ಹಸ್ತಿನಾಪುರಂನ ಹೆಸರು ಕೇಳಿದರೆ ಸಾಕು ಮಹಾಭಾರತ ನೆನೆಪಿಗೆ ಬರುತ್ತದೆ. ಹಸ್ತಿನಾಪುರ ಮಹಾಭಾರತದಲ್ಲಿ ಪ್ರಸಿದ್ಧವಾದ ಪ್ರದೇಶಗಳಲ್ಲಿ ಒಂದಾಗಿದೆ. ಇದು ಉತ್ತರ ಭಾರತದಲ್ಲಿನ ಮೀರತ್ ಜಿಲ್ಲೆಯಲ್ಲಿದೆ. ದೆಹಲಿಯಿಂದ ಸುಮಾರು 110 ಕಿ.ಮೀ ದೂರದಲ್ಲಿ, ಮೀರತ್ನಿಂದ 37 ಕಿ.ಮೀ ದೂರದಲ್ಲಿದೆ. ಪುರಾಣಗಳ ಕಾಲದಿಂದಲೂ ಅಸ್ತಿನಾಪುರಂ ಕುರುವಂಶಿಕರ ರಾಜಧಾನಿಯಾಗಿತ್ತು. ಮಹಾಭಾರತದಲ್ಲಿ ಅನೇಕ ಘಟನೆಗಳು ಹಸ್ತನಾಪುರದಲ್ಲಿಯೇ ನಡೆಯಿತು. ಕೆಲವು ಗ್ರಂಥದ ಪ್ರಕಾರ ಇದರ ಬಗ್ಗೆ ಮೊದಲ ಪ್ರಸ್ತಾವನೆ ಚಂದ್ರವಂಶದ ರಾಜನಾದ ಭರತುವಿನ ರಾಜಧಾನಿಯಾಗಿತ್ತು.
ಲೇಖನದ ಮೂಲಕ ಹಸ್ತಿನಾಪುರದ ಹಿಂದೆ ಇರುವ ಟಾಪ್ 10 ರಹಸ್ಯದ ಬಗ್ಗೆ ಮಾಹಿತಿಯನ್ನು ಪಡೆಯೋಣ.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಶಕುಂತಲಾ ಹಾಗು ದೃಶ್ಯಂತ ಕುಮಾರನಾದ ಭರತನು ಹಸ್ತಿನಾಪುರವನ್ನು ರಾಜಧಾನಿಯಾಗಿ ಮಾಡಿಕೊಂಡ ಹಾಗೆ ನಮ್ಮ ಪುರಾಣಗಳು ಹೇಳುತ್ತವೆ. ಅಶೋಕ ಚಕ್ರವರ್ತಿ ಮೊಮ್ಮಗನಾದ ಸಂಪ್ರಾತಿ ಚಕ್ರವರ್ತಿ ಆಳ್ವಿಕೆಯ ಸಮಯದಲ್ಲಿ ಇಲ್ಲಿ ಅನೇಕ ದೇವಾಲಯಗಳನ್ನು ನಿರ್ಮಾಣ ಮಾಡಿದನು. ಪ್ರಸ್ತುತ ಆ ಸ್ತೂಪಗಳು ಹಾಗು ದೇವಾಲಯಗಳು ಶಿಥಿಲವಾಗಿವೆ.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಹಸ್ತಿನಾಪುರಂ ಪರಿಶೋಧನೆಯಲ್ಲಿ ಮಹಾಭಾರತದ ಕಥನಕ್ಕೆ ಸಂಬಂಧಿಸಿದಂತೆ ವಸ್ತುಗಳು ಬೆಳಕಿಗೆ ಬಂದಿಲ್ಲ. ಅದರೂ ಕೂಡ ಇಲ್ಲಿ ಲಭಿಸಿದ ಸೆರಾಮಿಕ್ ಪಾತ್ರೆಗಳು ಗಂಗಾ ನದಿ ತೀರದಲ್ಲಿ ಬಂದು ಸ್ಥಿರವಾಗಿ ಬಿದ್ದಿದ್ದವು. ಆ ವಸ್ತುಗಳನ್ನು ಆರ್ಯರ ಕಾಲದ್ದು ಎಂದು ಗುರುತಿಸಲಾಗಿದೆ.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಮೊಗಲರು ಹಿಂದೂಸ್ತಾನದ ಪ್ರವೇಶದ ಸಮಯದಲ್ಲಿ ಅಸ್ತಿನಾಪುರವು ಬಾಬರ್ನ ಕೈಯಲ್ಲಿ ವಶಕ್ಕೆ ಹೋಯಿತು. ಆ ಸಮಯದಲ್ಲಿ ದೇವಾಲಯಗಳು, ಸ್ತೂಪಗಳನ್ನು ಫಿರಂಗಿಗಳಿಂದ ಧ್ವಂಸ ಮಾಡಲ್ಪಟ್ಟಿತ್ತು. ಆಂಗ್ಲೇಯರ ಕಾಲದಲ್ಲಿ ಅಸ್ತಿನಾಪುರವು ರಾಮಸಿಂಗ್ ರಾಜರ ಆಳ್ವಿಕೆಯಲ್ಲಿತ್ತು. ಆತನ ಆಳ್ವಿಕೆಯ ಕಾಲದಲ್ಲಿ ಅಸ್ತಿನಾಪುರವು ಪರಿಸರ ಪ್ರದೇಶದಲ್ಲಿ ಕೆಲವು ದೇವಾಲಯಗಳನ್ನು ಇನ್ನು ನಿರ್ಮಾಣ ಮಾಡಲಾಯಿತು.