ನಮ್ಮ ಭಾರತ ದೇಶದಲ್ಲಿ ಅನೇಕ ನಿಗೂಢವಾದ ದೇವಾಲಯಗಳಿವೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿದೆ. ತಮಿಳುನಾಡು ರಾಜ್ಯದಲ್ಲಿ ಅನೇಕ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಒಂದು ಶ್ರೀ ಮಹಾವಿಷ್ಣುವಿನ ದೇವಾಲಯವು ಒಂದು. ಇದೊಂದು ಪ್ರಾಚೀನವಾದ ದೇವಾಲಯವಾಗಿದ್ದು, ಈ ದೇವಾಲಯದ ಮೇಲೆ ಯಾವುದೇ ಗರುಡ ಪಕ್ಷಿಗಳು ಹಾರಾಡುವುದಿಲ್ಲವಂತೆ. ಅದಕ್ಕೆ ಸಂಬಂಧಿಸಿಂದತೆ ಸ್ಥಳ ಪುರಾಣವು ಇದೆ. ತಮಿಳು ಕವಿ ಸಂತರಾದ ಆಳ್ವರ್ರು ಪಟ್ಟಿ ಮಾಡಿರುವ 108 ವಿಷ್ಣುವಿನ ದಿವ್ಯ ದೇಸಂ ಕ್ಷೇತ್ರಗಳ ಪೈಕಿ ಇದು ಕೂಡ ಒಂದಾಗಿದೆ. ಹಾಗಾದರೆ ಆ ದೇವಾಲಯ ಎಲ್ಲಿದೆ? ಆ ದೇವಾಲಯದ ಸ್ಥಳ ಪುರಾಣವೇನು ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!
108 ವಿಷ್ಣುವಿನ ದಿವ್ಯ ದೇಸಂ ಕ್ಷೇತ್ರಗಳ ಪೈಕಿ ಎರಡೇ ಎರಡು ದೇವಾಲಯಗಳಲ್ಲಿ ಶ್ರೀ ಮಹಾ ವಿಷ್ಣು ದಕ್ಷಿಣಾಭಿಮುಖ ಶಯನಾವಸ್ಥೆಯಲ್ಲಿ ಕಂಡುಬರುತ್ತದೆ. ಅಂತಹ ಒಂದು ದೇವಾಲಯವು ಪ್ರಸಿದ್ಧವಾದ ಶ್ರೀ ರಂಗನ ರಂಗನಾಥಸ್ವಾಮಿಯ ದೇವಾಲಯವಾದರೆ, ಎರಡನೇ ದೇವಾಲಯವೇ ಲೇಖನದಲ್ಲಿ ತಿಳಿಸಲಾಗುವ ದೇವಾಲಯ.
PC:: Ssriram mt
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!
ಗೌತಮ ಮಹರ್ಷಿಗಳು ಶಿವನ ಪರಮ ಭಕ್ತರಾಗಿದ್ದರು. ಪ್ರತಿ ದಿನ ಶಿವನನ್ನು ಆರಾಧಿಸಲೆಂದು ಕಾಡಿಗೆ ತೆರಳಿ ಗಿಡಗಳನ್ನು ಏರಿ ವಿವಿಧ ಹಣ್ಣು, ಹೂವುಗಳನ್ನು ಕಿತ್ತು ತಂದು ಶಿವನಿಗೆ ನೈವೇದ್ಯವಾಗಿ ಅರ್ಪಿಸುತ್ತಿದ್ದರು. ಹೀಗೆ ಕ್ರಮೇಣವಾಗಿ ಅವರ ದೃಷ್ಟಿ ಶಕ್ತಿ ತಗ್ಗಿತಲ್ಲದೇ ಮರ ಏರಲು ಕೈಕಾಲುಗಳು ಬಲಹೀನವಾಗತೊಡಗಿದವು.
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!
ಇದೇ ಸಮಯದಲ್ಲಿ ಶಿವನನ್ನು ಕುರಿತು ಶಕ್ತಿಯುತವಾದ ಸೂಕ್ಷ್ಮ ದೃಷ್ಟಿ ಹಾಗು ಹುಲಿಗಳಂತಹ ಬಲಿಷ್ಟ ಪಾದಗಳನ್ನು ಬೇಡಿದರು. ಶಿವನು ಅದೇ ರೀತಿಯಾಗಿ ಅನುಗ್ರಹಹಿದನು. ತದನಂತರ ಅವರು ವ್ಯಾಘ್ರಪಾದ ಮುನಿಗಳು ಎಂದೇ ಪ್ರಸಿದ್ಧಿ ಪಡೆದರು.
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!
ಹೀಗೆ ಸಮಯ ಕಳೆದಂತೆ ಅವರು ಮೋಕ್ಷ ಹೊಂದಲು ಬಯಸಿದರು. ಅದಕ್ಕಾಗಿ ಶಿವನನ್ನು ಪ್ರಾರ್ಥಿಸಿದರು. ಶಿವನು ಪ್ರತ್ಯಕ್ಷನಾಗಿ ವಿಷ್ಣುವನ್ನು ಕುರಿತು ಶ್ರೀರಂಗಕ್ಕೆ ಹೋಗಿ ಧ್ಯಾನಿಸು. ಶ್ರೀ ವೈಕುಂಠ ದೊರೆಯುತ್ತದೆಂದು ಆಜ್ಞಾನಿಪಿದನು. ಅದರಂತೆ ಅವರು ಶ್ರೀರಂಗಕ್ಕೆಂದು ತೆರಳಿದರು.
