Search
  • Follow NativePlanet
Share
» »ವರಂಗಲ್‍ನಲ್ಲಿನ ಒಂದು ಮಿರಾಕಲ್ ಪ್ರದೇಶ!

ವರಂಗಲ್‍ನಲ್ಲಿನ ಒಂದು ಮಿರಾಕಲ್ ಪ್ರದೇಶ!

ನಮ್ಮ ದೇಶದಲ್ಲಿ ವಿಜ್ಞಾನಕ್ಕೆ ಸಾವಾಲು ಎನ್ನವಂತೆ ಹಲವಾರು ನಿಗೂಢತೆಗಳು ಇವೆ. ವಿಭಿನ್ನವಾದ ಕಟ್ಟಡಗಳು, ದೇವಾಲಯಗಳು, ವಿಭಿನ್ನ ಪ್ರದೇಶಗಳು ಇನ್ನು ಹಲವಾರು ರಹಸ್ಯವನ್ನು ಕಾಣಬಹುದಾಗಿದೆ. ಅವುಗಳಲ್ಲಿ ಕೆಲವೊಂದು ರಹಸ್ಯಗಳು ಬೆಳಕಿಗೆ ಬಂದರೆ ಇನ್ನು

ನಮ್ಮ ದೇಶದಲ್ಲಿ ವಿಜ್ಞಾನಕ್ಕೆ ಸಾವಾಲು ಎನ್ನವಂತೆ ಹಲವಾರು ನಿಗೂಢತೆಗಳು ಇವೆ. ವಿಭಿನ್ನವಾದ ಕಟ್ಟಡಗಳು, ದೇವಾಲಯಗಳು, ವಿಭಿನ್ನ ಪ್ರದೇಶಗಳು ಇನ್ನು ಹಲವಾರು ರಹಸ್ಯವನ್ನು ಕಾಣಬಹುದಾಗಿದೆ. ಅವುಗಳಲ್ಲಿ ಕೆಲವೊಂದು ರಹಸ್ಯಗಳು ಬೆಳಕಿಗೆ ಬಂದರೆ ಇನ್ನು ಕೆಲವು ಬಾಹ್ಯ ಪ್ರಪಂಚಕ್ಕೆ ಉತ್ತರ ನೀಡದೇ ಹಾಗೆಯೇ ತನ್ನಲ್ಲಿ ರಹಸ್ಯವನ್ನು ಅಡಗಿಸಿಕೊಂಡಿವೆ.

ಬೆಳಗ್ಗೆ ಕೇರಳದಲ್ಲಿ, ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ಮಾಹಿಮಾನ್ವಿತ ದೇವಿ!ಬೆಳಗ್ಗೆ ಕೇರಳದಲ್ಲಿ, ಮಧ್ಯಾಹ್ನ ಕರ್ನಾಟಕದಲ್ಲಿ ನೆಲೆಸುವ ಮಾಹಿಮಾನ್ವಿತ ದೇವಿ!

ಈ ನಿಗೂಢವನ್ನು ಕಂಡು ನಮ್ಮ ದೇಶದ ವಿಜ್ಞಾನಿಗಳೇ ಅಲ್ಲದೇ ಪ್ರಪಂಚದಲ್ಲಿನ ಹಲವಾರು ಮಂದಿ ವಿಜ್ಞಾನಿಗಳು ಪೂರ್ವ ಕಾಲದಲ್ಲಿ ಹೇಗೆ ಇಂತಹ ಮಿರಾಕಲ್ಸ್ ಮಾಡಲು ಸಾಧ್ಯ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಅಂತಹ ಮಿರಾಕಲ್ ಪ್ರದೇಶದಲ್ಲಿ ಒಂದು ವರಂಗಲ್‍ನಲ್ಲಿ ಕೂಡ ಇದೆ ಎಂಬ ಸತ್ಯ ನಿಮಗೆ ಗೊತ್ತ?

