Search
  • Follow NativePlanet
Share
» »ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ..

ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ..

ದ್ವಾರವತಿಯಾಗಿ ಸಂಸ್ಕøತ ಸಾಹಿತ್ಯದಲ್ಲಿ ಹೆಸರುವಾಸಿಯಾದ ದ್ವಾರಕ ಭಾರತೀಯ ಅತಿ ಪ್ರಾಚೀನ 7 ನಗರಗಳಲ್ಲಿ ಇದು ಕೂಡ ಒಂದು. ಇದು ಭಗವಂತನ ಶ್ರೀ ಕೃಷ್ಣನ ನಗರ. ಚಾರ್ ಧಾಂ ಎಂದರೆ ನಾಲ್ಕು ಮುಖ್ಯ ಪವಿತ್ರವಾದ ಸ್ಥಳಗಳಲ್ಲಿ ಒಂದಾದ, " ಸಪ್ತ ಪುರಿಸ್ " ಏ

By Sowmyabhai

ದ್ವಾರವತಿಯಾಗಿ ಸಂಸ್ಕøತ ಸಾಹಿತ್ಯದಲ್ಲಿ ಹೆಸರುವಾಸಿಯಾದ ದ್ವಾರಕ ಭಾರತೀಯ ಅತಿ ಪ್ರಾಚೀನ 7 ನಗರಗಳಲ್ಲಿ ಇದು ಕೂಡ ಒಂದು. ಇದು ಭಗವಂತನ ಶ್ರೀ ಕೃಷ್ಣನ ನಗರ. ಚಾರ್ ಧಾಂ ಎಂದರೆ ನಾಲ್ಕು ಮುಖ್ಯ ಪವಿತ್ರವಾದ ಸ್ಥಳಗಳಲ್ಲಿ ಒಂದಾದ, " ಸಪ್ತ ಪುರಿಸ್ " ಏಳು ಪವಿತ್ರ ನಗರಗಳಲ್ಲಿ ಒಂದಾಗಿ ಆಧ್ಯಾತ್ಮಿಕ ಗ್ರಂಥಗಳಲ್ಲಿ ಭಾವಿಸುವ ಏಕೈಕ ನಗರವಾಗಿದೆ ಈ ದ್ವಾರಕ. ಪೌರಾಣಿಕ ಸಂಬಂಧವಾದ ಭಗವಂತನಾದ ಶ್ರೀ ಕೃಷ್ಣನ ಸಹೋದರ ಮಾವನಾದ ಮಥುರ, ಕಂಸನನ್ನು ಕೊಂದದ್ದರಿಂದ, ಕಂಸನ ಮಾವನಾದ ಜರಾಸಂಧುವಿಗೆ ಯಾದವರಿಗೆ ಶತ್ರುತ್ವ ಏರ್ಪಟ್ಟಿತ್ತು.

ಜರಾಸಂಧುವು ಕೃಷ್ಣನನ್ನು ಕೊಲ್ಲುವ ಸಲುವಾಗಿ 18 ಬಾರಿ ದಾಳಿ ಮಾಡಿದನು. ಈ ಸಂದರ್ಭದಲ್ಲಿ ಶ್ರೀ ಕೃಷ್ಣನು ಯಾದವರು ಭವಿಷ್ಯತ್ತ್ ಅನ್ನು ರೂಪಿಸಲು ಗಿರ್ನಾರ್ ಪರ್ವತದ ಬಳಿ ದಿ ಸ್ಟೇಟ್ ಆಫ್ ಸೌರಾಷ್ಟ್ರ ಅಥವಾ ಗುಜರಾತ್‍ಗೆ ತೆಗೆದುಕೊಂಡು ಹೋದನು.

