ಮಥುರಕ್ಕೆ ಸಮೀಪದಲ್ಲಿರುವ ಗೋವರ್ಧನ ಗಿರಿ ಹಿಂದೂಗಳಿಗೆ ಒಂದು ಪ್ರಸಿದ್ಧವಾದ ಪುಣ್ಯಕ್ಷೇತ್ರ. ಒಂದು ಪುರಾಣದ ಪ್ರಕಾರ ಈ ಗೋವರ್ಧನ ಗಿರಿ ಕೃಷ್ಣನ ಒಂದು ದೈವಲೀಲೆಯ ಭಾಗವಾಗಿ ಸ್ವರ್ಗದಿಂದ ಭೂಮಿ ಮೇಲೆ ಬಂದಿತು ಎಂದು ನಂಬುತ್ತಾರೆ. ಅಷ್ಟೇ ಅಲ್ಲ ಈ ಪ್ರದೇಶಕ್ಕೆ ಹಾಗು ಕೃಷ್ಣನಿಗೆ ಸಂಬಂಧ ಇದೆ ಎಂದು ನಂಬುತ್ತಾರೆ.
ಮತ್ತೊಂದು ಪುರಾಣದ ಪ್ರಕಾರ ಒಮ್ಮೆ ಭಾರಿ ಮಳೆ ಬೀಳುತ್ತಿದ್ದ ಸಮಯದಲ್ಲಿ ಕೃಷ್ಣನು ಪರ್ವತವನ್ನು ಎತ್ತಿ ಸತತ 7 ದಿನಗಳ ಕಾಲ ತನ್ನ ಕೈಯಲ್ಲಿ ಹಿಡಿದುಕೊಳ್ಳುವ ಮೂಲಕ ಪ್ರಜೆಗಳನ್ನು ಕಾಪಾಡಿದನು ಎಂದು ಹೇಳುತ್ತದೆ. ಮೇಲೆ ಹೇಳಿದ ವಿಧವಾಗಿ, ಗೋವರ್ಧನ ಗಿರಿ ಹಿಂದೂಗಳ ಪ್ರಧಾನವಾದ ಯಾತ್ರಾ ಪ್ರದೇಶದಲ್ಲಿ ಒಂದಾಗಿದೆ, ಅಷ್ಟೇ ಅಲ್ಲ ಗೋವರ್ಧನ ಗಿರಿ ಸುತ್ತ ಯಾರು ಪ್ರದಕ್ಷಿಣೆ ಮಾಡುತ್ತಾರೆಯೋ ಅವರು ಕೋರಿಕೊಳ್ಳುವ ಕೋರಿಕೆಗಳು ನೇರವೇರುತ್ತದೆ ಎಂದು ನಂಬಲಾಗಿದೆ.
1.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಇಲ್ಲಿರುವ ದೇವರ ಭಾರಿ ವಿಗ್ರಹವು ಸುತ್ತ-ಮುತ್ತಲಿನ ಪ್ರದೇಶದಲ್ಲಿನ ಪ್ರಜೆಗಳಿಗೆ ಆಧ್ಯಾತ್ಮಿಕತೆಯನ್ನು ವೃದ್ಧಿಸುತ್ತದೆ. ಗೋವರ್ಧನದಲ್ಲಿ ನೋಡಬೇಕಾಗಿರುವುದು ಶ್ರೀ ಕೃಷ್ಣನಿಗೆ ಅಂಕಿತವಾದ ಹಾರ ದೇವಾಜಿ ದೇವಾಲಯ ಪ್ರಧಾನವಾದ ಆಕರ್ಷಣೆಯನ್ನು ಉಂಟು ಮಾಡುತ್ತದೆ. ಈ ದೇವಾಲಯದಲ್ಲಿ ರಾಧ ಮತ್ತು ಶ್ರೀ ಕೃಷ್ಣ ಸುಂದರವಾದ ವಿಗ್ರಹಗಳು ಮತ್ತು ಆತನ ಜೀವನಕ್ಕೆ ಸಂಬಂಧಿಸಿದ ಸಂಘಟನೆಗಳನ್ನು ನೋಡಬಹುದು.
2.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಕೃಷ್ಣ, ರಾಧಾ ಮತ್ತು ಗೋಪಿಕೆಯರು ಸೇರುವ ರಾಧಾ ಕುಂಡ ಅಥವಾ ಸರೋವರವನ್ನು ಕಾಣಬಹುದು. ತದನಂತರ ಗೋಪಿಕೆಗಳು ಶ್ರೀ ಕೃಷ್ಣನಿಗಾಗಿ ಕಾಯುತ್ತಾ ಇರುವುದಕ್ಕಾಗಿ ಈ ಸರೋವರವನ್ನು ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗಿದೆ, ಇದೊಂದು ಪವಿತ್ರವಾದ ಸ್ಥಳವೆಂದೇ ಭಾವಿಸಲಾಗಿದೆ.
3.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಇನ್ನು ಶ್ರೀಕೃಷ್ಣನು ಎತ್ತಿದ ಗೋವರ್ಧನಗಿರಿಯ ಬಗ್ಗೆ ನಾವು ಇಂದು ತಿಳಿದುಕೊಳ್ಳೋಣ. ದ್ವಾಪರಯುಗದಲ್ಲಿ ರಾಕ್ಷಸನ ಮಾಯೆಯ ಕಾರಣವಾಗಿ ಭಾರಿ ಮಳೆ, ಬಿರುಗಾಳಿಯಾಗಿ ಪ್ರದೇಶವೆಲ್ಲಾ ಅಲ್ಲೊಲಾ-ಕಲ್ಲೋಲಾವಾಗುತ್ತಿದ್ದ ಸಮಯದಲ್ಲಿ ಪ್ರಜೆಗಳನ್ನು ರಕ್ಷಿಸುವ ಸಲುವಾಗಿ ಶ್ರೀ ಕೃಷ್ಣನು ತನ್ನ ಗೋವರ್ಧನಗಿರಿಯನ್ನು ಎತ್ತಿ ಆಶ್ರಯವನ್ನು ನೀಡಿದನು. ಪ್ರಸ್ತುತ ಗೋವರ್ಧನ ಪರ್ವತವು ಉತ್ತರಪ್ರದೇಶದಲ್ಲಿನ ಮಧುರ ಎಂಬ ಪ್ರದೇಶದಲ್ಲಿದೆ.
4.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಈ ಪರ್ವತ ಪ್ರತಿ ವರ್ಷ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಾ ಇರುತ್ತದೆ. ಹಾಗೇ ಕಡಿಮೆಯಾಗುತ್ತಿರುವ ಗೋವರ್ಧನ ಗಿರಿ ಯಾವಾಗ ನೆಲಕ್ಕೆ ಸಮಾಂತರವಾಗಿ ಮಾರ್ಪಾಟಾಗುತ್ತದೆಯೋ ಅಂದು ಕಲಿಯುಗ ಅಂತ್ಯ ಆಗುವುದು ಖಚಿತ ಎಂದು ಪುರಾಣಗಳು ಹೇಳುತ್ತಿವೆ. ಪರ್ವತ ರಾಜ ದ್ರೋಣಕಲ್ ಎಂಬಾತನಿಗೆ ಗೋವರ್ಧನ, ಯಮುನ ಎಂಬ ಇಬ್ಬರು ಮಕ್ಕಳು ಜನಿಸಿದರು. ಗೋವರ್ಧನನು ಗೋವರ್ಧನ ಪರ್ವತವಾಗಿ ಮಾರ್ಪಟಾಗಿ, ಯಮುನೆಯು ಯಮುನಾ ನದಿಯಾಗಿ ಪ್ರವಹಿಸಿಸುತ್ತಿದ್ದರುಉ.
