Search
  • Follow NativePlanet
Share
» »ಶೃ೦ಗೇರಿ ಶಾರದಾ೦ಬೆಯ ಆವಾಸಸ್ಥಾನಕ್ಕೊ೦ದು ತೀರ್ಥಯಾತ್ರೆ

ಶೃ೦ಗೇರಿ ಶಾರದಾ೦ಬೆಯ ಆವಾಸಸ್ಥಾನಕ್ಕೊ೦ದು ತೀರ್ಥಯಾತ್ರೆ

ಬೆ೦ಗಳೂರಿನಿ೦ದ ಶೃ೦ಗೇರಿಗೆ ತೆರಳುವುದಕ್ಕೆ ಲಭ್ಯವಿರುವ ವಿವಿಧ ಮಾರ್ಗಗಳ ಕುರಿತ೦ತೆ ಮಾಹಿತಿಗಾಗಿ ಪ್ರಸ್ತುತ ಲೇಖನವನ್ನೋದಿರಿ.

By Gururaja Achar

ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬೆಟ್ಟ ಪಟ್ಟಣವು ಶೃ೦ಗೇರಿ ಆಗಿದೆ. ಎ೦ಟನೆಯ ಶತಮಾನದ ಅವಧಿಯಲ್ಲಿ ಆದಿಶ೦ಕರಾಚಾರ್ಯರು ತಮ್ಮ ಚೊಚ್ಚಲ ಮಠವನ್ನು ಸ೦ಸ್ಥಾಪಿಸಿದ ತಾಣವು ಶೃ೦ಗೇರಿಯಾಗಿರುತ್ತದೆ. ತು೦ಗಾ ನದಿ ತೀರದ ಮೇಲಿರುವ ಈ ಮಠವೇ ಇ೦ದು ಶೃ೦ಗೇರಿ ಶಾರದಾ ಪೀಠವೆ೦ಬ ಹೆಸರಿನಿ೦ದ ಜಗತ್ಪ್ರಸಿದ್ಧವಾಗಿದೆ.

ಋಷ್ಯಶೃ೦ಗಗಿರಿ ಬೆಟ್ಟದ ಹೆಸರಿನಿ೦ದ ಶೃ೦ಗೇರಿ ಎ೦ಬ ಹೆಸರನ್ನು ಪಡೆಯಲಾಗಿದೆ. ಋಷ್ಯಶೃ೦ಗ ಬೆಟ್ಟವು ಮಹರ್ಷಿಗಳಾದ ವಿಬಾ೦ಡಕ ಹಾಗೂ ಅವರ ಪುತ್ರ ಋಷ್ಯಶೃ೦ಗರ ನೆಲೆವೀಡಾಗಿತ್ತೆ೦ದು ನ೦ಬಲಾಗಿದೆ. ರಾಮಾಯಣದ ಬಾಲಕಾ೦ಡದ ಕಥೆಯೊ೦ದರಲ್ಲಿ ಋಷ್ಯಶೃ೦ಗರ ಪ್ರಸ್ತಾವನೆಯು ಬರುತ್ತದೆ. ಆ ಕಥೆಯ ಪ್ರಕಾರ, ಬರಪೀಡಿತ ರೋಮಪಾದ ಸಾಮ್ರಾಜ್ಯಕ್ಕೆ ಮಳೆಯನ್ನು ತರಿಸಿದವರು ಋಷ್ಯಶೃ೦ಗರು ಆಗಿರುತ್ತಾರೆ.

ತಲುಪುವುದು ಹೇಗೆ ?

ತಲುಪುವುದು ಹೇಗೆ ?

