Search
  • Follow NativePlanet
Share
» »ಬನವಾಸಿಯಲ್ಲಿ ನೋಡೋಕೆ ಏನೇನೆಲ್ಲಾ ಇದೆ ಗೊತ್ತಾ?

ಬನವಾಸಿಯಲ್ಲಿ ನೋಡೋಕೆ ಏನೇನೆಲ್ಲಾ ಇದೆ ಗೊತ್ತಾ?

ಬನವಾಸಿಯು ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು ಎಂಬ ಮಾನ್ಯತೆ ಪಡೆದಿದೆ.

PC: Rajeev Rajagopalan

ಬನವಾಸಿ ಪಟ್ಟಣವು ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತಿಕೆ ಇರುವ ಪಟ್ಟಣ. ಪುರಾತನ ಕಾಲದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಾಂತ್ಯವನ್ನಾಳಿರುವ ಕದಂಬರ ವೈಭವಯುತ ರಾಜಧಾನಿಯಾಗಿತ್ತು ಇಂದಿನ ಬನವಾಸಿ. ಹಾಗಾಗಿ ಕದಂಬರ ವಾಸ್ತುಶೈಲಿ ಪ್ರಭಾವ ಇಂದಿಗೂ ಈ ಪಟ್ಟಣದಲ್ಲಿ ಕಂಡುಬರುವ ವಿವಿಧ ರಚನೆಗಳಲ್ಲಿ ಕಾಣಬಹುದಾಗಿದೆ.

ಅರಣ್ಯ ಪ್ರದೇಶವಾಗಿತ್ತು ಬನವಾಸಿ

ಉತ್ತರ ಕನ್ನಡ ಜಿಲ್ಲೆಯ ವರದಾ ನದಿಯ ತಟದಲ್ಲಿ ಸ್ಥಿತಗೊಂಡಿರುವ ಬನವಾಸಿ. 'ಬನ' ಮತ್ತು 'ವಾಸಿ' ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ 'ಕಾಡು' ಮತ್ತು 'ವಸಂತ' ಎಂಬ ಅರ್ಥವನ್ನು ಕೊಡುತ್ತವೆ . ಪಟ್ಟಣವು ಅಕ್ಷರಶಃ ಒಂದು ಅರಣ್ಯದಲ್ಲೇ ಇದ್ದಿತ್ತು. ಆದ್ದರಿಂದಲೇ ಈ ಹೆಸರನ್ನು ಪಡೆದುಕೊಂಡಿದೆ. ಬನವಾಸಿಯು ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು ಎಂಬ ಮಾನ್ಯತೆ ಪಡೆದಿದೆ.

ಮಧುಕೇಶ್ವರ ದೇವಾಲಯ

ಮಧುಕೇಶ್ವರ ದೇವಾಲಯ

PC: Shashidhara halady
ಇಲ್ಲಿ ಅನೇಕ ಪುರಾತನ ದೇವಾಲಯಗಳನ್ನು ಕಾಣಬಹುದಾಗಿದೆ. ಅದರಂತೆ ಬನವಾಸಿಯಲ್ಲಿರುವ ಮಧುಕೇಶ್ವರ ದೇವಾಲಯವೂ ಸಹ ಸಾಕಷ್ಟು ಪ್ರಾಚೀನತೆಯಿಂದ ಕೂಡಿರುವ ರಾಜ್ಯ. ಕದಂಬರ ಮೊದಲ ದೊರೆ ಮಯೂರ ಶರ್ಮ ಎಂಬ ದೊರೆಯು ಈ ಮಧುಕೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ ಎಂದು ನಂಬಲಾಗಿದೆ. ಕರ್ನಾಟಕದಲ್ಲಿ ಕದಂಬ ಸಾಮ್ರಾಜ್ಯ ಬಲು ಪುರಾತನವಾದುದು ಎಂದು ಹೇಳಲಾಗುತ್ತದೆ. ಚಾಲುಕ್ಯರ ಪ್ರಭಾವ ಏರುವವರೆಗೆ ಕರ್ನಾಟಕದ ಬಹು ಭಾಗವನ್ನು ಕದಂಬರು ಆಳಿದ್ದಾರೆ.

