ಮಹಾಭಾರತ ಯುದ್ಧವು ಯಾರ ಮಧ್ಯೆ ಸಂಭವಿಸಿತು? ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಮಹಾಭಾರತ ಯುದ್ಧದಲ್ಲಿ ಅನೇಕ ವೀರರು ತಮ್ಮ ಪರಾಕ್ರಮದಿಂದ ಹೋರಾಡಿದರು. ಮಹಾಭಾರತ ನಡೆದಿದೆ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಅದೆಲ್ಲಾ ಕಟ್ಟು ಕಥೆ ಎಂದು ತಳ್ಳಿಹಾಕಿದ್ದಾರೆ. ಕೌರವರ ಹಾಗು ಪಾಂಡವರ ಮಧ್ಯ ನಡೆದ ಘಟನೆಗಳಲ್ಲಿ ಮಹಾಭಾರತದ ಕೊನೆಯ ಯುದ್ಧವೇ ಪ್ರಮುಖವಾದುದು. ಇದನ್ನು ಕುರುಕ್ಷೇತ್ರ ಸಂಗ್ರಾಮ ಎಂದು ಕೂಡ ಕರೆಯುತ್ತಾರೆ.
ಮಹಾಭಾರತ ಕಾವ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಾವೀರರು ಪರಾಕ್ರಮ ಹಾಗು ವೀರತ್ವವನ್ನು ಬಿಂಬಿಸುವ ಅನೇಕ ಉಲ್ಲೇಖಗಳನ್ನು ಕಾಣಬಹುದು. ಸಹಜವಾಗಿ ಹೇಳಬೇಕೆಂದರೆ ಮಹಾಭಾರತದ ಬಗ್ಗೆ ಸಂಕ್ಷೀಪ್ತವಾದ ಮಾಹಿತಿ ಯಾರಿಗೂ ತಿಳಿದಿಲ್ಲ. ಒಬ್ಬ ಯೋಧನು ಮಹಾಭಾರತ ಯುದ್ಧವನ್ನು ಕೇವಲ 30 ಸೆಕೆಂಡ್ಗಳ ಕಾಲದಲ್ಲಿಯೇ ಪೂರ್ತಿ ಮಾಡುತ್ತೇನೆ ಎಂದು ಹೇಳಿದನಂತೆ. ಹಾಗೆಯೇ ತನ್ನ ಶಿರವನ್ನು ಶ್ರೀ ಕೃಷ್ಣನಿಗೆ ನೀಡಿದನಂತೆ. ಆತನ ಬಗ್ಗೆ ನಿಮಗೆ ತಿಳಿಯದೇ ಇರಬಹುದು. ಹಾಗಾದರೆ ಆತ ಯಾರು? ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಐತಿಹಾಸಿಕ ಪ್ರಯಾಣವನ್ನು ಮಾಡಬೇಕು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗಿರುವುದೇ, ಅದರಲ್ಲಿಯೂ ಪೌರಾಣಿಕ ಪ್ರೀಯರಿಗೆ ಚಕಿತಗೊಳಿಸುವ ಅನೇಕ ಸ್ಥಳಗಳು ನಮ್ಮ ಭಾರತ ದೇಶದಲ್ಲಿದೆ. ಇವುಗಳು ಕೂಡ ಮುಖ್ಯವಾದ ಪ್ರವಾಸಿ ಆಕರ್ಷಣೆಗಳೇ ಆಗಿವೆ. ಮಹಾಭಾರತ ಯುದ್ಧದಲ್ಲಿ ನಾವು ಕೇವಲ ಯುದ್ಧ, ಪ್ರತೀಕಾರ, ದ್ವೇಷ, ಸಹೋದರತ್ವವೇ ಅಲ್ಲದೇ ಆಧ್ಯಾತ್ಮಿಕತೆಯನ್ನು ಸಾರುತ್ತದೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಬಾರ್ಬರಿಕನು ಭೀಮನ ಮೊಮ್ಮಗ ಮತ್ತು ಘಟೋದ್ಗಜನ ಮಗ. ಈತನು ಅತ್ಯಂತ ಬಲಶಾಲಿಯಾಗಿದ್ದನು. ಹಿಂದೂ ಧರ್ಮದಲ್ಲಿ, ಖುತುಶ್ಯಾಮ್ ಎಂದು ಬಾರ್ಬರಿಕನನ್ನು ಕರೆಯುತ್ತಾರೆ. ಈತನು ಭಾರತದ ರಾಜಸ್ಥಾನ ಹಾಗು ಹರಿಯಾಣದಲ್ಲಿ ವಿಶೇಷವಾಗಿ ಜನಪ್ರಿಯವಾಗಿದ್ದಾನೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ರಾಜಸ್ಥಾನದಲ್ಲಿ ಇತನನ್ನು ಬಾರ್ಬರೀಕ್ ಎಂದು ಕರೆಯುತ್ತಾರೆ. ಮಹಾಭಾರತದ ಕೊನೆಯ ಘಟ್ಟವಾದ ಯುದ್ಧದಲ್ಲಿ ಪಾಂಡವರಿಗೆ ಶ್ರೀ ಕೃಷ್ಣನು ಕೇಳುತ್ತಾನೆ. ಅದೆನೆಂದರೆ ಕುರುಕ್ಷೇತ್ರ ಯುದ್ಧ ಮಾಡಲು ಎಷ್ಟು ದಿನಗಳ ಬೇಕು ಎಂದೂ ಕೇಳುತ್ತಾನೆ. ಅದಕ್ಕೆ ಪಾಂಡವರು ಒಬ್ಬೊಬ್ಬರು ಇಷ್ಟು ದಿನ ಬೇಕು, ಅಷ್ಟು ದಿನ ಬೇಕು ಎಂದು ಹೇಳುತ್ತಾರೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಆದರೆ ಬಾರ್ಬರಿಕ ಮಾತ್ರ ಕೇವಲ 30 ಸೆಕೆಂಡ್ ಸಾಕು ಎಂದು ಹೇಳುತ್ತಾನೆ. ಏಕೆಂದರೆ ಮಹಾಶಿವನಿಂದ ತಪಸ್ಸನ್ನು ಆಚರಿಸಿ ಬಾರ್ಬರಿಕನು 3 ಬಾಣವನ್ನು ಪಡೆದಿರುತ್ತಾನೆ. ಒಂದೇ ಬಾಣದಲ್ಲಿ ಯುದ್ಧವೇ ಸಮಾಪ್ತಿಯಾಗುವ ಬಲವು ಆ ಬಾಣಗಳಿಗೆ ಇದ್ದವು.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಆದರೆ ಶ್ರೀಕೃಷ್ಣನು ಮಾತ್ರ ಬಾರ್ಬರಿಕನ ಈ ಮಾತನ್ನು ನಿರಾಕರಿಸಿದನು. ಆತನು ಹೊಂದಿದ್ದ ಒಂದೇ ಬಾಣದಿಂದ ಇಡೀ ವಿಶ್ವವೇ ನಾಶವಾಗುತ್ತಿತ್ತು ಎಂಬುದು ಶ್ರೀ ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು. ಬಾರ್ಬರಿಕನನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಪೂಜಿಸುವ ದೇವಾಲಯವು ನಮ್ಮ ಭಾರತ ದೇಶದಲ್ಲಿದೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಅದಕ್ಕೆ ಶ್ರೀ ಕೃಷ್ಣನು ಬಾರ್ಬರಿಕನ ಶಿರವನ್ನು ಕತ್ತರಿಸಿ ತನಗೆ ನೀಡಬೇಕು ಎಂದು ಹೇಳುತ್ತಾನೆ. ಅದಕ್ಕೆ ಯಾವ ಯೋಚನೆಯನ್ನು ಮಾಡದೇ ಬಾರ್ಬರಿಕನು ತನ್ನ ಶಿರವನ್ನು ಕತ್ತರಿಸಿ ಕೃಷ್ಣನಿಗೆ ನೀಡುತ್ತಾನೆ. ಇತನನ್ನು ನಮ್ಮ ರಾಜಸ್ಥಾನ ರಾಜ್ಯದಲ್ಲಿ ಅನೇಕ ಮಂದಿ ಭಕ್ತರು ದೇವಾಲಯವನ್ನು ನಿರ್ಮಾಣ ಮಾಡಿ ಪೂಜಿಸುತ್ತಿದ್ದಾರೆ. ಇಲ್ಲಿ ಶಿರ ಮಾತ್ರ ಇರುವುದನ್ನು ಕಾಣಬಹುದಾಗಿದೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಹೇಗೆ ಸಾಗಬೇಕು?