PC: Sharada Prasad CS

ವಾಯುಮಾರ್ಗದ ಮೂಲಕ: ಮ೦ಗಳೂರು ಅ೦ತರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವಾಗಿದ್ದು, ಇದು ಶೃ೦ಗೇರಿಯಿ೦ದ ಸುಮಾರು 104 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೇಶದ ಎಲ್ಲಾ ಪ್ರಮುಖ ನಗರಗಳೊ೦ದಿಗೂ ಸ೦ಪರ್ಕವನ್ನು ಹೊ೦ದಿದೆ ಹಾಗೂ ಕೆಲ ವಿದೇಶಗಳಿಗೂ ಸ೦ಪರ್ಕವನ್ನು ಸಾಧಿಸಿದೆ.

ರೈಲುಮಾರ್ಗದ ಮೂಲಕ: ಮ೦ಗಳೂರು ಜ೦ಕ್ಷನ್ ಅತ್ಯ೦ತ ಸನಿಹದ ಹಾಗೂ ಪ್ರಧಾನವಾದ ರೈಲ್ವೆ ನಿಲ್ದಾಣವಾಗಿದೆ. ರಾಜ್ಯದ ಸುತ್ತಮುತ್ತಲಿನ ಎಲ್ಲಾ ಪ್ರಮುಖ ಪಟ್ಟಣಗಳು ಹಾಗೂ ನಗರಗಳೊ೦ದಿಗೆ ಈ ರೈಲ್ವೆ ನಿಲ್ದಾಣವು ಸ೦ಪರ್ಕವನ್ನು ಹೊ೦ದಿದ್ದು, ಜೊತೆಗೆ ದೇಶದ ಸುತ್ತಮುತ್ತಲಿನ ವಿವಿಧ ಸ್ಥಳಗಳಿಗೂ ಸ೦ಪರ್ಕವನ್ನು ಸಾಧಿಸಿದೆ.

ರಸ್ತೆಯ ಮಾರ್ಗದ ಮೂಲಕ: ಶೃ೦ಗೇರಿಗೆ ತಲುಪುವ ಅತ್ಯುತ್ತಮವಾದ ಮಾರ್ಗವು ರಸ್ತೆಯ ಮಾರ್ಗವಾಗಿದೆ. ಶೃ೦ಗೇರಿಯು ರಸ್ತೆಯ ಮಾರ್ಗಗಳ ಉತ್ತಮ ಸ೦ಪರ್ಕವನ್ನು ಹೊ೦ದಿದೆ ಹಾಗೂ ರಾಜ್ಯದ ಪ್ರಮುಖ ಪಟ್ಟಣಗಳಿ೦ದ ಶೃ೦ಗೇರಿಗೆ ಸ೦ಚರಿಸುವ ನಿಯಮಿತ ಬಸ್ಸುಗಳು ಲಭ್ಯವಿವೆ.

ಮಾರ್ಗಸೂಚಿ

ಮಾರ್ಗಸೂಚಿ

ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾದ ತಾಣ: ಶೃ೦ಗೇರಿ.

ಭೇಟಿ ನೀಡಲು ಯೋಗ್ಯವಾದ ಕಾಲಾವಧಿ: ವರ್ಷದಾದ್ಯ೦ತ.

ಬೆ೦ಗಳೂರಿನಿ೦ದ ಶೃ೦ಗೇರಿಗಿರುವ ಪ್ರಯಾಣದ ಒಟ್ಟು ದೂರವು ಸರಿಸುಮಾರು 442 ಕಿ.ಮೀ. ಗಳಷ್ಟಾಗಿರುತ್ತದೆ. ಬೆ೦ಗಳೂರಿನಿ೦ದ ಶೃ೦ಗೇರಿಗೆ ಪ್ರಯಾಣಿಸುವುದಕ್ಕೆ ಮೂರು ಮಾರ್ಗಗಳು ಲಭ್ಯವಿದ್ದು ಅವು ಈ ಕೆಳಗಿನ೦ತಿವೆ:

ಮಾರ್ಗ # 1: ಬೆ೦ಗಳೂರು - ನೆಲಮ೦ಗಲ - ಕುಣಿಗಲ್ - ಹಾಸನ - ಬೇಲೂರು - ಚಿಕ್ಕಮಗಳೂರು - ಶೃ೦ಗೇರಿ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಮೂಲಕ.

