ಕಾಣಿಪಾಕಂ ಇದು ವಿನಾಯಕನಿರುವ ಪವಿತ್ರವಾದ ಸ್ಥಳವಾಗಿದೆ. ಆಂಧ್ರಪ್ರದೇಶದಲ್ಲಿ ಪ್ರಾಮುಖ್ಯತೆ ಹೊಂದಿರುವ ಹಲವು ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿನ ವಿಶೇಷತೆ ಎಂದರೆ, ಇಲ್ಲಿನ ವಿನಾಯಕನನ್ನು ಯಾರೂ ಪ್ರತಿಷ್ಠಾಪಿಸಿಲ್ಲ, ಬದಲಾಗಿ ಅದು ಸ್ವಯಂಭೂ ವಿಗ್ರಹವಾಗಿದೆ.
ಈ ಅರ್ಧನಾರೀಶ್ವರ ಲಿಂಗದಲ್ಲಿ ಶಿವರಾತ್ರಿಯಂದು ನಡೆಯುತ್ತೆ ಚಮತ್ಕಾರ!
ನೀವು ಅಂದುಕೊಂಡಿದ್ದು ನೆರವೇರುತ್ತದೆ
PC:Adityamadhav83
ನಿಮ್ಮ ಯಾವುದಾದರೂ ಕೋರಿಕೆ ನೆರವೇರಬೇಕೆಂಬ ಇಚ್ಛೆ ಇದ್ದರೆ ನೀವು ಈ ದೇವಸ್ಥಾನಕ್ಕೆ ಬಂದು ನಿಮಗೆ ಅತ್ಯಂತ ಇಷ್ಟವಾದ ಯಾವುದಾದರೂ ತಿನಿಸನ್ನು ತ್ಯಾಗ ಮಾಡುವುದಾಗಿ ದೇವರ ಮುಂದೆ ಪ್ರಮಾಣ ಮಾಡಬೇಕು. ಆಗ ನಿಮ್ಮ ಕೋರಿಕೆ ನೆರವೇರುತ್ತದೆ.
ಮಾತಿಗೆ ತಪ್ಪಬಾರದು
PC:Dareavii
ನೀವು ನಿಮ್ಮ ಇಷ್ಟವಾದನ್ನು ತ್ಯಾಗ ಮಾಡಿ ನಿಮ್ಮ ಕೋರಿಕೆ ನೆರವೇರಿದ ಬಳಿಕ ಮತ್ತೆ ಆ ವಸ್ತುವನ್ನು ಸ್ವೀಕರಿಸಿದ್ದಲ್ಲಿ ನಿಮ್ಮ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎನ್ನುವುದು ಭಕ್ತರ ನಂಬಿಕೆ. ಒಮ್ಮೆ ಕೊಟ್ಟ ಮಾತನ್ನು ತಪ್ಪಬಾರದು.
ಆ ಹೆಸರು ಬಂದಿದ್ದು ಹೇಗೆ?
ಬಾಲಿವುಡ್ ಫಿಲ್ಮ್ ಸ್ಟಾರ್ಸ್ ಜೊತೆ ಸೆಲ್ಫಿ ಬೇಕಾದರೆ ಇಲ್ಲಿಗೆ ಹೋಗಿ
ಕಟ್ಟಿಸಿದ್ದು ಯಾರು ?
PC:Adityamadhav83
ಪುರಾಣ ಕಾಲದಲ್ಲಿ ಜನುಮಜಯುಡು ಎನ್ನುವ ರಾಜ ಕಟ್ಟಿಸಿದ್ದನಂತೆ. ನಂತರ ೧೧ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದವರು ಆ ದೇವಾಲಯವನ್ನು ಅಭಿವೃದ್ಧಿಗೊಳಿಸಿದರು.
ದೊಡ್ಡದಾಗುತ್ತಾ ಹೋಗುತ್ತದೆ
PC:Adityamadhav83
ಈ ಗಣೇಶನ ಮೂರ್ತಿಯು ದಿನದಿಂದ ದಿನಕ್ಕೆ ಗಾತ್ರದಲ್ಲಿ ದೊಡ್ಡದಾಗುತ್ತಾ ಇದೆಯಂತೆ. ಇದಕ್ಕೆ ಸಾಕ್ಷಿಯೆಂದರೆ 50 ವರ್ಷಗಳ ಹಿಂದೆ ಗಣೇಶನ ಈ ವಿಗ್ರಹಕ್ಕಾಗಿ ಮಾಡಿಸಿದ್ದ ಕವಚ ಈಗ ಸಣ್ಣದಾಗುತ್ತಿದೆ.
ಸುಳ್ಳು ಹೇಳಲು ಹೆದರುತ್ತಾರೆ
PC:Vin09
ಈ ಕ್ಷೇತ್ರದಲ್ಲಿ ಸುಳ್ಳು ಹೇಳಲು ಹೆದರುತ್ತಾರೆ. ಬ್ರಿಟಿಷರ ಕಾಲದಿಂದಲೂ ಕಳ್ಳರನ್ನು ಸತ್ಯ ಹೇಳಿಸಲು ಈ ಕ್ಷೇತ್ರಕ್ಕೆ ಕರೆತರುತ್ತಿದ್ದರು ಎನ್ನಲಾಗುತ್ತದೆ. ಇಲ್ಲಿ ಆಣೆ ಪ್ರಮಾಣ ಮಾಡಿಸಲು ಬರುತ್ಥಾರೆ. ಈ ಕ್ಷೇತ್ರದಲ್ಲಿ ಯಾರೂ ಕೂಡಾ ಸುಳ್ಳು ಪ್ರಮಾಣ ಮಾಡೋದಿಲ್ಲ.