5.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಬ್ರಹ್ಮದೇವ ಮೊಮ್ಮಗನಾದ ದೊಡ್ಡ ಋಷಿಯಾದ ಪುಲಸ್ತ್ಯನು ದ್ರೋಣಕನಿಂದ ಗೋವರ್ಧನ ಪರ್ವತ ಕಾಶಿಯಲ್ಲಿ ಇರಬೇಕು ಎಂದು, ಅಲ್ಲಿ ಇರುವ ಪೂಜಾದಿಕಾರ್ಯಕ್ರಮಗಳು ಮಾಡಿಕೊಳ್ಳಬೇಕು ಎಂದು ತಿಳಿಸುತ್ತಾನೆತ್ತಾನೆ. ಇದಕ್ಕೆ ದ್ರೋಣಕನು ಅಂಗೀಕಾರ ಮಾಡಿ ಗೋವರ್ಧನಿಗೆ ಹೋಗು ಎಂದು ಹೇಳುತ್ತಾನೆ. ಮೊದಲು ಸರಿ ಎಂದು ಹೇಳಿದ ನಂತರ ಪುಲಸ್ತ್ಯಕನು ಹೆಗಲ ಮೇಲೆ ಹೊತ್ತುಕೊಳ್ಳುತ್ತಾನೆ.
6.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ತನ್ನನ್ನು ಹೊತ್ತುಕೊಂಡು ಹೋಗುವ ಮಾರ್ಗದ ಮಧ್ಯದಲ್ಲಿ ಕೆಳಗಿ ಬೀಳಬಾರದು ಎಂದು ಹೇಳುತ್ತಾನೆ. ಏನಾದರೂ ಕಲ್ಲು ಕೆಳಗೆ ಬಿದ್ದರೆ ಅಲ್ಲಿಯೇ ನೆಲೆಸುತ್ತೆನೆ ಎಂದು ಹೇಳುತ್ತಾನೆ. (ಕಾಶಿಯವರಿಗೆ ಯಾವುದೇ ಕಾರಣಕ್ಕೂ ಕೆಳಗೆ ಇಡಬಾರದು ಎಂಬುದು ಆತನ ಷರತ್ತಾಗಿತ್ತು) ಇದಕ್ಕೆ ಪುಲಸ್ತ್ಯನು ಕೂಡ ಅಂಗೀಕಾರ ಮಾಡುತ್ತಾನೆ. ಹಾಗೆ ಗೋವರ್ಧನನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುವ ಸಮಯದಲ್ಲಿ ಶ್ರೀಕೃಷ್ಣನಿಗೆ ಸೇರಿದ ಒಂದು ನಗರ ಕಾಣಿಸುತ್ತದೆ.
7.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಆ ನಗರ ಪ್ರಕೃತಿ ಸೌಂದರ್ಯದಿಂದ ಮಹಾ ಅದ್ಭುತವಾಗಿದ್ದರಿಂದ ತನ್ನ ತಂಗಿಯಾದ ಯಮುನಾ ನದಿ ಕೂಡ ಅಲ್ಲಿಯೇ ಪ್ರವಹಿಸುತ್ತಿರುವುದನ್ನು ಕಂಡು ಸತುಂಷ್ಟನಾಗಿ ಅಲ್ಲಿಯೇ ನೆಲೆಸಲು ಗೋವರ್ಧನನು ಇಷ್ಟ ಪಡುತ್ತಾನೆ. ಇದರಿಂದ ಆ ಪ್ರಕೃತಿ ರಮಣೀಯತೆಗೆ ಬೆರಗಾದ ಆ ಗೋವರ್ಧನನು ಪುಲಸ್ತ್ಯಕನ ಹೆಗಲ ಮೇಲೆ ಕೂತು ಹೆಚ್ಚು ಭಾರವನ್ನು ನೀಡುತ್ತಿರುತ್ತಾನೆ.
