ಮಹಾರಾಷ್ಟ್ರಕ್ಕೆ ಆಧ್ಯಾತ್ಮಿಕ ರತ್ನ ಕೊಲ್ಲಾಪುರ. ಪುರಾತನವಾದ ದೇವಾಲಯಗಳು, ಪ್ರಶಾಂತವಾದ ಉದ್ಯಾನವನಗಳು, ಚಾರಿತ್ರಿಕ ಕೋಟೆಗಳು, ಅಂತಃಪುರಗಳು ಇವೆಲ್ಲವೂ ಈ ನಗರದ ಪ್ರಧಾನವಾದ ಆಕರ್ಷಣೆಯಾಗಿದೆ. ಪಂಚಗಂಗಾ ನದಿ ತೀರದಲ್ಲಿರುವ ಕೊಲ್ಲಾಪುರ ಚರಿತ್ರೆ ನಮ್ಮ ದೇಶದಲ್ಲಿ ಅನೇಕ ಕಾಲ ಸಾಗಿದ ಮರಾಠ ಆಳ್ವಿಕೆಯಿಂದ ಅಭಿವೃದ್ಧಿ ಪಡೆಯಿತು. ಮಹಾಲಕ್ಷ್ಮೀ ದೇವಿ ಕೊಂದ ಕೊಲ್ಲಾಸುರ ರಾಕ್ಷಸನ ಹೆಸರ ಮೇಲೆ ಈ ನಗರವು ನೆಲೆಸಿದೆ.
ಮಹಾರಾಷ್ಟ್ರದಲ್ಲಿನ ಕೊಲ್ಲಾಪುರದಲ್ಲಿ ನೆಲೆಸಿದ ಶ್ರೀ ಮಹಾಲಕ್ಷ್ಮೀದೇವಿ ದೇವಾಲಯ,ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇದು ಶಕ್ತಿ ಪೀಠದಲ್ಲಿ ಅತಿ ಮುಖ್ಯವಾದುದು. ಈ ದೇವಾಲಯವನ್ನು ದರ್ಶಿಸಿದರೆ ಮೋಕ್ಷ ಲಭಿಸಿ ಮನಸ್ಸಿನಲ್ಲಿ ಕೋರಿದ ಕೋರಿಕೆಗಳುತೀರುತ್ತವೆ. ಮಹಾವಿಷ್ಣುವು ಸತಿಮಣಿ ಶ್ರೀ ಮಹಾಲಕ್ಷ್ಮಿಯ ಜೊತೆಯಾಗಿರುವ ಪ್ರದೇಶವಾಗಿಭಾವಿಸುತ್ತಾರೆ. ಕನ್ನಡದ ಚಾಳುಕ್ಯ ರಾಜರ ಕಾಲದಲ್ಲಿ ಎಂದರೆ ಕ್ರಿ.ಶ 700 ರಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಭಾವಿಸುತ್ತಾರೆ.
ಈ ನಗರವು ಕೆಲವು ನೂರು ವರ್ಷಗಳದ್ದು. ಶ್ರೀ ಮಹಾ ವಿಷ್ಣುವು ಕೊಲ್ಲಾಪುರವನ್ನು ತನ್ನ ಆವಾಸವಾಗಿ ಮಾಡಿಕೊಂಡನು ಎಂದೂ, ಮಹಾಲಕ್ಷ್ಮೀ ಆದ ಅಂಶ ಎಂದು ನಂಬಲಾಗುತ್ತದೆ. ಅಂಬಾದೇವಿಯಾಗಿ ಕರೆಯಲಾಗುವ ಮಹಾಲಕ್ಷ್ಮೀ ದೇವಾಲಯವು ಕೊಲ್ಲಾಪುರದಲ್ಲಿ ಪ್ರಧಾನವಾದಆಧ್ಯಾತ್ಮಿಕ ಕೇಂದ್ರ. ಕೊಲ್ಲಾಪುರವನ್ನು ದಕ್ಷಿಣ ಕಾಶಿಯಾಗಿ ಕರೆಯುತ್ತಾರೆ.