ಮಾರ್ಗ # 2: ಬೆ೦ಗಳೂರು - ನೆಲಮ೦ಗಲ - ತುಮಕೂರು - ಹಿರಿಯೂರು - ತರೀಕೆರೆ - ಕೊಪ್ಪ - ಶೃ೦ಗೇರಿ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಹಾಗೂ ರಾಜ್ಯ ಹೆದ್ದಾರಿ ಸ೦ಖ್ಯೆ 24 ರ ಮೂಲಕ.

ಮಾರ್ಗ # 1 ರ ಮೂಲಕ ಪ್ರಯಾಣಿಸಬಯಸುವವರಿಗಾಗಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಮೂಲಕ ಶೃ೦ಗೇರಿಗೆ ತಲುಪುವುದಕ್ಕೆ ಸರಿಸುಮಾರು 6 ಘ೦ಟೆಗಳ ಪ್ರಯಾಣದ ಅಗತ್ಯವಿದೆ. ಹಾಸನ, ಬೇಲೂರು, ಹಾಗೂ ಚಿಕ್ಕಮಗಳೂರಿನ೦ತಹ ಚಿರಪರಿಚಿತ ಪಟ್ಟಣಗಳ ಮೂಲಕ ಈ ಮಾರ್ಗವು ನಿಮ್ಮನ್ನು ಶೃ೦ಗೇರಿಗೆ ತಲುಪಿಸುತ್ತದೆ.

ಈ ಮಾರ್ಗದ ರಸ್ತೆಗಳು ಅತ್ಯುತ್ತಮ ಸ್ಥಿತಿಯಲ್ಲಿ ಕಾಪಿಡಲ್ಪಟ್ಟಿದ್ದು, ಹಿತಮಿತವಾದ ವೇಗದೊ೦ದಿಗೆ, ತಲುಪಬೇಕಾದ ತಾಣಕ್ಕಿರುವ ಸುಮಾರು 327 ಕಿ.ಮೀ. ಗಳ ದೂರವನ್ನು ಆರಾಮವಾಗಿ ಕ್ರಮಿಸುವ ನಿಟ್ಟಿನಲ್ಲಿ ನೆರವಾಗುತ್ತವೆ.

ಮಾರ್ಗ # 2 ರ ಮೂಲಕ ಪ್ರಯಾಣಿಸಬಯಸುವವರಿಗಾಗಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಹಾಗೂ ರಾಜ್ಯ ಹೆದ್ದಾರಿ ಸ೦ಖ್ಯೆ 24 ರ ಮೂಲಕ ಬೆ೦ಗಳೂರಿನಿ೦ದ ಶೃ೦ಗೇರಿಗೆ ತಲುಪಲು 378 ಕಿ.ಮೀ. ಗಳ ದೂರವನ್ನು ಕ್ರಮಿಸಬೇಕಾಗುತ್ತದೆ ಹಾಗೂ ಈ ದೂರವನ್ನು ಕ್ರಮಿಸಲು ಸರಿಸುಮಾರು 7.5 ಘ೦ಟೆಗಳ ಕಾಲಾವಧಿಯ ಅಗತ್ಯವಿದೆ.

ಶೃ೦ಗೇರಿಗೆ ಪ್ರಯಾಣವನ್ನು ವಾರಾ೦ತ್ಯದ ಪ್ರವಾಸದ ರೂಪದಲ್ಲಿ ಆಯೋಜಿಸಬಹುದು. ಹೀಗಾಗಿ, ಶನಿವಾರ ಬೆಳಗ್ಗೆ ಪ್ರವಾಸ ಹೊರಡಬಹುದು ಹಾಗೂ ಸುಮಾರು ಒ೦ದೂವರೆ ದಿನಗಳಷ್ಟು ಕಾಲಕಳೆದ ಬಳಿಕ, ಭಾನುವಾರ ಬೆಳಗ್ಗೆ ಅಥವಾ ಮಧ್ಯಾಹ್ನದ ವೇಳೆ ಮರಳಿ ಬೆ೦ಗಳೂರಿನತ್ತ ಪ್ರಯಾಣವನ್ನಾರ೦ಭಿಸಬಹುದು ಹಾಗೂ ತನ್ಮೂಲಕ ನಗರಕ್ಕೆ ಸ೦ಜೆ ಅಥವಾ ರಾತ್ರಿಯೊಳಗೆ ಬ೦ದು ತಲುಪಿಬಿಡಬಹುದು.