1.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

1.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಮಥುರವನ್ನು ಬಿಟ್ಟು ಒಂದು ಸ್ಥಳವನ್ನು ಹುಡುಕಿ ತನ್ನ ರಾಜ್ಯವನ್ನು ಸ್ಥಾಪಿಸಲು ಮುಂದಾದನು. ಅಲ್ಲಿ ಶ್ರೀ ಕೃಷ್ಣನು ಪ್ರಮುಖವಾದ ಜೀವನ ಭಾಗವನ್ನು ಕಳೆದನು. ಶ್ರೀ ಕೃಷ್ಣನ ಮರಾಣನಂತರ ದೊಡ್ಡ ಪ್ರವಾಹ ಬಂದು ಆ ನಗರವನ್ನು ಮುಚ್ಚಿ ಹಾಕಿತು. ದ್ವಾರಕ ಆರು ಬಾರಿ ಮಳುಗಿದೆ ಎಂದು ನಂಬಲಾಗಿದೆ. ಇಂದಿನ ದ್ವಾರಕವನ್ನು ಈ ಪ್ರದೇಶದಲ್ಲಿ 7 ಬಾರಿ ನಿರ್ಮಾಣ ಮಡಲಾದ ನಗರವಾಗಿದೆ ಎಂದು ಭಾವಿಸುತ್ತಾರೆ.

2.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

2.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಪವಿತ್ರ ನಗರ ದ್ವಾರಕಕ್ಕೆ ಆ ಹೆಸರು ಸಂಸ್ಕøತದಲ್ಲಿನ ದ್ವಾರ ಎಂಬ ಪದದಿಂದ ಬಂದಿತು. ಅಂದರೆ ಬಾಗಿಲು ಎಂಬ ಶಬ್ಧದಿಂದ ಬಂದಿದೆ. ದ್ವಾರಕ ಎಂದರೆ ಬ್ರಹ್ಮ ದ್ವಾರ ಸೇರಿಕೊಳ್ಳುವುದು ಎಂದು ಭಾವಿಸುತ್ತಾರೆ. ವಿಷ್ಣು ಭಕ್ತರಿಗೆ ಈ ನಗರ ಒಂದು ವಿಶಿಷ್ಟವಾದುದು. ಇಲ್ಲಿನ ಜಗತ್ ಮಂಂದಿರ ದೇವಾಲಯದಲ್ಲಿ ದ್ವಾರಕಾದೀಶನಾದ ಶ್ರೀ ಕೃಷ್ಣನನ್ನು ಪೂಜಿಸುತ್ತಾರೆ.

3.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

3.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

12 ನೇ ಜ್ಯೋತಿರ್‍ಲಿಂಗಗಳಲ್ಲಿ ಒಂದಾದ ನಾಗೇಶ್ವರ ಜ್ಯೋತಿರ್‍ಲಿಂಗ ಕೂಡ ಈ ದ್ವಾರಕದಲ್ಲಿದೆ. ದ್ವಾರಕ ಭಗವಂತನಾದ ಶ್ರೀ ಕೃಷ್ಣನು ತನ್ನ ರಾಜ್ಯವನ್ನು ಸ್ಥಾಪಿಸಿದ ಪ್ರದೇಶವಾಗಿ ಭಾವಿಸಲಾದ ಬೆಯ್ಟ್ ದ್ವಾರಕ ಒಂದು ಚಿಕ್ಕದಾದ ದ್ವೀಪ. ದ್ವಾರಕದಿಂದ ಇಲ್ಲಿಗೆ ಸೇರಿಕೊಳ್ಳುವುದಕ್ಕಿಂತ ಮುಂಚೆ ಒಖ ಪೋರ್ಟ್ ಜೆಟ್ಟಿಕಿ ಸೇರಿಕೊಂಡು ಅಲ್ಲಿಂದ ತೆಪ್ಪದಲ್ಲಿ ಈ ಪ್ರದೇಶಕ್ಕೆ ಸೇರಿಕೊಳ್ಳಬೇಕು.