8.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ತನ್ನ ಶಕ್ತಿಯಿಂದ ಗೋವರ್ಧನನ್ನು ಪುಲಸ್ತ್ಯನ ಮೇಲೆ ಇದ್ದು, ಹೆಚ್ಚು ಭಾರವು ಆಗುತ್ತಿರುತ್ತಾನೆ. ಇದನ್ನು ಗಮನಿಸಿದ ಪುಲಸ್ತ್ಯನು ಗೋವರ್ಧನಿಗೆ ಶಾಪವನ್ನು ನೀಡುತ್ತಾನೆ. ಅದೆನೆಂದರೆ ವರ್ಷದಿಂದ ವರ್ಷಕ್ಕೆ ನಿನ್ನ ಗಾತ್ರ ಕಡಿಮೆ ಆಗಬೇಕು ಎಂದು ಶಾಪವನ್ನು ನೀಡುತ್ತಾನೆ. ಯಾವಾಗ ಗೋವರ್ಧನವು ಭೂಮಿಗೆ ಸಮಾಂತರವಾಗುತ್ತದೆಯೋ ಆಗ ಪ್ರಳಯವಾಗುತ್ತದೆ ಎಂದು ಕಲಿಯುಗ ನಾಶವಾಗುತ್ತದೆ ಎಂದು ಗೋವರ್ಧನನಿಗೆ ಶಾಪವನ್ನು ನೀಡುತ್ತಾನೆ. ಆ ಶಾಪದ ಫಲವಾಗಿ ಇಂದಿಗೂ ತನ್ನ ಆಕಾರ ತಗ್ಗುತ್ತಲೇ ಇದೆ.
9. ಇಲ್ಲಿನ ಸಮೀಪದಲ್ಲಿನ ಪ್ರವಾಸಿಗರು
ಮಾನಸಿ ಗಂಗಾ ಟ್ಯಾಂಕ್, ಗೋವರ್ಧನ ಗಿರಿ
ಗೋವರ್ಧನ ಪಟ್ಟಣ ಮಧ್ಯದಲ್ಲಿ ರಾಜಾ ಭಗವಾನ್ ದಾಸ್ ಮತ್ತು ರಾಜಾ ಮಾನ ಸಿಂಗ್ನಲ್ಲಿ ಮನ್ಸಿ ಗಂಗಾ ಟ್ಯಾಂಕ್ ಎಂಬ ಕಲ್ಲಿನ ಟ್ಯಾಂಕ್ನ್ನು ನಿರ್ಮಾಣ ಮಾಡಲಾಗಿದೆ. ಮನ್ಸಿ ಎಂಬ ಪದವು ಮನಸ್ಸು ಎಂಬ ಅರ್ಥವಿದೆ. ಒಂದು ಪುರಾಣದ ಪ್ರಕಾರ ಕೃಷ್ಣನು ಸಂರಕ್ಷಕ ತಂದೆ ತಾಯಿಯಾದ ನಂದ ಮತ್ತು ಯಶೋದೆಯು ಗಂಗಾ ಪವಿತ್ರವಾದ ಸ್ನಾನ ಮಾಡಬೇಕು ಎಂದು ಕೋರಿಕೊಂಡರು.
10.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಆದರೆ ಗಂಗಾ ಅತ್ಯಂತ ದೂರದಲ್ಲಿ ಇದ್ದುದ್ದರಿಂದ ನಿವಾಸಿಗಳನ್ನು ಮತ್ತು ಬೃಂದಾವನವನ್ನು ಬಿಟ್ಟು ಅಲ್ಲಿಗೆ ಹೋಗುವುದಕ್ಕೆ ನಂದ ಹಾಗು ಯಶೋಧಗೆ ಇಷ್ಟವಿರಲಿಲ್ಲ. ಕೃಷ್ಣನು ಅವರ ಕೋರಿಕೆಗಳನ್ನು ಕೇಳಿಸಿಕೊಂಡು ತನ್ನ ಶಕ್ತಿಯಿಂದ ಗೋವರ್ಧನ ಗಿರಿಗೆ ಗಂಗೆಯನ್ನು ತೆಗೆದುಕೊಂಡು ಬರುತ್ತಾನೆ. ಹಾಗಾಗಿಯೇ ಈ ಟ್ಯಾಂಕ್ಗೆ ಮನ್ಸಿ ಗಂಗಾ ಎಂದು ಹೆಸರು ಬಂದಿತು.