ವಿಜ್ಞಾನಕ್ಕೆ ಉತ್ತರ ಸಿಗದ ಕೊಳದ ನೀರು ಹೇಗೆ ಮಾಯವಾಗುತ್ತದೆಯೋ? ವರಂಗಲ್‍ನಲ್ಲಿ ಇಂದಿಗೂ ರಹಸ್ಯವಾಗಿಯೇ ಉಳಿದಿದೆ.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ವರಂಗಲ್ ನಗರದಿಂದ ಸುಮಾರು 68 ಕಿ.ಮೀ ದೂರದಲ್ಲಿ ಕೊತ್ತೂರು ಎಂಬ ಗ್ರಾಮವಿದೆ. ಅಲ್ಲಿಂದ ಎರಡುವರೆ ಕಿ.ಮೀ ದೂರದಲ್ಲಿ ಒಂದು ಅರಣ್ಯ ಪ್ರದೇಶವಿದೆ. ಆ ಅರಣ್ಯದಲ್ಲಿ ಪ್ರವೇಶ ಮಾಡಿದರೆ "ದೇವುನಿ ಗುಟ್ಟ" ಎಂಬ ಮಿರಾಕಲ್ ಪ್ರದೇಶಕ್ಕೆ ಸೇರಿಕೊಳ್ಳಬಹುದು.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಇಲ್ಲಿ ಸೇರಬೇಕು ಎಂದರೆ ಸುಮಾರು ಕಿ.ಮೀ ದೂರಸದಲ್ಲಿ ಜಲಪಾತದ ದಾರಿಯಲ್ಲಿ ಪ್ರಯಾಣ ಮಾಡಬೇಕು. ಆ ಗುಡ್ಡದ ಮೇಲೆ ತೆರಳಿದ ನಂತರ 100 ಎಕರೆಗಳಷ್ಟು ಸಮಾಂತರ ಪ್ರದೇಶ ಕಾಣಿಸುತ್ತದೆ.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಅದರಲ್ಲಿ ಒಂದು ಸ್ಥಳದಲ್ಲಿ ಪ್ರಾಚೀನವಾದ ದೇವಾಲಯವಿದೆ. ಆ ದೇವಾಲಯದ ಹಿಂದೆ ಅಂದರೆ ಕೆಲವು ದೂರದಲ್ಲಿ ಒಂದು ಕೊಳವಿದೆ. ಆ ಕೊಳದಲ್ಲಿಯೇ ಯಾರಿಗೂ ತಿಳಿಯದ ರಹಸ್ಯ ನಡೆಯುತ್ತದೆ.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ವಿಶಾಲವಾದ ಈ ಕೊಳಕ್ಕೆ ಮೂರು ಭಾಗಗಳಲ್ಲಿಯೂ ಬೆಟ್ಟಗಳಿಂದ ಅವೃತಗೊಂಡಿದೆ. ಒಂದು ಭಾಗದಲ್ಲಿ ಮಾತ್ರ ಬೆಟ್ಟದ ಕಲ್ಲಿನಿಂದ ನಿರ್ಮಾಣ ಮಾಡಿದ ಮಂಟಪ ಕಾಣಿಸುತ್ತದೆ.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಈ ಕೊಳಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ ಬೆಟ್ಟಗಳ ಮಧ್ಯೆ ಅಷ್ಟು ನೀರನ್ನು ಹೊಂದಿರುವ ಆ ಕೊಳವು ಸಾಧಾರಣವಾಗಿ ಬತ್ತಿಹೋಗದು. ಆದರೆ ಮಳೆಯು 15 ದಿನಗಳ ಕಾಲ ನಿರಂತರವಾಗಿ ಬೀಳದೇ ಹೋದರೆ ಮಾತ್ರವೇ ಈ ಕೊಳದಲ್ಲಿನ ನೀರು ಪೂರ್ತಿಯಾಗಿ ಒಂದೇ ಬಾರಿಗೆ ಮಾಯವಾಗುತ್ತದೆ.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ? ಹೇಗೆ ಬತ್ತಿ ಹೋಗುತ್ತದೆ? ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ. ಈ ಕೊಳದಲ್ಲಿನ ನೀರು ಹೇಗೆ ಮಾಯವಾಗುತ್ತದೆ ಎಂದು ತಿಳಿದುಕೊಳ್ಳಲು ಹಲವಾರು ಪ್ರಯೋಗಗಳು ಕೂಡ ನಡೆದವು.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಇದರ ಹಿಂದೆ ಇರುವ ನಿಜವಾದ ವಿಷಯವನ್ನು ತಿಳಿದುಕೊಳ್ಳಬೇಕು ಎಂದು ಕೆಲವು ನಿಪುಣರು ಅಲ್ಲಿನ ರಹಸ್ಯವನ್ನು ಭೇಧಿಸಲು ಪ್ರಯತ್ನ ಮಾಡಿದರು.