4.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

4.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಕ್ರಿ.ಪೂ 3 ನೇ ಶತಮಾನದಲ್ಲಿ ಚಾರಿತ್ರಿಕ ಅವಶೇಷಗಳು ಇಲ್ಲಿ ಗುರುತಿಸಲ್ಪಟ್ಟಿದೆ. ಶಂಖಾಸುರನನ್ನು ಭಗವಾನ್ ವಿಷ್ಣುವು ಸಂಹಾರ ಮಾಡಿದ ಪ್ರದೇಶವಾಗಿ ಬೆಯ್ಟ್ ದ್ವಾರಕ ಇತಿಹಾಸ ಹೇಳುತ್ತದೆ. ಹಾಗಾಗಿಯೇ ಈ ದ್ವೀಪವು ಬೆಯ್ಟ್ ಶಂಖೋಧರ ಎಂದು ಕೂಡ ಕರೆಯುತ್ತಾರೆ. ಬೆಯ್ಟ್ ದ್ವಾರಕದಲ್ಲಿ ಡಾಲ್ಫಿನ್‍ಗಳನ್ನು ಕಾಣಬಹುದು.

5.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

5.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಇಲ್ಲಿ ಪಿಕ್ನಿಕ್‍ಗಳಿಗೆ ಮತ್ತು ಸಮುದ್ರ ವಿಹಾರಕ್ಕೆ ಕೂಡ ಹೋಗಬಹುದು. ಭೌಗೋಳಿಕ ವಿಶೇಷಗಳು ಗುಜರಾತ್‍ನಲ್ಲಿನ ಜಾಮ್ನಗರ್ ಜಿಲ್ಲೆಯಲ್ಲಿದೆ ಈ ದ್ವಾರಕ ನಗರ. ಗುಜರಾತ್ ದ್ವೀಪಕಲ್ಪನಲ್ಲಿನ ಪಶ್ಚಿಮ ಭಾಗದಲ್ಲಿದೆ ದ್ವಾರಕ.

6.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

6.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಶ್ರೀ ಕೃಷ್ಣನ ಜೊತೆ ಎಲಿಯನ್ಸ್ ಯುದ್ಧ ಮಾಡಿದ್ದಾರಾ? ಮಹಾಭಾರತ ನಿಜವಾಗಿಯೂ ನಡೆದಿದೆಯೇ. ಅದರಲ್ಲಿ ಹೇಳಿದ ಹಾಗೆ ದ್ವಾರಕ ನಗರವನ್ನು ನಿಜವಾಗಿಯೂ ಶ್ರೀಕೃಷ್ಣನೇ ನಿರ್ಮಾಣ ಮಾಡಿದ್ದಾನೆಯೇ? ಎಂಬ ಪ್ರಶ್ನೆಗಳು ಅನೇಕ ಮಂದಿಯಲ್ಲಿ ಅನುಮಾನ ಹುಟ್ಟುವುದು ಸಾಮಾನ್ಯ. ಆದರೆ ಈ ಮಧ್ಯದಲ್ಲಿಯೇ ಸಮುದ್ರಗರ್ಭದಲ್ಲಿ ಒಂದು ನಗರ ದೊರೆಯಿತು. ಅದನ್ನೇ ದ್ವಾರಕಾ ನಗರವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

7.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

7.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ವಿಜ್ಞಾನಿಗಳು ಇದರ ಬಗ್ಗೆ ಪರಿಶೋಧನೆಗಳನ್ನು ಮಾಡಿ ದ್ವಾರಕಾ ನಗರ ಎಂದು ಹೇಳಿದರು. ಈ ನಗರಕ್ಕೆ ಅನೇಕ ದ್ವಾರಗಳು ಇರುವುರಿಂದ ಇದಕ್ಕೆ ದ್ವಾರಕ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ದ್ವಾರಕನಗರವನ್ನು ನಿರ್ಮಾಣ ಮಾಡಿದ್ದು, ಶ್ರೀ ಕೃಷ್ಣನೇ ಎಂಬ ವಿಷಯವು ಭಾಗವತ ಗ್ರಂಥದಿಂದ ತಿಳಿದುಬರುತ್ತದೆ.