11.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಯಶೋಧ ಮತ್ತು ಸ್ಥಳೀಯ ನಿವಾಸಿಗಳು ನದಿಯಲ್ಲಿ ಸ್ನಾನ ಆಚರಿಸುವಾಗ ಅವರಿಗೆ ಗಂಗಾ ಮಾತೆಯು ಮೊಸಳೆಯ ಮೇಲೆ ಸವಾರಿ ಮಾಡುತ್ತಿದ್ದದ್ದು ಕಾಣಿಸಿತು. ಈ ಪವಿತ್ರವಾದ ಮನ್ಸಿ ಗಂಗದಲ್ಲಿ ಸ್ನಾನ ಮಾಡಿದರೆ ಶ್ರೀ ಕೃಷ್ಣನ ಪ್ರೇಮ ರೂಪದಲ್ಲಿ ಆಧ್ಯಾತ್ಮಿಕ ಯೋಗ್ಯತೆಯು ಲಭಿಸುತ್ತದೆ ಎಂದು ನಂಬಲಾಗಿದೆ. ಗೋವರ್ಧನ ಸುತ್ತ ಪ್ರದಕ್ಷಿಣೆ ಪ್ರಾರಂಭವಾಗಿ ಮನ್ಸಿ ಗಂಗಾದಲ್ಲಿ ಒಂದು ಸ್ನಾನದಲ್ಲಿ ಮುಗಿಯುತ್ತದೆ.
12.ಕುಸುಮ ಸರೋವರ, ಗೋವರ್ಧನಗಿರಿ
ಕುಸುಂ ಸರೋವರವು ಗೋವರ್ಧಗಿರಿಯಲ್ಲಿನ ಪ್ರಮುಖವಾದ ಸರೋವರವಾಗಿದೆ. ಇದಕ್ಕೆ ಆ ಹೆಸರು ಬರಲು ಕಾರಣ ಸರೋವರದ ಸುತ್ತಲೂ ಕುಸಮ ಹೂವುಗಳು ಇರುವುದರಿಂದಲೇ ಆಗಿದೆ. ಗೋಪಿಕೆಯರು ಈ ಪ್ರದೇಶದಿಂದ ಹೂವುಗಳನ್ನು ತೆಗೆದುಕೊಂಡು ತಮ್ಮ ಪ್ರಿಯವಾದ ಕೃಷ್ಣನಿಗೆ ಕಾಯುತ್ತಾ ಇರುತ್ತಿದ್ದರಂತೆ. ಇಲ್ಲಿಂದ ಕೇವಲ ಅರ್ಧಗಂಟೆ ನಡಿಗೆಯಿಂದ ರಾಧಾ ಕುಂಡಕ್ಕೆ ಸೇರಿಕೊಳ್ಳಬಹುದು.
13.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಕುಸಮ ಸರೋವರ 450 ಅಡಿ ವಿಸ್ತಾರ ಮತ್ತು 60 ಅಡಿ ಆಳವಿದೆ. ಕೃಷ್ಣನಿಗೆ ಕದಂಬ ವೃಕ್ಷಗಳು ತುಂಬ ಇಷ್ಟವಾದ್ದರಿಂದ ದಟ್ಟವಾಗಿ ಇರುವ ಹಾಗೆ ಅಭಿವೃದ್ಧಿ ಮಾಡಿದ್ದಾರೆ. ತೋಟದಲ್ಲಿ ಒಂದು ಪುರಾತನವಾದ ಹಾಗು ರಾಜ ಕುಟುಂಬಕ್ಕೆ ಸೇರಿದ ಒಂದು ಸ್ಮøತಿ ಚಿಹ್ನೆ ಕೂಡ ಇದೆ.