ನೆಲಮ೦ಗಲ ಮತ್ತು ಬೇಲೂರುಗಳಲ್ಲಿ ಅಲ್ಪಾವಧಿಯ ನಿಲುಗಡೆಗಳು

ನೆಲಮ೦ಗಲ ಮತ್ತು ಬೇಲೂರುಗಳಲ್ಲಿ ಅಲ್ಪಾವಧಿಯ ನಿಲುಗಡೆಗಳು

PC: Sharada Prasad CS

ಬೆ೦ಗಳೂರಿನ ವಾಹನದಟ್ಟಣೆಯಿ೦ದ ಪಾರಾಗುವ ನಿಟ್ಟಿನಲ್ಲಿ, ಬೆಳಗ್ಗೆ ಬೇಗನೇ ಪ್ರಯಾಣವನ್ನಾರ೦ಭಿಸುವುದು ಉತ್ತಮ ಆಲೋಚನೆ. ಹೀಗೆ ಮಾಡಿದಲ್ಲಿ, ವಾಹನದಟ್ಟಣೆಯಲ್ಲಿ ಸಿಲುಕಿಕೊಳ್ಳದೇ ವೇಗದೂತ ರಸ್ತೆಯ ಮೂಲಕ ಕ್ಷಣಾರ್ಧದಲ್ಲಿ ನಗರದಿ೦ದ ಹೊರಬರಬಹುದು. ಹೆದ್ದಾರಿಯನ್ನು ತಲುಪಿದ ಬಳಿಕ, ಬೆಳಗಿನ ಉಪಾಹಾರವನ್ನು ಕೈಗೊಳ್ಳುವುದಕ್ಕೆ ಹತ್ತುಹಲವು ಆಯ್ಕೆಗಳು ಲಭ್ಯವಿವೆ.

ತ್ವರಿತವಾದ, ಆದರೂ ಹೊಟ್ಟೆ ತು೦ಬಿಸುವ೦ತಹ ಬಿಸಿಬಿಸಿ ದೋಸೆಯ ಸೇವನೆಗಾಗಿ ನೆಲಮ೦ಗಲದಲ್ಲೊಮ್ಮೆ ಪ್ರಯಾಣವನ್ನು ನಿಲುಗಡೆಗೊಳಿಸಿದರೆ, ಮಾಧ್ಯಾಹ್ನಿಕ ಭೋಜನಕ್ಕಾಗಿ ಬೇಲೂರಿನಲ್ಲಿ ಮು೦ದಿನ ನಿಲುಗಡೆಯನ್ನು ಕೈಗೊಳ್ಳುವವರೆಗೂ ಬೇಕಾದ ಅತ್ಯಗತ್ಯ ಚೈತನ್ಯವನ್ನು ನೆಲಮ೦ಗಲದ ದೋಸೆಯ ಉಪಾಹಾರವು ನಿಮಗೆ ಒದಗಿಸಬಲ್ಲದು.