8.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

8.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಮಗಧರಾಜನಾದ ಜರಾಸಂಧನ ದಂಡಯಾತ್ರೆಗಳಿಂದ ಪ್ರಜೆಗಳನ್ನು ಸುರಕ್ಷಿತವಾಗಿ ಕಾಪಾಡುವ ಸಲುವಾಗಿ ಸೂರ್ಯ ಸಾಮ್ರಾಜ್ಯಕ್ಕೆ ಸೇರಿದ ಯದು ಪ್ರಮುಖರಿಂದ ಸೇರಿ ಶ್ರೀ ಕೃಷ್ಣನು ಸಮುದ್ರಗರ್ಭದಲ್ಲಿರುವ ದ್ವೀಪಗಳ ಸಮೂಹವನ್ನು ಆಯ್ದುಕೊಳ್ಳಲು ಈ ನಗರದ ನಿರ್ಮಾಣ ಕಾರ್ಯಕ್ರಮವನ್ನು ಕೈಗೊಂಡನಂತೆ. ಅದನ್ನು ಪೂರ್ತಿ ಮಾಡಿ ಸೂರ್ಯ ಸೇನದ ರಾಜಧಾನಿಯಾದ ಮಧುರದಿಂದ ದ್ವಾರಕಕ್ಕೆ ಮಾರ್ಪಟು ಮಾಡಿದನು.

9.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

9.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ತನ್ನ ಸಹೋದರನಾದ ಶಿಶಿ ಪಾಲನನ್ನು ಶ್ರೀ ಕೃಷ್ಣನು ಸಂಹಾರ ಮಾಡಿದ ಪ್ರತೀಕಾರವಾಗಿ ಸಾಲ್ವನು ಒಂದು ದಿನ ದ್ವಾರಕದ ಮೇಲೆ ದಂಡಯಾತ್ರೆ ಮಾಡಿದನು. ಆತನ ಯುದ್ಧದಲ್ಲಿ ವ್ಯವಹರಿಸಿದ ತಿರು ಶ್ರೀಕೃಷ್ಣನ ಜೊತೆಗೆ ಎಲ್ಲರನ್ನೂ ಆಶ್ಚರ್ಯಗೊಳಿಸಿದನು. ಈ ಯುದ್ಧದಲ್ಲಿ ಸಾಲ್ವನು ಏಲಿಯನ್ಸ್ ಬಳಸುವ ಯುದ್ಧ ವಿಮಾನಗಳನ್ನು, ಯಂತ್ರಗಳನ್ನು ಉಪಯೋಗಿಸಿದರು ಎಂದು ಹೇಳಲಾಗುತ್ತದೆ.

10.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

10.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಇವುಗಳ ಮೂಲಕವೇ ಸಾಲ್ವನು ದ್ವಾರಕಾ ನಗರದ ಮೇಲೆ ಅಗ್ನಿಮಳೆಯನ್ನು ಸುರಿಸಿದ ಹಾಗೆ ಕೆಲವು ಆಧಾರಗಳು ಹೇಳುತ್ತವೆ. ಹಾಗಾಗಿಯೇ ದ್ವಾರಕದಲ್ಲಿ ಅರ್ಥ ಭಾಗ ಭಸ್ಮವಾಯಿತು ಎಂದು ಹೇಳುತ್ತಾರೆ. ಈ ಯುದ್ಧ ನಡೆದ ಕೆಲವು ವರ್ಷಕ್ಕೆ ಶ್ರೀ ಕೃಷ್ಣನು ತನ್ನ ಅವತಾರವನ್ನು ಬಿಟ್ಟ ಹಾಗೆ ಕೆಲವು ಆಧಾರಗಳು ಇವೆ. ಯಾವಾಗ ಶ್ರೀಕೃಷ್ಣನು ತನ್ನ ಅವತಾರವನ್ನು ಬಿಟ್ಟನೋ ದ್ವಾರಕನಗರ ಸಮುದ್ರದಲ್ಲಿ ಜಾರಿ ಹೋಯಿತು ಎಂದು ಹೇಳಲಾಗುತ್ತದೆ.

