Search
  • Follow NativePlanet
Share
» »ಮಟ್ಟೂರು: ಇಲ್ಲಿ ಸಂಸ್ಕೃತದ್ದೇ ಕಾರುಬಾರು!

ಮಟ್ಟೂರು: ಇಲ್ಲಿ ಸಂಸ್ಕೃತದ್ದೇ ಕಾರುಬಾರು!

ಭಾರತದಲ್ಲಿ ಶಾಲಾ ಕಾಲೇಜುಗಳಲ್ಲಿ ಸಂಸ್ಕೃತ ಭಾಷೆಯನ್ನು ಮೊದಲ ಭಾಷೆ ಅಥವಾ ಮೂರನೇ ಪಠ್ಯ ಭಾಷೆಯಾಗಿ ತೆಗೆದುಕೊಳ್ಳುವುದು ಸಾಮಾನ್ಯ ಅಲ್ಲವೆ? ಇದನ್ನು ಬಿಟ್ಟರೆ ನಾವು ಸಂಸ್ಕೃತವನ್ನು ಶ್ಲೋಕದ ಮೂಲಕ ಕೇಳುತ್ತೇವೆ. ಇಂತಹ ಪ್ರಾಚೀನ ಭಾಷೆಯು ಇಂದಿನ ಆಧುನಿಕ ಯುಗದಲ್ಲಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿರುವುದು ಒಂದು ದುಃಖದ ವಿಷಯವೇ ಸರಿ. ಆದರೂ ಬಹಳ ಪ್ರಯತ್ನಪಟ್ಟು ಸಂಸ್ಕೃತವು ಒಂದಲ್ಲ ಒಂದು ವಿಧದಿಂದ ಸಂರಕ್ಷಿಸಲ್ಪಟ್ಟಿದೆ. ಆದರೆ ಇದು ಸ್ಥಳೀಯ ದಿನನಿತ್ಯದ ಭಾಷೆಗಳ ಬಳಕೆಯಲ್ಲಿ ಅಸ್ತಿತ್ವದಲ್ಲಿಲ್ಲ.

ಅಡಿಕೆಮರಗಳ ತೋಟಗಳು, ಮತ್ತು ಗದ್ದೆಗಳನ್ನು ಹೊಂದಿರುವ ತುಂಗಾಭದ್ರಾ ನದಿಯ ದಡದಲ್ಲಿರುವ ಒಂದು ಹಳ್ಳಿಯು ಈ ಪ್ರಾಚೀನ ಬೇರನ್ನು ಇನ್ನೂ ಉಳಿಸಿಕೊಂಡಿರುವುದು ಒಂದು ಅಚ್ಚರಿಯ ಜೊತೆಗೆ ಸಂತೋಷದ ವಿಷಯವೆನ್ನಬಹುದು. ಹೌದು ಆ ಊರಿನ ಹೆಸರು ಮಟ್ಟೂರು ಅಥವಾ ಮತ್ತೂರು ಇಲ್ಲಿ ಸಂಸ್ಕೃತ ಭಾಷೆಯದ್ದೇ ರಾಯಭಾರವೆನ್ನಬಹುದು ಇಲ್ಲಿ ಸಂಸ್ಕೃತವು ಅಧಿಕೃತ ಭಾಷೆಯಾಗಿದೆ.

roadleadingtovillage-23-1466666773-1661768397.jpg -Properties

ಸಾಮಾನ್ಯವಾಗಿ ಜನರು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಸಂಸ್ಕೃತವನ್ನು ಓದಿದವರಿಗೆ ಅದರ ಸ್ವರೂಪ ಮತ್ತು ಕಷ್ಟದ ಅರಿವಿರುತ್ತದೆ ಒಮ್ಮೆ ಯೋಚಿಸಿ ಒಂದು ಸ್ಥಳದ ಜನರು ತಮ್ಮ ದಿನನಿತ್ಯದ ಭಾಷೆಯಾಗಿ ಸಂಸ್ಕೃತವನ್ನು ಬಳಸುತ್ತಿದ್ದಾರೆಂದರೆ ಸೋಜಿಗವೆನಿಸುತ್ತದೆ ಅಲ್ಲವೆ ! ಇದು ಕೆಲವರಿಗೆ ತಮಾಷೆಯಾಗಿ ಕಾಣಬಹುದು ಆದರೆ ಮಟ್ಟೂರು ಮತ್ತು ಹೊಸಹಳ್ಳಿ ಹಳ್ಳಿಗಳಲ್ಲಿ ಬ್ರಾಹ್ಮಣ ಸಮುದಾಯದ ವೇದದ ಜೀವನ ನಡೆಸಲು ಆದ್ಯತೆ ನೀಡುವ ಬ್ರಾಹ್ಮಣ ಸಮುದಾಯಗಳು ಈ ಹಳೆಯ ಸಂಪ್ರದಾಯಗಳನ್ನು ಎತ್ತಿಹಿಡಿಯುತ್ತವೆ.