1.ಶಿಲಾವೇದಿಕೆಯ ಮೇಲೆ ಚರ್ತುಭುಜದಿಂದ, ಸ್ವರ್ಣ ಕೀರಿಟದಿಂದ ದೇವಿಯನ್ನು
Pc:youtube
ದರ್ಶಿಸುತ್ತಾರೆ. ಜೆಂಸ್ಟೋನ್ನಿಂದ ತಯಾರು ಮಾಡಿರುವ ಈ ವಿಗ್ರಹವು ಸುಮಾರು 40 ಕೆ.ಜಿ ಇರುತ್ತದೆ. ಮಹಾಲಕ್ಷ್ಮೀಯ ಎತ್ತರ ಸುಮಾರು 3 ಅಡಿ ಕಪ್ಪು ಕಲ್ಲಿನ ಸುಂದರವಾದ ವಿಗ್ರಹ ಇದಾಗಿದೆ.

2.ಗರ್ಭಗುಡಿಯ ಮೇಲೆ ಶ್ರೀ ಚಕ್ರ ಇರುವುದು ಇಲ್ಲಿನ ವಿಶೇಷತೆ. ಮಹಾಲಕ್ಷ್ಮೀ ವಿಗ್ರಹದ
Pc:youtube
ಹಿಂದೆ ಶಿಲೆಯಿಂದ ಕೆತ್ತನೆ ಮಾಡಲಾದ ಸಿಂಹವಾಹನವು ಕೂಡ ಇರುತ್ತದೆ. ದೇವಿಯ ಕೀರಿಟದಲ್ಲಿ ವಿಷ್ಣುವು ಶಯಿನಿಸಿದ ಆದಿಶೇಷನು ಇರುವುದು ಮತ್ತೊಂದು ವಿಶೇಷತೆ. ಚರ್ತುಭುಜಗಳಲ್ಲಿ 4 ಪ್ರತ್ಯೇಕವಾದ ವಸ್ತುಗಳು ಇರುತ್ತವೆ.

3.ಬಲಗೈಯಲ್ಲಿ ನಿಂಬೆಹಣ್ಣು ಇರುತ್ತದೆ. ಮತ್ತೊಂದು ಕೈಯಲ್ಲಿ ಹೂವು, ತಲೆಯು ಭೂಮಿಯನ್ನು
Pc:youtube
ನೋಡುತ್ತಿರುವ ಹಾಗೆ ಇರುತ್ತದೆ. ಎಡಗೈಯಲ್ಲಿ ಕಟಕಂ ಎಂಬ ಆಯುಧ, ಕೆಳಗಿನ ಕೈಯಲ್ಲಿ ಬಟ್ಟಲು ಇರುತ್ತದೆ. ಈ ನಾಲ್ಕು, ನಾಲ್ಕು ಪ್ರತ್ಯೇಕವಾದ ಧರ್ಮಗಳನ್ನು ಸೂಚಿಸುತ್ತದೆ. ಸಾಧಾರಣವಾಗಿ ದೇವಾಲಯದಲ್ಲಿ ವಿಗ್ರಹಗಳು ಪೂರ್ವ ಅಥವಾ ಉತ್ತರಮುಖವಾಗಿರುತ್ತದೆ.

4.ಆದರೆ ಇಲ್ಲಿನ ಮಹಾಲಕ್ಷ್ಮೀಯು ಪಶ್ಚಿಮ ಮುಖವಾಗಿ ಇರುವುದು ಮತ್ತೊಂದು ವಿಶೇಷತೆ.
Pc:youtube
ಪಶ್ಚಿಮದಲ್ಲಿರುವ ಗೋಡೆಗೆ ಒಂದು ಚಿಕ್ಕ ಕಿಟಕಿ ಇರುತ್ತದೆ. ಇದರಿಂದ ಮಾರ್ಚ್ 21 ರಿಂದ ಸೆಪ್ಟೆಂಬರ್ನ ಒಳಗೆ 3 ದಿನಗಳ ಕಾಲ ಸೂರ್ಯಾಸ್ತಮ ಕಿರಣಗಳು ದೇವಿಯ ಮುಖದ ಮೇಲೆ ಬಿದ್ದು, ವಿಭಿನ್ನವಾದ ಶೋಭೆಯನ್ನು ಹಿಮ್ಮಡಿಗೊಳಿಸುತ್ತದೆ.