11.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

11.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಇಲ್ಲಿ ಒಂದು ವಿಷಯದ ಬಗ್ಗೆ ಎಲ್ಲರಿಗೂ ಅನೇಕ ಅನುಮಾನಗಳು ಇವೆ. ಅಸಲಿಗೆ ಎಲಿಯನ್ಸ್‍ಗಳು ಬಳಸುವ ಯುದ್ಧ ವಿಮಾನಗಳು, ಯಂತ್ರಗಳು ಸಾಲ್ವನಿಗೆ ಎಲ್ಲಿಂದ ಬಂತು, ಆ ಟೆಕ್ನಾಲಜಿ ಸಾಲ್ವನಿಗೆ ಹೇಗೆ ತಿಳಿಯಿತು. ಎಂದರೆ ಸಾಲ್ವನು ಶ್ರೀಕೃಷ್ಣನ ಜೊತೆ ಯುದ್ಧ ಮಾಡುವ ಸಲುವಾಗಿ ಎಲಿಯನ್ಸ್ ಸಹಾಯವನ್ನು ತೆಗೆದುಕೊಂಡಿರಬಹುದು ಎಂದು ಅಂದುಕೊಳ್ಳುತ್ತಾರೆ.

12.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

12.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಇದರ ಪ್ರಕಾರ ನೋಡಿದರೆ ಆ ಕಾಲದಲ್ಲಿ ಸಾಲ್ವನ ಜೊತೆ ಅನೇಕ ಮಂದಿ ಎಲಿಯನ್ಸ್‍ನ ಜೊತೆ ಸಂಬಂಧವಿದ್ದ ಹಾಕೆ ಕೆಲವರು ಹೇಳುತ್ತಾರೆ. ಇದೆಲ್ಲಾ ನಿಜವೋ ಅಥವಾ ಅಲ್ಲವೂ ಇಂದಿಗೂ ಯಾರು ಕೂಡ ಹೇಳಲಾಗುತ್ತಿಲ್ಲ. ಆದರೆ ಒಂದು ಮಾತ್ರ ನಿಜ.

13.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

13.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಸ್ವಾಲನ ಜೊತೆ ಎಲಿಯನ್ಸ್‍ಗೆ ಸಂಬಂಧಗಳು ಇಲ್ಲದೇ ಹೋದರೆ ಎಲಿಯನ್ಸ್ ಬಳಸುವ ಯುದ್ಧವಿಮಾನಗಳು, ಯಂತ್ರಗಳು ಎಲ್ಲಿಂದ ಬಂದವು ಎಂಬುದು ಮಿಲಿಯನ್ ಡಾಲರ್ಸ್ ಪ್ರಶ್ನೆಯಾಗಿ ಉಳಿದಿದೆ. ಈ ರಹಸ್ಯವನ್ನು ಭವಿಷ್ಯದಲ್ಲಿ ಯಾರಾದರೂ ಛೇದಿಸುತ್ತಾರೆಯೋ ಕಾದು ನೋಡೊಣ.

14.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

14.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ದ್ವಾರಕದಲ್ಲಿನ ಮುಖ್ಯ ದೇವಾಲಯವಾದ ಈ ದ್ವಾರಕದೀಶ ದೇವಾಲಯವು ಜಗತ್ ಮಂದಿರ (ವಿಶ್ವ ಪುಣ್ಯಕ್ಷೇತ್ರ) ವಾಗಿ ಕೂಡ ಕರೆಯಲಾಗುತ್ತದೆ. ಈ ದೇವಾಲಯವು 2500 ವರ್ಷಗಳ ಪೂರ್ವದಲ್ಲಿ ಶ್ರೀ ಕೃಷ್ಣ ರಾಜ್ಯವಾದ ದ್ವಾರಕ ಮಹಾಭಾರತ ಯುದ್ಧನ ನಂತರ ನೀರಿನಲ್ಲಿ ಮುಳುಗಿದ ನಂತರ ಶ್ರೀ ಕೃಷ್ಣನ ಮೊಮ್ಮಗನಾಗಿ ಕರೆಯಲಾಗುವ ವಜ್ರನಾಭನನಿಂದ ನಿರ್ಮಾಣ ಮಾಡಿಸಲಾಯಿತು.