ಮಟ್ಟೂರಿಗೆ ತಲುಪುವ ಒಂದು ಹಾದಿ

ಸುಮಾರು 600 ವರ್ಷಗಳ ಹಿಂದೆ ತಮಿಳುನಾಡಿನ ಪುದುಕೊಟ್ಟೈ ನ ಒಂದು ಬ್ರಾಹ್ಮಣ ವಿದ್ವಾಂಸರು ಇಲ್ಲಿಗೆ ವಲಸೆ ಬಂದರು. ಈ ಬ್ರಾಹ್ಮಣ ಸಮುದಾಯವನ್ನು ಸಂಕೇತಿಗಳೆಂದು ಕರೆಯಲಾಗುತ್ತಿದ್ದು ಅವರು ಇಲ್ಲಿ ತಮ್ಮ ಅಗ್ರಹಾರ ಜೀವನ ಶೈಲಿಯನ್ನು ಪ್ರಾರಂಭಿಸಿದರು. ಇಂತಹ ಜೀವನ ಶೈಲಿಯನ್ನು ಕೇವಲ ಮಟ್ಟೂರು ಮಾತ್ರವಲ್ಲದೆ ಇದರ ಅವಳಿ ಗ್ರಾಮವಾಗಿರುವ ಹೊಸಹಳ್ಳಿಯಲ್ಲೂ ಕಾಣಬಹುದಾಗಿದೆ.

ಪ್ರಾಚೀನ ಭಾಷೆಯಾಗಿರುವ ಸಂಸ್ಕೃತವನ್ನು ಸ್ಥಳೀಯವಾಗಿ ತಮ್ಮ ಆಡುಭಾಷೆಯಾಗಿ ಉಪಯೋಗಿಸುತ್ತಿದ್ದಾರೆ ಎಂಬುದನ್ನು ಕೇಳುವುದೇ ರೋಮಾಂಚನವಾಗುತ್ತದೆ ಅಲ್ಲವೇ? ಅಂದರೆ ಇಲ್ಲಿರುವವರೆಲ್ಲ ಅವಿದ್ಯಾವಂತರೆಂದು ಅರ್ಥವಲ್ಲ ಇಲ್ಲಿಯ ಹೆಚ್ಚುಕಮ್ಮಿ ಪ್ರತೀ ಮನೆಗಳಲ್ಲಿಯೂ ಒಂದು ಸಾಫ್ಟ್ ವೇರ್‍ ಇಂಜಿನೀಯರ್ ಗಳನ್ನು ನಾವು ಕಾಣಬಹುದಾಗಿದೆ ಅಲ್ಲದೆ ಈ ಹಳ್ಳಿಯ ವಿದ್ಯಾರ್ಥಿಗಳು ಸಾಮಾನ್ಯವಾಗಿ ಶಿಕ್ಷಣದಲ್ಲಿ ಹೆಚ್ಚು ಬುದ್ದಿವಂತರು ಮತ್ತು ಅಗ್ರಗಣ್ಯರಾಗಿರುತ್ತಾರೆ ಎಂದು ಹೇಳಲಾಗುತ್ತದೆ.

tungabhadrariver-23-1466666758-1661768405.jpg -Properties

ಮಟ್ಟೂರಿನ ವಿದ್ಯಾರ್ಥಿಗಳು ವೇದ ಕಲಿಯುತ್ತಿದ್ದಾರೆ

ನಿಜ ಹೇಳಬೇಕೆಂದರೆ, ವೇದದ ಉಚ್ಚಾರಣೆಗಳನ್ನು ಮಾಡುವುದರಿಂದ ತಮ್ಮಲ್ಲಿಯ ಏಕಾಗ್ರತೆ ಮತ್ತು ನೆನಪಿನ ಶಕ್ತಿಯು ವೃದ್ದಿಸುವಲ್ಲಿ ಸಹಾಯವಾಗುತ್ತದೆ ಎಂಬ ನಂಬಿಕೆ ಹಲವಾರು ವಿದಾರ್ಥಿಗಳಲ್ಲಿದೆ.

ಮಟ್ಟೂರಿಗೆ ಒಬ್ಬ ಪ್ರವಾಸಿಗ ಅಥವ ಪ್ರಯಾಣಿಕ ಏಕೆ ಭೇಟಿ ನೀಡಬೇಕು?