ಐದು ಹೆಡೆಗಳ ನಾಗರ ಶಿಲ್ಪ

ಐದು ಹೆಡೆಗಳ ನಾಗರ ಶಿಲ್ಪ

User:Clt13
ಈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು 2 ನೇ ಶತಮಾನದ , ಐದು ಹೆಡೆಗಳ ನಾಗರ ಶಿಲ್ಪವನ್ನು ಕಾಣಬಹುದು. ಈ ನಾಗರ ಶಿಲ್ಪದ ಮೇಲೆ ಶಾಸನ (ಪ್ರಾಕೃತ ಭಾಷೆಯಲ್ಲಿ) ಬರೆದಿರುವುದು ಹತ್ತಿರದ ವೀಕ್ಷಣೆಯಿಂದ ಯಾತ್ರಿಕರ ಗಮನಕ್ಕೆ ಬರುತ್ತದೆ. ಶಾಸನದಿಂದ ಪಡೆದ ಮಾಹಿತಿ ಪ್ರಕಾರ, ವಿಹಾರ ಮತ್ತು ಹೊಂಡಗಳ ಸ್ಥಾಪನೆಯ ನಂತರ ರಾಜಕುಮಾರ ಶಿವಸ್ಕಂದ ನಾಗಶ್ರಿ, ನಾಗ ಶಿಲ್ಪಗಳನ್ನು ಇಲ್ಲಿ ಸ್ಥಾಪಿಸಿದನು. ದೇಶಾದ್ಯಂತದ ಶಿವನ ಭಕ್ತರು ಶಿವರಾತ್ರಿ ಸಂದರ್ಭದಲ್ಲಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿನೀಡುತ್ತಾರೆ. ಇಲ್ಲಿನ ಪ್ರಮುಖ ಆಕರ್ಷಣೆ , ಗಣೇಶನ ಅರ್ಧಭಾಗ ಮಾತ್ರ ಇರುವ ಮೂರ್ತಿ , ಇದರ ಇನ್ನರ್ಧ ವಾರಣಾಸಿಯಲ್ಲಿದೆ ಎಂದು ನಂಬಲಾಗಿದೆ. ಕೇವಲ ಗಣೇಶನಲ್ಲದೆ , ಭಗವಾನ ನರಸಿಂಹನ ಮೂರ್ತಿಯನ್ನೂ ಮಧುಕೇಶ್ವರ ದೇವಾಲಯದಲ್ಲಿ ಕಾಣಬಹುದು.

ಪಂಪಾವನ

ಪಂಪಾವನವು ಒಂದು ಸಣ್ಣ ಸಸ್ಯವಿಜ್ಞಾನದ ಉದ್ಯಾನವಾಗಿದ್ದು, ಹಲವಾರು ಔಷಧೀಯ ಸಸ್ಯಗಳು, ವಿವಿಧ ರೀತಿಯ ಮರಗಳು, ಆದಿ ಮಧುಕೇಶ್ವರ ದೇವಸ್ಥಾನ, ಅಮ್ಮನವರ ದೇವಾಲಯ, ವಸಿಸ್ಥ ತೀರ್ಥ. ಈ ಉದ್ಯಾನವನ್ನು ಪಂಪಾವನ ಎಂದು ಕರೆಯಲಾಗುತ್ತದೆ ಏಕೆಂದರೆ ಈ ಸ್ಥಳದಲ್ಲಿ ಆದಿ ಕವಿ ಪಂಪಾ ಅನೇಕ ಮಹಾಕಾವ್ಯಗಳನ್ನು ಬರೆದಿದ್ದಾರೆ. ಬನವಾಸಿಗೆ ಹೆಚ್ಚಾಗಿ ಪ್ರವಾಸಿಗರು ಆದ್ಯತೆ ನೀಡುತ್ತಾರೆ. ಹೆಚ್ಚಿನ ಪ್ರವಾಸಿಗರು ಬನವಾಸಿಗೆ ಕುಟುಂಬದೊಂದಿಗೆ ಬರುತ್ತಾರೆ.