15.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

15.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಈ ದೇವಾಲಯದ ಸುತ್ತಲೂ ಇರುವ ಕಲಾತ್ಮಕ ಭವನ 16ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳುತ್ತಾರೆ. ಇಲ್ಲಿನ ದೇವಾಲಯವು 43 ಮೀಟರ್ ಎತ್ತರವಾದ ಶಿಖರ, ಅದರ ಮೇಲೆ ಸೂರ್ಯ ಚಂದ್ರರ ಚಿತ್ರಗಳು ಧ್ವಜ, 10 ಕಿ.ಮೀ ದೂರದಿಂದಲೂ ಕೂಡ ಕಾಣಿಸುತ್ತದೆ.

16.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

16.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಇದಕ್ಕೆ ಇರುವ 2 ದ್ವಾರಗಳು ಸ್ವರ್ಗ ಮತ್ತು ಮೋಕ್ಷ ದ್ವಾರದ ಮೂಲಕ ಭಕ್ತರು ಸೇರಿಕೊಳ್ಳುತ್ತಾರೆ. ಈ ದೇವಾಲಯವು ಭಕ್ತರಿಗೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9:30ರವರಗೆ ಹಾಗು ಮಧ್ಯಾಹ್ನ 12:30 ರಿಂದ ಸಂಜೆ 5 ಗಂಟೆಗಳವರೆಗೆ ಭಕ್ತರು ದರ್ಶನವನ್ನು ಹೊಂದಬಹುದು.

17.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

17.ಮಹಾಭಾರತದಲ್ಲಿ ಏಲಿಯನ್ಸ್ ನಂಬಲಾಗದ ನಿಜ....!

ಪ್ರವಾಸಿ ಆಕರ್ಷಣೆ ದ್ವಾರಕಾ ಮತ್ತು ಬೆಯ್ಟ್ ದ್ವಾರಕಾದಲ್ಲಿನ ಅನೇಕ ಪವಿತ್ರವಾದ ದೇವತಾ ಮೂರ್ತಿ ವಿಗ್ರಹಗಳಿಗೆ ಪ್ರತಿ ವರ್ಷ ಅನೇಕ ಮಂದಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದ್ವಾರಕಾದೀಶ ದೇವಾಲಯ, ನಾಗೇಶ್ವರ ಜ್ಯೋತಿರ್‍ಲಿಂಗ ದೇವಾಲಯ, ಮೀರಾಬಾಯಿ ದೇವಾಲಯ, ಶ್ರೀ ಕೃಷ್ಣ ದೇವಾಲಯ, ಹನುಮಂತನ ದೇವಾಲಯ ಮತ್ತು ಬೆಯ್ಟ್ ದ್ವಾರಕದಲ್ಲಿನ ಅನೇಕ ಮುಖ್ಯ ಆಧ್ಯಾತ್ಮಿಕ ಪ್ರದೇಶಗಳು ದ್ವಾರಕದಲ್ಲಿದೆ.