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಬುಲಂದರ್ ಷಾಹರ್, ಇದು ಉತ್ತರ ಪ್ರದೇಶ ರಾಜ್ಯದ ಬುಲಂದರ್ ಷಾಹರ್ ಜಿಲ್ಲೆಯಲ್ಲಿರುವ ಒಂದು ನಗರ. ಅಷ್ಟೇ ಅಲ್ಲ ಇದು ಒಂದು ಕಾಲದಲ್ಲಿ ರಾಜಧಾನಿ ಕೂಡ ಆಗಿತ್ತು. ಅಂದಿನ ವಾರಸತ್ವ ಮೂಲಗಳನ್ನು ಕೂಡ ಕಂಡು ಹಿಡಿದ್ದಿದ್ದಾರೆ. ಇಲ್ಲಿ ನಿರ್ವಹಿಸಿದ ಅನೇಕ ಹುಡುಕಾಟದಲ್ಲಿ ಪುರಾತನ ನಾಣ್ಯಗಳು, ಕಲಾಕೃತಿಗಳು ಇವೆಲ್ಲಾ ಪ್ರಸ್ತುತ ಲಖನೌ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗುತ್ತಿದೆ.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಹಸ್ತಿನಾಪುರಂಗೆ ಕುರುವಾಷಿಂಗೆ ಮೂಲ ಪುರುಷನಾದ ಹಸ್ತಿಯ ಕೈಯಲ್ಲಿ ಸ್ಥಾಪಿಸಲಾಯಿತು ಎಂದು ಮಹಾಭಾರತ ವಿವರಿಸುತ್ತದೆ. ಈ ನಗರವನ್ನು ಗಜಪುರ, ನಾಗಪುರ, ಬ್ರಹ್ಮಸ್ಥಳ್, ಪುಂಜರ್ ಪುರ್ ಎಂಬ ಹೆಸರುಗಳಿಂದ ವರ್ಣಿಸಲಾಗಿದೆ.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
2001 ರಲ್ಲಿ ಹಸ್ತಿನಾಪುರದ ಜಸಂಖ್ಯೆ 21.247 ಇದರಲ್ಲಿ ಪುರುಷರು 53%, ಸ್ತ್ರೀಯರು 40% ಆಗಿತ್ತು. ಹಸ್ತನಾಪುರದ ಅಕ್ಷರತೆಯು 68% ರಷ್ಟು ಇದ್ದಾರೆ.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಶ್ರೀ ದಿಗಂಬರ ಜೈನ ಮಂದಿರ, ಕೈಲಾಸ ಮಂದಿರ, ಜಂಬು ದ್ವೀಪ್, ಶ್ವೇತಾಂಬರ್ ಜೈನ ದೇವಾಲಯ, ಚುತ್ರಿ, ಗುರುದ್ವಾರ, ಇವೆಲ್ಲಾವು ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಮಧ್ಯಯುಗ ಕಾಲದಲ್ಲಿ ಬಾಬರ್ ಭಾರತ ದೇಶದ ಮೇಲೆ ದಂಡಯಾತ್ರೆ ಮಾಡಿದನು. ಆ ಸಮಯದಲ್ಲಿ ಹಸ್ತಿನಾಪುರಕ್ಕೂ ಕೂಡ ದಾಳಿ ಮಾಡಿದನು. ಈ ಸಮಯದಲ್ಲಿಯೇ ದೇವಾಲಯಗಳ ಮೇಲೆ ಫಿರಂಗಿಗಳು ಗುರಿಯನ್ನು ಇಟ್ಟವು. ತದನಂತರ ಕಾಲದಲ್ಲಿ ರಾಜ ನಯನ್ ಸಿಂಗ್ ಹಸ್ತಿನಾಪುರವನ್ನು ಆಳ್ವಿಕೆ ಮಾಡಿದನು. ಇತನ ಕಾಲದಲ್ಲಿಯೇ ಅನೇಕ ದೇವಾಲಯಗಳು ಮತ್ತೆ ನಿರ್ಮಾಣ ಮಾಡಲಾಯಿತು.