ಮಥುರಾದ ಹತ್ತಿರವಿರುವ ಗೋವರ್ಧನ ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳ. ಇಲ್ಲಿ ಕೃಷ್ಣ ಪರಮಾತ್ಮನಿಗೆ ಸಂಬಂಧಿಸಿದ ಅನೇಕ ಪುರಾಣದ ಕಥೆಗಳನ್ನು ಕೇಳಬಹುದು. ಅದರಲ್ಲೊಂದು ಯಾವುದೆಂದರೆ ಸ್ವರ್ಗದಿಂದ ಇಳಿದು ಬಂದ ಕೃಷ್ಣನ ಲೀಲೆಯೂ ಒಂದು. ಇನ್ನೊಂದು ಕಥೆಯೇನೆಂದರೆ ಒಮ್ಮೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದಾಗ ವ್ರಜ ಗ್ರಾಮದ ಜನರನ್ನು ಮಳೆಯಿಂದ ರಕ್ಷಿಸಲು ತನ್ನ ಕೈಗಳಿಂದ ಪರ್ವತವನ್ನು ಏಳು ದಿನದವರೆಗೆ ಎತ್ತಿ ಹಿಡಿದಿದ್ದಿದು.
ಮೇಲೆ ಹೇಳಿದಂತೆ ಗೋವರ್ಧನವು ಹಿಂದುಗಳ ಪ್ರಮುಖ ಯಾತ್ರಾ ಸ್ಥಳಗಳಲ್ಲೊಂದು. ಅಷ್ಟೇ ಅಲ್ಲದೇ ಯಾರು ಗೋವರ್ಧನದ ಪರಿಕ್ರಮ ಮಾಡುತ್ತಾರೋ ಅವರ ಕಾಮನೆಗಳು ಪೂರ್ಣವಾಗುತ್ತದೆ ಎಂಬ ನಂಬಿಕೆ ಇದೆ. ಅದಲ್ಲದೇ, ಇಲ್ಲಿ ದೇವರ ದೊಡ್ಡ ವಿಗ್ರಹವಿದ್ದು ಆಸುಪಾಸಿನ ಭಾಗದ ಜನತೆಗೆ ಆಧ್ಯಾತ್ಮಿಕ ಭಾವನೆಯನ್ನು ಈ ಸ್ಥಳ ನೀಡುತ್ತದೆ.
ಗೋವರ್ಧನ್ ಪಕ್ಕವಿರುವ ಯಾತ್ರಾ ಸ್ಥಳಗಳು
ಇಲ್ಲಿಯ ಪ್ರಮುಖ ಆಕರ್ಷಣೆಯೆಂದರೆ ಕೃಷ್ಣ ದೇವರಿಗೆ ಸಂಬಂಧಿಸಿದ ಹರ್ ದೇವಜಿ ದೇವಾಲಯ. ಇಲ್ಲಿ ಸುಂದರವಾದ ರಾಧಾ ಮತ್ತು ಕೃಷ್ಣನ ಮೂರ್ತಿಯಿದ್ದು ಅವರ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸುತ್ತದೆ.
ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ರಾಧಾಕುಂಡ ಅಥವಾ ಸರೋವರ, ಇಲ್ಲಿ ರಾಧಾ ಮತ್ತು ಕೃಷ್ಣ ಗೋಪಿಕಾ ಸ್ತ್ರೀಯರೊಂದಿಗೆ ಸಮಯ ಕಳೆಯುತ್ತಿದ್ದರು. ಅಲ್ಲದೇ ಕುಸುಮ ಸರೋವರ ಎನ್ನುವ ಪವಿತ್ರವಾದ ಕೆರೆಯಿದೆ. ಅಲ್ಲಿ ಗೋಪಿಕಾ ಸ್ತ್ರೀಯರು ಶ್ರೀಕೃಷ್ಣನಿಗಾಗಿ ಕಾಯುತ್ತಿದ್ದರು ಎನ್ನುವುದು ಪ್ರತೀತಿ. ಮಾನಸಿಗಂಗಾ ಎನ್ನುವ ಇನ್ನೊಂದು ಕೆರೆ ಕೂಡಾ ಶ್ರೀಕೃಷ್ಣನಿಗೆ ಸಂಬಂಧಿಸಿದ್ದು ಎಂದೂ ಹೇಳಲಾಗುತ್ತದೆ.
ಇಲ್ಲಿಗೆ ಭೇಟಿ ನೀಡಲು ಯಾವ ಸಮಯ ಸೂಕ್ತ
ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಗೋವರ್ಧನಕ್ಕೆ ಭೇಟಿ ನೀಡಲು ಯೋಗ್ಯವಾದ ಸಮಯ. ಈ ತಿಂಗಳುಗಳಲ್ಲಿ ವಾತಾವರಣವು ಉತ್ತಮವಾಗಿರುತ್ತದೆ. ಈ ಜಾಗವು ಒಂದು ಯಾತ್ರಾ ಸ್ಥಳವಾದುದರಿಂದ ವರ್ಷದ ಎಲ್ಲಾ ದಿನಗಳಲ್ಲೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಗೋವರ್ಧನಕ್ಕೆ ತಲುಪುದು ಹೇಗೆ
ಗೋವರ್ಧನಕ್ಕೆ ರೈಲಿನ ಮೂಲಕ ತಲುಪಲು ಉತ್ತಮ ಸಂಪರ್ಕವಿದೆ.