5.ದೇವಿಗೆ ದಿನನಿತ್ಯವು 5 ಬಾರಿ ಅರ್ಚನೆ ಮಾಡಲಾಗುತ್ತದೆ. ಬೆಳಗ್ಗೆ 5 ಗಂಟೆಗೆ ಶ್ರೀ
Pc:youtube
ಮಹಾಲಕ್ಷ್ಮೀ ದೇವಿಗೆ ಮಂತ್ರದ ಮೂಲಕ ಸುಪ್ರಭಾತ ಸೇವೆ ಮಾಡುತ್ತಾರೆ. ಶುಕ್ರವಾರ ಪೌರ್ಣಮಿಯ ದಿನದಂದು ದೇವಿಯ ದೇವಾಲಯ ಪ್ರಾಂಗಣದಲ್ಲಿಯೇ ಉತ್ಸವ ಮಾಡುತ್ತಾರೆ. ಪ್ರಳಯಕಾಲದಲ್ಲಿಯೂ ಕೂಡ ಇಲ್ಲಿ ಶ್ರೀಮಹಾವಿಷ್ಣು ಶ್ರೀಮಹಾಲಕ್ಷ್ಮೀ ಇರುತ್ತಾರೆ ಎಂದು ಪುರಾಣ ಕಥೆಯು ಕೂಡ ಇದೆ.

6.ಹಾಗಾಗಿಯೇ ಇದನ್ನು ವಿಮುಕ್ತಕ್ಷೇತ್ರ ಎಂದು ಕರೆಯುತ್ತಾರೆ. ಲಕ್ಷ್ಮೀದೇವಿ
Pc:youtube
ಭ್ರುಗುಮಹರ್ಷಿಯಿಂದಾಗಿ ವಿಷ್ಣುಮೂರ್ತಿಗೆ ನಡೆದ ಅವಮಾನ ತಡೆಯಲಾಗದೇ ವೈಕುಂಠವನ್ನು ಬಿಟ್ಟು ಕೊಲ್ಲಾಪುರವನ್ನು ಸೇರಿ ಇಲ್ಲಿ ವೆಂಕಟೇಶ್ವರ ಎಂದು ನೆಲೆಸಿದನು. ಇದೊಂದು ಪುರಾಣ ಕಥೆಯಾಗಿದೆ.

7.ತಿರುಮಲದಲ್ಲಿ ಮಹಾಲಕ್ಷ್ಮೀ ರೂಪವಾದ ಪದ್ಮಾವತಿ ದೇವಿಯನ್ನು ಶ್ರೀನಿವಾಸನು ವಿವಾಹ
Pc:youtube
ಮಾಡಿಕೊಂಡ ಹಾಗೆ ಲಕ್ಷ್ಮೀದೇವಿಗೆ ತಿಳಿಯುತ್ತದೆ. ಪ್ರತಿದಿನ ಮಧ್ಯಾಹ್ನ ದತ್ತಾತ್ರೇಯ ಇಲ್ಲಿಗೆ ಬಂದು ದೇವಿ ನೀಡುವ ಭೀಕ್ಷೆಯನ್ನು ಸ್ವೀಕರಿಸುತ್ತಾರೆ ಎಂದು ಹೇಳುತ್ತಿದ್ದರಂತೆ. ಸುಮಾರು 6000 ವರ್ಷಗಳಷ್ಟು ಹಳೆಯದು ಈ ದೇವಾಲಯ.