14.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಸರೋವರದ ಸಮೀಪದಲ್ಲಿ ಅನೇಕ ಚಿಕ್ಕ ಚಿಕ್ಕ ದೇವಾಲಯಗಳು ಮತ್ತು ಆಶ್ರಮಗಳು ಇವೆ. ಈ ಪ್ರದೇಶಕ್ಕೆ ಸಂಜೆಯ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಅಲ್ಲಿನ ಪ್ರಶಾಂತವಾದ ಪರಿಸರದಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಾರೆ.
15.ಹಾರ ದೇವಜಿ ದೇವಾಲಯ, ಗೋವರ್ಧನಗಿರಿ
ಕೆಲವು ಗ್ರಂಥಗಳ ಪ್ರಕಾರ, ರಾಧಾ ರಾಣಿ, ಗೋಪಿಕೆಯರ ಜೊತೆ ಒಮ್ಮೆ ಮನ್ಸಿ ಗಂಗಾ ಸರೋವರದ ಸಮೀಪದಲ್ಲಿ ಕೃಷ್ಣನು ಬಾರದೇ ಇದ್ದುದ್ದರಿಂದ ತಮ್ಮ ದೈವವಾದ ಶ್ರೀ ಕೃಷ್ಣನು ಪ್ರಾರ್ಥಿಸಲು ಹಾರಿದೇವ ಎಂಬ ಹೆಸರು ಪಠಿಸಿಲು ಪ್ರಾರಂಭಿಸಿದರಂತೆ.
16.ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಗೋವರ್ಧನ ಗಿರಿಯೇ ಕಲಿಯುಗ ಅಂತ್ಯಕ್ಕೆ ಕಾರಣನಾ?
ಆಗ ಅವರ ಪ್ರೇಮಕ್ಕೆ ಮೆಚ್ಚಿ ಶ್ರೀ ಕೃಷ್ಣನು ತನ್ನ ಎಡಗೈಯಲ್ಲಿ ಗೋವರ್ಧನ ಬೆಟ್ಟ ಮತ್ತು ಬಲಗೈಯಲ್ಲಿ ಕೊಳಲು ಆಹ್ಲಾದಕರವಾದ ಚಿಕ್ಕದಾದ 7 ವರ್ಷಗಳ ಬಾಲಕನ ರೂಪದಲ್ಲಿ ಅವರಿಗೆ ದರ್ಶನವನ್ನು ನೀಡಿದನಂತೆ. ಈ ದಿವ್ಯ ಸಂಜ್ಞೆಯ ಮೂಲಕ ತೃಪ್ತಿ ಹೊಂದಿದ ರಾಧಾ ರಾಣಿ ಮತ್ತು ಗೋಪಿಕೆಯರು ಈ ಪ್ರದೇಶಕ್ಕೆ ಪ್ರತಿ ದಿನ ಭಕ್ತಿ ಗೀತೆಗಳು ಪ್ರಾರಂಭಿಸಿದರು.
17.ರೈಲು ಮಾರ್ಗ
ಗೋವರ್ಧನಿಂದ 26 ಕಿ.ಮೀ ದೂರದಲ್ಲಿ ಸಮೀಪದ ರೈಲ್ವೆ ನಿಲ್ದಾಣವೆಂದರೆ ಮಥುರ. ಇಲ್ಲಿಂದ ಸರ್ಕಾರಿ ಅಥವಾ ಖಾಸಗಿ ಬಸ್ಸುಗಳು ಅಥವಾ ಟ್ಯಾಕ್ಸಿಯ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದು.
18.ವಿಮಾನ ಮಾರ್ಗದ ಮೂಲಕ
ಗೋವರ್ಧನದಲ್ಲಿ ವಿಮಾನವಿಲ್ಲ. ಸಮೀಪ ವಿಮಾನ ನಿಲ್ದಾಣವು ಸುಮಾರು 30 ಕಿ.ಮೀ ದೂರದಲ್ಲಿರುವ ವಾರಣಾಸಿಯಲ್ಲಿದೆ. ಅಲ್ಲಿಂದ ಟ್ಯಾಕ್ಸಿ ಮೂಲಕ ಸೇರಿಕೊಳ್ಳಬಹುದು.