ಲಿಪಿದಾರರ ಪ್ರಕಾರ, ರಾಧಾ ರಾಣಿ ಮತ್ತು ಗೋಪಿಕಾ ಸ್ತ್ರೀಯರು ಒಮ್ಮೆ ಕೃಷ್ಣನನ್ನು ಭೇಟಿ ಮಾಡಲು ಮಾನಸಿ ಗಂಗಾ ತಟದಲ್ಲಿ ಕಾಯುತ್ತಿದ್ದರು. ಆದರೆ ಕೃಷ್ಣ ತುಂಬಾ ಹೊತ್ತು ಬರದೇ ಇದ್ದಾಗ ಹರಿದೇವ ಎಂದು ದೇವರ ಭಜನೆ ಮಾಡಲು ಆರಂಭಿಸಿದರು. ಇವರ ಪ್ರೀತಿಯ ಭಜನೆಗೆ ಒಲಿದ ಕೃಷ್ಣ ಗೋಪಿಕೆಯರು ಮುಂದೆ ಏಳು ವರ್ಷದ ಮಗುವಿನ ರೂಪದಲ್ಲಿ ಗೋವರ್ಧನ ಗಿರಿಯನ್ನು ಎಡಗೈನಲ್ಲಿ ಮತ್ತು ಕೊಳಲನ್ನು ಬಲಗೈನಲ್ಲಿ ಹಿಡಿದ ರೂಪದಲ್ಲಿ ಪ್ರತ್ಯಕ್ಷನಾದ. ಕೃಷ್ಣನ ಈ ಅದ್ಭುತ ಅವತಾರದಿಂದ ಪ್ರಸನ್ನರಾದ ರಾಧಾ ರಾಣಿ ಮತ್ತು ಗೋಪಿಕೆಯರು ಪ್ರತೀ ದಿನ ಗೋವರ್ಧನಗಿರಿಯ ಬಳಿ ಬಂದು ಕೃಷ್ಣನ ಭಜನೆ ಮತ್ತು ದೇವನಾಮಗಳಿಂದ ಪ್ರಾರ್ಥಿಸುತ್ತಾರೆ. ಮೂಲ ಹರದೇವ ದೇವಾಲಯವನ್ನು ಕೃಷ್ಣನ ಮೊಮ್ಮಗ ಕಟ್ಟಿಸಿದ ಎನ್ನುವುದು ನಂಬಿಕೆ.
ಈಗಿರುವ ಹರದೇವ ದೇವಾಲಯವನ್ನು ರಾಜ ಜೈಪುರದ ಭಂಗನದಾಸ ಹದಿನಾರನೇ ಶತಮಾನದಲ್ಲಿ ಅಕ್ಬರ್ ಸಾಮ್ರಾಜ್ಯದಲ್ಲಿ ಕಟ್ಟಿಸಿದ. ಭಕ್ತಾದಿಗಳು ಮಾನಸಿ ಗಂಗಾದಲ್ಲಿ ಸ್ನಾನ ಮಾಡಿ ಗುಡಿ ಪ್ರವೇಶಿಸುವ ಮೊದಲು ದೇವಾಯಲದ ಸುತ್ತ ಪರಿಕ್ರಮ ಮಾಡುತ್ತಾರೆ. ಆಮೇಲೆ ಹರಿದೇವರ ದರುಶನ ಮಾಡಿ ತಮ್ಮ ಅಭಿಲಾಷೆಯನ್ನು ದೇವರ ಮುಂದೆ ತೋಡಿಕೊಳ್ಳುತ್ತಾರೆ.