Search
  • Follow NativePlanet
Share
» »ಈ ದೇವಾಲಯದಲ್ಲಿ ವಿಗ್ರಹ ಬೆವರುತ್ತದಂತೆ !

ಈ ದೇವಾಲಯದಲ್ಲಿ ವಿಗ್ರಹ ಬೆವರುತ್ತದಂತೆ !

ನೀವು ಯಾವತ್ತಾದರೂ ದೇವರ ವಿಗ್ರಹ ಬೆವರುವುದು ನೋಡಿದ್ದೀರಾ? ಇಲ್ಲ ಎಂದಾದರೆ ತಮಿಳುನಾಡಿನಲ್ಲಿನ ಸಿಕ್ಕಲ್‌ ಸಿಂಗಾರ ವೇಲನ್ ದೇವಸ್ಥಾನದಲ್ಲಿರುವ ವಿಗ್ರಹ ಬೆವರುತ್ತದಂತೆ. ಈ ಬಗ್ಗೆ ಕೆಲವು ಮಾಹಿತಿ ನಿಮಗಾಗಿ.

ಶಿವನ ಮೊರೆ ಹೋದ ದೇವತೆಗಳು

ಶಿವನ ಮೊರೆ ಹೋದ ದೇವತೆಗಳು

ರಾಕ್ಷಸ ಅರಸನಾದ ಸುರಪಾದ್ಮಾನ ದೇವತೆಗಳಿಗೆ, ಋಷಿಮುನಿಗಳಿಗೆ ತೊಂದರೆ ಕೊಡುತ್ತಿದ್ದನು ಆತನ ಉಪಟಳವನ್ನು ಸಹಿಸಲಾರದೆ ದೇವತೆಗಳೆಲ್ಲರೂ ಶಿವನ ಮೊರೆ ಹೋಗುತ್ತಾರೆ. ಆತನನ್ನು ಸಂಹರಿಸುವಂತೆ ಕೋರುತ್ತಾರೆ.

ಕಾರ್ತೀಕೇಯನಿಗೆ ಆಯುಧ ನೀಡಿದ ಪಾರ್ವತಿ

ಕಾರ್ತೀಕೇಯನಿಗೆ ಆಯುಧ ನೀಡಿದ ಪಾರ್ವತಿ

ಆದರೆ ಶಿವನು ಸುರಪಾದ್ಮಾನನಿಗೆ ವರ ನೀಡಿರುವ ಕಾರಣ ಶಿವನಿಂದ ಸಂಹರಿಸಲು ಸಾಧ್ಯವಾಗೋದಿಲ್ಲ. ಹಾಗಾಗಿ ಶಿವನು ಮುರುಗನ್‌, ಕಾರ್ತಿಕೇಯನನ್ನು ಕಳುಹಿಸುತ್ತಾನೆ. ಪಾರ್ವತಿಯು ಕಾರ್ತೀಕೆಯನಿಗೆ ಆಯುಧವನ್ನು ನೀಡಿ ಆ ಅಸುರನನ್ನು ಸಂಹರಿಸುವಂತೆ ಹೇಳುತ್ತಾಳೆ. ಪಾರ್ವತಿ ಕಾರ್ತಿಕೇಯನಿಗೆ ಆಯುಧ ನೀಡಿದ ಸ್ಥಳವೇ ಸಿಕ್ಕಲ್.

ಪ್ರಮುಖ ಉತ್ಸವ

ಪ್ರಮುಖ ಉತ್ಸವ

ಇಲ್ಲಿ ಆಚರಿಸಲಾಗುವ ಮುಖ್ಯ ಉತ್ಸವವೆಂದರೆ ಐಪಾಸಿ ತಿಂಗಳಲ್ಲಿ ಅಕ್ಟೋಬರ್ ಮಧ್ಯಭಾಗದಲ್ಲಿ ಬರುವ ಮಹಾ ಸ್ಕಂದಾ ಶಶಿ ಇದು ಅಸುರದ ಮೇಲೆ ಕಾರ್ತಿಕೇಯನ ವಿಜಯವನ್ನು ಆಚರಿಸುತ್ತದೆ. ಆರು ದಿನಗಳ ಕಾಲ ಉತ್ಸವವನ್ನು ಆಚರಿಸಲಾಗುತ್ತದೆ.

ಆರು ದಿನಗಳ ಉತ್ಸವ

ಆರು ದಿನಗಳ ಉತ್ಸವ

ಸುರಪಾದ್ಮಾನ್‌ನೊಂದಿಗೆ ಆರು ದಿನಗಳ ಯುದ್ಧವನ್ನು ಸ್ಮರಿಸಲಾಗುತ್ತದೆ. ಹಬ್ಬದ ಐದನೇ ದಿನದಂದು ಸ್ಕಂಧಾ ತನ್ನ ಆಯುಧವನ್ನು ತನ್ನ ತಾಯಿಯಿಂದ ಪಡೆಯುತ್ತಾನೆ. ಇದನ್ನು "ವೆಲ್ ವಂಗಂ ತಿರುವಿಝಾ" ಎಂದು ಕರೆಯಲಾಗುತ್ತದೆ ಮತ್ತು ಉತ್ಸವದ ಪ್ರಮುಖ ಅಂಶವಾಗಿದೆ.

