Search
  • Follow NativePlanet
Share
» »ಈ ಸ್ತಂಭ ಉರುಳಿದರೆ ಯುಗಾಂತ್ಯವಾಗುವುದು ಖಚಿತ

ಈ ಸ್ತಂಭ ಉರುಳಿದರೆ ಯುಗಾಂತ್ಯವಾಗುವುದು ಖಚಿತ

ಈ ಯುಗಾಂತದಲ್ಲಿ ಸೃಷ್ಟಿಯು ಅಂತ್ಯವಾಗಿ ಮತ್ತೊಂದು ಹೊಸ ಯುಗದ ಸೃಷ್ಟಿ ಆರಂಭವಾಗುತ್ತದೆ ಎಂದು ಹಲವಾರು ವರ್ಷಗಳಿಂದ ಕೇಳುತ್ತಲೇ ಬರುತ್ತಿದ್ದಿವೆ. ಆಶ್ಚರ್ಯಕರವಾದ ಸಂಗತಿ ಏನೆಂದರೆ ಮಾಹಾರಾಷ್ಟ್ರದ ಕೇದರನಾಥ ಶಿವನ ಒಂದು ದೇವಾಲಯದಲ್ಲಿ ಕಲಿಯುಗದ ಅಂ

ಆದಿ ಅಂತ್ಯ ಎನ್ನುವುದು ಪ್ರತಿಯೊಂದು ಜೀವಿಗೂ ಇರುತ್ತದೆ. ಸೂಕ್ಷ್ಮ ಜೀವಿಯಿಂದ ಹಿಡಿದು ಸಮಸ್ತ ಸೃಷ್ಠಿಯು ಈ ನಿಯಮಕ್ಕೆ ಒಳಪಡುತ್ತದೆ. ಅಂತ ಸಮೀಪವಾಗುವ ಮುಂಚೆ ಈ ಸೃಷ್ಟಿಯು ನಮಗೆ ತಿಳಿಯುವ ಹಾಗೆ ಕೆಲವು ಸಂಕೇತಗಳನ್ನು ತೋರಿಸುತ್ತದೆ. ನಮ್ಮ ಹಿಂದೂ ಪುರಾಣಗಳ ಪ್ರಕಾರ ಭೂಮಿ ಎಲ್ಲಾ ಕಾಲಾಮಾನವನ್ನು 4 ಯುಗಗಳಾಗಿ ವಿಂಗಡಿಸಿದ್ದಾರೆ.

ಅವುಗಳೇ ಕೃತ ಯುಗ, ತ್ರೇತ ಯುಗ, ದ್ವಾಪರ ಯುಗ ಹಾಗೂ ಕಲಿಯುಗ. ನಾವಿರುವುದು ಕಲಿಯುಗದಲ್ಲಿ ಈ ಯುಗಾಂತದಲ್ಲಿ ಸೃಷ್ಟಿಯು ಅಂತ್ಯವಾಗಿ ಮತ್ತೊಂದು ಹೊಸ ಯುಗದ ಸೃಷ್ಟಿ ಆರಂಭವಾಗುತ್ತದೆ ಎಂದು ಹಲವಾರು ವರ್ಷಗಳಿಂದ ಕೇಳುತ್ತಲೇ ಬರುತ್ತಿದ್ದಿವೆ. ಆಶ್ಚರ್ಯಕರವಾದ ಸಂಗತಿ ಏನೆಂದರೆ ಮಾಹಾರಾಷ್ಟ್ರದ ಕೇದರನಾಥ ಶಿವನ ಒಂದು ದೇವಾಲಯದಲ್ಲಿ ಕಲಿಯುಗದ ಅಂತ್ಯ ಯಾವಾಗ ನಡೆಯುತ್ತದೆ ಎಂದು ನಿಖರವಾಗಿ ತಿಳಿಸುತ್ತದೆ.

ಪ್ರಸ್ತುತ ಲೇಖನದಲ್ಲಿ ಆ ಚಮತ್ಕಾರಿ ದೇವಾಲಯದ ಬಗ್ಗೆ ತಿಳಿಯಿರಿ.

