ತಲಕಾಡಿಗೆ ಭೇಟಿಕೊಡುವವರೆಲ್ಲರು ನೋಡಲೇಬೇಕಾದ ದೇವಾಲಯ ಅರ್ಕೇಶ್ವರ ದೇವಾಲಯ. ಇದು ಈ ಊರಿನ ಪ್ರಮುಖ ಆಕರ್ಷಣೆಯ ತಾಣವಾಗಿದೆ. ಇಲ್ಲಿ ಒಂದು ಶಿವಲಿಂಗವಿದ್ದು ಇಲ್ಲಿನ ಐದು ಶಿವನ ದೇವಾಲಯಗಳಲ್ಲಿ ಇದು ಒಂದಾಗಿ ಗುರುತಿಸಿಕೊಂಡಿದೆ. ತಲಕಾಡಿನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪಂಚಲಿಂಗ ದರ್ಶನದ...
ತಲಕಾಡಿಗೆ ಪ್ರವಾಸ ಹೊರಟವರು ಒಮ್ಮೆ ಸೋಮನಾಥಪುರಕ್ಕೆ ಬೇಟಿಕೊಡಬಹುದು. ಈ ಊರು ಕಾವೇರಿ ತೀರದಲ್ಲಿ ನೆಲೆಗೊಂಡಿದ್ದು, ಶ್ರೀ ವೇಣುಗೋಪಾಲ ಸ್ವಾಮಿ ಮತ್ತು ಶ್ರೀ ಚೆನ್ನಕೇಶವ ದೇವಾಲಯಗಳೆಂಬ ಎರಡು ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಹೊಯ್ಸಳರ ಅರಸ ನರಸಿಂಹನಿಂದ 1296ರಲ್ಲಿ...
ತಲಕಾಡು ನೋಡಲು ಹೋಗುವ ಪ್ರವಾಸಿಗರು ಇಲ್ಲಿನ ಕೀರ್ತಿನಾರಾಯಣ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಬಹುದು. ಈ ದೇವಾಲಯವನ್ನು 1911ರಲ್ಲಿ ಉತ್ಖನನ ಮಾಡಿ ಹೊರತೆಗೆಯಲಾಯಿತು. ಈ ದೇವಾಲಯ ಹೊಯ್ಸಳರ ಅರಸ ವಿಷ್ಣುವರ್ಧನನಿಂದ ಕಟ್ಟಿಸಲ್ಪಟ್ಟಿತು. ಇಲ್ಲಿರುವ ಕೀರ್ತಿ ನಾರಾಯಣ ಮತ್ತು ರಂಗನಾಥ ಮೂರ್ತಿಗಳನ್ನು ಸ್ವತಃ ವಿಷ್ಣುವರ್ದನನೆ...
ತಲಕಾಡಿಗೆ ಹೋಗುವ ಯಾತ್ರಿಕರು ತಪ್ಪದೆ ಅಲ್ಲಿನ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿ ನೀಡಬೇಕು. ಈ ದೇವಾಲಯವು ಮುಖ್ಯವಾಗಿ ಭ್ರಮರಾಂಬಿಕ ದೇವಿಗೆ ಅರ್ಪಣೆಯಾಗಿದ್ದು, ಮಲ್ಲಿಕಾರ್ಜುನ ಸ್ವಾಮಿಯ ಚಿಕ್ಕಲಿಂಗವನ್ನು ಹೊಂದಿದೆ. ಭಕ್ತಾದಿಗಳು ಸೂಕ್ಷ್ಮವಾಗಿ ಗಮನಿಸಿದರೆ ಲಿಂಗದ ಮೇಲೆ ಹೆಜ್ಜೆ ಗುರುತುಗಳನ್ನು ನೋಡಬಹುದು. ಸ್ಥಳೀಯರ...
ಯಾತ್ರಾರ್ಥಿಗಳಿಗೆ ಬಿಡುವಿದ್ದರೆ ಇಲ್ಲಿನ ಮರುಳೇಶ್ವರ ದೇವಾಲಯಕ್ಕೆ ಭೇಟಿ ಕೊಡಬಹುದು. ಈ ದೇವಾಲಯ ತನ್ನ ಬೃಹತ್ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ಗಂಗ ರಾಜರಿಂದ ಕಟ್ಟಲ್ಪಟ್ಟಿತು. ಈ ದೇವಾಲಯದ ಒಳಗಿನ ಶಿವಲಿಂಗವನ್ನು ಬ್ರಹ್ಮದೇವನು ಪ್ರತಿಷ್ಠಾಪಿಸಿದನು ಎಂದು ನಂಬಲಾಗಿದೆ. ಪಂಚ ಲಿಂಗ ದರ್ಶನದ ಸಮಯದಲ್ಲಿ...
ತಲಕಾಡಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಪಾತಾಳೇಶ್ವರ ದೇವಾಲಯವು ಒಂದು. ಮೂಲಗಳ ಪ್ರಕಾರ ಈ ದೇವಾಲಯವು ತಲಕಾಡಿನಲ್ಲಿ ಗಂಗರು ನಿರ್ಮಿಸಿದ ಮೊಟ್ಟಮೊದಲ ದೇಗುಲಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಪಾತಾಳೇಶ್ವರ ದೇವಾಲಯದಲ್ಲಿ ದಿನದ ವಿವಿಧ ವೇಳೆಯಲ್ಲಿ ವಿವಿಧ ಬಣ್ಣದಿಂದ ಕಾಣುವ ಶಿವಲಿಂಗವು ತನ್ನ ಅಚ್ಚರಿಯಿಂದಾಗಿ...
ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ತಲಕಾಡಿನಿಂದ ಅಂದಾಜು 16 ಕಿ.ಮೀ ದೂರದಲ್ಲಿ ಇರುವ ಪ್ರಸಿದ್ಧ ಯಾತ್ರಾ ಸ್ಥಳವಾದ ತಿರುಮಕೂಡಲು ನರಸೀಪುರಕ್ಕೆ ಭೇಟಿ ಕೊಡಬಹುದು. ಈ ಊರು ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಡೆಯುವ ಕುಂಭ ಮೇಳಕ್ಕಾಗಿ ಪ್ರಸಿದ್ಧಿ ಪಡೆದಿದೆ. ಇದು ದಕ್ಷಿಣ ಭಾರತದಲ್ಲಿ ನಡೆಯುವ ಪ್ರಸಿದ್ಧ ಕುಂಭ ಮೇಳಗಳಲ್ಲಿ...
ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಒಮ್ಮೆ ವೈದ್ಯನಾಥೇಶ್ವರ ದೇವಾಲಯಕ್ಕೆ ಭೇಟಿ ಕೊಡಬಹುದು. ಇಲ್ಲಿ ಮನೋನ್ಮನಿ ದೇವಿಯ, ಸುಬ್ರಹ್ಮಣ್ಯ ಸ್ವಾಮಿಯ ಮತ್ತು ಗಣಪತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯಕ್ಕೆ ಹೋಗುವಾಗ ಯಾತ್ರಾರ್ಥಿಗಳು ಇಲ್ಲಿನ ಮಂಟಪದಲ್ಲಿ ಸ್ಥಾಪಿಸಲಾಗಿರುವ ದುರ್ಗ, ಶಾರದಾಂಬೆ, ನಟರಾಜ,...