ಮಹಾರಾಷ್ಟ್ರ ರಾಜ್ಯವು ಗುಡ್ಡ ಕೋಟೆಗಳ ರಾಜಧಾನಿ ಎಂದರೂ ತಪ್ಪಾಗಲಾರದು. ಏಕೆಂದರೆ ಇಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಅತಿ ಎತ್ತರದಲ್ಲಿ ನಿರ್ಮಿಸಲಾದ, ಸಾವಿರಾರು ವರ್ಷಗಳಷ್ಟು ಪುರಾತನವಾದ ಹಲವು ಅದ್ಭುತ ಕೋಟೆಗಳನ್ನು ನೋಡಬಹುದು.
ಇನ್ನೂ ವಿಶೇಷವೆಂದರೆ ಇಂದಿಗೂ ಸುಭದ್ರವಾಗಿ ನೆಲೆಯೂರಿರುವ ಆ ಭವ್ಯ ಕೋಟೆಗಳು ಇಂದು ಪ್ರವಾಸಿ ಆಕರ್ಷಣೆಗಳಾಗಿವೆ. ಅದರಲ್ಲೂ ವಿಶೇಷವಾಗಿ ಚಾರಣಗಳಂತಹ ಚಟುವಟಿಕೆಗಳಿಗೆ ಬಹಳ ಹೆಸರುವಾಸಿಯಾಗಿವೆ. ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ಅದ್ಭುತ ಕೋಟೆಯ ಕುರಿತು ತಿಳಿಸಲಾಗಿದೆ. ಇದು ಕರ್ನಾಲಾ ಕೋಟೆ.

ಅತ್ಯದ್ಭುತ
ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಈ ಕೋಟೆ ಪನ್ವೇಲ್ ನಗರದಿಂದ ಕೇವಲ ಹತ್ತು ಕಿ.ಮೀ ಗಳಷ್ಟು ದೂರದಲ್ಲಿದೆ. ಪ್ರಸ್ತುತ ಇದೊಂದು ರಕ್ಷಿತ ಪ್ರದೇಶವಾಗಿದ್ದು ಕರ್ನಾಲಾ ಪಕ್ಷಿಧಾಮದ ವ್ಯಾಪ್ತಿಯಲ್ಲಿ ಬರುತ್ತದೆ.
ಚಿತ್ರಕೃಪೆ: Anil R

ಗಮನವಿಡಲು
ಮೂಲತಃ ಈ ಕೋಟೆಯನ್ನು ಯುದ್ಧ ಅಥವಾ ಶತ್ರುಗಳ ಆಕ್ರಮಣಕ್ಕೆ ಸಂಬಂಧಿಸಿದಂತೆ ಸೂಕ್ಷ್ಮವಾದ ಆಯಕಟ್ಟಿನ ಸ್ಥಳದಲ್ಲಿ ನಿರ್ಮಿಸಲಾಗಿದ್ದು ಕೊಂಕಣ ಕರಾವಳಿ ಹಾಗೂ ಬೋರ್ ಘಾಟ್ ಪ್ರದೇಶಗಳ ಮೇಲೆ ಕಣ್ಣಿಡಲು ಅನುಕೂಲಕರವಾಗಿರುವಂತೆ ನಿರ್ಮಿಸಲಾಗಿದೆ.
ಚಿತ್ರಕೃಪೆ: Dupisingh

ದೇವಗಿರಿ ಯಾದವರು
ಹನ್ನೆರಡು-ಹದಿಮೂರನೆಯ ಶತಮಾನದ ದೇವಗಿರಿ ಯಾದವರ ಕಾಲದಲ್ಲಿ ನಿರ್ಮಿಸಲಾದ ಕೋಟೆ ಇದಾಗಿದೆ ಎಂದು ತಿಳಿದುಬರುತ್ತದೆ. ಹಾಗಾಗಿ ಹದಿನಾಲ್ಕು ನೂರು ವರ್ಷಗಳಿಗಿಂತಲೂ ಅಧಿಕವಾದ ಇತಿಹಾಸವನ್ನು ಈ ಕೋಟೆ ಹೊಂದಿದೆ.
ಚಿತ್ರಕೃಪೆ: Dupinder singh
https://commons.wikimedia.org/wiki/File:Karnala_Fort_04.JPG