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ಈ ರಹಸ್ಯಮಯವಾದ ಈ ದೇವಾಲಯವು ಮಹಾರಾಷ್ಟ್ರದ ಅಹಮದಾ ನಗರ ಜಿಲ್ಲೆಯ ಹರಿಶ್ಚಂದ್ರ ಘಡ್‍ನ ಕೋಟೆಯಲ್ಲಿದೆ. ಈ ದೇವಾಲಯವು ಬೆಟ್ಟದ ಮೇಲೆ ಬೋಲಾ ಶಂಕರನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ.
PC:rohit gowaikar

ಇತಿಹಾಸ

ಇತಿಹಾಸ

ಈ ದೇವಾಲಯದ ಇತಿಹಾಸವು ಮತ್ಸಪುರಾಣ, ಸ್ಕಂದ ಪುರಾಣ ಮತ್ತು ಅಗ್ನಿ ಪುರಾಣಗಳಲ್ಲಿ ಹರಿಶ್ಚಂದ್ರ ಘಡ್ ಪ್ರದೇಶದ ಉಲ್ಲೇಖವಿದೆ. ಈ ಪುರಾಣಗಳ ಪ್ರಕಾರ 6 ನೇ ಶತಮಾನದಲ್ಲಿ ಕುಲಚೂರಿಯ ಸಾಮ್ರಾಜ್ಯಕಾರರು ಈ ಪ್ರದೇಶವನ್ನು ಆಳುತ್ತಿದ್ದರು.
PC:Cj.samson

ಗುಹೆಗಳು

ಗುಹೆಗಳು

ಲ್ಲಿನ ಗುಹೆಗಳು ಅತ್ಯಂತ ಸುಂದರವಾಗಿದ್ದು ಸುಮಾರು 11 ನೇ ಶತಮಾನದಲ್ಲಿ ಗುಹೆಗಳು ತನ್ನ ಅಪೂರ್ವ ಸೊಬಗನ್ನು ವೃದ್ಧಿಸಿಕೊಳ್ಳಲು ಡೊಂಕಾಗಿವೆ. ಈ ಗುಹೆಯಲ್ಲಿ ಮೊದಲಿಗೆ ಮಹಾ ವಿಷ್ಣುವಿನ ಮೂರ್ತಿ ಇತ್ತು. ಚಂಗದೇವ ಎಂಬ ಸನ್ಯಾಸಿಯು 14 ನೇ ಶತಮಾನದಲ್ಲಿ ಈ ಗುಹೆಯಲ್ಲಿ ತಪಸ್ಸನ್ನು ಆಚರಿಸುತ್ತಿದ್ದನು.
PC:rohit gowaikar

ಹರಿಶ್ಚಂದ್ರರೇಶ್ವರ ದೇವಾಲಯ

ಹರಿಶ್ಚಂದ್ರರೇಶ್ವರ ದೇವಾಲಯ

ಇಲ್ಲಿನ ಹರಿಶ್ಚಂದ್ರೇಶ್ವರ ದೇವಾಲಯ ಹಾಗೂ ಕೇದಾರೇಶ್ವರ ಗುಹೆಯನ್ನು ಕೊಳಿ ಮಹದೇವ ಎಂಬ ಬುಡಕಟ್ಟಿನವರ ಅಧೀನದಲ್ಲಿತ್ತು. ಮೊಗಲ್ ಚಕ್ರವರ್ತಿಗಳ ಪೂರ್ವದಲ್ಲಿಯೇ ಬುಡಕಟ್ಟು ಜನರು ಈ ಸುಂದರವಾದ ದೇವಾಲಯ ಹಾಗೂ ಗುಹೆಯನ್ನು ನೋಡಿಕೊಳ್ಳುತ್ತಿದ್ದರು. ನಂತರ ಇದು ಮೊಗಲರ ಕೈವಶವಾಯಿತು. 1747ರಲ್ಲಿ ಮರಾಠ ಈ ಪ್ರದೇಶವನ್ನು ಆಕ್ರಮಿಸಿಕೊಂಡರು.
PC:YOUTUBE