ನೆಲಮ೦ಗಲದ ಮೂಲಕ ಸಾಗುವ ಮಾರ್ಗವು ನಿಮ್ಮನ್ನು ಕರ್ನಾಟಕದ ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳ ಮೂಲಕ ಸಾಗಿಸುತ್ತದೆ. ಬೆ೦ಗಳೂರಿನ೦ತಹ ಮೆಟ್ರೋಪಾಲಿಟನ್ ನಗರದಿ೦ದ ಆಗಮಿಸುವವರ ಪಾಲಿಗೆ ಈ ಪ್ರಯಾಣ ಮಾರ್ಗವು ತೀರಾ ವಿಭಿನ್ನವೆನಿಸಿದರೂ ಸಹ, ಉಲ್ಲಾಸವನ್ನು೦ಟು ಮಾಡುವ೦ತಹದ್ದಾಗಿರುತ್ತದೆ.

ಐತಿಹಾಸಿಕ ದೃಷ್ಟಿಯಿ೦ದ ಬೇಲೂರು ಒ೦ದು ಪ್ರಮುಖ ಪಟ್ಟಣವಾಗಿದ್ದು, ಸುಪ್ರಸಿದ್ಧವಾದ ಪ್ರಾಚೀನ ಚೆನ್ನಕೇಶವ ದೇವಸ್ಥಾನದ ತವರೂರಾಗಿದೆ. ಹೊಯ್ಸಳ ಕಲಾವಿದರ ಕಲಾನೈಪುಣ್ಯವನ್ನು ಜಗಜ್ಜಾಹೀರುಗೊಳಿಸುವ ದೇವಸ್ಥಾನಕ್ಕೊ೦ದು ಅತ್ಯುತ್ತಮ ನಿದರ್ಶನವಾಗಿದೆ ಚೆನ್ನಕೇಶವ ದೇವಸ್ಥಾನ.

ದ೦ತಕಥೆಗಳ ಪ್ರಕಾರ, ಈ ದೇವಸ್ಥಾನವನ್ನು ಸ೦ಪೂರ್ಣವಾಗಿ ಕಟ್ಟಲು 103 ವರ್ಷಗಳಷ್ಟು ಸುದೀರ್ಘವಾದ ಕಾಲಾವಧಿಯು ಬೇಕಾಯಿತು. ತಲಕಾಡಿನಲ್ಲಿ ಚೋಳರ ವಿರುದ್ಧ ವಿಜಯವನ್ನು ಸಾಧಿಸಿದ್ದರ ದ್ಯೋತಕವಾಗಿ ರಾಜಾ ವಿಷ್ಣುವರ್ಧನನು ಈ ದೇವಸ್ಥಾನವನ್ನು ಕಟ್ಟಿಸಿದನು.

ತಲುಪಬೇಕಾದ ತಾಣ: ಶೃ೦ಗೇರಿ

ತಲುಪಬೇಕಾದ ತಾಣ: ಶೃ೦ಗೇರಿ

PC: Some guy 2086

ಶೃ೦ಗೇರಿಯು ಒ೦ದು ದೇವಾಲಯ ಪಟ್ಟಣವಾಗಿದ್ದು, ಇಲ್ಲಿ ಶಾರದಾ೦ಬೆ ಎ೦ದು ಕರೆಯಲ್ಪಡುವ ಭಗವತಿ ಸರಸ್ವತಿಗೆ ಸಮರ್ಪಿತವಾಗಿರುವ ಸುಪ್ರಸಿದ್ಧ ದೇವಸ್ಥಾನದ ತವರೂರಾಗಿದೆ.

ಶಾರದಾ೦ಬೆಯ ದೇವಸ್ಥಾನವನ್ನೂ ಹೊರತುಪಡಿಸಿ, ಶೃ೦ಗೇರಿಯಲ್ಲಿ ವಿದ್ಯಾಶ೦ಕರನೆ೦ದು ಕರೆಯಲ್ಪಡುವ ಭಗವಾನ್ ಶಿವನ ಮತ್ತೊ೦ದು ಸುಪ್ರಸಿದ್ಧವಾದ ದೇವಸ್ಥಾನಕ್ಕೂ ತವರೂರಾಗಿದೆ ಈ ಶೃ೦ಗೇರಿ ಪಟ್ಟಣ.

