ನೀವು ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡದ ಹೊರತು,ಗುವಾಹಾಟಿಯ ನಿಮ್ಮ ಪ್ರವಾಸವು ಪರಿಪೂರ್ಣವೆನಿಸದು. ಹಿಂದೂ ಧರ್ಮದ ಪ್ರಕಾರ, ಇದು 51 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಅತಿ ಪ್ರಮುಖವಾದ ಯಾತ್ರಾಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ನಗರದ ಹೃದಯ ಭಾಗದಿಂದ ಸುಮಾರು 7 ಕಿ. ಮೀ. ದೂರದಲ್ಲಿರುವ ನೀಲಾಚಲ...
ಅಸ್ಸಾಂ ರಾಜ್ಯ ಪ್ರಾಣಿ ಮತ್ತು ಸಸ್ಯೋದ್ಯಾನಗಳು ಗುವಾಹಾಟಿ ಪ್ರವಾಸೋದ್ಯಮದ ಅತಿ ಪ್ರಮುಖವಾದ ಅಂಗವಾಗಿದೆ. 130 ಹೆಕ್ಟೇರ್ ಗಳಷ್ಟು ವಿಸ್ತಾರವಾದ ಈ ಪ್ರಾಣಿಶಾಸ್ತ್ರೀಯ ಉದ್ಯಾನಗಳು ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಸಂಗ್ರಹಾಲಯದಂತೆ ಇದ್ದು, ಅನೇಕ ಅಪರೂಪದ ತಳಿಗಳ ತವರಾಗಿದೆ. ಒಂದು ಪ್ರಾಕೃತಿಕ ಅರಣ್ಯದ ಸುತ್ತಲೂ...
ಉಗ್ರತಾರಾ ದೇವಸ್ಥಾನವು ಉಗ್ರೋ ತಾರಾ ದೇವಸ್ಥಾನವೆಂದೂ ಕರೆಯಲ್ಪಡುತ್ತಿದ್ದು, ಇದು ಕಾಳಿ ದೇವಿಗೆ ಅರ್ಪಿತವಾಗಿರುವ ದೇವಸ್ಥಾನವಾಗಿದೆ. ಇದು ಜೊರ್ ಪುಖುರಿ ಉಜಾನ್ ಬಜಾರ್ ನ ಪಶ್ಚಿಮ ಬದಿಯಲ್ಲಿದೆ. ಉಗ್ರತಾರಾ ದೇವಸ್ಥಾನವು ಅಸ್ಸಾಂ ನ ಅತ್ಯಂತ ಪ್ರಮುಖವಾದ ಯಾತ್ರಾ ಕೇಂದ್ರವಾಗಿದೆ. ಈ ದೇವಸ್ಥಾನವು...
ಗುವಾಹಾಟಿ ತಾರಾಲಯವು ನಗರದ ಹೃದಯ ಭಾಗದಲ್ಲಿ, ಎಂ.ಜಿ. ರಸ್ತೆಯ ಮೇಲಿದ್ದು, ಇದು ಭಾರತದ ಅತೀ ಸುಸಜ್ಜಿತ ತಾರಾಲಯಗಳಲ್ಲೊಂದು ಎಂದೇ ಪರಿಗಣಿತವಾಗಿದೆ. ಇದರ ವಿಶಿಷ್ಟ ಗುಮ್ಮಟ ಮತ್ತು ಜಾರು ಗೋಡೆಗಳು, ಈ ತಾರಾಲಯವನ್ನು ದೇಶದ ಇತರ ತಾರಾಲಯಗಳಿಗಿಂತ ವಿಭಿನ್ನ ಮತ್ತು ವಿಶೇಷದ್ದನ್ನಾಗಿಸುತ್ತದೆ. ಬಾಹ್ಯಾಕಾಶ...