ರಾಜಧಾನಿ
ಪ್ರಸ್ತುತ ಇದೊಂದು ರಕ್ಷಿತ ಪ್ರದೇಶವಾಗಿದೆ. ಶತಮಾನಗಳ ಹಿಂದೆ ಕರ್ನಾಲಾ ಈ ಪ್ರದೆಶದಲ್ಲಿ ಆಳುತ್ತಿದ್ದ ಹಲವಾರು ಸಾಮ್ರಾಜ್ಯಗಳ ರಾಜಧಾನಿಯಾಗಿ ಮೆರೆದಿತ್ತು.
ಚಿತ್ರಕೃಪೆ: Dupinder singh

ಮೇಲೊಂದು, ಕೆಳಗೊಂದು
ಕರ್ನಾಲಾ ಮೂಲತಃ ಎರಡು ಕೋಟೆಗಳನ್ನು ಹೊಂದಿರುವ ಪ್ರದೇಶವಾಗಿದೆ. ಒಂದು ಕೋಟೆ ಮೆಲ್ಭಾಗದಲ್ಲಿದ್ದರೆ ಇನ್ನೊಂದು ಕೆಳ ಭಾಗದಲ್ಲಿ ನಿರ್ಮಿತವಾಗಿದೆ.
ಚಿತ್ರಕೃಪೆ: Damitr

ಅವಶೇಷವಾಗಿದೆ
ಮೇಲ್ಭಾಗದ ಕೋಟೆಯಾವರಣದ ಮಧ್ಯದಲ್ಲಿ 125 ಅಡಿಗಳಷ್ಟು ಎತ್ತರದ ವೀಕ್ಷಣಾ ಗೋಪುರವಿದ್ದು ಇದನ್ನು ಪಾಂಡು ಗೋಪುರ ಎನ್ನಲಾಗುತ್ತದೆ. ಪ್ರಸ್ತುತ ಇದು ಅಳಿದುಳಿದ ಅವಶೇಷವಾಗಿದೆಯಷ್ಟೆ.
ಚಿತ್ರಕೃಪೆ: Bugs buny

ಇತಿಹಾಸ ಸಾರುತ್ತ
ಕೋಟೆಯೊಳಗೆ ಹೋದಂತೆಲ್ಲ ಹಲವಾರು ಚಿಕ್ಕ ಪುಟ್ಟ ಪ್ರಾಚೀನ ರಚನೆಗಳು ತಮ್ಮ ಪ್ರಾಚೀನತೆಯನ್ನು ಎಳೆ ಎಳೆಯಾಗಿ ಅನಾವರಣಗೊಳಿಸುತ್ತವೆ.
ಚಿತ್ರಕೃಪೆ: Damitr

ಕಲಾತ್ಮಕತೆ
ಹಲವಾರು ಗುಪ್ತದ್ವಾರಗಳು, ಮೆಟ್ಟಿಲುಗಳು, ಅಲ್ಲಲ್ಲಿ ಗೋಡೆಯ ಮೇಲೆ ಕಡೆಯಲಾದ ಶಿಲ್ಪಗಳು ಅಂದಿನ ಕಾಲದ ಕಲಾ ಕೌಶಲ್ಯ ಹಾಗೂ ನಿರ್ಮಾಣ ಕೌಶಲ್ಯಗಳನ್ನು ಸೂಚಿಸುತ್ತವೆ.
ಚಿತ್ರಕೃಪೆ: Damitr

ಕೆಳಭಾಗದಲ್ಲಿದೆ
ಕೋಟೆಯ ಕೆಳಭಾಗದಲ್ಲಿ ಪುಟ್ಟದಾದ ದೇವಾಲಯವೊಂದಿದ್ದು ಭವಾನಿ ದೇವಿಗೆ ಮುಡಿಪಾಗಿದೆ. ಭವಾನಿ ದೇವಿಯು ಪ್ರತ್ಯಕ್ಷಳಾಗಿ ಶಿವಾಜಿಗೆ ಕೊಟ್ಟಿದ್ದ ಖಡ್ಗದಿಂದ ಛತ್ರಪತಿ ಶಿವಾಜಿಯು ಯುದ್ಧಗಳನ್ನು ಗೆದ್ದು ಸಾಕಷ್ಟು ಪ್ರದೇಶಗಳನ್ನು ವಶಪಡಿಸಿಕೊಂಡಿದ್ದನೆಂದು ಹೇಳಲಾಗುತ್ತದೆ.
ಚಿತ್ರಕೃಪೆ: Ghariprasada90