ಗುಡ್ನಾಪುರ ಸರೋವರ

ಗುಡ್ನಾಪುರ ಸರೋವರ

PC:Gudnapura Lake

ಬನವಾಸಿಯಲ್ಲಿರುವ ಗುಡ್ನಾಪುರ ಸರೋವರ, ಕರ್ನಾಟಕದ ಐತಿಹಾಸಿಕ ಸ್ಥಳವಾದ ಬನವಾಸಿಗೆ ಸಮೀಪದಲ್ಲಿದೆ. ಪ್ರವಾಸಿಗರು ಬನವಾಸಿಗೆ ಭೇಟಿ ನೀಡುವಾಗ ಶಿರಸಿ ತಾಲೂಕಿನಲ್ಲಿರುವ ಈ ಸರೋವರವನ್ನು ಕಾಣಬಹುದು. ಈ ಸ್ಥಳವು ಕದಂಬ ರಾಜವಂಶದಿಂದ ಆಳ್ವಿಕೆ ನಡೆಸಲ್ಪಟ್ಟಿದೆ. ಬಂಗಾರೇಶ್ವರ ದೇವಸ್ಥಾನವು ಈ ಸರೋವರದ ದಂಡೆಯಲ್ಲಿದೆ,
ರಾಣಿ ಮಹಲ್ (ಕ್ವೀನ್ಸ್ ಮಹಲ್) ಗುಡ್ನಾಪುರದ ಆಕರ್ಷಣೆಗಳಲ್ಲಿ ರಾಣಿ ಮಹಲ್ ಕೂಡಾ ಒಂದು. ರಾಣಿ ಮಹಲ್ ಅನ್ನು 5 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ ಮತ್ತು ಇದನ್ನು ಕದಂಬ ಆಡಳಿತದ ಸಮಯದಲ್ಲಿ ರಾಣಿ ಬಳಸುತ್ತಿದ್ದರು. ನೀವು ಇಲ್ಲಿಗೆ ಭೇಟಿ ನೀಡಿದಾಗ ನೀವು ಸೂರ್ಯಾಸ್ತ / ಸೂರ್ಯೋದಯವನ್ನು ನೋಡೋದನ್ನು ಮಿಸ್ ಮಾಡಬೇಡಿ.

ಯಾವಾಗ ಭೇಟಿ ನೀಡುವುದು ಸೂಕ್ತ

ಬನವಾಸಿಗೆ ಭೇಟಿ ನೀಡಲು ಅತ್ಯುತ್ತಮ ಕಾಲವೆಂದರೆ ಫೆಬ್ರವರಿ, ನವೆಂಬರ್, ಡಿಸೆಂಬರ್ ತಿಂಗಳುಗಳು. ಬನವಾಸಿಯಲ್ಲಿನ ಪ್ರವಾಸಿ ಸ್ಥಳಗಳನ್ನು ಪ್ರಯಾಣಿಕರು ಅನ್ವೇಷಿಸಬಹುದು. ದಿನದ ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ಮಾಡಬಹುದು, ಮುಂಜಾನೆ, ಮಧ್ಯಾಹ್ನ, ಸಂಜೆ ಅಥವಾ ರಾತ್ರಿ, ಪ್ರವಾಸಿಗರಿಗೆ ಸೂಕ್ತವಾಗಿದೆ. ಬನವಾಸಿಯಲ್ಲಿನ ದೃಶ್ಯಗಳನ್ನು ಪ್ರವಾಸಿಗರು ಮಾಡಬಹುದಾಗಿದೆ, ಇದು ಅರ್ಧ ದಿನ ಅಥವಾ ಒಂದು ದಿನವನ್ನು ತೆಗೆದುಕೊಳ್ಳುತ್ತದೆ, ಆದರೆ ಎಲ್ಲಾ ದೃಶ್ಯಗಳನ್ನು ನೋಡಲು ಪ್ರವಾಸಿಗರು ಬನವಾಸಿಯಲ್ಲಿ 2 ರಿಂದ 3 ದಿನಗಳ ಕಾಲ ಉಳಿಯಬೇಕು.

ತಲುಪುವುದು ಹೇಗೆ?

ನೂರು ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಾಯು ನಿಲ್ದಾಣ ಬನವಾಸಿಗೆ ಹತ್ತಿರದಲ್ಲಿರುವ ವಾಯು ನಿಲ್ದಾಣ. 50 ಕಿ.ಮೀ ದೂರದಲ್ಲಿರುವ ಹಾವೇರಿಯು ಬನವಾಸಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಹೊಂದಿದೆ. ಬನವಾಸಿಗೆ ಬಸ್ಸಿನ ಮೂಲಕ ತಲುಪಬೇಕೆಂದಿದ್ದರೆ ಶಿರಸಿಗೆ ಹೊರಡುವುದು ಉತ್ತಮ. ಬನವಾಸಿ ಇಲ್ಲಿಂದ 23 ಕಿ.ಮೀ ಹಾಗೂ ಶಿರಸಿಯಿಂದ ಬನವಾಸಿಗೆ ನಿರಂತರ ಬಸ್ಸುಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X