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!
ಆದರೆ ದೃಷ್ಟಿಯಿಂದ ಬಲು ಸೂಕ್ಷ್ಮವಾಗಿದ್ದುದರಿಂದ ಅವರು ದಾರಿ ತಪ್ಪಿ ಕೃಪಾ ಸಮುದ್ರಕ್ಕೆ ಬಂದು ಆಶಕ್ತರಾಗಿ ಅಲ್ಲಿಯೇ ಕುಳಿತು ವಿಷ್ಣುವನ್ನು ಧ್ಯಾನಿಸಲು ಪ್ರಾರಂಭಿಸಿದರು. ಆ ಕೃಪಾಸಮುದ್ರವೇ ಪ್ರಸ್ತುತ ತಿರುಸಿರುಪೂಲಿಯೂರು. ಕೊಲ್ಲುಮಂಗುಡಿಯಿಂದ 2 ಕಿ.ಮೀ, ಕುಂಭಕೋಣಂನಿಂದ ಸುಮಾರು 40 ಕಿ.ಮೀ ಹಾಗು ಮೈಲಾಡುತುರೈನಿಂದ ತಿರುವರೂರು ಮಾರ್ಗದಲ್ಲಿ ಮೈಲಾಡುತುರೈನಿಂದ ಸುಮಾರು 15 ಕಿ.ಮೀಗಳಷ್ಟು ದೂರದಲ್ಲಿದೆ.
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!
ವಿಷ್ಣು ಧ್ಯಾನಿಸುತ್ತಿದ್ದ ವ್ಯಾಘ್ರಪಾದರಿಗೆ ತನ್ನ ಅಗಾಧವಾದ ಶಯನಾವಸ್ಥೆಯಲ್ಲಿ ದರ್ಶನ ನೀಡಿದ. ಆದರೆ ಆ ದೊಡ್ಡದಾದ ಆಕಾರದ ದರ್ಶನ ಪಡೆಯಲು ಮುನಿಗಳಿಗೆ ಸಾಧ್ಯವಾಗಲಿಲ್ಲ. ಇದನ್ನು ಅರಿತುಕೊಂಡ ಶ್ರೀ ಮಹಾ ವಿಷ್ಣುವು ಚಿಕ್ಕದಾದ ಬಾಲಕ ರೂಪದಲ್ಲಿ ಮಲಗಿಕೊಂಡಿರುವ ಅವತಾರದಲ್ಲಿ ಅವರಿಗೆ ದರ್ಶನವನ್ನು ನೀಡಿದನು. ವೈಕುಂಠದಲ್ಲಿ ಶಾಶ್ವತ ಸ್ಥಾನಕೊಟ್ಟ ಎಂಬ ಪ್ರತೀತಿ ಇದೆ.
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!
ಇಲ್ಲಿ ವಿಷ್ಣುವು ನೆಲೆಸಿದ್ದಾಗ ಒಂದೊಮ್ಮೆ ಗರುಡ ಹಾಗು ಆದಿಶೇಷನ ಮಧ್ಯೆ ಯಾರು ಉತ್ತಮರು ಎಂಬ ವಾಗ್ವಾದ ಉಂಟಾಗುತ್ತದೆ. ಕೊನೆಗೆ ಅದು ವಿಷ್ಣುವಿಗೆ ತಲುಪಿದಾಗ ವಿಷ್ಣು ಗರುಡನಲ್ಲಿ ಅಹಂಕಾರವಿರುವುದನ್ನು ಗಮನಿಸಿ ಆದಿಶೇಷನ ಪರವಾಗಿ ಮಾತನಾಡಿದನು. ಇದರಿಂದ ಗರುಡ ಕೋಪಗೊಂಡನು.
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!
ಆದರೆ ಗರುಡ ಶಕ್ತಿಶಾಲಿಯಾಗಿದ್ದರಿಂದ ಆದಿಶೇಷನು ವಿಷ್ಣುವಿನಲ್ಲಿ ಗರುಡನಿಂದ ಅಪಾಯ ಉಂಟಾಗದಂತೆ ಬೇಡಿತು. ಅದಕ್ಕೆ ವಿಷ್ಣುವು ಆದಿಶೇಷನನ್ನು ಕುರಿತು ತನ್ನ ಬಳಿಯೇ ನೆಲೆಸು ಎಂದೂ, ಇಲ್ಲಿ ಎಂದಿಗೂ ನಿನಗೆ ಗರುಡ ಅಪಾಯ ಉಂಟು ಮಾಡುವುದಿಲ್ಲವೆಂದೂ ಹರಸಿದನು.
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!
ಹಾಗಾಗಿಯೇ ಇಂದಿಗೂ ಈ ದೇವಾಲಯದ ಮೇಲೆ ಎಂದಿಗೂ ಗರುಡ ಪಕ್ಷಿಗಳು ಹಾರಾಡುವುದಿಲ್ಲವಂತೆ. ಅಲ್ಲದೇ ಈ ದೇವಾಲಯದಲ್ಲಿ ಆದಿಶೇಷನಿಗೂ ಮುಡಿಪಾದ ಸನ್ನಿಧಿ ಇದೆ. ಇಲ್ಲಿ ಗರುಡ ಪಕ್ಷಿಯ ದೇವಾಲಯವಿದೆ. ಅದು ಸ್ವಲ್ಪ ದೂರದಲ್ಲಿದೆ.