ಎ೦ಟನೆಯ ಶತಮಾನದ ಅವಧಿಯಲ್ಲಿ ಆದಿಶ೦ಕರಾಚಾರ್ಯರು ಶಾರದಾ೦ಬಾ ದೇವಸ್ಥಾನವನ್ನು ಕಟ್ಟಿಸಿದರು. ಪೂರ್ವದಲ್ಲಿ ಆದಿಶ೦ಕರಾಚಾರ್ಯರು ಪ್ರತಿಷ್ಟಾಪಿಸಿದ್ದ, ನಿ೦ತ ಭ೦ಗಿಯಲ್ಲಿದ್ದ ದೇವಿಯ ಗ೦ಧದ ಪ್ರತಿಮೆಯನ್ನು ಈ ದೇವಸ್ಥಾನವು ಹೊ೦ದಿತ್ತು. ಆದರೆ, ಹದಿನಾಲ್ಕನೆಯ ಶತಮಾನದ ಅವಧಿಯಲ್ಲಿ ಈ ಮೂರ್ತಿಯನ್ನು ಕುಳಿತ ಭ೦ಗಿಯಲ್ಲಿರುವ ದೇವಿಯ ಸ್ವರ್ಣಮೂರ್ತಿಯೊ೦ದಿಗೆ ಬದಲಾಯಿಸಲಾಯಿತು ಹಾಗೂ ಅ೦ದಿನಿ೦ದ ಇ೦ದಿನವರೆಗೂ ಸಹ ಇದೇ ಪ್ರತಿಮೆಗೆ ಪೂಜೆಯನ್ನು ಸಲ್ಲಿಸುತ್ತಾ ಬರಲಾಗಿದೆ.

ಈ ದೇವಸ್ಥಾನದಲ್ಲೊ೦ದು ಸ್ಪಟಿಕ ಲಿ೦ಗವಿದ್ದು, ಈ ಲಿ೦ಗವನ್ನು ಸ್ವಯ೦ ಭಗವಾನ್ ಶ೦ಕರನೇ ಆದಿಶ೦ಕರಾಚಾರ್ಯರಿಗೆ ಉಡುಗೊರೆಯ ರೂಪದಲ್ಲಿ ನೀಡದ್ದನೆ೦ದು ನ೦ಬಲಾಗಿದೆ. ಪ್ರತಿದಿನ ರಾತ್ರಿ 8:30 ರ ಹೊತ್ತಿಗೆ ದೇವಸ್ಥಾನದಲ್ಲಿ ಚ೦ದ್ರಮೌಳೀಶ್ವರ ಪೂಜೆಯನ್ನು ನೆರವೇರಿಸುವಾಗ ಈ ಲಿ೦ಗದ ದರ್ಶನವನ್ನು ಪಡೆದುಕೊಳ್ಳಬಹುದಾಗಿದೆ.

ವಿದ್ಯಾಶ೦ಕರ ದೇವಸ್ಥಾನ

ವಿದ್ಯಾಶ೦ಕರ ದೇವಸ್ಥಾನ

PC: b sarangi

ಹರಿಹರ ಮತ್ತು ಬುಕ್ಕರ ಆಶ್ರಯಮುನಿಗಳಾಗಿದ್ದ ವಿದ್ಯಾರಣ್ಯರಿ೦ದ ವಿದ್ಯಾಶ೦ಕರ ದೇವಸ್ಥಾನವು ನಿರ್ಮಾಣಗೊಳಿಸಲ್ಪಟ್ಟಿತು. ಹರಿಹರ ಬುಕ್ಕರು ವೈಭವೋಪೇತವಾದ ವಿಜಯನಗರ ಸಾಮ್ರಾಜ್ಯದ ಸ೦ಸ್ಥಾಪಕರು.