ಘನ ಬ್ರಹ್ಮಪುತ್ರ ನದಿಯ ದಂಡೆಯ ಮೇಲಿರುವ, ಪಿಕಾಕ್ ದ್ವೀಪದಲ್ಲಿರುವ (peacock island) ಉಮಾನಂದ ದೇವಾಲಯವು, ಮoತ್ರಮುಗ್ಧಗೊಳಿಸುವ ವಾಸ್ತುಶಿಲ್ಪದ ಮಾದರಿಯಾಗಿದ್ದು, ಗುವಾಹಾಟಿ ನಗರದ ಕ್ಷಿತಿಜವನ್ನು ಪ್ರಖರಗೊಳಿಸುತ್ತದೆ. ಭಗವಾನ್ ಶಿವನಿಗೆ ಅರ್ಪಿತವಾದ ಈ ದೇವಸ್ಥಾನವು ಅಹೋಮ್ ದೊರೆ ಗಧಾದರ್ ಸಿಂಹನ ಆಳ್ವಿಕೆಯ...
ಅಸ್ಸಾಂ ನ ಸಂಪ್ರದಾಯ ಮತ್ತು ಸಂಸ್ಕೃತಿಯತ್ತ ಒಂದು ನೋಟವನ್ನು ಬೀರಬೇಕಾದರೆ, ಅಸ್ಸಾಂ ರಾಜ್ಯ ವಸ್ತುಸಂಗ್ರಹಾಲಯಕ್ಕೆ ಒಂದು ಭೇಟಿ ನೀಡುವುದು ಅತೀ ಅವಶ್ಯಕ. ಈ ಸಂಗ್ರಹಾಲಯವು ಗುವಾಹಾಟಿಯ ಹೃದಯಭಾಗದಲ್ಲಿರುವ ದಿಘಾಲಿಪುಖುರಿ ತೊಟ್ಟಿಗೆ ದಕ್ಷಿಣ ದಿಕ್ಕಿನಲ್ಲಿದೆ. ಅಸ್ಸಾಂ ರಾಜ್ಯ ವಸ್ತುಸಂಗ್ರಹಾಲಯವು ಇತಿಹಾಸ,...
ಸುಪ್ರಸಿದ್ಧವಾದ ಕಾಮಾಖ್ಯ ದೇವಸ್ಥಾನದಿಂದ, ನೀಲಾಚಲ ಬೆಟ್ಟದ ತುದಿಯಲ್ಲಿ 165 ಕಿ. ಮೀ. ಮೇಲಿರುವ ಭುವನೇಶ್ವರಿ ದೇವಾಲಯವು ದೇವಿ ಭುವನೇಶ್ವರಿಯ ಗೌರವಾರ್ಥ ನಿರ್ಮಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ, ಭುವನೇಶ್ವರಿ ದೇವಿಯು 10 ಮಹಾವಿದ್ಯಾ ದೇವತೆಗಳ ಪೈಕಿ 4 ನೆಯವಳಾಗಿದ್ದು, ಈಕೆಯೂ ಸಹ ದೇವಿಯ ಒಂದು...
ಅಸ್ಸಾಮಿನ ಮರಿಗಾಂವ್ ಜಿಲ್ಲೆಯಲ್ಲಿರುವ ಪೊಬಿತೊರಾ ವನ್ಯಜೀವಿ ಅಭಯಾರಣ್ಯವು ಗುವಾಹಾಟಿಯಿಂದ 50 ಕಿ.ಮೀ ದೂರದಲ್ಲಿದೆ. ಈ ಅಭಯಾರಣ್ಯದ ವಿಶೇಷತೆಯೆಂದರೆ ಇದರ ಒಟ್ಟು 30.8 ಚ.ಕಿ.ಮೀ ವಿಸ್ತೀರ್ಣದಲ್ಲಿ ಸುಮಾರು 16 ಚ.ಕಿ.ಮೀ ಯಷ್ಟು ಪ್ರದೇಶವು ಒಂದು ಕೊಂಬಿನ ಘೆಂಡಾಮೃಗಗಳಿಂದ ಆವೃತವಾಗಿದೆ. ಇವುಗಳ ಹೆಚ್ಚಿನ ಸಂಖ್ಯೆಯಿಂದಾಗಿ...