ಮತ್ತೂರ್ ಅಥವಾ ಮಟ್ಟೂರು ಶಿವಮೊಗ್ಗದಲ್ಲಿಯ ಒಂದು ಹಳ್ಳಿಯಾಗಿದ್ದು, ಇದು ಸುಂದರವಾದ ಮತ್ತು ಆರಾಮದಾಯಕ ಪರಿಸರವನ್ನು ಹೊಂದಿರುವ ತುಂಗಭದ್ರಾ ನದಿಯ ದಡದಲ್ಲಿದೆ. ನೀವು ಇಲ್ಲಿ

ವರ್ಷಗಳಿಂದ ಕಣ್ಮರೆಯಾದ ಆಗ್ರಹಂ ಜೀವನಶೈಲಿಯನ್ನು ಸಹ ನೀವು ನೋಡಬಹುದು. ಜನರು ಸಂಕೇತಿ, ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಮಿಶ್ರಣದಲ್ಲಿ ಮಾತನಾಡುವುದನ್ನು ಕೇಳುವುದು ಇಲ್ಲಿಯ ಅತ್ಯಂತ ಆಕರ್ಷಕ ಭಾಗವಾಗಿದೆ. ಆಧುನಿಕ ಯುಗದಲ್ಲಿ ಈ ಪ್ರಾಚೀನ ಹಾಗೂ ವಿಚಿತ್ರವೆನಿಸಬಹುದಾದಂತಹ ಭಾಷೆ ನಿಮ್ಮ ಕಿವಿಗೆ ಬಡಿದಂತೆ ಕೇಳುತ್ತದೆ
ಒಂದು ಪ್ರಬಲವಾದ ವೇದದ ಕಾಲದ ಜೀವನ ಶೈಲಿಗೆ ಆಧುನಿಕತೆಯ ಮೆರುಗನ್ನು ಬಳಿದಂತೆ ಕಾಣುವ ಮಟ್ಟೂರು ಮತ್ತು ಹೊಸಹಳ್ಳಿ ನಿಮ್ಮನ್ನು ಕೈಬೀಸಿ ಕರೆಯುತ್ತದೆ.

sunset-in-mattur-23-1466666763-1661768415.jpg -Properties

ಹೊಸಹಳ್ಳಿ ನದಿಯ ಇನ್ನೊಂದು ಬದಿಯಲ್ಲಿದ್ದು, ಇದು ಗಮಕ ಶೈಲಿಯ(ಹಾಡು ಮತ್ತು ಕಥೆಹೇಳುವುದು) ಕಲೆಗೆ ಪ್ರಸಿದ್ದಿಯನ್ನು ಪಡೆದಿದೆ. ಇತ್ತೀಚೆಗೆ ಮಟ್ಟೂರು ಕೆಲವು ವಿವಾದಗಳಿಂದ ಗಮನ ಸೆಳೆದಿದ್ದರೂ ಸಹ, ಈ ಗ್ರಾಮದ ಜನರು ಶಾಂತಿಯುತ ಜೀವನವನ್ನು ನಡೆಸುತ್ತಿದ್ದು ಅವರ ಸಂಪ್ರದಾಯಗಳನ್ನು ದೃಢವಾಗಿ ನಂಬುತ್ತಾರೆ.

ಅದೃಷ್ಟಾವತ್ ಅಸ್ತಿತ್ವದಲ್ಲಿರುವ ಸಂಸ್ಕೃತ ಮಾತನಾಡುವ ಪಟ್ಟಣಕ್ಕೆ ನಿಮ್ಮ ಪ್ರಯಾಣವು ನಿಮ್ಮನ್ನು ಹಿಂದಿನ ಕಾಲಕ್ಕೆ ಹಿಂತಿರುಗಿ ನೋಡುವಂತೆ ಮಾಡುತ್ತದೆ. ಇಲ್ಲಿ ನೀವು ಭಾರತದ ಅತ್ಯಂತ ಪ್ರಾಚೀನ ಭಾಷೆಯ ಶಕ್ತಿಯನ್ನು ಅನುಭವಿಸುವ ಅವಕಾಶವನ್ನು ಪಡೆಯುವಿರಿ.

ತಲುಪುವುದು ಹೇಗೆ

ಶಿವಮೊಗ್ಗ ಮತ್ತೂರಿನಿಂದ ಸುಮಾರು 8 ಕಿಮೀ ದೂರದಲ್ಲಿದೆ. ಶಿವಮೊಗ್ಗ ಈ ಗ್ರಾಮಕ್ಕೆ ಹತ್ತಿರದ ನಗರ.

ಶಿವಮೊಗ್ಗದಿಂದ ಖಾಸಗಿ ವಾಹನದಲ್ಲಿ ಮತ್ತೂರಿಗೆ ತೆರಳುವುದು ಉತ್ತಮ. ಕೆಲವು ಖಾಸಗಿ ಬಸ್‌ಗಳು ಶಿವಮೊಗ್ಗದಿಂದ ಮತ್ತೂರು ಗ್ರಾಮಕ್ಕೆ ಹೋಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X