ಜನಾರ್ಧನ ದೇವಾಲಯವು ಭಗವಾನ್ ಬುದ್ಧನಿಗೆ ಅರ್ಪಿತವಾಗಿದೆ. ಈ ದೇವಾಲಯವು ಬ್ರಹ್ಮಪುತ್ರ ನದಿಯ ಶುಕ್ಲೇಶ್ವರ್ ಘಾಟ್ ಗೆ ಸಮೀಪದಲ್ಲಿರುವ ಶುಕ್ಲೇಶ್ವರ್ ಬೆಟ್ಟದ ಮೇಲಿದೆ. ಈ ದೇವಳದ ವಾಸ್ತು ಶೈಲಿಯು ಹಿಂದೂ ಮತ್ತು ಭೌದ್ಧ ಶೈಲಿಗಳ ಸೂಕ್ಷ್ಮ ಸಂಯೋಜನೆಯಾಗಿದ್ದು, ದೇವಸ್ಥಾನದ ಸೊಬಗನ್ನು ನೂರ್ಮಡಿಗೊಳಿಸುತ್ತದೆ. ಈ ದೇವಸ್ಥಾನವನ್ನು 17 ನೆಯ ಶತಮಾನದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ ಎಂದು ನಂಬಲಾಗಿದೆ. ಆದರೆ, ಈ ದೇವಳವು ಅದಕ್ಕಿಂತಲೂ ಎಷ್ಟೋ ಮೊದಲು ನಿರ್ಮಿತಿಗೊಂಡಿತ್ತು.
ದೇವಸ್ಥಾನದ ನಿವೇಶನವು ಸುಂದರವಾಗಿದ್ದು ಹೆಚ್ಚು ಕಡಿಮೆ ಪರಿಪೂರ್ಣವಾಗಿದೆ. ಬೆಟ್ಟವೊಂದರ ಮೇಲೆ ಈ ದೇವಸ್ಥಾನವು ಇರುವುದರಿಂದ, ಇದು ಬ್ರಹ್ಮಪುತ್ರ ನದಿಯ ಒಂದು ಮೇಲ್ನೋಟವನ್ನು ಒದಗಿಸುತ್ತದೆ. ದೇವಸ್ಥಾನದ ಮುಖ್ಯ ಹಜಾರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವಾಗ, ಪ್ರವಾಸಿಗರು ದೇವಳದ ಪ್ರಶಾಂತ, ನಿಶ್ಯಬ್ಧ ಸಂಜೆಯನ್ನು ಆನಂದಿಸಬಹುದು.
ಪ್ರವಾಸಿಗರು ಈ ದೇವಸ್ಥಾನಕ್ಕೆ, ಗುವಾಹಾಟಿ ನಗರದ ಕೇಂದ್ರ ಭಾಗವಾದ ಪಲ್ಟನ್ ಬಜಾರ್ ನಿಂದ ಸಾರ್ವಜನಿಕ ಸಾರಿಗೆ ಬಸ್ಸುಗಳಿಂದ ಮತ್ತು ಬಾಡಿಗೆಗೆ ಪಡೆದ ಟ್ಯಾಕ್ಸಿಗಳ ಮೂಲಕ ತಲುಪಬಹುದು.