ಈ ಖತುಶ್ಯಾಮ ದೇವಾಲಯಕ್ಕೆ ತೆರಳಲು ಜೈಪುರದಿಂದ ಸುಮಾರು 80 ಕಿ.ಮೀ, ದೆಹಲಿಯಿಂದ ಸುಮಾರು 266 ಕಿ.ಮೀ ದೂರದಲ್ಲಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಜೈಪುರ್ ವಿಮಾನ ನಿಲ್ದಾಣವಾಗಿದೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಇಲ್ಲಿನ ದೇವರಿಗೆ ಅತ್ಯಂತ ಶ್ರದ್ಧೆ, ಭಕ್ತಿಯಿಂದ ಆರಾಧಿಸುತ್ತಾರೆ, ಬಾರ್ಬಲ್ನ ವಿಗ್ರಹವನ್ನು ಗರ್ಭಗುಡಿಯಲ್ಲಿ ಕಾಣಬಹುದಾಗಿದೆ. ಅದನ್ನು ಮಕರಾನ ಮಾರ್ಬಲ್ ಎಂದೇ ಕರೆಯುತ್ತಾರೆ. ಬಾರ್ಬರಿಕನನ್ನು ಕಲಿಯುಗದ ದೈವವೆಂದೇ ಕರೆಯುತ್ತಾರೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಶ್ಯಾಮ ಕೊಳ
ದೇವಾಲಯದ ಸಮೀಪದಲ್ಲಿಯೇ ಒಂದು ಕೊಳವಿದೆ. ಅದನ್ನು ಅತ್ಯಂತ ಪವಿತ್ರವಾದುದು ಎಂದು ನಂಬಲಾಗಿದೆ. ಬಾರ್ಬರಿಕ ಸ್ವಾಮಿಯನ್ನು ಕಾಣುವುದಕ್ಕಿಂತ ಮುಂಚೆ ಈ ಶ್ಯಾಮ ಕೊಳದಲ್ಲಿ ಸ್ನಾನವನ್ನು ಆಚರಿಸಿ ನಂತರ ದೇವಾಲಯಕ್ಕೆ ತೆರಳುತ್ತಾರೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಉತ್ತಮವಾದ ಬದಲಾವಣೆಯಾಗುತ್ತದೆ ಎಂದು ನಂಬಲಾಗಿದೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಶ್ಯಾಮ ಪಾರ್ಕ್
ದೇವಾಲಯ ಸಮೀಪದಲ್ಲಿಯೇ ಶ್ಯಾಮ ಪಾರ್ಕ್ ಇದೆ. ಇದು ಅಡ್ಡಾಡಲು ಅಲ್ಲ, ಬದಲಾಗಿ ದೇವರಿಗೆ ಅಲಂಕಾರ ಮಾಡಲು ಬಳಸುವ ಹೂವುಗಳನ್ನು ಇಲ್ಲಿ ಪ್ರತ್ಯೇಕವಾಗಿ ಬೆಳೆಸುತ್ತಾರೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಗೌರಿಶಂಕರ ದೇವಾಲಯ
ಇಲ್ಲಿ ಗೌರಿ ಶಂಕರ ದೇವಾಲಯವು ಕೂಡ ಇದೆ. ಈ ದೇವಾಲಯವು ಮಹಾಶಿವನಿಗೆ ಮುಡಿಪಾದುದು. ಔರಂಗಜೇಬನು ಈ ಸುಂದರವಾದ ದೇವಾಲಯವನ್ನು ನಾಶಗೊಳಿಸಿದನು. ಈ ಸ್ಥಳವನ್ನು ರಕ್ತಪಾತದಿಂದ ಸುಟ್ಟು ಹಾಕಲಾಗಿದೆ ಎಂದೇ ನಂಬಲಾಗಿದೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಆರಾತಿ
ಇಲ್ಲಿ ದೇವರಿಗೆ ಆರಾತಿಗಳನ್ನು ಮಾಡುತ್ತಾರೆ. ಅವುಗಳೆಂದರೆ ಮಂಗಳ ಆರಾತಿ, ಶ್ರೀನಗರ್ ಆರಾತಿ ಮತ್ತು ಸಂಧ್ಯಾ ಆರಾತಿಗಳನ್ನು ಬೆಳಗ್ಗೆ, ಮಧ್ಯಾಹ್ನ, ಸಂಜೆ ಮಾಡುತ್ತಾರೆ. ಇಲ್ಲಿ ಅನೇಕ ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?
ಇಲ್ಲಿ ಬಾರ್ಬರಿಕನ ಕೇವಲ ಶಿರದ ವಿಗ್ರಹ ಮಾತ್ರವೇ ಕಾಣಬಹುದಾಗಿದೆ. ಬಾರ್ಬರಿಕನ್ನು ಶ್ರೀ ಕೃಷ್ಣನ ಅವತಾರವೆಂದೇ ಭಾವಿಸಿ ಖತುಶ್ಯಾಮ ಎಂದು ಕರೆಯುತ್ತಾರೆ. ಈ ಖತುಶ್ಯಾಮನ ದೇವಾಲಯವು ರಾಜಸ್ಥಾನದ ಚಿಕಲ್ದಾರಾ ಎಂಬ ಅರಣ್ಯ ಪ್ರದೇಶದಲ್ಲಿ ಒಂದು ಚಿಕ್ಕದಾದ ಗ್ರಾಮದಲ್ಲಿ ಈತನ ದೇವಾಲಯವಿದೆ.


Click it and Unblock the Notifications
















