ಒಂದೇ ಪ್ರವಾಸದಲ್ಲಿ ಅಯೋಧ್ಯೆ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ಸುತ್ತಾಡಲು ಐಆರ್ಟಿಸಿಯು ರಾಮಾಯಣ ಎಕ್ಸ್ಪ್ರೆಸ್ ರೈಲನ್ನು ಜಾರಿಗೆ ತಂದಿದೆ. ಇದು ಪ್ರಯಾಣಿಕರಿಗೆ ರಾಮನಿಗೆ ಸಂಬಂಧಿಸಿದ ಸ್ಥಳಗಳ ದರ್ಶನ ಮಾಡಿಸಲಿದೆ.

ರಾಮಾಯಣ ಎಕ್ಸ್ಪ್ರೆಸ್
ರಾಮಾಯಣ ಎಕ್ಸ್ಪ್ರೆಸ್..ಹೆಸರು ಕೇಳುವಾಗಲೇ ರಾಮಾಯಣಕ್ಕೆ ಸಂಬಂಧಿಸಿದ್ದೇನೋ ಅನ್ನಿಸುವುದು ಸಹಜ. ಹೌದು ರಾಮಾಯಣ ಎಕ್ಸ್ಪ್ರೆಸ್ ರೈಲು ರಾಮನಿಗೆ ಸಂಬಂಧಿಸಿದ ಕೆಲವು ಅಭೂತಪೂರ್ವ ತೀರ್ಥ ಸ್ಥಳಗಳ ದರ್ಶನ ಮಾಡಿಸಲಿದೆ. ನವಂಬರ್ 14ರಂದು ರಾಮಾಯಣ ಎಕ್ಸ್ಪ್ರೆಸ್ ತನ್ನ ಮೊದಲ ಸವಾರಿಯನ್ನು ಪ್ರಾರಂಭಿಸಿದೆ.

ಸಫದರ್ಜಂಗ್ನಿಂದ ಆರಂಭ
ದೆಹಲಿಯ ಸಫದರ್ಜಂಗ್ ಸ್ಟೇಶನ್ನಿಂದ ತನ್ನ ಮೊದಲ ಯಾತ್ರೆ ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ರೈಲು ನಿಲ್ದಾಣ ಹಾಗೂ ರೈಲನ್ನು ಸುಂದರವಾಗಿ ಅಲಂಕರಿಸಲಾಗಿದೆ.

ರಾಮ ಸಂದರ್ಶಿಸಿದ ಸ್ಥಳ
ಮಧ್ಯಾಹ್ನ 2.30 ಕ್ಕೆ ಹೊರಟಿರುವ ಈ ರೈಲು ಶ್ರೀರಾಮ ಹೋಗಿದ್ದ ಸ್ಥಳಗಳ ದರ್ಶನ ಮಾಡಿಸಲಿದೆ. ಭಾರತದಿಂದ ಹಿಡಿದು ಶ್ರೀಲಂಕಾವರೆಗೆ ರಾಮನಿಗೆ ಸಂಬಂಧಿಸಿದ ಸ್ಥಳಗಳನ್ನು ನೋಡುವುದರ ಜೊತೆಗೆ ಅದರ ಬಗ್ಗೆ ತಿಳಿಯಲು ಸಹಕಾರಿಯಾಗುತ್ತದೆ.

800 ಜನರು ಪ್ರಯಾಣಿಸಬಹುದು
16 ದಿನಗಳ ಯಾತ್ರೆ ಇದಾಗಿದೆ. ಈ ರೈಲಿನಲ್ಲಿ ೮೦೦ ಜನರು ಪ್ರಯಾಣಿಸಬಹುದು. ಅವರಲ್ಲಿ ೪೦ ಯಾತ್ರಿಗಳು ಶ್ರೀಲಂಕಾವರೆಗೆ ಪ್ರಯಾಣಿಸಬಹುದು. ರೈಲಿನ ಮೊದಲ ಯಾತ್ರೆಗೆ ಎಲ್ಲಾ ಸೀಟುಗಳು ಫುಲ್ ಆಗಿವೆ.

ಎಲ್ಲೆಲ್ಲಾ ಸುತ್ತಾಡಬಹುದು
ಭಾರತದಲ್ಲಿ ಅಯೋಧ್ಯೆ, ನಂದಿಗ್ರಾಮ, ಜನಕ್ಪುರ, ವಾರಣಾಸಿ, ಪ್ರಯಾಗ, ಶೃಂಗವೇರ್ಪುರ್, ಚಿತ್ರಕೂಟ, ನಾಸಿಕ್, ಹಂಪಿ ಹಾಗೂ ರಾಮೇಶ್ವರ ದರ್ಶನ ಮಾಡಿಸಲಾಗುವುದು.

ಟಿಕೇಟ್ ಬೆಲೆ ಎಷ್ಟು ?
ಭಾರತ ದರ್ಶನ ಮಾಡುವ ಯಾತ್ರಿಗಳಿಗೆ ಟಿಕೇಟ್ ಬೆಲೆ 15,120 ರೂ. ಶ್ರೀಲಂಕಾ ಹೋಗುವ ಯಾತ್ರಿಗಳಿಗೆ 36,970 ರೂ. ಯಾತ್ರೆಯ ಸಂದರ್ಭದಲ್ಲಿ ಎಲ್ಲಾ ರೀತಿಯ ಸುರಕ್ಷತೆಯನ್ನು ಒದಗಿಸಲಾಗುವುದು. ಜೊತೆಗೆ ಟೂರ್ ಮ್ಯಾನೇಜರ್ ಕೂಡಾ ಇರುತ್ತಾರೆ.

ಐಆರ್ಸಿಟಿಸಿ ವ್ಯವಸ್ಥೆ
ಈ ಪ್ರವಾಸದ ಎಲ್ಲಾ ಆಯೋಜನೆಯನ್ನು ಐಆರ್ಸಿಟಿಸಿ ಮೂಲಕವೇ ನಡೆಸಲಾಗುವುದು. ಊಟ ಹಾಗೂ ವಾಸ್ತವ್ಯದ ವ್ಯವಸ್ಥೆ , ಬಟ್ಟೆ ಒಗೆಯುವುದು ಎಲ್ಲಾ ಪ್ಯಾಕೇಜ್ನಲ್ಲೇ ಬರುತ್ತದೆ. ಶ್ರೀಲಂಕಾದ ಯಾತ್ರೆ ಮಾಡಬೇಕೋ ಬಿಡುವುದು ನಿಮಗೆ ಬಿಟ್ಟಿದ್ದು.

ಶ್ರೀಲಂಕಾ ಯಾತ್ರೆ
ಒಂದು ವೇಳೆ ನೀವು ಶ್ರೀಲಂಕಾದ ಯಾತ್ರೆ ಮಾಡಬೇಕೆಂದಿದ್ದರೆ, ಐಆರ್ಸಿಟಿಸಿ ಚೆನ್ನೈನಿಂದ ಫ್ಲೈಟ್ ಟಿಕೇಟ್ ಬುಕ್ ಮಾಡುತ್ತದೆ. ಶ್ರೀಲಂಕಾ ಪ್ರವಾಸವು 6 ದಿನ ಹಾಗೂ 5ರಾತ್ರಿಯದ್ದಾಗಿರುತ್ತದೆ.


Click it and Unblock the Notifications
