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಅಶೋಕ ಮೊಮ್ಮಗನಾದ ಸಂಪ್ರಾತಿ ಚಕ್ರವರ್ತಿ ತನ್ನ ಆಳ್ವಿಕೆಯ ಸಮಯದಲ್ಲಿ ಅನೇಕ ದೇವಾಲಯಗಳನ್ನು ನಿರ್ಮಾಣ ಮಾಡಿದನು. ಆ ಸ್ತೂಪಗಳು ಹಾಗು ಆ ದೇವಾಲಯಗಳು ಶಿಥಿಲವಾಗಿದೆ.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇಲ್ಲಿ ಪುರಾತನವಾದ ದೇವಾಲಯಗಳಿವೆ, ಅವುಗಳು ಯಾವುವು ಎಂದರೆ ಪಾಂಡೇಶ್ವರ ದೇವಾಲಯ, ಕರ್ಣ ದೇವಾಲಯ ಮತ್ತು ಶ್ರೀ ದಿಗಂಬರ ಜೈನ್ ಮಂದಿರ್, ಜಂಬುದ್ವೀಪ, ಕೈಲಾಶ್ ಪರ್ವತ, ಶ್ವೇತಾಂಬರ ಜೈನ ದೇವಾಲಯಗಳು. ಈ ದೇವಾಲಯಗಳನ್ನು ಹೊರತು ಪಡಿಸಿದರೆ ಸಮೀಪದ ಗುರುದ್ವಾರಾ ಮತ್ತು ಹಸ್ತಿನಾಪುರ ಅಭಯಾರಣ್ಯ ಪ್ರವಾಸಿಗರು ಕೂಡ ಭೇಟಿ ನೀಡಬಹುದು.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ವರ್ಷಾಂತ್ಯದಲ್ಲಿ ಆಕ್ಷಯ ತೃತೀಯ, ದಾಸ್ ಲಕ್ಷನ, ಕಾರ್ತಿಕ್ ಮೇಳ, ಹೋಳಿ ಮೇಳ, ದುರ್ಗಾ ಪೂಜೆಗಳಂತಹ ಹಲವಾರು ಸಾಂಸ್ಕøತಿಕ ಮತ್ತು ಧಾರ್ಮಿಕ ಉತ್ಸವಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ. ಹಾಗಾಗಿಯೇ ಇಲ್ಲಿ ಅನೇಕ ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ದೆಹಲಿಯಿಂದ ಹಸ್ತಿನಾಪುರಕ್ಕೆ ಸುಮಾರು 108 ಕಿ.ಮೀ ದೂರದಲ್ಲಿ, ಗಾಜೀಬಾದ್ನಿಂದ 83 ಕಿ.ಮೀ, ಡೆಹ್ರಾಡೂನ್ನಿಂದ 169 ಕಿ.ಮೀ, ಚಂಡೀಘಡ್ನಿಂದ 257 ಕಿ.ಮೀ, ಗ್ವಾಲಿಯರ್ನಿಂದ 371 ಕಿ.ಮೀ, ಜೈಪುರ್ನಿಂದ 370 ಕಿ.ಮೀ, ಕಾನ್ಪೂರ್ನಿಂದ 448 ಕಿ.ಮೀ ದೂರದಲ್ಲಿ, ಲಖನೌನಿಂದ ಸುಮಾರು 469 ಕಿ.ಮೀ ದೂರದಲ್ಲಿದೆ. ಹಸ್ತಿನಾಪುರಕ್ಕೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಮೀರತ್.