ವಿಗ್ರಹ ಬೆವರುವುದು

ವಿಗ್ರಹ ಬೆವರುವುದು

ಇಲ್ಲಿನ ಅದ್ಭುತವೆಂದರೆ ಸ್ಕಂದಾ ಆಯುಧವನ್ನು ಸ್ವೀಕರಿಸಿದಾಗ ಸಿದ್ಧವಾದಾಗ ಮುರುಗನ್ ವಿಗ್ರಹವು ಬೆವರುತ್ತದೆ. ಇದು ಪ್ರತೀ ವರ್ಷ ನಡೆಯುತ್ತದೆ. ಆ ಸಂದರ್ಭದಲ್ಲಿ ಪುರೋಹಿತರು ನಿರಂತರವಾಗಿ ರೇಷ್ಮೆ ಬಟ್ಟೆಯೊಂದಿಗೆ ವಿಗ್ರಹದ ಮುಖದಲ್ಲಿ ಉಂಟಾಗುವ ಬೆವರನ್ನು ಒರೆಸುತ್ತಿರುತ್ತಾರೆ.

ದೈವಿಕ ತೀರ್ಥ

ದೈವಿಕ ತೀರ್ಥ

ದೈವಿಕ ತೀರ್ಥ ಎಂದು ಭಕ್ತರ ಮೇಲೆ ಈ ಬೆವರನ್ನು ಚಿಮುಕಿಸಲಾಗುತ್ತದೆ. ಜನರು ಈ ಪವಾಡವನ್ನು ವೀಕ್ಷಿಸಲು ಬೀದಿಗಳಲ್ಲಿ ಸೇರಿಕೊಳ್ಳುತ್ತಾರೆ. ದೇವರು ಆಶೀರ್ವದಿಸಿದರೆ ಆ ಬೆವರು ತಮ್ಮ ಮೇಲೆ ಬೀಳುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.

ಬೆವರುವಿಕೆ ಕಡಿಮೆಯಾಗುವುದು

ಬೆವರುವಿಕೆ ಕಡಿಮೆಯಾಗುವುದು

ಆ ಆಯುಧವು ಗರ್ಭಗುಡಿಗೆ ಹಿಂದಿರುಗಿದಾಗ ಬೆವರುವುದು ಕಡಿಮೆಯಾಗುತ್ತದೆ. ಆರನೇ ದಿನ, ಸೋಲಾಪುಸಾರಂ ನಡೆಯುತ್ತದೆ. ಇದು ತಿರುಚೆಂಡೂರ್ನಲ್ಲಿ ಆಚರಿಸಲಾಗುತ್ತದೆ. ಇಲ್ಲಿ ಅಸುರನನ್ನು ಸಂಹರಿಸಲಾಗುತ್ತದೆ.

ಎಲ್ಲಿದೆ ಈ ದೇವಸ್ಥಾನ ?

ಎಲ್ಲಿದೆ ಈ ದೇವಸ್ಥಾನ ?

ಈ ದೇವಾಲಯವು ತಮಿಳುನಾಡಿನ ನಾಗಪಟ್ಟಿನಂ ಬಳಿಯ ಸಿಕ್ಕಲ್ ಗ್ರಾಮದಲ್ಲಿದೆ. ಇದು ನಾಗಪಟ್ಟಿನಂನಿಂದ ಪಶ್ಚಿಮಕ್ಕೆ 5 ಕಿ.ಮೀ. ಮತ್ತು ಪೂರ್ವದಲ್ಲಿ 18 ಕಿಲೋಮೀಟರ್ ದೂರದಲ್ಲಿ ತಿರುವರೂರಿನಿಂದ ನಾಗಪಟ್ಟಣಂಗೆ ಹೋಗುವ ದಾರಿಯಲ್ಲಿದೆ.

ಶತ್ರು-ಸಂಹಾರ ಪೂಜೆ

ಶತ್ರು-ಸಂಹಾರ ಪೂಜೆ

ತಮ್ಮ ಜೀವನದಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ (ಸಿಕ್ಕಾಲ್) ತಮ್ಮನ್ನು ನಂಬುವ ಜನರಿಗೆ ಸಿಕ್ಕಲ್ ಒಂದು ಪ್ರಮುಖ ಯಾತ್ರಾ ಕೇಂದ್ರವಾಗಿದೆ. ದೇವಾಲಯದ ಭೇಟಿ ಅವರಿಗೆ ಸರಿಯಾದ ಮಾರ್ಗವೆಂದು ನಂಬಲಾಗಿದೆ. ಒಬ್ಬರ ಶತ್ರುಗಳಿಂದ ವಿಮೋಚನೆಗಾಗಿ ಪ್ರಾರ್ಥನೆ ಮಾಡುವ ಶತ್ರು-ಸಂಹಾರ ಪೂಜೆಯು ಇಲ್ಲಿ ಬಹಳ ಪ್ರಬಲವಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+