Search
  • Follow NativePlanet
Share
» »ಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆ

ಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆ

ನಿಜಾಮಾಬಾದ್‌ನಿಂದ 35 ಕಿ.ಮೀ ದೂರದಲ್ಲಿರುವ , ಅದಿಲಾಬಾದ್‌ನಿಂದ 158 ಕಿ.ಮೀ ದೂರದಲ್ಲಿ ಹಾಗೂ ಹೈದರಾಬಾದ್‌ನಿಂದ 215 ಕಿ.ಮೀ ದೂರದಲ್ಲಿದೆ. ಇದು ತೆಲಂಗಾಣದ ಅದಿಲಾಬಾದ್‌ ಜಿಲ್ಲೆಯಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ತೆಲಂಗಾಣದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.

ಸರಸ್ವತಿ ದೇವಸ್ಥಾನ

ಸರಸ್ವತಿ ದೇವಸ್ಥಾನ

PC: RameshSharma

ಬಸಾರ್ ಅಥವಾ ಬಸಾರ ಗೋದಾವರಿ ನದಿಯ ದಡದಲ್ಲಿದೆ. ಇದು ಪ್ರಸಿದ್ಧ ಸರಸ್ವತಿ ದೇವಸ್ಥಾನದ ಕಾರಣದಿಂದಾಗಿ ಜನಪ್ರಿಯ ಪ್ರವಾಸಿ ತಾಣವಾಗಿದೆ. ಬಸಾರ ದೇವಸ್ಥಾನವು ಜ್ಞಾನ ಮತ್ತು ಕಲಿಕೆಯ ಹಿಂದೂ ದೇವತೆಯಾದ ಸರಸ್ವತಿಯ ದೇವಸ್ಥಾನವಾಗಿದೆ.

ಶಬರಿಮಲೆಗೆ ಮಹಿಳೆಯರಿಗೆ ನಿಷೇಧ; ಆದ್ರೆ ಇಲ್ಲಿ ಋತುಸ್ರಾವವಾಗುವ ದೇವಿಯನ್ನೇ ಪೂಜಿಸ್ತಾರೆಶಬರಿಮಲೆಗೆ ಮಹಿಳೆಯರಿಗೆ ನಿಷೇಧ; ಆದ್ರೆ ಇಲ್ಲಿ ಋತುಸ್ರಾವವಾಗುವ ದೇವಿಯನ್ನೇ ಪೂಜಿಸ್ತಾರೆ

ಅಕ್ಷರ ಅಬ್ಯಾಸ

ಅಕ್ಷರ ಅಬ್ಯಾಸ

PC: Bhaskaranaidu

ಅಕ್ಷರ ಅಬ್ಯಾಸಕ್ಕಾಗಿ ಮಕ್ಕಳನ್ನು ಇಲ್ಲಿಗೆ ಕರೆತರಲಾಗುತ್ತದೆ. ಇದು ಭಾರತದಲ್ಲಿ ಸರಸ್ವತಿ ದೇವಿಯ ಎರಡು ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಇನ್ನೊಂದು ಸರಸ್ವತಿ ಮಂದಿರವು ಕಾಶ್ಮೀರದಲ್ಲಿದೆ.

ಪುರಾಣ

ಪುರಾಣ

PC:Pngolla

ಪುರಾಣದ ಪ್ರಕಾರ, ವ್ಯಾಸ ಮಹರ್ಷಿ, ಅವರ ಶಿಷ್ಯರು ಮತ್ತು ಋಷಿ ವಿಶ್ವಾಮಿತ್ರ ಕುರುಕ್ಷೇತ್ರ ಯುದ್ಧದ ನಂತರ ತಂಪಾದ ಮತ್ತು ಪ್ರಶಾಂತ ವಾತಾವರಣದಲ್ಲಿ ನೆಲೆಗೊಳ್ಳಲು ನಿರ್ಧರಿಸಿದರು. ಶಾಂತಿಯುತ ವಾಸಸ್ಥಾನಕ್ಕಾಗಿ ಅನ್ವೇಷಣೆಯಲ್ಲಿ ಅವರು ದಾಂಡಕ ಅರಣ್ಯಕ್ಕೆ ಬಂದು ಪ್ರದೇಶದ ಪ್ರಶಾಂತತೆಗೆ ಸಂತೋಷಪಟ್ಟರು, ಈ ಸ್ಥಳವನ್ನು ಆಯ್ಕೆ ಮಾಡಿದರು.

