ಸೂರ್ಯನು ನಮ್ಮ ಹಿಂದೂ ಪುರಾಣಗಳಲ್ಲಿ ಅತ್ಯಂತ ಬಲಶಾಲಿ ದೇವತೆ. ದಿನ ಬೆಳಗಾದರೆ ಸೂರ್ಯ ನಮಸ್ಕರದ ಮೂಲಕ ದಿನವನ್ನು ಆರಂಭಿಸುವ ನಾವು ದಿನನಿತ್ಯದ ಕೆಲಸ ಕಾರ್ಯಗಳನ್ನು ಆರಂಭಿಸುತ್ತೆವೆ. ಸೂರ್ಯನಿಗೆ ಮುಡಿಪಾದ ಹಲವು ದೇವಾಲಯಗಳಿವೆ ಅವುಗಳಲ್ಲಿ ಪ್ರಸಿದ್ದವಾದುದು, ಗುಜರಾತ್ ರಾಜ್ಯದ ಮೆಹ್ಸನ ಜಿಲ್ಲೆಯ ಮೊಢೆರಾ ಎಂಬ ಹಳ್ಳಿಯಲ್ಲಿ ಸೂರ್ಯ ದೇವಾಲಯವಿದೆ. ಈ ಸೂರ್ಯ ದೇವಾಲಯವನ್ನು ಭಾರತದ ಪುರಾತತ್ವ ಇಲಾಖೆಯು ನಿರ್ವಹಣೆ ಮಾಡುತ್ತಿದೆ. ಸೂರ್ಯ ದೇವಾಲಯವು ಅಹಮದಾಬಾದ್ ನಿಂದ 100 ಕಿ,ಮೀನ ಬಳಿ ಇರುವ ಪುಷ್ಪವತಿ ನದಿ ಹತ್ತಿರ ಈ ದೇವಾಲಯವಿದೆ. ಕ್ರಿ.ಪೂ 1025 ರಿಂದ 1026ತ ಅವಧಿಯ ಮಧ್ಯೆಯಲ್ಲಿ ಸೋಲಂಕಿ ರಾಜ ಮನೆತನದವರು ನಿರ್ಮಿಸಿರುವುದಾಗಿದೆ. ವಿದೇಶಿ ಆಕ್ರಮಣಗಾರ ಮಹಮದ್ ಖಜ್ನಿ ತನ್ನ ಆಧೀನಕ್ಕೆ ತೆಗೆದುಕೊಂಡು ಸೋಮನಾಥ ಮತ್ತು ಸುತ್ತಮುತ್ತಲ ಪ್ರದೇಶದ ವೈಭವವನ್ನು ನಾಶಪಡಿಸಿದನು ಎಂದು ಸೂರ್ಯ ದೇವಾಲಯದ ಒಂದು ಗೋಡೆಯ ಮೇಲೆ ಕೆತ್ತಲಾಗಿದೆ. ಪ್ರಸುತ್ತದ ಲೇಖನದಲ್ಲಿ ಮೊಢೆರಾದ ಸೂರ್ಯ ದೇವನ ದೇವಾಲಯದ ಬಗ್ಗೆ ತಿಳಿಯೋಣ.
1.ಅಹಿಲ್ ವಾಡ್ ಪಟ್ಟಣ
ಸೋಲಂಕಿ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಿಲ್ ವಾಟ್ ತನ್ನ ಗತ ವೈಭವವನ್ನು ಸಂಪೂರ್ಣವಾಗಿ ನಾಶ ಹೊಂದಿತು.
2.ಸೋಲಂಕಿ
ಸೋಲಂಕಿಯರು ತಮ್ಮ ಪೂರ್ವ ವೈಭವವನ್ನು ಮತ್ತೆ ಹೊಂದಲು ಒಂದು ಸುಂದರವಾದ ದೇವಾಲಯವನ್ನು ನಿರ್ಮಿಸಲು ನಾಂದಿ ಹಾಡಿದರು.
3.ಕುಲದೇವತ
ಸೋಲಂಕಿಯ ವಂಶಸ್ಥರು ಸೂರ್ಯ ದೇವನನ್ನು ಆರಾಧಿಸುತ್ತಿದ್ದರು. ಹಾಗಾಗಿ ಈ ದೇವನ್ನು ತಮ್ಮ ಆರಾಧ್ಯ ದೈವವಾಗಿತ್ತು
4.ಮೊಢೆರಾ ಸೂರ್ಯ ದೇವನ ದೇವಾಲಯ
ಆದ್ದರಿಂದ ಸೋಲಂಕಿಯವರ ಆರಾಧ್ಯ ದೈವನ ದೇವಾಲಯವನ್ನು ಮೊಢೆರಾದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಿದರು. ಈ ರೀತಿ ಸೂರ್ಯದೇವನ ದೇವಾಲಯ ನಿರ್ಮಾಣವಾಯಿತು.
