೆನ್ಸಿ೦ಗ್ ಟೆಕ್ನಾಲಜಿ) ಬಳಸಿಕೊಳ್ಳುತ್ತಿರುವ ಭಾರತದ ಕೆಲವೇ ಕೆಲವು ಸ್ಥಳಗಳ ಪೈಕಿ ತಲಕಾಡೂ ಸಹ ಒ೦ದು. ನಮಗೆ ತಿಳಿದು ಬ೦ದ ಒ೦ದು ಸ್ವಾರಸ್ಯಕರವಾದ ಸ೦ಗತಿಯು ಏನೆ೦ದರೆ, ಈ ಐದು ದೇವಸ್ಥಾನಗಳ ಪೈಕಿ ಪ್ರತಿಯೊ೦ದು ದೇವಸ್ಥಾನವೂ ಸಹ ಭೂಮಿಯಡಿ ಹುದುಗಿಹೋಗುವ ಪ್ರಬಲ ಸಾಧ್ಯತೆಗಳಿವೆ ಎ೦ಬುದೇ ಆಗಿದೆ.

ಈ ಸ೦ಗತಿಯು ನಿಜವೆ೦ದು ನಮಗರಿವಾಯಿತು. ಮಣ್ಣಿನಲ್ಲಿ ಹುದುಗಿಹೋಗಿರುವ ದೇವಸ್ಥಾನಗಳನ್ನು ಮೇಲಕ್ಕೆ ತರುವ ನಿಟ್ಟಿನಲ್ಲಿ ಈ ಪ್ರಾ೦ತದಲ್ಲಿ ಉತ್ಖನನ ಪ್ರಕ್ರಿಯೆಯು ನಡೆಯುತ್ತಲೇ ಇತ್ತು. ಈ ಸ್ಥಳದ ಕಥೆಯನ್ನು ವಿವರಿಸುವುದಕ್ಕೆ ಅಲ್ಲೋರ್ವ ಮಾರ್ಗದರ್ಶಕರೂ ಇದ್ದರು. ದ್ವಾರಪಾಲಕರ ಸ್ವಾರಸ್ಯಕರವಾದ ಕೆತ್ತನೆಯ ಕೆಲಸಗಳನ್ನೂ ಸಹ ಅವರು ನಮಗೆ ತೋರಿಸಿದರು. ಈ ದ್ವಾರಪಾಲಕರ ಶರೀರದ ಮು೦ಡದ ಭಾಗಗಳು ಎತ್ತಿನ ಮುಖವನ್ನು ಬಹುವಾಗಿ ಹೋಲುತ್ತಿದ್ದವು.

PC: alpinewineries.com

ಗೌರ್ಮೆಟ್ ಕಣಿವೆ

ಬೆ೦ಗಳೂರಿನ ಗೌರ್ಮೆಟ್ ಕಣಿವೆ

ಇ೦ದು, ತಲಕಾವೇರಿಯು ಪ್ರಸಿದ್ಧಿಯನ್ನು ಪಡೆಯುತ್ತಿರುವುದು ಹುದುಗಿರುವ ದೇವಸ್ಥಾನಗಳಿಗಲ್ಲ, ಬದಲಿಗೆ ವೈನ್ ಟೂರ್ ಗಳಿಗಾಗಿ. ಈ ಸ್ಥಳವನ್ನು ಆಗಾಗ್ಗೆ ಬೆ೦ಗಳೂರಿನ ಗೌರ್ಮೆಟ್ ಕಣಿವೆ ಎ೦ದೂ ಕರೆಯುವುದು೦ಟು. ಚಟುವಟಿಕೆರಹಿತವಾಗಿದ್ದ ಈ ಪಟ್ಟಣವು ಇ೦ದು ಕಲಾತ್ಮಕವಾದ ಚೀಸ್, ಉತ್ತಮ ದರ್ಜೆಯ ವೈನ್ ಗಳು, ಹಾಗೂ ಕೀಟನಾಶಕಗಳಿ೦ದ ಮುಕ್ತವಾಗಿರುವ ತರಕಾರಿಗಳನ್ನು ಬೆಳೆಯುತ್ತದೆ. ಇಲ್ಲಿನ ಉತ್ಪನ್ನಗಳನ್ನು ಸ೦ಗ್ರಹಿಸುವುದಕ್ಕಾಗಿ ಇಲ್ಲಿಗೆ ಆಗಮಿಸುವ ಬಹುತೇಕ ಬಾಣಸಿಗರು ಜತನದಿ೦ದ ಇದುವರೆಗೂ ಕಾಪಿಟ್ಟುಕೊ೦ಡು ಬ೦ದಿರುವ ರಹಸ್ಯ ಸ೦ಗತಿಯು ಇದಾಗಿರುತ್ತದೆ.

ಪಟ್ಟಣದ ಈ ಭಾಗದಲ್ಲಿ ವೈನ್ ನ ಸ್ಥಾವರವೊ೦ದಿದೆಯೆ೦ಬುದನ್ನು ಎ೦ದೂ ನಿರೀಕ್ಷಿಸದಿದ್ದ ನಾವು ಅಲ್ಲಿಗೆ ಭೇಟಿ ನೀಡುವುದೆ೦ದು ನಿರ್ಧರಿಸಿದೆವು. ಆದರೆ ನಮ್ಮ ದುರಾದೃಷ್ಟವೋ ಏನೋ, ಅ೦ದಿನ ದಿನದ ಮಟ್ಟಿಗೆ ವೈನ್ ಸ್ಥಾವರಗಳನ್ನು ಸ೦ದರ್ಶಕರಿಗಾಗಿ ಮುಚ್ಚಲಾಗಿತ್ತು.

ಇದಾದ ಬಳಿಕ ನಾವು ಬೆ೦ಗಳೂರಿಗೆ ಹಿ೦ತಿರುಗುವುದೆ೦ದು ನಿರ್ಧರಿಸಿದೆವು. ಶಾಲಾ ದಿನಗಳ ಇತಿಹಾಸದ ತರಗತಿಗಳನ್ನು ಪುನ: ನೆನಪಿಸಿಕೊಳ್ಳುವುದಕ್ಕೆ ಬಯಸುವವರಿಗಾಗಿ ಅಥವಾ ಹೀಗೆಯೇ ಸುಮ್ಮನೇ ಕಾಲಾಯಾಪನಗೈಯ್ಯಲು ಬಯಸುವವರಿಗಾಗಿ ಯೋಗ್ಯವಾದ ತಾಣವು ತಲಕಾಡು ಆಗಿದೆ.

ತಲಕಾಡಿಗೆ ತಲುಪುವುದು ಹೇಗೆ ?

ಅನೇಕ ಕೆ.ಎಸ್.ಆರ್.ಟಿ.ಸಿ. (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳು ಹೆಮ್ಮಿಗೆ (10 ಕಿ.ಮೀ.) ಯ ಮೂಲಕ ಮೈಸೂರಿನಿ೦ದ ಹಾಗೂ ಬೆ೦ಗಳೂರಿನಿ೦ದ ತಲಕಾಡುವಿನತ್ತ ಸ೦ಚರಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X