ಹಿಮಾಚಲ ಪ್ರದೇಶ: ಇಲ್ಲಿಗೆ ಹೋದ್ರೆ ಉಳಿಯೋದು ಎಲ್ಲಿ? ತಿನ್ನೋದು ಎಲ್ಲಿ?<br /> ಹಿಮಾಚಲ ಪ್ರದೇಶ: ಇಲ್ಲಿಗೆ ಹೋದ್ರೆ ಉಳಿಯೋದು ಎಲ್ಲಿ? ತಿನ್ನೋದು ಎಲ್ಲಿ?

ರಾಷ್ಟ್ರಕೂಟರ ಕಾಲದ ದೇವಾಲಯ

ರಾಷ್ಟ್ರಕೂಟರ ಕಾಲದ ದೇವಾಲಯ

PC:Ravi Cool guy

ರಾಷ್ಟ್ರಕೂಟರು ಮಂಜೀರಾ ಮತ್ತು ಗೋದಾವರಿ ನದಿಗಳ ಪವಿತ್ರ ಸಂಗಮದ ಬಳಿ ನಿರ್ಮಿಸಿದ ಮೂರು ದೇವಾಲಯಗಳಲ್ಲಿ ಇದೂ ಒಂದಾಗಿದೆ. ಬಿಜಿಯಲುಡು ಎಂಬ ಹೆಸರಿನ ಕರ್ನಾಟಕ ರಾಜನು ಬಸಾರ್ ನಲ್ಲಿ ಈ ಪ್ರಾಚೀನ ದೇವಾಲಯವನ್ನು ನಿರ್ಮಿಸಿದನು.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC: Sundar1

ಶ್ರೀ ಮಹಾಕಾಳಿ ದೇವಸ್ಥಾನ, ಶ್ರೀ ದತ್ತಾತ್ರೇಯ ದೇವಸ್ಥಾನ, ಶ್ರೀ ವ್ಯಾಸ ಮಹಾರ್ಷಿ ಗುಹೆ, ಶ್ರೀ ವೇದಾವತಿ ಶಿಲಾ (ಶ್ರೀ ವೇದಾವತಿ ಕಲ್ಲು), ಗೋದಾವರಿ ನದಿ ಮತ್ತು ಗೋದಾವರಿ ನದಿ ದಂಡೆಯಲ್ಲಿರುವ ಶಿವನ ದೇವಾಲಯಗಳು ಬಸಾರದ ಇತರ ಆಕರ್ಷಣೆಗಳಾಗಿವೆ.

ಬೆಂಗಳೂರು-ಹಂಪಿ: ವಿಜಯನಗರ ಸಾಮ್ರಾಜ್ಯಕ್ಕೊಂದು ಅದ್ಭುತ ಪ್ರಯಾಣ<br /> ಬೆಂಗಳೂರು-ಹಂಪಿ: ವಿಜಯನಗರ ಸಾಮ್ರಾಜ್ಯಕ್ಕೊಂದು ಅದ್ಭುತ ಪ್ರಯಾಣ

 ಸೂಕ್ತ ಸಮಯ

ಸೂಕ್ತ ಸಮಯ

PC:Bhaskaranaidu

ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಬಸಾರಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ವಸತಿಗೃಹವು ಹಲವಾರು ದೇವಾಲಯದ ಅತಿಥಿ ಗೃಹಗಳು ಮತ್ತು ಖಾಸಗಿ ವಸತಿ ಸೌಕರ್ಯಗಳೂ ಲಭ್ಯವಿದೆ.

 ದರ್ಶನ ಸಮಯ

ದರ್ಶನ ಸಮಯ

PC: Bhaskaranaidu

ದೇವಸ್ಥಾನದ ಸಮಯ: ಬೆಳಗ್ಗೆ 4 ರಿಂದ ಮದ್ಯಾಹ್ನ 12: 30 ಮತ್ತು ಮದ್ಯಾಹ್ನ 2 ರಿಂದ ರಾತ್ರಿ 8:30 ರವರೆಗೆ ದೇವರ ದರ್ಶನ ಪಡೆಯಬಹುದು. ಇಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತುತ್ತದೆ ಎನ್ನಲಾಗುತ್ತದೆ. ಹಾಗಾಗಿ ಸಾಕಷ್ಟು ಮಂದಿ ತಮ್ಮ ಮಕ್ಕಳಿಗೆ ಇಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X