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಅವರು ಹೇಳಿದ ಪ್ರಕಾರ " ಜಲಪಾತದಿಂದ ನಡೆದುಕೊಂಡ ಬರುವ ಸಂಗತಿ ಗುರುತಿಸಿಕೊಂಡರು. ಆದರೆ ವಾಸ್ತವವಾಗಿ ಆ ಜಲಪಾತ ಬೆಟ್ಟದ ಮೂಲಕವಲ್ಲದೇ, 2 ದೊಡ್ಡ ಬಂಡೆಗಳ ಕೆಳಗಿನಿಂದ ಹರಿದು ಬರುತ್ತಿರುವುದನ್ನು ಗಮನಿಸಿದರು. ಆ 2 ಕಲ್ಲುಬಂಡೆಗಳು ಕೊಳದ ಸಮೀಪದಲ್ಲಿ ಕೊಳದ ಕಟ್ಟೆಗೆ 50 ಅಡಿ ಕೆಳಗೆ ಇದೆ. ಆ ಕೊಳಕ್ಕೆ, ಬಂಡೆಗೆ, ಜಲಪಾತಕ್ಕೆ ಏನಾದರು ಸಂಬಂಧವಿದೆಯೇ ಎಂದು ಅನುಮಾನ ಬಂದಿತು.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಹೀಗಾಗಿ ಬೃಂದಾವನದಿಂದ 4 ವ್ಯಕ್ತಿಗಳು ಹಾಗೆಯೇ ಇಬ್ಬರು ಗ್ರಾಮಸ್ಥರು ಕೊಳದ ಕಟ್ಟೆಯ ನಾಲ್ಕು ದಿಕ್ಕು ಪರೀಕ್ಷೆ ಮಾಡಿದರು. ಆ ಸಮಯದಲ್ಲಿ ಕೊಳದ ಒಳಭಾಗದಲ್ಲಿ ಒಂದು ಚಿಕ್ಕದಾದ ಸುರಂಗ ಮಾರ್ಗ ಕಾಣಿಸಿತು.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಸುಮಾರು 10 ಅಡಿ ಉದ್ದದ ಕೋಲನ್ನು ಸುರಂಗ ಮಾರ್ಗದ ಒಳಗೆ ನುಗ್ಗಿಸಿದರು. ಕೋಲು ಪೂರ್ತಿಯಾಗಿ ಒಳಪ್ರವೇಶ ಮಾಡಿದರು ಕೂಡ ಕೊನೆಯ ಸ್ಥಳಕ್ಕೆ ಮಾತ್ರ ಹೋಗಲು ಸಾಧ್ಯವಾಗಲಿಲ್ಲ.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಅದರ ಸುರಂಗ ಮೇಲ್ಭಾಗದಲ್ಲಿನ ಕೆಲವು ಕಲ್ಲುಗಳು ಕೂಡ ಅಲ್ಲಿಂದ ತೆಗೆದು ಹಾಕಿದರು. ಸುರಂಗದ ಆಳ ಎಷ್ಟು ಎಂದು ತಿಳಿಯದೇ ಇದ್ದರೂ ಕೂಡ ಒಳಭಾಗದಲ್ಲಿ ನೀರು ಇರುವ ಶಬ್ಧ ಮಾತ್ರ ಕೇಳಿಸುತ್ತಿತ್ತು.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಅಲ್ಲಿನಿಂದ ಮೇಲೆ ಹೋಗಿ ನೋಡಿದರೆ ಆ 2 ಬಂಡೆಕಲ್ಲುಗಳ ಮಧ್ಯೆಗಳ ಕೆಳಗಿನಿಂದ ಜಲಧಾರೆ ಕಾಣಿಸಿತು. ಆ ಧಾರೆ ಅಲ್ಲಿಂದ ಕೆಲವು ಕಿ.ಮೀ ಪ್ರಯಾಣ ಮಾಡಿ ಲಕ್ನವರಂ ಎಂಬ ಕೊಳದಲ್ಲಿ ವಿಲೀನವಾಗುತ್ತದೆ ಎಂದು ಹೇಳಿದರು.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಇದರಿಂದ ವಿಷಯ ಎಲ್ಲಾ ಅರ್ಥವಾಯಿತು. ಅದೆನೆಂದರೆ ಬೆಟ್ಟದ ಮೇಲೆ ಸುರಿದ ಮಳೆ ಮೊದಲು ಜಲಾಶಯಕ್ಕೆ ಸೇರುತ್ತದೆ. ಅದರಲ್ಲಿನ ನೀರು ಈ ಪ್ರದೇಶದಿಂದಲೇ ಲಕ್ನವರಂ ಕೊಳಕ್ಕೆ ಸೇರಿಕೊಳ್ಳುವ ಹಾಗೆ ನೀರಿನ ಸರಬರಾಜು ವ್ಯವಸ್ಥೆ ಮಾಡಿದ್ದಾರೆ.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಹಾಗಾಗಿಯೇ ಬೇರೆ ಯಾರಿಗೂ ಈ ವಿಷಯ ತಿಳಿಯಬಾರದು ಎಂದು ಬಂಡೆಕಲ್ಲುಗಳನ್ನು ಹಾಗು ಮಣ್ಣನ್ನು ಮುಚ್ಚಿದ್ದಾರೆ. ಅವುಗಳ ಮೇಲೆ ಕೆಲವು ವರ್ಷಗಳ ನಂತರ ಮೆಟ್ಟಿಲುಗಳು ಸೃಷ್ಠಿಯಾಗಿ ನೋಡುವುದಕ್ಕೆ ಸಹಜಸಿದ್ಧವಾದ ಕೊಳವಾಗಿ ಮಾರ್ಪಾಟಾಯಿತು.