18.ನಾಗೇಶ್ವರ ಜ್ಯೋತಿರ್‍ಲಿಂಗ ದೇವಾಲಯ, ದ್ವಾರಕ

18.ನಾಗೇಶ್ವರ ಜ್ಯೋತಿರ್‍ಲಿಂಗ ದೇವಾಲಯ, ದ್ವಾರಕ

ದ್ವಾರಕಕ್ಕೆ ಮತ್ತು ಬೆಯ್ಟ್ ದ್ವಾರಕಕ್ಕೆ ಸೇರಿಕೊಳ್ಳುವ ಮಾರ್ಗ ಸೌರಾಷ್ಟ್ರ ತೀರಕ್ಕೆ ಈ ನಾಗೇಶ್ವರ ಜ್ಯೋತಿರ್‍ಲಿಂಗ ದೇವಾಲಯವಿದೆ. ಪ್ರಪಂಚದಲ್ಲಿನ 12 ಜ್ಯೋತಿರ್‍ಲಿಂಗಗಳಲ್ಲಿ ಒಂದಾದ ಈ ದೇವಾಲಯವು ಒಂದು ಪ್ರಮುಖವಾದ ಪುಣ್ಯಕ್ಷೇತ್ರವೇ ಅಲ್ಲದೇ ಮುಖ್ಯ ಪ್ರವಾದಿ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಒಂದು ಭೂಗರ್ಭಗುಡಿ ಇದೆ. ಈ ದೇವಾಲಯದಲ್ಲಿ ದೊಡ್ಡ ಈಶ್ವರನ ವಿಗ್ರಹವಿದೆ. ಈ ವಿಗ್ರಹದ ಸುತ್ತ ಉದ್ಯಾನವನವು ಕೂಡ ಇದೆ. ಶಿವರಾತ್ರಿಯ ಸಮಯದಲ್ಲಿ ಈ ದೇವಾಲಯ ತಪ್ಪದೇ ಭೇಟಿ ನೀಡಿ.

19.ಹೇಗೆ ಸಾಗಬೇಕು?

19.ಹೇಗೆ ಸಾಗಬೇಕು?

ರೈಲ್ವೆ ಮಾರ್ಗದ ಮೂಲಕ

ಅಹಮದಾಬಾದ್ ಒಳ ಬ್ರಾಡ್ ಗೆಜ್ ರೈಲ್ವೆ ಲೈನ್ ಸಮೀಪದಲ್ಲಿರುವ ದ್ವಾರಕ ಸ್ಟೇಷನ್ ರಾಜ್ಕೋಟ್, ಆಹಮ್ಮದಾಬಾದ್ ಮತ್ತು ಜಾಮ್ನಗರ್‍ನಂತಹ ಪ್ರದೇಶಗಳನ್ನು ಸಂದರ್ಶಿಸುತ್ತದೆ. ಅಷ್ಟೇ ಅಲ್ಲ ಕೆಲವು ರೈಲುಗಳು ಸೂರತ್, ವಡೋಧರ, ಗೋವಾ, ಕರ್ನಾಟಕ, ಮುಂಬೈ ಮತ್ತು ಕೇರಳದವರೆಗೆ ಕೂಡ ಹೋಗುತ್ತದೆ.

20. ವಾಯು ಮಾರ್ಗದ ಮೂಲಕ

20. ವಾಯು ಮಾರ್ಗದ ಮೂಲಕ

ದ್ವಾರಕಕ್ಕೆ 127 ಕಿ.ಮೀ ದೂರದಲ್ಲಿರುವ ಸ್ವದೇಶಿ ವಿಮಾನ ನಿಲ್ದಾಣವಾದ ಜಾಮ್ನಗರ್‍ನಲ್ಲಿದೆ. ಅಲ್ಲಿನಿಂದ ಪ್ರವಾಸಿಗರು ಟ್ಯಾಕ್ಸಿಯ ಮೂಲಕ ಸೇರಿಕೊಳ್ಳಬಹುದು. ಮುಂಬೈ ಇಂಟರ್ ನ್ಯಾಷನಲ್ ಏರ್ ಪೋರ್ಟ್‍ನಿಂದ ಜಾಮ್ನಗರ್‍ಗೆ ಸುಲಭವಾಗಿ ತೆರಳಬಹದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X