8.ಜನವರಿ 31 ರಂದು ಹಾಗು ನವೆಂಬರ್ 9 ರಂದು ಸೂರ್ಯಾಸ್ತದ ಕಿರಣಗಳು ದೇವಿಯ ಪಾದಗಳನ್ನು
Pc:youtube
ಸ್ಪರ್ಶಿಸುತ್ತದೆ. ಹಾಗಾಗಿಯೇ ಇಲ್ಲಿ ಕಿರಣೋತ್ಸವ ಸಮಯದಲ್ಲಿ ಲಕ್ಷಾಧಿ ಮಂದಿ ಭಕ್ತರು ಬಂದು ದರ್ಶಿಸಿಕೊಂಡು ಪುನೀತರಾಗುತ್ತಾರೆ. ಹಾಗೆಯೇ ಫೆಬ್ರವರಿ 1, ನವೆಂಬರ್ 10ರಂದು ಕಿರಣಗಳು ದೇವಿಯ ವಕ್ಷಸ್ಥಳದ ಮೇಲೆ ಬೀಳುತ್ತದೆ.

9.ಫೆಬ್ರವರಿ 2, ನವೆಂಬರ್ 11 ರಂದು ಮಹಾಲಕ್ಷ್ಮೀ ದೇವಿ ಶರೀರವೆಲ್ಲಾ ಸೂರ್ಯಕಿರಣಗಳು
Pc:youtube
ಬಿದ್ದು, ವಿಭಿನ್ನವಾದ ತೇಜಸ್ಸನ್ನು ನೀಡುತ್ತದೆ. ಈ ದಿನದಲ್ಲಿ ಕಿರಣ ಉತ್ಸವದ ಸಮಯ ಎಂದು ಕರೆಯುತ್ತಾರೆ. ಈ ಕಿರಣೋತ್ಸವ ಸಮಯ ಎಂಬುದು ಸುಮಾರು 1000 ವರ್ಷಗಳಿಂದಲೂ ಕಾಣಿಸಿಕೊಳ್ಳುತ್ತಿದೆ ಎಂದು ಭಾವಿಸಲಾಗಿದೆ.

10.ಕೊಂಕಣ ರಾಜನಾದ ಕಾಮದೇವ ಚಾಳುಕ್ಯ ರಾಜ ಕ್ರಿ.ಶ 107 ರಲ್ಲಿ ಕರ್ಣದೇವ ಮಹಾರಾಜ
Pc:youtube
ಅರಣ್ಯವೆಲ್ಲಾ ನಾಶಮಾಡಿ ದೇವಾಲಯವನ್ನು ಬೆಳಕಿಗೆ ತಂದನು. 9 ನೇ ಶತಮಾನದಲ್ಲಿ ರಾಜಾ ಗಂಡಿವಾಡಿ ಮಹಾಕಾಳಿ ದೇವಾಲಯವನ್ನು ನಿರ್ಮಾಣ ಮಾಡಿ ಮತ್ತಷ್ಟು ಅಭಿವೃದ್ಧಿಗೊಳಿಸಿದನು. ಆದರೆ 1792 ರಲ್ಲಿ ಶಂಭೋಜಿ ಮಹಾರಾಜ್ಗೆ ದೇವಿಯು ಕನಸ್ಸಿನಲ್ಲಿ ಕಾಣಿಸಿ ತನ್ನ ಅಸ್ತಿತ್ವದ ಬಗ್ಗೆ ಹೇಳಿದಳು. ಹೀಗಾಗಿ ವಿಗ್ರಹಕ್ಕಾಗಿ ಹುಡುಕಾಟ ನಡೆಸಿದನು. ಆದರೆ ಲಕ್ಷ್ಮೀ ದೇವಿಗೆ ಒಂದು ಸಹೋದರಿ ಕೂಡ ಇದ್ದಾಳೆ.

11.ಸೆಪ್ಟೆಂಬರ್ 26ರಂದು ದೇವಿಯನ್ನು ಪುನಃ ಪ್ರತಿಷ್ಟಾಪಿಸಿದರು. ಅಂದಿನಿಂದ
ಮಹಾರಾಷ್ಟ್ರಕ್ಕೆ ಈ ದೇವಿ ಆರಾಧ್ಯ ದೇವಿಯಾಗಿದ್ದಾಳೆ. ಆದರೆ ಲಕ್ಷ್ಮೀ ದೇವಿಗೆ ಮತ್ತೊಂದು ಸಹೋದರಿ ಕೂಡ ಇದ್ದಾಳೆ. ಪ್ರತಿಯೊಬ್ಬರು ಹಣವನ್ನು ಸಂಪಾದಿಬೇಕು ಎಂದು ಆಸೆ ಪಡುವುದು ಸಹಜವಾದುದು.