ಶಾಸನಗಳು
ನಂತರ ಮರಾಠರ ಆಳ್ವಿಕೆಗೆ ಒಳಪಟ್ಟಿದ್ದ ಈ ಕೋಟೆಯಲ್ಲಿ ಪರ್ಷಿಯನ್ ಹಾಗೂ ಮರಾಠಿ ಭಾಷೆಯಲ್ಲಿ ಬರೆಯಲಾದ ಶಾಸನಗಳು ಕಂಡುಬರುತ್ತವೆ. ಇದು ಐತಿಹಾಸಿಕವಾಗಿ ಸಾಕಷ್ಟು ಮಹತ್ವ ಪಡೆದಿದೆ.
ಚಿತ್ರಕೃಪೆ: Damitr

ನಯನಮನೋಹರ
ಇಂದು ಕರ್ನಾಲಾ ಕೋಟೆ ತಾಣವು ಅವಶೇಷಗಳಿಂದ ಕೂಡಿದೆಯಾದರೂ ಇದರ ಸುತ್ತಮುತ್ತಲಿನ ಭವ್ಯ ಪರಿಸರ, ಪ್ರಕೃತಿ ಸಾಕಷ್ಟು ನಯನಮನೋಹರವಾಗಿದೆ.
ಚಿತ್ರಕೃಪೆ: Elroy Serrao

ಕಣ್ಣಿಗೆ ಹಬ್ಬ
ಪಶ್ಚಿಮ ಘಟ್ಟಗಳಲ್ಲಿ ವ್ಯಾಪಿಸಿರುವ ಈ ಕೋಟೆಯ ಪರಿಸರವು ಮಳೆಗಾಲ ಹಾಗೂ ನಂತರದ ಸಮಯದಲ್ಲಿ ಕಣ್ಣಿಗೆ ಹಬ್ಬವನ್ನೆ ಉಂಟುಮಾಡುವಂತಿರುತ್ತದೆ.
ಚಿತ್ರಕೃಪೆ: Elroy Serrao

ಎಲ್ಲೆಡೆ
ಮಂಜುಗಟ್ಟಿದ ವಾತಾವರಣ, ತಂಪಾದ ಹಾಗೂ ಹಿತಕರವಾದ ಪರಿಸರ, ಎಲ್ಲೆಡೆ ದಟ್ಟ ಹಸಿರು, ಮೇಲ್ಭಾಗದದಿಂದ ಸುತ್ತಲೂ ಕಾಣುವ ರಮ್ಯ ನೋಟಗಳು ಈ ತಾಣವನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿದೆ.
ಚಿತ್ರಕೃಪೆ: Elroy Serrao

ವಿಶ್ರಾಂತಿ
ಇದೊಂದು ಒಂದು ಘಂಟೆಯಷ್ಟು ಏರಬಹುದಾದ ಚಾರಣ ತಾಣವಾಗಿದ್ದು ಪ್ರವಾಸಿಗರಲ್ಲಿ ಸಾಕಷ್ಟು ಜನಪ್ರೀಯವಾಗಿದೆ. ಏರುವಾಗ ಪ್ರವಾಸಿಗರಿಗೆ ಅನುಕೂಲವಾಗಲೆಂದು ಐದು ವಿವಿಧ ಸ್ಥಳಗಳಲ್ಲಿ ವಿಶ್ರಾಂತಿ ಸ್ಥಳಗಳನ್ನು ಮಹಾರಾಷ್ಟ್ರ ಅರಣ್ಯ ಇಲಾಖೆಯಿಂದ ನಿರ್ಮಿಸಲ್ಪಟ್ಟಿದೆ.
ಚಿತ್ರಕೃಪೆ: Damitr

ಜೇನುಗೂಡುಗಳಿವೆ!
ಬೆಟ್ಟದ ಮೇಲ್ತುದಿಯಲ್ಲಿ ಕೋಟೆ ಪ್ರವೇಸಿಬಹುದಾದ ಸಂದರ್ಭದಲ್ಲಿ ಏರಿಕೆ ಮೊನಚಾಗಿದ್ದು ಭದ್ರತೆಗಾಗಿ ಕಬ್ಬಿಣದ ಕಂಬಿಗಳ ಆಧಾರ ಒದಗಿಸಲಾಗಿದೆ. ಗಮನವಿರಲಿ ಕೋಟೆಯ ಹಲವಾರು ರಚನೆಗಳ ಮೂಲೆಗಳಲ್ಲಿ ಜೇನು ಗೂಡುಗಳಿದ್ದು ಅಲ್ಲಿ ಅಹಾರ ತಯಾರಿಸಿ ತಿನ್ನುವುದು ಉತ್ತಮ ಆಯ್ಕೆಯಲ್ಲ.
ಚಿತ್ರಕೃಪೆ: Elroy Serrao


Click it and Unblock the Notifications

