ಸಪ್ತ ತೀರ್ಥ ಪುಷ್‍ಕರಣೀ

ಸಪ್ತ ತೀರ್ಥ ಪುಷ್‍ಕರಣೀ

ದೇವಾಲಯದ ಪೂರ್ವ ಭಾಗದಲ್ಲಿ ಸಪ್ತ ತೀರ್ಥವಿದೆ. ಈ ತೀರ್ಥದ ಸಮೀಪ ಮಹಾ ವಿಷ್ಣುವಿನ ಮೂರ್ತಿ ಇದೆ. ಇತ್ತೀಚಿಗೆ ವಿಷ್ಣುವಿನ ಮೂರ್ತಿಯನ್ನು ಹರಿಶ್ಚಂದೇಶ್ವರ ದೇವಾಲಯದ ಗುಹೆಗೆ ವರ್ಗಾಯಿಸಲಾಯಿತು. ಇಲ್ಲಿಗೆ ಬರುವ ಹಲವಾರು ಪ್ರವಾಸಿಗರು ಸಪ್ತ ತೀರ್ಥವನ್ನು ಮಾಲಿನ್ಯ ಮಾಡಿದರು.
PC:YOUTUBE

ಕೇದರೇಶ್ವರ ದೇವಾಲಯ

ಕೇದರೇಶ್ವರ ದೇವಾಲಯ

ಹರಿಶ್ಚಂದೇಶ್ವರ ದೇವಾಲಯಕ್ಕೆ ಹೋಗುವ ದಾರಿಯ ಸಮೀಪದಲ್ಲಿಯೇ ಬೃಹತ್ ಗುಹೆಯು ದೊರೆಯುತ್ತದೆ ಅದುವೇ ಕೇದಾರನಾಥನು ನೆಲೆಸಿದ್ದಾನೆ. ಈ ಪವಿತ್ರವಾದ ಗುಹೆಯಲ್ಲಿಯೇ ಕಲಿಯುಗ ಅಂತ್ಯವನ್ನು ಸೂಚಿಸುವ ಲಕ್ಷಣಗಳಿವೆ.
PC:YOUTUBE

ಕಲಿಯುಗ ಅಂತ್ಯ

ಕಲಿಯುಗ ಅಂತ್ಯ

ಈ ಕೇದಾರೇಶ್ವರ ದೇವಾಲಯದಲ್ಲಿ ಸ್ಮಶಾಣರುದ್ರ ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಲಿಂಗಕ್ಕೆ ಸುತ್ತಲು ಜಲವೃತ್ತಗೊಂಡಿದೆ. ಸುಮಾರು ಈ ಒಳ ಗುಹೆಯು 5 ಅಡಿ ಎತ್ತರ ಇದೆ.
PC:YOUTUBE

ಕಠಿಣ

ಕಠಿಣ

ಈ ದೇವಾಲಯದ ಒಳಗೆ ಹೋಗುವುದು ಕೊಂಚ ಕಠಿಣವಾದುದು. ಏಕೆಂದರೆ ಇಲ್ಲಿನ ನೀರು ಅತ್ಯಂತ ತಂಪಾಗಿರುತ್ತದೆ. ಮಳೆಗಾಲದಲ್ಲಿ ಈ ದೇವಾಲಯದ ಪ್ರವೇಶ ಅಸಾಧ್ಯವಾದುದು ಹಾಗೂ ಅಪಾಯಕರವಾದುದು.
PC:YOUTUBE

ನಾಲ್ಕು ಸ್ತಂಭ

ನಾಲ್ಕು ಸ್ತಂಭ

ಕೇದಾರನಾಥ ಶಿವಲಿಂಗ ನೆಲೆಸಿರುವ ಈ ದೇವಾಲಯದಲ್ಲಿ 4 ಸ್ತಂಭಗಳಿವೆ. ಒಂದೊಂದು ಸ್ತಂಭ ಒಂದೊಂದು ಯುಗವನ್ನು ಬಿಂಬಿಸುತ್ತದೆ. ಅವುಗಳೆಂದರೆ ಕೃತ ಯುಗ, ತ್ರೇತ ಯುಗ, ದ್ವಾಪರ ಯುಗ ಹಾಗೂ ಕಲಿಯುಗಕ್ಕೆ ಸರಿಸಮವಾಗಿದೆ.
PC:YOUTUBE

ಕೊನೆಯ ಸ್ತಂಭ

ಕೊನೆಯ ಸ್ತಂಭ

ನಾಲ್ಕು ಸ್ತಂಭಗಳಲ್ಲಿ ಕೇವಲ ಒಂದೇ ಸ್ತಂಭವಿದೆ. ಈ ಸ್ತಂಭವೇ ಕಲಿಯುಗದ ಅಂತ್ಯವನ್ನು ತಿಳಿಸುತ್ತದೆ. ಕಾಲಾಕ್ರಮೇಣ ಯುಗಗಳಲ್ಲಿ ಧರ್ಮವು ನಾಶವಾದ ಕಾರಣ ಮೂರು ಸ್ತಂಭಗಳು ಉರುಳಿವೆ. ಇರುವುದು ಒಂದೇ ಸ್ತಂಭ.
PC:YOUTUBE