12.ಆರ್ಥಿಕ ಸಮಸ್ಯೆಗಳಿಂದ ಹೊರಗೆ ಬರಲು ಸಿರಿಸಂಪತ್ತನ್ನು ನೀಡುವ ಲಕ್ಷ್ಮೀ ದೇವಿಯನ್ನು
Pc:youtube
ಆರಾಧಿಸುತ್ತಿರುತ್ತೇವೆ. ಆಕೆಯ ಅಕ್ಕಳ ಹೆಸರೇ ಅಲಕ್ಷ್ಮೀ. ಇನ್ನು ಸಾಗರ ಮಥನದಲ್ಲಿ ಲಕ್ಷ್ಮೀ ದೇವಿ ಆವಿರ್ಭವಿಸುತ್ತಾಳೆ. ಲಕ್ಷ್ಮೀದೇವಿಯನ್ನು ಶ್ರೀ ಮಹಾವಿಷ್ಣುವು ವಿವಾಹ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ.

13.ಆಗ ಲಕ್ಷ್ಮೀದೇವಿ ನಿರಾಕರಿಸಿ ತನಗೆ ಒಂದು ಅಕ್ಕ ಕೂಡ ಇದ್ದಾಳೆ ಎಂದೂ, ತನಗೆ
Pc:youtube
ವಿವಾಹವಾದ ನಂತರವೇ ಆಕೆ ವಿವಾಹ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾಳೆಯಾದರೂಅಲಕ್ಷ್ಮೀಯನ್ನು ಯಾರೂ ಕೂಡ ವಿವಾಹ ಮಾಡಿಕೊಳ್ಳಲು ಮುಂದೆ ಬರುವುದಿಲ್ಲ. ಏಕೆಂದರೆ ಆಕೆ ಇದ್ದ ಸ್ಥಳ ಐಶ್ವರ್ಯ ಇರುವುದಿಲ್ಲ ಬದಲಿಗೆ ದಾರಿದ್ರ್ಯ ಇರುತ್ತದೆ. ಈ ಸಮಯದಲ್ಲಿ ಯಾರು ಕೂಡ ವಿವಾಹ ಮಾಡಿಕೊಳ್ಳಲು ಮುಂದೆ ಬರುವುದಿಲ್ಲ.

14.ಕೊನೆಗೆ ಒಬ್ಬ ಋಷಿ ಆಕೆಯನ್ನು ವಿವಾಹ ಮಾಡಿಕೊಳ್ಳಲು ಮುಂದೆ ಬರುತ್ತಾನೆ. ಆತನ ಹೆಸರೇಉದ್ದಾಲಕು. ನಂತರ ಲಕ್ಷ್ಮೀದೇವಿ ಶ್ರೀಮಹಾ ವಿಷ್ಣುವನ್ನು
Pc:youtube
ವಿವಾಹ ಮಾಡಿಕೊಳ್ಳುತ್ತಾಳೆ, ಆದರೆ ಲಕ್ಷ್ಮೀದೇವಿ ಅಕ್ಕ ಉದಾಲನ ಜೊತೆ ವಿವಾಹ ಮಾಡಿಕೊಂಡ ನಂತರ ಬಾಗಿಲಲ್ಲಿಯೇ ನಿಂತುಕೊಳ್ಳುತ್ತಾಳೆ.