ಅಸ್ಸಾಂನಲ್ಲಿರುವ ಜನಪ್ರಿಯ ರಾಷ್ಟ್ರೀಯ ಉದ್ಯಾನಗಳಲ್ಲಿ ಮಾನಸ ರಾಷ್ಟ್ರೀಯ ಉದ್ಯಾನವೂ ಒಂದು. ಇದೊಂದು ಯುನೆಸ್ಕೊದಿಂದ ಮಾನ್ಯತೆ ಪಡೆದ ಪ್ರಾಕೃತಿಕ ವಿಶ್ವ ತಾಣ, ಹುಲಿ ಮೀಸಲು ಪ್ರದೇಶ, ಬಯೋಸ್ಫಿಯರ್ ಮತ್ತು ಆನೆ ಮೀಸಲು ಪ್ರದೇಶ. ಹಿಮಾಲಯ ಪರ್ವತ ಶ್ರೇಣಿಗಳ ಬುಡದಲ್ಲಿ ನೆಲೆಸಿರುವ ಈ ಉದ್ಯಾನವು ಭೂತಾನ್ ವರೆಗೂ ಹರಡಿದೆ. ಅಲ್ಲಿ...
ಜನಾರ್ಧನ ದೇವಾಲಯವು ಭಗವಾನ್ ಬುದ್ಧನಿಗೆ ಅರ್ಪಿತವಾಗಿದೆ. ಈ ದೇವಾಲಯವು ಬ್ರಹ್ಮಪುತ್ರ ನದಿಯ ಶುಕ್ಲೇಶ್ವರ್ ಘಾಟ್ ಗೆ ಸಮೀಪದಲ್ಲಿರುವ ಶುಕ್ಲೇಶ್ವರ್ ಬೆಟ್ಟದ ಮೇಲಿದೆ. ಈ ದೇವಳದ ವಾಸ್ತು ಶೈಲಿಯು ಹಿಂದೂ ಮತ್ತು ಭೌದ್ಧ ಶೈಲಿಗಳ ಸೂಕ್ಷ್ಮ ಸಂಯೋಜನೆಯಾಗಿದ್ದು, ದೇವಸ್ಥಾನದ ಸೊಬಗನ್ನು ನೂರ್ಮಡಿಗೊಳಿಸುತ್ತದೆ. ...
ಗುವಹಾತಿಯಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಂಗ್ರಹಾಲಯವು 27 ವಿಜ್ಞಾನ ಕೇಂದ್ರಗಳಲ್ಲಿ ಒಂದಾಗಿದ್ದು, ಇದು ಭಾರತ ಸರಕಾರದ ವಿಜ್ಞಾನ ಸಂಗ್ರಹಾಲಯಗಳ ರಾಷ್ಟ್ರೀಯ ಸಮಿತಿಯಿಂದ ನಿರ್ವಹಿಸಲ್ಪಡುತ್ತಿದೆ. ಇದು ವಿದ್ಯಾರ್ಥಿಗಳು ಮತ್ತು ಭ್ರಾತೃ ವಿಜ್ಞಾನ ಸಂಸ್ಥೆಗಳ ನಡುವೆ ಅತ್ಯಂತ ಜನಪ್ರಿಯ ತಾಣವಾಗಿದ್ದು,...
ಗುವಾಹಾಟಿಗೆ ಭೇಟಿ ನೀಡುವ ಯಾರೊಬ್ಬರೇ ಆಗಲಿ, ಅವಶ್ಯವಾಗಿ ನೋಡಲೇಬೇಕಾದ ಸ್ಥಳಗಳಲ್ಲೊಂದು ಶುಕ್ರೇಶ್ವರ ದೇವಾಲಯ. ಈ ದೇವಾಲಯವು ಭಗವಾನ್ ಶಿವನಿಗೆ ಅರ್ಪಿತವಾಗಿದ್ದು, ಇದು 1744 ರಲ್ಲಿ ಅಹೋಮ್ ದೊರೆ ಪ್ರಮತ್ತ ಸಿಂಹನಿಂದ ಕಟ್ಟಲ್ಪಟ್ಟಿತು. ಈ ದೇವಸ್ಥಾನದಲ್ಲಿ ರಾಜಾ ರಾಜೇಶ್ವರ್ ಸಿಂಹನ (1744–1751)...