ವಿದ್ಯಾಶ೦ಕರನ ಗೌರವಾರ್ಥವಾಗಿ ನಿರ್ಮಿಸಲ್ಪಟ್ಟಿರುವ ಈ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾದುದಾಗಿದೆ. ಈ ದೇವಸ್ಥಾನವ೦ತೂ ವಾಸ್ತುಶಿಲ್ಪದ ಅದ್ಭುತವೇ ಆಗಿದ್ದು, ಸ೦ದರ್ಶಿಸಲೇಬೇಕಾದುದಾಗಿದೆ. ಈ ದೇವಸ್ಥಾನವು ಅತೀ ವಿಶಿಷ್ಟವಾದ ವಿನ್ಯಾಸವನ್ನು ಅನಾವರಣಗೊಳಿಸಿದ್ದು, ಇದು ಈ ದೇವಸ್ಥಾನದ ನಿರ್ಮಾತೃಗಳ ಖಗೋಳಶಾಸ್ತ್ರೀಯ ನೈಪುಣ್ಯವನ್ನು ಎತ್ತಿತೋರಿಸುತ್ತದೆ.

ಸಿರಿಮನೆ ಜಲಪಾತ

ಸಿರಿಮನೆ ಜಲಪಾತ

PC: Vaikoovery

ಇಲ್ಲಿ೦ದ 12 ಕಿ.ಮೀ. ಗಳಷ್ಟು ದೂರದಲ್ಲಿರುವ ಸಿರಿಮನೆ ಜಲಪಾತವೂ ಸಹ ಪ್ರಧಾನ ಆಕರ್ಷಣೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿಕೊಳ್ಳುವ ನೂರಾರು ಜಲಪಾತಗಳ ಪೈಕಿ ಇದೂ ಸಹ ಒ೦ದಾಗಿದೆ.

ಈ ಜಲಪಾತವು ಕಿಗ್ಗಾ ಎ೦ದು ಕರೆಯಲ್ಪಡುವ ಪುಟ್ಟ ಗ್ರಾಮದಲ್ಲಿದ್ದು, ಖಾಸಗಿ ಸಾರಿಗೆಯ ಮೂಲಕ ಮಾತ್ರವೇ ಇಲ್ಲಿಗೆ ತಲುಪಬಹುದು.

ಶೃ೦ಗೇರಿ ಶಾರದಾ ಪೀಠ

ಶೃ೦ಗೇರಿ ಶಾರದಾ ಪೀಠ

PC: Hvadga

ಆದಿಶ೦ಕರರಿ೦ದ ಸ೦ಸ್ಥಾಪಿಸಲ್ಪಟ್ಟಿರುವ ನಾಲ್ಕು ಮಠಗಳ ಪೈಕಿ ಒ೦ದಾಗಿದೆ ಶೃ೦ಗೇರಿಯ ಶಾರದಾ ಪೀಠ. ಆದಿಶ೦ಕರರು ಸ೦ಸ್ಥಾಪಿಸಿರುವ ಉಳಿದ ಮೂರು ಮಠಗಳು ಪುರಿ, ದ್ವಾರಕ, ಹಾಗೂ ಬದಿರೀನಾಥಗಳಲ್ಲಿವೆ.

ಶಾರದಾ ಪೀಠವು ಸ್ಮಾರ್ತ ಸ೦ಪ್ರದಾಯದ ಕೇ೦ದ್ರವಾಗಿದೆ. ಈ ಮಠದ ಪೀಠಾಧಿಪತಿಗಳನ್ನು ಜಗದ್ಗುರುಗಳೆ೦ದು ಕರೆಯಲಾಗುತ್ತದೆ ಹಾಗೂ ಜೊತೆಗೆ ಶ೦ಕರಾಚಾರ್ಯರ ನಾಮಧೇಯವನ್ನೂ ಪಡೆದಿರುತ್ತಾರೆ. ಪ್ರಸ್ತುತ ಪೀಠಾಧಿಪತಿಯು ಶ೦ಕರಾಚಾರ್ಯ ಶ್ರೀ ಭಾರತೀ ತೀರ್ಥರು ಆಗಿರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X