14.ಆಗ ಲಕ್ಷ್ಮೀದೇವಿ ನಿರಾಕರಿಸಿ ತನಗೆ ಒಂದು ಅಕ್ಕ ಕೂಡ ಇದ್ದಾಳೆ ಎಂದೂ,
ಕೊನೆಗೆ ಒಬ್ಬ ಋಷಿ ಆಕೆಯನ್ನು ವಿವಾಹ ಮಾಡಿಕೊಳ್ಳಲು ಮುಂದೆ ಬರುತ್ತಾನೆ. ಆತನ ಹೆಸರೇಉದ್ದಾಲಕು. ನಂತರ ಲಕ್ಷ್ಮೀದೇವಿ ಶ್ರೀಮಹಾ ವಿಷ್ಣುವನ್ನು ವಿವಾಹ ಮಾಡಿಕೊಳ್ಳುತ್ತಾಳೆ, ಆದರೆ ಲಕ್ಷ್ಮೀದೇವಿ ಅಕ್ಕ ಉದಾಲನ ಜೊತೆ ವಿವಾಹ ಮಾಡಿಕೊಂಡ ನಂತರ ಬಾಗಿಲಲ್ಲಿಯೇ ನಿಂತುಕೊಳ್ಳುತ್ತಾಳೆ.

15.ಆಗ ಲಕ್ಷ್ಮೀದೇವಿ ನಿರಾಕರಿಸಿ ತನಗೆ ಒಂದು ಅಕ್ಕ ಕೂಡ ಇದ್ದಾಳೆ ಎಂದೂ, ತನಗೆ
ಉದ್ದಲಕನು ಆಶ್ಚರ್ಯ ಚಿಕಿತನಾಗಿ ಅಲ್ಲಿಯೇ ಏಕೆ ನಿಂತುಕೊಂಡೆ ಎಂದು ಕೇಳುತ್ತಾನೆ. ಆಗತಾನು ಶುಭ್ರವಾದ ಮನೆಯಲ್ಲಿ ಇರುವುದಿಲ್ಲ ಎಂದೂ, ಯಾವಾಗಲೂ ಆಶಾಂತಿಯಿಂದ ಇರುವ ಮನೆಯಲ್ಲಿ ಮಾತ್ರವೇ ಇರುತ್ತೇನೆ ಎಂದು ಹೇಳುತ್ತಾಳೆ.

17.ಆರ್ಥಿಕ ಸಮಸ್ಯೆಗಳಿಂದ ಹೊರಗೆ ಬರಲು ಸಿರಿಸಂಪತ್ತನ್ನು ನೀಡುವ ಲಕ್ಷ್ಮೀ ದೇವಿಯನ್ನು
Pc:youtube
ಇಲ್ಲಿ ನೋಡಬೇಕಾಗಿರುವ ಪ್ರವಾಸಿ ತಾಣಗಳುಕೊಲ್ಲಾಪುರದಲ್ಲಿನ ಪ್ರತಿ ಕೋಟೆಗೂ ಚಾರಿತ್ರಿಕವಾದ ಪರಂಪರೆ ಇದೆ. ಚರಿತ್ರೆ ಪ್ರೇಮಿಗಳಿಗೆ ಶಾಹೋ ಪ್ರದರ್ಶನಶಾಲೆ ತಪ್ಪದೇ ನೋಡಬೇಕು. ಸಂಪ್ರದಾಯ ಕುಸ್ತಿ ಕಲೆಗಳನ್ನು ಇಂದಿಗೂ ಸಾಧನೆ ಮಾಡುತ್ತಿರುವ ಖಷ್ಬಾಗ್ ಮೈದಾನ ಕೂಡ ಕೊಲ್ಲಾಪುರದಲ್ಲಿದೆ.

17.ಹೇಗೆ ತಲುಪಬೇಕು?
Pc:youtube
ರೈಲ್ವೆ ಮುಖಾಂತರ ಕೂಡ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ. ಮುಂಬೈ, ಪೂಣೆಯಿಂದ ಅನೇಕ ರೈಲುಗಳು ಕೊಲ್ಲಾಪುರಕ್ಕೆ ಸಂಪರ್ಕ ಸಾಧಿಸುತ್ತವೆ. ಕೇವಲ 8 ಗಂಟೆಗಳ ಒಳಗೆ ಕೊಲ್ಲಾಪುರಕ್ಕೆ ಸೇರಿಕೊಳ್ಳಬಹುದು. ಸರ್ಕಾರಿ ಹಾಗು ಖಾಸಗಿ ಬಸ್ಸುಗಳ ಮೂಲಕವು ಕೂಡ ಸೇರಿಕೊಳ್ಳಬಹುದು.


Click it and Unblock the Notifications
