5. ಸೂರ್ಯದೇವನ ದೇವಾಲಯ
ಭಾರತದಲ್ಲಿ 3 ಸೂರ್ಯದೇವನ ದೇವಾಲಯಗಳಿವೆ. ಇದರಲ್ಲಿ ಮೊದಲನೆಯದು ಒರಿಸ್ಸಾದಲ್ಲಿನ ಕೋಣಾರ್ಕ ದೇವಾಲಯ, ಎರಡನೇಯದು ಜಮ್ಮುದಲ್ಲಿನ ಮಾರ್ತಾಂಡ ದೇವಾಲಯ, ಮೂರನೇಯದು ಆಂಧ್ರ ಪ್ರದೇಶದ ಅರಸಪಲ್ಲಿಯಲ್ಲಿನ ದೇವಾಲಯ.
6.ನಿರ್ಮಾಣದ ಶೈಲಿ
ಪ್ರತಿಯೊಂದು ದೇವಲಯದಲ್ಲೂ ತನ್ನದೇ ಆದ ನಿರ್ಮಾಣ ಶೈಲಿ ಇರುತ್ತದೆ. ಆದರೆ ಈ ದೇವಾಲಯದಲ್ಲಿ ಸುಣ್ಣವನ್ನು ಕೂಡ ಬಳಸದೇ ನಿರ್ಮಾಣ ಮಾಡಿರುವುದು ದೇವಾಲಯದ ವಿಶೇಷತೆಯಾಗಿದೆ.
7.ಭಿಂದೆವ್
ಇರಾನಿ ಶಿಲ್ಪಕಲಾ ಶೈಲಿಯಲ್ಲಿ 2 ಭಾಗಗಳಾಗಿ ಈ ದೇವಾಲಯವನ್ನು ಭಿಂದೆವ್ ನಿರ್ಮಿಸಿದರು.
9. ಅತ್ಯಂತ ಸುಂದರವಾದ ಮೇಲ್ಛಾವಣಿ
ಈ ದೇವಾಲಯದ ಒಳಭಾಗದಲ್ಲಿ ಅತ್ಯಂತ ಸುಂದರವಾದ ಮೇಲ್ಚಾವಣಿ ಹೊಂದಿದ್ದು, ದೇವಾಲಯದ ಸಭಾ ಮಂಟಪದಲ್ಲಿ ಸುಮಾರು 52 ಸ್ತಂಭಗಳಿವೆ. ಈ ಸ್ತಂಭಗಳ ಮೇಲೆ ಅದ್ಭುತವಾದ ದೇವತೆಗಳ ವಿಗ್ರಹಗಳನ್ನು ಕಾಣಬಹುದಾಗಿದೆ.
10 ಪ್ರಧಾನ ವಿಷಯ
ಈ ದೇವಾಲಯದ ಪ್ರಧಾನವಾದ ವಿಷಯವೆನೆಂದರೆ ಇಲ್ಲಿ ರಾಮಾಯಾಣ ಹಾಗೂ ಮಹಾಭಾರತದಲ್ಲಿನ ಪ್ರಧಾನ ವಿಷಯವನ್ನು ಕೂಡ ಕೆತ್ತಲಾಗಿದೆ.
12.ಮೊದಲ ಸೂರ್ಯ ಕಿರಣ
ಸೂರ್ಯೋದಯವಾದ ತಕ್ಷಣ ಮೊದಲ ಸೂರ್ಯಕಿರಣ ದೇವಾಲಯದ ಗರ್ಭಗುಡಿಯನ್ನು ಸ್ಪರ್ಶಿಸುವ ಹಾಗೆ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
13.ರಾಮ ಕೊಳ
ಈ ದೇವಾಲಯದ ಸಭಾ ಮಂಟಪದ ಎದುರು ವಿಶಾಲವಾದ ಕೊಳವಿದ್ದು, ಇದನ್ನು ಸೂರ್ಯ ಕೊಳ ಅಥವಾ ರಾಮ ಕೊಳ ಎಂದು ಕರೆಯುತ್ತಾರೆ.
14.ಸೂರ್ಯ ದೇವಾಲಯ
ಅಲ್ಲಾವುದ್ದಿನ್ ಖಿಲ್ಜಿ ಸೂರ್ಯ ದೇವಾಲಯದ ಸುತ್ತ ಮುತ್ತಲಿನ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡ ಸಮಯದಲ್ಲಿ ಸೂರ್ಯ ದೇವಾಲಯವನ್ನು ಸಂಪೂರ್ಣವಾಗಿ ನಾಶಪಡಿಸಿದನು.
15.ಭಾರತೀಯ ಪುರಾತತ್ವ ಶಾಖೆ
ಈ ದೇವಾಲಯವನ್ನು ಪ್ರಸುತ್ತ ಭಾರತೀಯ ಪುರಾತತ್ವ ಶಾಖೆಯು ತನ್ನ ಅಧೀನದಲ್ಲಿ ಇಟ್ಟು ಕೊಂಡಿದೆ.