ನಾಶ

ನಾಶ

ಉಳಿದಿರುವ ಕೊನೆಯ ಸ್ತಂಭ ಉರುಳಿದರೆ ಪ್ರಪಂಚವೇ ಉರುಳಿದಂತೆ. ಅಂದರೆ ಸೃಷ್ಟಿ ನಿಯಮದ ಪ್ರಕಾರ ಕಲಿಯುಗ ಅಂತ್ಯವಾದಂತೆ. ಶಿವನ ಲಿಂಗದ ಮೇಲಿರುವ ಸ್ತಂಭ ಉರುಳಿದರೆ ಗುಹೆಯೇ ಲಿಂಗದ ಮೇಲೆ ಬೀಳುವುದರಿಂದ ಸೃಷ್ಟಿಗೆ ಕೇಡಾಗುತ್ತದೆ ಎಂದು ತಿಳಿಸುತ್ತಾರೆ.
PC:YOUTUBE

ರಹಸ್ಯವಾದ ಜಲ

ರಹಸ್ಯವಾದ ಜಲ

ಶಿವನ ದೇವಾಲಯದಲ್ಲಿ ನಿತ್ಯವು ಜಲದಿಂದ ಅವೃತ್ತಗೊಂಡಿರುತ್ತದೆ. ಈ ಪವಿತ್ರ ಜಲವು ಗೋಡೆಗಳಿಂದ ಬರುತ್ತದೆ ಎಂದು ಹೇಳಲಾಗಿದೆ.
PC:YOUTUBE

ಹರಿಶ್ಚಂದ್ರ ಗುಹೆ

ಹರಿಶ್ಚಂದ್ರ ಗುಹೆ

ಹರಿಶ್ಚಂದ್ರ ಗುಹೆಯು ಹಲವಾರು ಕಡೆ ಹರಡಿಕೊಂಡಿದೆ. ಕೆಲವು ಗುಹೆಗಳು ಕೇದಾರನಾಥನ ದೇವಾಲಯದ ಬಳಿ ಇರುವುದನ್ನು ಕೂಡ ಕಾಣಬಹುದಾಗಿದೆ.
PC:YOUTUBE

ಭಕ್ತರು

ಭಕ್ತರು

ಈ ದೇವಾಲಯದ ರಹಸ್ಯವನ್ನು ನೋಡಲು ದೇಶ ವಿದೇಶಗಳಿಂದ ಹಲವಾರು ಜನರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
PC:YOUTUBE

ಹರಿಶ್ಚಂದ್ರೇಶ್ವರ ದೇವಾಲಯ

ಹರಿಶ್ಚಂದ್ರೇಶ್ವರ ದೇವಾಲಯ

ಈ ದೇವಾಲಯವು ಅತ್ಯದ್ಭುತವಾದ ಶಿಲ್ಪಗಳನ್ನು ಹೊಂದಿದ್ದು ಮನಸೊರೆಗೊಳ್ಳುವ ಸೌಂದರ್ಯ. ಈ ದೇವಾಲಯವು 16 ಮೀಟರ್‍ನಷ್ಟು ಎತ್ತರದಲ್ಲಿದೆ. ಇಲ್ಲಿ ಹಲವಾರು ಗುಹೆಗಳು ಹಾಗೂ ಪವಿತ್ರವಾದ ನದಿಗಳನ್ನು ಕಾಣಬಹುದಾಗಿದೆ.
PC:YOUTUBE

ಸಮೀಪದಲ್ಲಿರುವ ಹಲವು ಸ್ಥಳಗಳು

ಸಮೀಪದಲ್ಲಿರುವ ಹಲವು ಸ್ಥಳಗಳು

ಇಲ್ಲಿ ಹಲವಾರು ವಿವಿಧ ಗುಹೆಗಳಿವೆ. ಮುಖ್ಯವಾಗಿ ನಾಗೇಶ್ವರ ದೇವಾಲಯ, ತಾರಾಮತಿ ಶಿಖರ, ಕೋನಕ್ ಕಾಡ ಇನ್ನೂ ಹಲವಾರು.
PC:YOUTUBE

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+