ಆ ಕೊಳದ ನೀರು ಏನಾಗುತ್ತದೆ?

ಆ ಕೊಳದ ನೀರು ಏನಾಗುತ್ತದೆ?

ಪ್ರಸ್ತುತ ತೆಲಂಗಾಣ ರಾಜ್ಯದಲ್ಲಿ ಉತ್ತಮವಾದ ಪ್ರವಾಸಿ ತಾಣವಾಗಿ ಮಾರ್ಪಾಟಾದ ಲಕ್ನವರಂ ಕೊಳವು ಗಣಪತಿ ದೇವನ ಸಹೋದರಿಯಾದ ಲಕ್ಕಮಾಂಬಳ ಹೆಸರಿನ ಮೇಲೆ 1230 ರಿಂದ 1240 ಮಧ್ಯಕಾಲದಲ್ಲಿ ಸ್ವಯಂ ಗಣಪತಿ ದೇವನೇ ಈ ಕೊಳವನ್ನು ನಿರ್ಮಾಣ ಮಾಡಿದನು ಎಂಬುದು ಒಂದು ಸ್ಥಳ ಪುರಾಣವಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ
ಈ ಸುಂದರವಾದ ಕೊಳವನ್ನು ಕಂಡು ಏನಾದರೂ ಅನ್ವೇಷಣೆ ಮಾಡಬೇಕು ಎಂದು ಎನಿಸಿದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ವರಂಗಲ್ ಪಟ್ಟಣದಿಂದ ಸುಮಾರು 160 ಕಿ.ಮೀ ದೂರದಲ್ಲಿರುವ ಹೈದ್ರಾಬಾದ್‍ನಲ್ಲಿರುವ ರಾಜೀವ್ ಗಾಂಧಿ ವಿಮಾನ ನಿಲ್ದಾಣವಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲ್ವೆ ಮಾರ್ಗದ ಮೂಲಕ
ಸಮೀಪದ ರೈಲ್ವೆ ಮಾರ್ಗ ಯವುದೆಂದರೆ ಅದು ವರಂಗಲ್ ಸಮೀಪದಲ್ಲಿನ 13 ಕಿ.ಮೀ ದೂರದಲ್ಲಿರುವ ಖಾಜಿಪೇಟೆ ರೈಲ್ವೆ ಜಂಕ್ಷನ್. ಇದು ಹೈದ್ರಾಬಾದ್, ನ್ಯೂ ಡೆಲ್ಲಿ, ವಿಜಯವಾಡ, ಚೆನ್ನೈ ಮತ್ತು ಕೊಲ್ಕತ್ತ ಮಾರ್ಗವಾಗಿ ಪ್ರಮುಖ ರೈಲುಗಳು ಈ ಮಾರ್ಗವಾಗಿ ಸಂಪರ್ಕ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X